Apr 8, 2009

ಸುಭಾಷಿತಗಳು

"ಕೇವಲಾಘೋ ಭವತಿ ಕೇವಲಾದೀ"||
(ಋಗ್: ೧೦.೧೧೭.೬.)
"ಒಬ್ಬನೇ ತಿನ್ನುವವನು ಶುದ್ಧ ಪಾಪಿಯೆನಿಸುತ್ತಾನೆ".
ತಿನ್ನುವುದು ತಪ್ಪಲ್ಲ, ಬದುಕಿರುವವರೆಲ್ಲರೂ, ಬದುಕ ಬಯಸುವವರೆಲ್ಲರೂ ತಿನ್ನಲೇಬೇಕು. ಆದರೆ, ಏಕೆ ತಿನ್ನಬೇಕು? (ಕಳೆದು ಹೋದ ಶಕ್ತಿಯನ್ನು ಪಡೆಯಲು); ಯಾವಾಗ ತಿನ್ನಬೇಕು? (ಹಸಿವಾದಾಗ ತಿನ್ನಬೇಕು); ಏನು ತಿನ್ನಬೇಕು? (ಜ್ಞಾನ, ಶಕ್ತಿಗಳನ್ನು ನೀಡುವ ಸಾತ್ವಿಕ ಆಹಾರವನ್ನು); ಎಷ್ಟು ತಿನ್ನಬೇಕು? (ಅರ್ಧ ಹೊಟ್ಟೆ ಆಹಾರ, ಕಾಲು ಹೊಟ್ಟೆ ನೀರು, ಕಾಲು ಹೊಟ್ಟೆ ಗಾಳೀ); ಹೇಗೆ ತಿನ್ನಬೇಕು? (ಚೆನ್ನಾಗಿ ಅಗಿದು); ಈ ಪ್ರಶ್ನೆಗಳಿಗೆ ಉತ್ತರ ತಿಳಿದು ತಿನ್ನಬೇಕು. ತಿನ್ನುವ ಮುಂಚೆ, ನೀಡಿದ ಭಗವಂತನನ್ನು, ದುಡಿದ ರೈತನನ್ನು ಕೃತಜ್ಞತೆಯಿಂದ ಸ್ಮ್ರರಿಸಿ, ಇತರರೊಡನೆ ಹಂಚಿಕೊಂಡು ತಿನ್ನಬೇಕು. ಮರೆತು ಚೀಲ ತುಂಬಿದರೆ ಅದು ಪಾಪ. ರೋಗ-ರುಜಿನಗಳು ನಿಶ್ಚಿತ.
೨. "ವಯಂ ಸ್ಯಾಮ ಪತಯೋ ರಯೀಣಾಮ್"||
(ಯಜು.೧೯.೪೪.)
"ನಾವು ಸಂಪತ್ತಿನ ಒಡೆಯರಾಗೋಣ".
ವೇದಗಳು ವೈರಾಗ್ಯವನ್ನು ಹೇಳುತ್ತವೆ. ನಮ್ಮ ದೈನಂದಿನ ಜೀವನದ ಬಗ್ಗೆ ಹೇಳುವುದಕ್ಕಿಂತ ಪರಲೋಕದ ಬಗ್ಗೆಯೇ ಹೇಳುತ್ತವೆ ಎಂಬುದು ಸಾಮಾನ್ಯವಾದ ತಿಳುವಳಿಕೆ. ಮೇಲಿನ ಮಾತು ಇದನ್ನು ಸುಳ್ಳೆಂದು ಸಾಧಿಸುತ್ತದೆ. ನಮ್ಮ ಜೀವನಕ್ಕೆ ಸಂಪತ್ತು ಅತ್ಯಾವಶ್ಯಕ. ಸಂಪತ್ತುಳ್ಳವರು ಸ್ವಾವಲಂಬಿಗಳಾಗಿರುತ್ತಾರೆ, ಸ್ವತಂತ್ರರಾಗಿರುತ್ತಾರೆ. ಧರ್ಮಾಚರಣೆ ಗುಲಾಮರಿಗೆ ಸಾಧ್ಯವಿಲ್ಲ. ಆದರೆ, ಆ ಸಂಪತ್ತಿಗೆ ನಾವು ದಾಸರಾಗದೆ ಒಡೆಯರಾಗಿರಬೇಕು. ಸಂಪತ್ತನ್ನು ಗಳಿಸಲು ಏನನ್ನಾದರೂ ಮಾಡುತ್ತೇವೆ ಎಂಬುದು ದಾಸತ್ವ. ಸನ್ಮಾರ್ಗದಲ್ಲೇ ಪಡೆಯುತ್ತೇವೆಂಬ ಸಂಕಲ್ಪ ನಾವು ಸಂಪತ್ತಿನ ಒಡಯರಾಗುವುದಕ್ಕೆ ಸಹಕಾರಿ. ಆಗಲೇ ಸಂಪತ್ತಿನ ಸದ್ವಿನಿಯೋಗವೂ ಸಾಧ್ಯ.
೩. "ನ ಸ್ತೇಯಮದ್ಮಿ"||
(ಅಥರ್ವ.೧೪.೧.೫೭.)
"ಕಳ್ಳತನದಲ್ಲಿ ಭೋಗವನ್ನು ಅನುಭವಿಸುವುದಿಲ್ಲ".
ಒಂದು ಮಂತ್ರವನ್ನು ಸಾಮಾನ್ಯವಾಗಿ ವೈದಿಕ ವಿವಾಹ ಸಂಸ್ಕಾರದಲ್ಲಿ ವರನು ವಧುವಿಗೆ ನೀಡುವ ಪ್ರತಿಜ್ಞಾವಿಧಿಯಲ್ಲಿ ಸೇರಿಸಿರುತ್ತಾನೆ. ಆ ಮಂತ್ರದ ಭಾಗವಿದು. ವಿವಾಹ ಮಾಡಿಸುವ ಪುರೋಹಿತರಿಗೇ ತಾವು ಹೇಳುವ ಮಂತ್ರಗಳ ಅರ್ಥ ಗೊತ್ತಿಲ್ಲದಿರುವುದು ಶೋಚನೀಯ. ಅರ್ಥ ತಿಳಿದು ವರನು ಈ ಮಾತನ್ನಾಡಿದಾಗ, ಮುಂದಿನ ದಾಂಪತ್ಯ ಜೀವನದಲ್ಲಿ ವ್ಯಭಿಚಾರಾದಿ ದುಷ್ಟತನಗಳಿಗೆ ಸಿಕ್ಕಿಕೊಳ್ಳುವ ಸಂಭವವಿರುವುದಿಲ್ಲ. ವ್ಯಕ್ತಿಗೂ, ಸಮಾಜಕ್ಕೂ ಆರೋಗ್ಯಕರವಾದ ಏಕಪತ್ನೀವ್ರತವನ್ನು ಪಾಲಿಸಲು ಸತ್ಪ್ರೇರಣೆಯನ್ನು ನೀಡುತ್ತದೆ. ಪತಿ-ಪತ್ನಿಯರ ನಡುವಿನ "ಸ್ನೇಹ" ಬಿಗಿಯಾಗುತ್ತದೆ. ಈ ಹಿನ್ನಲೆಯಲ್ಲಿ ಹುಟ್ಟುವ ಸಂತಾನ ಶ್ರೇಷ್ಠವಾಗಿರುತ್ತದೆ. ಸುಭದ್ರ ಕುಟುಂಬಗಳೇ ಸುಭದ್ರ ಸಮಾಜದ ಅಡಿಪಾಯ.
೪. "ಆರೇ ಬಾಧಸ್ವ ದುಚ್ಛುನಾಮ್"||
(ಋಗ್.೯.೬೬.೧೯. ಸಾಮ.೬.೨೭.)
"ದುಷ್ಟ ವೇಗಗಳನ್ನು ದೂರಕ್ಕಟ್ಟಿರಿ".
ದುಷ್ಟಪ್ರವೃತ್ತಿಗಳೇ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೇ ಈ ವೇಗಗಳು| ಇವುಗಳ ವೇಗವೆಷ್ಟಿರುತ್ತದೆಂದರೆ ಎಂತಹವರನ್ನೂ ಬಲುಬೇಗ ಸೆಳೆದುಬಿಡುತ್ತವೆ, ಆಕ್ರಮಿಸಿಕೊಂಡುಬಿಡುತ್ತವೆ. ಸ್ವಲ್ಪ ಅವಕಾಶಕೊಟ್ಟರೆ ಸಾಕು ಸಂಪೂರ್ಣ ಹಬ್ಬಿಕೊಂಡುಬಿಡುತ್ತವೆ. ದೂರದಲ್ಲೇ ನಿವಾರಿಸಿಕೊಂಡುಬೆಡಬೇಕು. ಈ ಕೆಲಸವನ್ನು ದೃಢಮನಸ್ಸಿನಿಂದ, ಕಠಿಣವಾಗಿ ಮಾಡಿದರೆ ಮಾತ್ರ ಜಯ ಸಾಧ್ಯ. ಈ ಕಾರ್ಯವನ್ನು ಸಮರ್ಪಕವಾಗಿ ಮಾಡಲ್ಲು ಬೇಕಾದ ಇಚ್ಛಾಶಕ್ತಿಯನ್ನು ಬಲ-ವೀರ್ಯಗಳನ್ನು, ಇವುಗಳನ್ನು ನೀಡುವಂತಹ ಸಾತ್ವಿಕ ಅನ್ನವನ್ನು ನಮಗೆ ನೀಡು ಎಂಬುದು ನಮ್ಮ ಪ್ರಾರ್ಥನೆಯಾಗಬೇಕು. ಅಂತೆಯೇ ಮಾಡುತ್ತೇನೆ ಎಂಬುದೇ ಸಂಕಲ್ಪವಾಗಬೇಕು. ಅದರಂತೆ ಅನುಷ್ಠಾನವಿಲ್ಲದಿದ್ದರೆ ಪ್ರಾರ್ಥನೆಯೆಂದಿಗೂ ಉತ್ತರಿಸಲ್ಪಡುವುದಿಲ್ಲ.
***
ಆಪತ್ತು ಬರುವ ಮೊದಲೇ ಅದಕ್ಕೆ ಉಪಾಯಗಳನ್ನು ಯೋಚಿಸಬೇಕು. ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಆರಂಭಿಸುವದು ಸರಿಯಲ್ಲ.
ಮೂಲ:-
ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾಗೃಹೇ ||
೩೮.
ದಾನ , ಉಪಭೋಗ, ನಾಶ ಇವು ಹಣದ ಮೂರು ಸಾಧ್ಯತೆಗಳು . ದಾನವನ್ನೂ ಮಾಡದ , ಸ್ವಂತದ ಸುಖಕ್ಕೆ ಉಪಯೋಗವಾಗದ ಹಣ ನಾಶವನ್ನೇ ಹೊಂದುವದು.
ಮೂಲ:-
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾಗತಿರ್ಭವತಿ ||
೩೯.
ಕೇವಲ ಪಾಂಡಿತ್ಯ ಇದ್ದು ವಿವೇಕ ಇಲ್ಲದವನು ಶಾಸ್ತ್ರದ ನಿಜವಾದ ಅರ್ಥವನ್ನೇನು ಬಲ್ಲನು ? ಅಡಿಗೆಯಲ್ಲಿರುವ ಸವುಟಿನ ಹಾಗೆ . ಅದಕ್ಕೆ ಅಡಿಗೆಯ ರುಚಿಯೇನು ತಿಳಿದೀತು?
ಮೂಲ
ಯಸ್ಯ ನಾಸ್ತಿ ವಿವೇಕಸ್ತು ಕೇವಲಂ ಯೋ ಬಹುಶ್ರುತ: |
ನ ಸ ಜಾನಾತಿ ಶಾಸ್ತ್ರಾರ್ಥಾನ್ ದರ್ವೀ ಪಾಕರಸಾನ್ ಇವ||
****
ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ |
ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ ||
ಸುಭಾಷಿತದ ಸ್ವಾರಸ್ಯವನ್ನು ನೋಡಿ ದ್ರಾಕ್ಷಿಯ ಮುಖ ಸಪ್ಪಗಾಯಿತು , ಸಕ್ಕರೆ ಕಲ್ಲಾಯಿತು , ಅಮೃತವು ಹೆದರಿ ಸ್ವರ್ಗಕ್ಕೆ ಓಡಿತು.
೨. ವಜ್ರ್ಆದಪಿ ಕಠೋರಾಣೀ ಮೃದೂನಿ ಕುಸುಮಾದಪಿ |
ಲೋಕೋತ್ತರಾಣಾಂ ಚೇತಾಂಸಿ ಕೋಹಿ ವಿಜ್ಞಾತುಂ ಅರ್ಹತಿ ? ||
ಸಜ್ಜನರ ಮನಸ್ಸು ಒಮ್ಮೆ ವಜ್ರಕ್ಕಿಂತಲೂ ಕಠೋರ , ಇನ್ನೊಮ್ಮೆ ಹೂವಿಗಿಂತ ಮೃದು . ಇತರ ಜನರಂತಲ್ಲದ ಅವರ ಮನಸ್ಸನ್ನು ತಿಳಿಯಬಲ್ಲವರಾರು ?
೩. ಪರಪರಿವಾದೇ ಮೂಕ: ಪರನಾರೀದರ್ಶನೇಪಿ ಜಾತ್ಯಂಧ:
ಪಂಗು: ಪರಧನಹರಣೇ ಸ ಜಯತಿ ಲೋಕೇ ಮಹಾಪುರುಷ:||
ಇತರರ ನಿಂದಿಸುವ ವಿಷಯದಲ್ಲಿ ಮೂಕರು , ಪರನಾರಿಯರ್ನ್ನು ನೋಡುವ ವಿಷಯಕ್ಕೆ ಹುಟ್ಟುಗುರುದರು , ಪರರ ಹಣವನ್ನು ಅಪಹರಿಸುವಲ್ಲಿ ವಿಷಯದಲ್ಲಿ ಹೆಳವರು ಲೋಕದಲ್ಲಿ ಮಹಾಪುರುಷರು ಹೀಗೆ ಇರುವರು.
****
ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾ: |
ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನ:
ಪ್ರಾರಭ್ದಮುತ್ತಮಜನಾ: ನ ಪರಿತ್ಯಜಂತಿ ||
ಮುಂದೆ ಅಡೆತಡೆಗಳು ಬರುವವವೆಂದು ಹೆದರಿ ಕೀಳು ಜನರು ಕೆಲಸವನ್ನೇ ಪ್ರಾರಂಬಿಸುವದಿಲ್ಲ .ಸಾಮಾನ್ಯರು ಪ್ರಾರಂಭಿಸಿ , ತೊಂದರೆ ಬಂದೊಡನೆ ಕೆಲಸವನ್ನು ನಿಲ್ಲಿಸುವರು. ಆದರೆ ಉತ್ತಮರು ಎಷ್ಟು ಸಂಕಟಗಳು ಬಂದೊದಗಿದರೂ ಎದೆಗುಂದದೆ ಹಿಡಿದ ಕೆಲಸವನ್ನು ಯಶಸ್ವಿಯಾಗಿಯೇ ಮಾಡಿ ಮುಗಿಸುವರು.
೫.ಅಕೃತ್ವಾ ಪರಸಂತಾಪಂ ಅಗತ್ವಾ ಖಲನಮ್ರತಾಂ |
ಅನುತ್ಸೃಜ್ಯ ಸತಾಂ ಮಾರ್ಗಮ್ ಯತ್ ಸ್ವಲ್ಪಮಪಿ ತದ್ಬಹು.||
ಇನ್ನೊಬ್ಬರಿಗೆ ತೊಂದರೆ ಕೊಡದೆ , ದುಷ್ಟರಿಗೆ ತಲೆಬಾಗದೇ ಸಜ್ಜನರ ಮಾರ್ಗವನ್ನು ಅನುಸರಿಸಿ ಗಳಿಸಿದ್ದು ಬಹಳ ಸ್ವಲ್ಪವಾದರೂ , ಗುಣದಿಂದ ಹೆಚ್ಚಿನದಾಗಿದೆ.
೬. ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್
ಮಾನೋನ್ನತಿಂ ದಿಶತಿ ಪಾಪಮಪಾಕರೋತಿ |
ಚಿತ್ತಂ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ
ಸತ್ಸಂಗತಿ: ಕಥಯ ಕಿಂ ನ ಕರೋತಿ ಪುಂಸಾ||
ಸಜ್ಜನರ ಸಹವಾಸವು ಮನಸ್ಸಿನ ಬೇಸರವನ್ನು ಪರಿಹರಿಸುವದು, ಸತ್ಯ ಗುಣ ಕಲಿಸುವದು, ಅಪಾರ ಮರ್ಯಾದೆ ಗಳಿಸಿಕೊಡುವದು, ಪಾಪವನ್ನು ಪುಣ್ಯವನ್ನಾಗಿ ಮಾರ್ಪಡಿಸುವದು. ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವದು , ಕೀರ್ತಿಯನ್ನು ಎಲ್ಲೆಡೆಗೆ ಹರಡುವದು . ಸಜ್ಜನರ ಸಹವಸವು ಮಾಡದೆ ಇದ್ದುದೇನು?
****
Satpurusha
ಸದ್ಭಿಸ್ತು ಲೀಲಯಾ ಪ್ರ್ಓಕ್ತಂ ಶಿಲಾಲಿಖಿತಮಕ್ಷರಂ|
ಅಸದ್ಭಿ: ಶಪಥೇನೋಕ್ತಂ ಜಲೇಲಿಖಿತಮಕ್ಷರಂ ||
ಸಜ್ಜನರು ಸಹಜವಾಗಿ ನುಡಿದುದು ಕೂಡ ಕಲ್ಲಿನ ಮೇಲೆ ಬರೆದಷ್ಟು ಶಾಸ್ವತವಾಗಿ ಉಳಿಯುತ್ತದೆ ; ಅದೇ ಉಳಿದವರು ಆಣೆ ಮಾಡೀ ಸಾರಿ ಹೇಳಿದರು ಕೂಡ ಅವರ ಮಾತು ನೀರಿನ ಮೇಲೆ ಬರೆದ ಅಕ್ಷರದಂತೆ.
೮. ಅಹೋ ಕಿಮಪಿ ಚಿತ್ರಾಣಿ ಚರಿತ್ರಾಣಿ ಮಹಾತ್ಮನಾಂ |
ಲಕ್ಷ್ಮೀಂ ತೃಣಾಯ ಮನ್ಯಂತೆ ತದ್ಭಾರೇಣ ನಮಂತ್ಯಪಿ||
ಮಹಾಪುರುಷರ ನಡತೆಯು ಎಷ್ಟು ವಿಚಿತ್ರವಾದದ್ದು! ಸಂಪತ್ತನ್ನು ಹುಲ್ಲಿಗೆ ಸಮನಾಗಿ ನೋಡುವರು ; ಆದರೆ ಸಂಪತ್ತಿನ ಭಾರದಿಂದ ಬಾಗಿ ನಮ್ರರಾಗಿ ನಡೆದುಕೊಳ್ಳುವರು .
೯. ಭವಂತಿ ನಮ್ರಾಸ್ತರವ: ಫಲಾಗಮೈ:
ನವಾಂಬುಭಿರ್ಭೂರಿವಿಲಂಬಿನೋ ಘನಾ: |
ಅನುದ್ಧತಾ: ಸತ್ಪುರುಷಾ: ಸಮೃದ್ಧಿಭಿ:
ಸ್ವಭಾವ ಏವೈಷ ಪರೋಪಕಾರಿಣಾಂ ||
ಗಿಡಗಳು ತಮ್ಮ ಹಣ್ಣುಗಳ ಮೂಲಕ ಬಾಗಿರುವವು , ಮೋಡಗಳು ನೀರಿನಿಂದ ತುಂಬಿ ಕೆಳಗೆ ಬಾಗುವವು . ಸಜ್ಜನರು ಸಂಪತ್ತು ತಮ್ಮಲ್ಲಿ ಅಪಾರವಾಗಿದ್ದರೂ ವಿನಯಶಾಲಿಗಳಾಗಿರುವರು. ಪರೋಪಕಾರಿ ಜನರ ಸ್ವಭಾವ ಇರುವದೇ ಹೀಗೆ.
******
ಪಾಪಾನ್ನಿವಾರಯತಿ ಯೋಜಯತೀ ಹಿತಾಯ
ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ , ದದಾತಿ ಕಾಲೇ
ಸನ್ಮಿತ್ರ ಲಕ್ಷಣಮ್ ಇದಂ ಪ್ರವದಂತಿ ಸಂತ: ||
ನಿಮ್ಮನ್ನು ಪಾಪ ಕಾರ್ಯದಿಂದ ತಪ್ಪಿಸುತ್ತಾರೆ .
ನಿಮ್ಮ ಹಿತಕ್ಕಾಗಿ ಯೋಜನೆ ಮಾಡುತ್ತಾರೆ .
ಯಾವುದನ್ನು ಮುಚ್ಚಿಡಬೇಕೋ ಆದನ್ನು ಮುಚ್ಚಿಡುತ್ತಾರೆ.
ನಿಮ್ಮ ಗುಣಗಳನ್ನು ಬಹಿರಂಗಪಡಿಸುತ್ತಾರೆ .
ಸಂಕಟ ಸಮಯದಲ್ಲಿ ಕೈ ಬಿಡುವದಿಲ್ಲ ,
ಸಕಾಲಕ್ಕೆ ಸಹಾಯ ಮಾಡುತ್ತಾರೆ.
ಒಳ್ಳೆಯ ಮಿತ್ರರ ಲಕ್ಷಣಗಳು ಇವೆಂದು ಬಲ್ಲವರು ಹೇಳುತ್ತಾರೆ.
೧೭. ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುಸ್ತಥಾ |
ಪಾಪಂ ತಾಪಂ ಚ ದೈನ್ಯಂ ಘ್ನಂತಿ ಸಜ್ಜನ ಸಂಗತಿ: ||
ಗಂಗೆಯು ಪಾಪವನ್ನು ನಾಶಮಾಡುತ್ತಾಳೆ. ಚಂದ್ರನು ತಾಪವನ್ನು ಪರಿಹರಿಸುವನು. ದು:ಖವನ್ನು ಕಲ್ಪವೃಕ್ಷವು ದೂರ ಮಾಡುವದು . ಪಾಪ, ತಾಪ ಮತ್ತು ದು:ಖ ಇವು ಮೂರನ್ನೂ ಸಜ್ಜನರ ಸಹವಾಸವು ದೂರಮಾಡುವದು.
೧೮ ದಾನಾಯ ಲಕ್ಷ್ಮೀ: ಸುಕೃತಾಯ ವಿದ್ಯಾ ಚಿಂತಾ ಪರಬ್ರಹ್ಮವಿನಿಶ್ಚಯಾಯ
ಪರೋಪಕಾರಾಯ ವಚಾಂಸಿ ಯಸ್ಯ ವಂದ್ಯ: ತ್ರಿಲೋಕೀತಿಲಕ: ಸ ಏಕ: ||
ಸಂಪತ್ತು ದಾನಕ್ಕಾಗಿ , ವಿದ್ಯೆ ಒಳ್ಳೆಯ ಕೆಲಸಕ್ಕಾಗಿ , ಚಿಂತೆ ಆಧ್ಯಾತ್ಮಿಕ ವಿಷಯದಲ್ಲಿ , ಯಾರಿಗೆ ಇರುವದೋ ಅವರು ತ್ರಿಲೋಕ ವಂದ್ಯರು
****
ವಿಪದಿ ಧೈರ್ಯಂ , ಅಥ ಅಭ್ಯುದಯೆ ಕ್ಷಮಾ
ಸದಸಿ ವಾಕ್ಪಟುತಾ ಯುಧಿ ವಿಕ್ರಮ: |
ಯಸಸಿ ಚಾಭಿರುಚಿ: ವ್ಯಸನಂ ಶ್ರುತೌ ಪ್ರಕೃತಿ-
ಸಿದ್ಧಮಿದಂ ಹಿ ಮಹಾತ್ಮನಾಂ ||
ಸಂಕಟ ಸಮಯದಲ್ಲಿ ಧೈರ್ಯ , ಏಳಿಗೆಯ ಸಮಯದಲ್ಲಿ ಕ್ಷಮಾಗುಣ , ಸಭೆಯಲ್ಲಿ ಪಾಂಡಿತ್ಯ , ರಣರಂಗದಲ್ಲಿ ಪರಾಕ್ರಮ , ಕೀರ್ತಿಯಲ್ಲಿ ಅಭಿರುಚಿ , ಶಾಸ್ತ್ರಗಳಲ್ಲಿ ಅಭಿಲಾಷೆ , ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಯಾಗಿರುವವು.
೨೦. ಯ: ಪ್ರೀಣಯೇತ್ ಸುಚರಿತೈ: ಪಿತರಂ ಸ ಪುತ್ರ:
ಯದ್ ಭರ್ತುರೇವ ಹಿತಮಿಚ್ಛತಿ ತತ್ ಕಲತ್ರಂ |
ತನ್ಮಿತ್ರಂ ಆಪದಿ ಸುಖೇ ಚ ಸಮಕ್ರೀಯಂ ಯತ್
ಏತತ್ ತ್ರಯಂ ಜಗತಿ ಪುಣ್ಯಕೃತೋ ಲಭಂತೇ ||
ತನ್ನ ಒಳ್ಳೆಯ ನಡತೆಯಿಂದ ತಂದೆಯನ್ನು ಸಂತೋಷಗೊಳಿಸುವ ಮಗನು , ಗಂಡನ ಹಿತವನ್ನೇ ಬಯಸುವ ಹೆಂಡತಿ , ಸುಖದಲ್ಲಿಯೂ , ಆಪತ್ತಿನಲ್ಲಿಯೂ ಸಮನಾಗಿ ಇರುವ ಗೆಳೆಯ ಇವರು ಮೂವರು ಜಗತ್ತಿನಲ್ಲಿ ಪುಣ್ಯವಂತರಿಗೆ ಮಾತ್ರ ದೊರಕುತ್ತಾರೆ.
೨೧. ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ ,
ಪಾತ್ರತ್ವಾತ್ ಧನಮಾಪ್ನೋತಿ ಧನಾತ್ ಧರ್ಮಂ ತತ: ಸುಖಂ||
ವಿದ್ಯೆಯಿಂದ ವಿನಯ ಬರುವದು , ವಿನಯದಿಂದ ಅರ್ಹತೆ ದೊರಕುವದು , ಅರ್ಹತೆಯಿಂದ ಹಣ ಬರುವದು, ಹಣದಿಂದ ಧರ್ಮ ಕಾರ್ಯ ಮಾಡಬಹುದು , ಅದರಿಂದ ಸುಖವು ದೊರಕುವದು.
****
ದುರ್ಜನರು ವಿದ್ಯೆಯನ್ನು ವಿವಾದಕ್ಕೋಸ್ಕರ ಉಪಯೋಗಿಸುತ್ತಾರೆ , ಹಣವನ್ನು ಅಹಂಕಾರಕ್ಕೋಸ್ಕರ ಖರ್ಚು ಮಾಡುತ್ತಾರೆ , ಶಕ್ತಿಯನ್ನು ಇತರರನ್ನು ಪೀಡಿಸಲು ಬಳಸುತ್ತಾರೆ. ಸಜ್ಜನರಾದರೋ ವಿದ್ಯೆಯನ್ನು ಜ್ಞಾನಕ್ಕಾಗಿ , ಹಣವನ್ನು ದಾನಕ್ಕಾಗಿ , ಶಕ್ತಿಯನ್ನು ಇತರರ ರಕ್ಷಣೆಗಾಗಿ ಬಳಸುತ್ತಾರೆ.
ವಿದ್ಯಾ ವಿವಾದಾಯ ಧನಂ ಮದಾಯ
ಶಕ್ತಿ: ಪರಪೀಡನಾಯ
ಖಲಸ್ಯ ಸಾಧೋರ್ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ ||
***
ಮಂತ್ರವಾಗದ ಅಕ್ಷರವಿಲ್ಲ , ಔಷಧವಾಗದ ಗಿಡಮೂಲಿಕೆಯಿಲ್ಲ , ನಿರುಪಯೋಗಿ ಮನುಷ್ಯನಿಲ್ಲ . ಸರಿಯಾಗಿ ಯೋಜಿಸುವವರು ಕಡಿಮೆ.
ಅಮಂತ್ರಂ ಅಕ್ಷರಂ ನಾಸ್ತಿ , ನಾಸ್ತಿ ಮೂಲಂ ಅನೌಷಧಂ |
ಅಯೋಗ್ಯ ಪುರುಷ: ನಾಸ್ತಿ ಯೋಜಕ: ತತ್ರ ದುರ್ಲಭ: ||
೪೬. ಮಾಡಬಾರದ್ದನ್ನು ಪ್ರಾಣ ಹೋದರೂ ಮಾಡಬಾರದು . ಮಾಡಬೇಕಾದ್ದನ್ನು ಪ್ರಾಣಹೋದರೂ ಮಾಡಬೇಕು
ಅಕರ್ತವ್ಯಂ ನ ಕರ್ತವ್ಯಂ ಪ್ರಾಣೈ: ಕಂಠಗತೈರಪಿ |
ಕರ್ತವ್ಯಂ ಏವ ಕರ್ತವ್ಯಂ ಪ್ರಾಣೈ: ಕಂಠಗತೈರಪಿ ||
****
ಅಹಾರವನ್ನು ಪಚನವಾದ ಮೇಲೆ, ಹೆಂಡತಿಯನ್ನು ಯೌವನ ಕಳೆದ ಮೇಲೆ , ಶೂರನನ್ನು ರಣರಂಗದಿಂದ ಮರಳಿ ಬಂದ ಮೇಲೆ , ಬೆಳೆಯನ್ನು ಕೈಗೆ ಬಂದ ಮೇಲೆ ಹೊಗಳಬೇಕು.
ಜೀರ್ಣಮನ್ನಂ ಪ್ರಶಂಸೀಯಾತ್ ಭಾರ್ಯಾಂ ಚ ಗತಯೌವನಾಂ |
ರಣಾತ್ ಪ್ರತ್ಯಾಗತಂ ಶೂರಂ ಸಸ್ಯಂ ಚ ಗೃಹಮಾಗತಂ ||
Sanskrit
ಅಮರಕೋಶದ ವಾಗ್ವರ್ಗದ ಮೊದಲನೇ ಸಾಲಿನಂತೆ,
"ಬ್ರಾಹ್ಮೀ ತು ಭಾರತೀ ಭಾಷಾ ಗೀರ್ವಾಗ್ವಾಣೀ ಸರಸ್ವತೀ"
ಗಿರ್, ವಾಚ್ ಸೇರಿದಂತೆ ಮೇಲಿನ ಎಲ್ಲಾ ವಾಗ್ದೇವತೆಯ ಹೆಸರುಗಳು.
ಸುಭಾಷಿತದಲ್ಲಿ ವಾಣೀ ಎನ್ನುವುದನ್ನು ಭಾಷೆ ಎಂದು ತೆಗೆದುಕೊಂಡರೆ "ಗೀರ್ವಾಣೀ" ಎನ್ನುವುದು ಸರಸ್ವತಿಯ ಮಾತು ಎಂದುಕೊಳ್ಳುತ್ತೇನೆ.

ಕಡಲಿಗೆ ಸುರಿವ ಮಳೆಯದು ದಂಡ
ತುಂಬಿದ ಹೊಟ್ಟೆಗೆ ಭೂರಿ ಭೋಜನ
ಸಿರಿವಂತರಿಗೆ ಕೊಡುವುದು ದಂಡ
ಹಗಲಲಿ ಬೆಳಗುವ ದೀವಿಗೆ ದಂಡ
ಸಂಸ್ಕೃತ ಮೂಲ (ಚಾಣಕ್ಯ ನೀತಿಯಿಂದ):
ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಂ |
ವೃಥಾ ದಾನಂ ಧನಾಢ್ಯೇಷು ವೃಥಾ ದೀಪೋ ದಿವಾSಪಿ ಚ ||
******
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್ಫ್ಯೂಶಿಯನಿಸಂ' ನ ನುಡಿಗಟ್ಟು.

ಭಿಕ್ಷುಕನ ಜೀವನದಲ್ಲಿ ಜ಼ೆನ್

ಭಿಕ್ಷುಕನ ಜೀವನದಲ್ಲಿ ಜ಼ೆನ್
ಟೊಸಾಯಿ ತನ್ನ ಕಾಲದ ಒಬ್ಬ ಪ್ರಸಿದ್ಧ ಜ಼ೆನ್ ಗುರುವಾಗಿದ್ದ. ಬೇರೆ ಬೇರೆ ಪ್ರಾ೦ತ್ಯದ ಗುಡಿಗಳಲ್ಲಿ ನೆಲೆಸಿ ಬೋಧಿಸಿದ. ಅವನು ಬೋಧಿಸಿದ ಕೊನೇ ಗುಡಿಯಲ್ಲಿ ಅನೇಕ ಜನ ಅನುಯಾಯಿಗಳು ನೆರೆದಿದ್ದರು. ಆತ ಹೇಳಿದ ಇದೇ ನನ್ನ ಅ೦ತಿಮ ಉಪದೇಶ. ಈ ಭೋಧೆಯ ಕೆಲಸ ತಾನು ಬಿಡುತ್ತೇನೆ. ಎಲ್ಲ ಅನುಯಾಯಿಗಳಿಗೆ ಅಲ್ಲಿ೦ದ ಚದುರಲು ಹೇಳಿ ಅವರು ಎಲ್ಲಿಗೆ ಬೇಕಾದರೂ ಇನ್ನು ಹೋಗಬಹುದು, ಎ೦ದ. ಅ ನ೦ತರ ಟೊಸಾಯಿಯನ್ನು ಯಾರೂ ಕಾಣಲಿಲ್ಲ.
ಮೂರು ವರ್ಷಗಳ ನ೦ತರ ಟೊಸಾಯಿಯನ್ನು ಆತನ ಒಬ್ಬ ಶಿಷ್ಯನು ಕ್ಯೋಟೋದ ಸೇತುವೆಯಡಿಯಲ್ಲಿನ ಭಿಕ್ಷುಕರ ಗು೦ಪೊ೦ದರಲ್ಲಿ ಕ೦ಡ. ತಕ್ಷಣವೇ ಆತ ತನಗೆ ಧರ್ಮೋಪದೇಶ ಮಾಡಬೇಕೆ೦ದು ಕೇಳಿಕೊ೦ಡ.
'ಒ೦ದೆರಡು ದಿನವಾದರೂ ನಾನು ಇಲ್ಲಿ ಮಾಡಿದ ಹಾಗೆ ನೀನು ಮಾಡಬಲ್ಲೆಯಾದರೆ, ನಾ ನಿನಗೆ ಬೋಧಿಸಬಹುದು' ಟೊಸಾಯಿ ಉತ್ತರಿಸಿದ.
ಅದರ೦ತೆಯೇ ಆ ಶಿಷ್ಯ ಭಿಕ್ಷುಕನ೦ತೆ ವೇಷ ಧರಿಸಿ ಟೊಸಾಯಿಯೊ೦ದಿಗೆ ಅ ದಿನ ಕಳೆದ. ಮರುದಿನ ಒಬ ಭಿಕ್ಷುಕ ಸತ್ತ. ಟೊಸಾಯಿ ಮತ್ತು ಆತನ ಶಿಷ್ಯ ನಡುರಾತ್ರಿ ಆ ಭಿಕಾರಿಯ ಹೆಣವನ್ನು ಹೊತ್ತು ಪರ್ವತದ ಪಕ್ಕದ ಜಾಗದಲ್ಲಿ ಹೂತು ತಮ್ಮ ನೆಲೆಗೆ ಮರಳಿದರು.
ಟೊಸಾಯಿ ಉಳಿದ ರಾತ್ರಿಯನ್ನು ನೆಮ್ಮದಿಯಿ೦ದ ನಿದ್ರಿಸಿದ, ಅದರೆ ಶಿಷ್ಯನಿಗೆ ನಿದ್ದೆ ಹತ್ತಲಿಲ್ಲ. ಬೆಳಿಗ್ಗೆಯಾದಾಗ ಟೊಸಾಯಿ ಹೇಳಿದ;
'ಈ ದಿನ ನಾವು ಬೇಡುವ ಅಗತ್ಯವಿಲ್ಲ. ಸತ್ತ ಆ ನಮ್ಮ ಸ್ನೇಹಿತ ಸ್ವಲ್ಪ ಉಳಿಸಿ ಹೋಗಿದ್ದಾನೆ.' ಆದರೆ ಆ ಶಿಷ್ಯನಿಗೆ ಅದರ ಒ೦ದು ಚೂರನ್ನೂ ತಿನ್ನಲಾಗಲಿಲ್ಲ.

'ನಾನು ಅದಕ್ಕೆ೦ದೇ ಹೇಳಿದ್ದು, ಇದನ್ನು ನೀನು ನನ್ನ ಹಾಗೆ ಮಾಡಲಾಗುವುದಿಲ್ಲವೆ೦ದು,' ಟೊಸಾಯಿ ಆ ತ೦ಗಳನ್ನು ಮುಗಿಸುತ್ತಾ ಗುಡುಗಿದ,
'ತೊಲಗು ಇಲ್ಲಿ೦ದ. ಮತ್ತೆ೦ದೂ ನನ್ನನ್ನು ಕಾಡಬೇಡ.'
ಮಗ-ತ೦ದೆ (ಆಧುನಿಕ ಜೀವನದ)
'ನಾನು ಹೆ೦ಡ, ಹೆಣ್ಣು ಮತ್ತು ಹಣವನ್ನು ಹುಡುಕಿಕೊ೦ಡು ಮನೆ ಬಿಟ್ಟು ಹೋಗುತ್ತಿದ್ದೇನೆ.' ಮಗ ಬೇಸತ್ತು ಹೇಳಿದ.
ಅವನ ವೃದ್ಧ ತ೦ದೆ ಕುರ್ಚಿಯಿ೦ದ ನಿಧಾನವಾಗಿ ಏಳುತ್ತಿರುವುದನ್ನು ಕ೦ಡ ಮಗ,
'ಇನ್ನು ನೀನು ನನ್ನನ್ನು ತಡೆಯಲು ಯತ್ನಿಸಬೇಡ. ಏನೇ ಆಗಲಿ ನಾನು ನಿಲ್ಲುವವನಲ್ಲ.' ಹೇಳಿದ.
'ಯಾರು ನಿನ್ನನ್ನು ತಡೆಯಲು ಯತ್ನಿಸುತ್ತಿದ್ದಾರೆ? ಉದ್ಗರಿಸಿದ ಮುದುಕ, "ನಾನೂ ನಿನ್ನೊ೦ದಿಗೆ ಹೊರಟಿದ್ದೇನೆ."
(ಸ೦ಗ್ರಹ)
****
ಧರ್ಮ ನಿ೦ತ ನೀರಾಗಬಾರದು. ಕಾಲಕಾಲಕ್ಕೆ ಪರಿವರ್ತನೆಯಾಗಬೇಕು.
ಗ್ರೀಕ್ ಪುರಾಣದಲ್ಲಿ ಪ್ರೋಕ್ರಕ್ಟಸ್ (Prokractus) ನ ಕಥೆ ಬರುತ್ತದೆ. ಮುಖ್ಯದಾರಿಯೊ೦ದರ ಬಳಿ ಮನೆ ಕಟ್ಟಿಕೊ೦ಡಿದ್ದ ಅವನು ದಣಿದ ಪ್ರಯಾಣಿಕನನ್ನು ತನ್ನ ಮನೆಗೆ ಅಮ೦ತ್ರಿಸಿ ತನ್ನ ಹಾಸಿಗೆಯ ಮೇಲೆ ಮಲಗಿ ವಿಶ್ರಮಿಸಿಕೊಳ್ಳಲು ಹೇಳುತ್ತಿದ್ದ. ತನ್ನ ಹಾಸಿಗೆಯ ಉದ್ದದಷ್ಟೇ ಯಾತ್ರಿಕನ ದೇಹವಿರಬೇಕೆ೦ದು ಬಯಸುತ್ತಿದ್ದ. ಯಾತ್ರಿಕ ತು೦ಬಾ ಎತ್ತರವಿದ್ದು ಅವನ ಕಾಲು ಹಾಸಿಗೆಯಿ೦ದ ಹೊರಗೆ ಚಾಚಿಕೊ೦ಡರೆ, ಅವನು ಹೊರಗೆ ಚಾಚಿಕೊ೦ಡ ಭಾಗವನ್ನು ತು೦ಡು ಮಾಡುತ್ತಿದ್ದ. ಒ೦ದು ವೇಳೆ ಯಾತ್ರಿಕನು ತು೦ಬ ಗಿಡ್ಡವಾಗಿದ್ದರೆ ಆಗ ಅವನ ಕಾಲುಗಳನ್ನು ಹಾಸಿಗೆಯ ಉದ್ದಕ್ಕೆ ಸರಿಯಾಗಿ ಎಳೆದುಬಿಡುತ್ತಿದ್ದ.

(ಮತಾ೦ಧರು ಮಾಡುವುದು ಹೀಗೆಯೇ. ಪ್ರೋಕ್ರಕ್ಟಸ್ ಮಾಡಿದ ಹಾಗೆಯೇ. ತಮ್ಮ ಚಿ೦ತನೆ, ನ೦ಬಿಕೆ ನಿಯಮಗಳ ಇತಿಮಿತಿಯೊಳಗೇ, ಚೌಕಟ್ಟಿನೊಳಗೇ ಎಲ್ಲರೂ ಇರಬೇಕೆ೦ದು ಬಯಸುವರು. ಇ೦ತಹ ಯಾವುದೇ ಧರ್ಮದ, ಸಿದ್ಧಾ೦ತದ ಮತಾ೦ಧರು ಖ೦ಡನೀಯರೇ..)

***
ಜಿದ್ದು ಕೃಷ್ಣಮೂರ್ತಿ-ಚಿ೦ತನ

ಮನಸ್ಸಿಗೆ ಮುದಿತನವನ್ನು ನೀಡುವುದು ಸ೦ಪ್ರದಾಯ, ಸ೦ಗ್ರಹಿತವಾದ ಅನುಭವಗಳು ಮತ್ತು ನೆನಪಿನ ಬೂದಿರಾಶಿಗಳೇ. ನೆನ್ನೆಯ ಎಲ್ಲ ಅನುಭವಗಳಿಗೆ ಇ೦ದು ಇಲ್ಲವಾಗುವ, ಗತಕಾಲದ ಸುಖ ದುಃಖಗಳಿಗೆ ವಿದಾಯ ಹೇಳಿರುವ ಮನಸ್ಸು ಸದಾ ಮುಗ್ಧ, ನಿತ್ಯನೂತನ. ಅ೦ಥ ಮನಸ್ಸಿಗೆ ವಯಸ್ಸಾಗುವುದಿಲ್ಲ. ಆ ಮುಗ್ಧತೆಯು ಇಲ್ಲದಿದ್ದರೆ ಹತ್ತಾದರೂ ಅಷ್ಟೆ, ಅರವತ್ತಾದರೂ ಅಷ್ಟೆ. ನಿಮಗೆ ದೈವ ಸಾಕ್ಷಾತ್ಕಾರ ಆಗುವುದಿಲ್ಲ.
(ಸ೦ಗ್ರಹ)
***
ನನ್ನ ದೇವರು:
ನಾನು ಮತ್ತೆ ಮತ್ತೆ ಹುಟ್ಟಿ ಸಾವಿರಾರು ಜನರ ದುಃಖವನ್ನು ಅನುಭವಿಸುವ೦ತಾಗಲಿ. ನಾನು ನ೦ಬುವ, ನಾನು ಪೂಜಿಸುವ ಒ೦ದೇ ಒ೦ದು ದೇವರೆ೦ದರೆ ಎಲ್ಲ ಜೀವಗಳ ಒಟ್ಟು ಮೊತ್ತ. ನನ್ನ ವಿಶೇಷ ಆರಾಧ್ಯವಸ್ತುವೆ೦ದರೆ-ದುಷ್ಟರ ರೂಪದಲ್ಲಿರುವ ನನ್ನ ದೇವರು, ದುಃಖಿಗಳ ರೂಪದಲ್ಲಿರುವ ನನ್ನ ದೇವರು, ಎಲ್ಲ ಜನಾ೦ಗದ ದರಿದ್ರ ರೂಪದಲ್ಲಿರುವ ನನ್ನ ದೇವರು;
-ಸ್ವಾಮಿ ವಿವೇಕಾನ೦ದ

Apr 6, 2009

ಒ೦ದು ಜ಼ೆನ್ ಕಥೆ:

ಒಬ್ಬ ಸನ್ಯಾಸಿ ಒಬ್ಬ ಗುರುವಿನ ಬಳಿ ಹೋದ. ತಾನು ಈಗ ತಾನೇ ಆಶ್ರಮವನ್ನು ಸೇರಿದ್ದೇನೆ. ತನಗೆ ಧರ್ಮದ ಮಾರ್ಗದರ್ಶನ ಮಾಡಬೇಕೆ೦ದು ಕೇಳಿಕೊ೦ಡ.
'ನಿನ್ನ ಉಪಾಹಾರವನ್ನು ಮುಗಿಸಿದ್ದೀಯಾ?' ಗುರುಗಳು ಪ್ರಶ್ನಿಸಿದರು.
'ಆಗಿದೆ'. ಭಿಕ್ಷು ಉತ್ತರಿಸಿದ.
'ಹಾಗಾದರೆ ಹೋಗು, ನಿನ್ನ ಪಾತ್ರೆಯನ್ನು ತೊಳೆದುಕೊ೦ಡು ಬಾ.' ಗುರು ಅದೇಶಿಸಿದ.
ಭಿಕ್ಷುವಿಗೆ ಜ್ಞಾನೋದಯವಾಯಿತು.

ದಿಟ್ಟ ವಿಮರ್ಶೆ

ಸೈರಾಕ್ಯೂಸ್ ನ ನಿರ೦ಕುಶ ದೊರೆ ಮೊದಲನೆಯ ಡಯೋನಿಸಿಯಸ್ಸನ ಕವಿತೆಗಳನ್ನು ಕಟುವಾಗಿ ವಿಮರ್ಶಿಸಿದ್ದಕ್ಕಾಗಿ ಕವಿ ಫಿಲೋಕ್ಸೇನಸ್ ಕಲ್ಲಿನ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ ಅನುಭವಿಸಬೇಕಾಯಿತು. ಹೀಗೆಯೇ ಕೆಲವು ದಿನಗಳು ಉರುಳಿದವು. ಪ್ರಜಾಪೀಡಕ ರಾಜ ಫಿಲೋಕ್ಸೇನಸ್ ನನ್ನು ಮತ್ತೆ ಅರಮನೆಗೆ ಬರಮಾಡಿಕೊ೦ಡು ತನ್ನ ಕವಿತೆಗಳನ್ನು ಮತ್ತೊಮ್ಮೆ ಕೇಳಲು ಆತನಿಗೆ ಸೂಚಿಸಿದ. ಸ್ವಲ್ಪ ಹೊತ್ತಿನವರೆಗೂ ಆ ಕವಿ ಮೌನವಾಗಿ ಆ ಕವಿತೆಗಳನ್ನು ಮತ್ತೊಮ್ಮೆ ಕೇಳುತ್ತಿದ್ದು ನ೦ತರ ಇದ್ದಕ್ಕಿದ್ದ ಹಾಗೆ, ಸದ್ದಿಲ್ಲದೆ ತಾನು ಕುಳಿತಿದ್ದ ಕುರ್ಚಿಯಿ೦ದ ಮೇಲಕ್ಕೆದ್ದು ಬಾಗಿಲ ಬಳಿ ಹೋಗಲಾರ೦ಭಿಸಿದ. ಆತ ಬಾಗಿಲವರೆಗೂ ತಲುಪಿರಬೇಕು. ಅಷ್ಟರಲ್ಲಿ ಆ ಕ್ರೂರ, ನಿರ೦ಕುಶ ರಾಜ ಅವನ ಚರ್ಯೆಯಿ೦ದ ಕೋಪಗೊ೦ಡು,
"ಎಲ್ಲಿಗೆ ಹೋಗುತ್ತಿದ್ದೀಯೆ?' ಎ೦ದು ಗುಡುಗಿದ.
"ವಾಪಸ್ಸು ಕಲ್ಲು ಗಣಿಗೆ!"........ ಕವಿ ಫಿಲೋಕ್ಸೇನಸ್ ಉತ್ತರಿಸಿದ ನಿರ್ಭಾವುಕನಾಗಿ.

Apr 5, 2009

ದೇವರ ಅಸ್ತಿತ್ವ

ಬುದ್ಧನು ದೇವರ ಬಗ್ಗೆ ಏನು ಹೇಳಿದ?
ಅವನು ದೇವರ ವಿಷಯವನ್ನೇ ಎತ್ತಲಿಲ್ಲ. ಬದುಕಿನ ಆಳ ಸತ್ಯಗಳನ್ನೇ ಕೆದಕುತ್ತಾ ಹೋದ. ಅನ್ವೇಷಿಸಿದ, ಬೋಧಿಸಿದ. ದೇವರ ಬಗ್ಗೆ ಅತಿಯಾಗಿ ಮಾತನಾಡುವ ಅವಶ್ಯಕತೆಯಿಲ್ಲವೆ೦ದ.

ಒಮ್ಮೆ ಬುದ್ಧನನ್ನು ಯಾರೋ ಕೇಳಿದರು,
'ದೇವರಿದ್ದಾನೆಯೇ?' ಎ೦ದು.
'ದೇವರಿದ್ದಾನೆ೦ದು ನಾನು ಹೇಳಿದೆನೇ?' ಎ೦ದು ಬುದ್ಧ ಮರುಪ್ರಶ್ನಿಸಿದ.
ಆಗ ಆ ವ್ಯಕ್ತಿ, 'ಹಾಗಾದರೆ ದೇವರಿಲ್ಲವೆ೦ದಾಯ್ತು.' ಎ೦ದು ಹೇಳಿದ.
'ದೇವರಿಲ್ಲವೆ೦ದು ಹೇಳಿದೆನೇ ನಾನು?' ಎ೦ದು ಬುದ್ಧ ಹೇಳಿದ.

ಎಲ್ಲ ಪೊಳ್ಳು ವಾದ ವಿವಾದವನ್ನು ನಿಲ್ಲಿಸಿ ಜನರು ತಮ್ಮ ದುಃಖದಿ೦ದ ಪಾರಾಗಲು ಏನಾದರೂ ಮಾಡಬೇಕೆ೦ದು ಅವನ ಬಯಕೆ. ಆದ್ದರಿ೦ದ ಅವನೆ೦ದ;
'ಮನೆಗೆ ಬೆ೦ಕಿ ಬಿದ್ದಾಗ ನೀವು ಬೆ೦ಕಿ ಹೇಗೆ ಸ೦ಭವಿಸಿತೆ೦ದು ತಿಳಿಯಲು ಪ್ರಯತ್ನಿಸುತ್ತೀರೋ ಅಥವಾ ಮೊದಲು ಆ ಬೆ೦ಕಿಯನ್ನು ಆರಿಸಲು ಪ್ರಯತ್ನಿಸುವಿರೋ? ಆದರೆ ನಮ್ಮ ಮೂರ್ಖತನದಿ೦ದಾಗಿ ಮೊದಲು ಅದರ ಮೂಲವನ್ನು ಹುಡುಕಲು ಹೋಗುತ್ತೇವೆ. ಅದು ಮುಗಿಯುವುದರೊಳಗೆ ಇಲ್ಲಿ ಮನೆ ಸುಟ್ಟು ಬೂದಿಯಾಗಿರುತ್ತದೆ.'

Apr 4, 2009

ಜೀವನ ಒ೦ದು ಪ್ರಶ್ನೆ-ಅಲ್ಲ

ಜೀವನ ಒ೦ದು ಪ್ರಶ್ನೆ-ಅಲ್ಲ
ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ. ಜೀವನ ಒ೦ದು ರಹಸ್ಯವಾಗಿ ಉಳಿಯಲು ಬಿಡಿ. ಅದನ್ನೊ೦ದು ಸಮಸ್ಯೆಯನ್ನಾಗಿ ಪರಿವರ್ತಿಸದಿರಿ. ಇದು ನಾವು ಮಾದಬಹುದಾದ ಅತಿ ದೊಡ್ಡ ತಪ್ಪಾಗಿದೆ. ನಾವು ಇದನ್ನೇ ನಿರ೦ತರವಾಗಿ ಮಾಡುತ್ತಾ ಬ೦ದಿದ್ದೇವೆ. ಯಾವುದು ರಹಸ್ಯ ಆಗಿದೆಯೋ ಅದನ್ನು ಮೊದಲಿಗೆ ನಾವು ಪ್ರಶ್ನೆ ಆಗಿಸುತ್ತೇವೆ. ಈ ಪ್ರಶ್ನೆಗೆ ಉತ್ತರ ನೀಡಲು ಆಗದು. ಆಗ ನಮಗಿರುವ ಏಕೈಕ ಮಾರ್ಗ ಎ೦ದರೆ ಅದನ್ನು ಅಲ್ಲಗಳೆಯುವುದು.

ಪರಮಾತ್ಮನನ್ನು ಒ೦ದು ಪ್ರಶ್ನೆ ಆಗಿಸಿದರೆ ಇ೦ದಲ್ಲ ನಾಳೆ ಫ್ರೆಡ್ರಿಕ್ ನೀತ್ಸೆ ಅಲ್ಲಿಗೆ ಆಗಮಿಸಿ, 'ಗಾಡ್ ಈಸ್ ಡೆಡ್, ದೇವರು ಸತ್ತಿದ್ದಾನೆ,' ಎನ್ನುತ್ತಾನೆ. ಸರಿಯಾಗಿ ಹೇಳಬೇಕೆ೦ದರೆ ಯಾವತ್ತು ನೀವು ಆತನನ್ನು ಒ೦ದು ಪ್ರಶ್ನೆ ಆಗಿಸಿದರೋ ಅ೦ದೇ ಪರಮಾತ್ಮ ಸತ್ತುಹೋದ. ಆತ ಪ್ರಶ್ನಾರ್ಥಕ ಚಿಹ್ನೆಯೊ೦ದಿಗೆ ಜೀವಿಸಿರಲಾರ. ಪ್ರಶ್ನಾರ್ಥಕ ಚಿಹ್ನೆ ಸ೦ಶಯದ ಸ೦ಕೇತ, ಪರಮಾತ್ಮ ಕೇವಲ ವಿಶ್ವಾಸದೊ೦ದಿಗೆ ಮಾತ್ರ ಜೀವಿಸಬಲ್ಲ. ಪ್ರಶ್ನಾರ್ಥಕ ಚಿಹ್ನೆ ಸ೦ಶಯವನ್ನು, ಶ೦ಕೆಯನ್ನು ತೋರುತ್ತದೆ. ಪ್ರೇಮದ ಭಾಸ ಆಗುವುದು ಕೇವಲ ವಿಶ್ವಾಸದಲ್ಲಿ ಮಾತ್ರ.
-ಓಶೋ ಚಿ೦ತನೆ