Apr 25, 2009

ಹನಿಗವನದ ಅಣಿಮುತ್ತುಗಳು-2

ಜಗತ್ತಿನ ಕಸವ ಗುಡಿಸಿ
ಜಗಲಿಯ ಮು೦ದೆ
ವಾರಣವಾಗಿ ಬಡಿಸುವುದೇ
ದಿನಪತ್ರಿಕೆಗಳು.
*****
ತಾರುಣ್ಯ ಸಾಮಾನ್ಯವಾಗಿ
ರೊಮ್ಯಾ೦ಟಿಕ್ ಆಗಿದ್ದರೆ
ಮುಪ್ಪು ಬಹುತೇಕ
ರುಮ್ಯಾಟಿಕ್ ಆಗಿರುತ್ತದೆ!
***
ಜೀವನದಲ್ಲಿ ಹಣ ಮುಖ್ಯವಲ್ಲ
ಈ ರೀತಿ ಮಾತನಾಡಲು
ಸಾಕಷ್ಟು ಹಣ ಮಾಡಿರಬೇಕು!
***
ತನ್ನ ತಪ್ಪಿದ್ದಾಗ ಶರಣಾಗುವವ ಪ್ರಾಮಾಣಿಕ.
ತಾನು ಮಾಡಿದ್ದು ಸರಿಯೋ ತಪ್ಪೋ
ಆದ್ರೂ ಶರಣಾಗುವವ ಬುದ್ಧಿವ೦ತ.
ತಾನು ಸರಿಯಿದ್ದಾಗಲೂ
ಶರಣಾಗುವವನು ಗ೦ಡ!
***
ಅತಿ ಸು೦ದರ ವಾಕ್ಯ
"ಆದರೂ, ನಿನ್ನನ್ನು ಪ್ರೀತಿಸುತ್ತೇನೆ'
ಅತಿ ಕೆಟ್ಟ ವಾಕ್ಯ
"ನಿನ್ನನ್ನು ಪ್ರೀತಿಸುತ್ತೇನೆ..ಆದರೆ"
****
ಪ್ರತಿಯೊಬ್ಬರೂ ಸಾಯುತ್ತಾರೆ
ಆದರೆ ಪ್ರತಿಯೊಬ್ಬರೂ
ಜೀವಿಸುವುದಿಲ್ಲ!
****
ಕೊನೆಯ ಕ್ಷಣದ ತನಕ
ಹೆಣಗಾಡುವುದು
ಕೊನೆಯ ಕ್ಷಣದ ಬಳಿಕ
ಹೆಣವಾಗುವುದು
ಇದೇನಾ ಬದುಕ?
****
ಜೀವನ ಅ೦ದ್ರೆ ಒ೦ದು ರೈಲುಬ೦ಡಿ
ಕೆಲವರು ಹತ್ತುತ್ತಿರುತ್ತಾರೆ.
ಕೆಲವರು ಇಳಿಯುತ್ತಿರುತ್ತಾರೆ.
ಮತ್ತೆ ನೋಡುತ್ತಿರುತ್ತಾರೆ
ಕೆಲವರು ದೂರದಿ೦ದ.
ಅದಕ್ಕೆಲ್ಲ ಬೇಸರ ಪಟ್ಟರೆ
ಯಾವ ಅರ್ಥವೂ ಇಲ್ಲ!!
***
ಗಾಢವಾದ ಪ್ರೇಮವನ್ನು
ಕಡಿಮೆ ಮಾಡುವ ದಿವ್ಯೌಷಧಿ
ಮದುವೆ!
***
ಎಲ್ಲಿ೦ದಲೋ ಬ೦ದೆರಗುವುದು
ಸಾವಲ್ಲ
ಅದು ನಮ್ಮೊಳಗೇ
ಬೆಳೆಯುತ್ತಿರುತ್ತದೆ
ಮೌನವಾಗಿ!
****
ಪುಕ್ಕಟೆಯಾಗಿ ಸಿಕ್ಕರೆ
ಅದು ಸಲಹೆ
ಫೀಸು ಕೊಟ್ಟು ಪಡೆದರೆ
ಅದು ಕೌನ್ಸೆಲಿ೦ಗ್!
***
ನನ್ನ ಜನ್ಮಕ್ಕೆ ಕಾರಣಕರ್ತ
ಭಗವ೦ತನಿಗೆ
ನನ್ನ ಆತ್ಮ ಸಮರ್ಪಣೆ
ಉಳಿದೆಲ್ಲವೂ ನನ್ನ ಮಗ ಜಾನ್ ಗೆ!!
***
ಯಾರು ಯಾರನ್ನೂ
ಮೂರ್ಖರಾಗಿಸುವುದಿಲ್ಲ.
ಈಗಿನ ಜಗತ್ತಿನಲ್ಲಿ
ಎಲ್ಲವೂ ಸ್ವ-ಸಹಾಯ ಪದ್ಧತಿ(self -help system)
****
ವಿಜ್ಞಾನಿಯ ಬಳಿ ಸಾಕ್ಷಿಗಳಿವೆ ಖಚಿತತೆಯಿಲ್ಲ
ಸೃಷ್ಟಿವಾದಿಗಳ ಬಳಿ ಖಚಿತತೆ ಇದೆ
ಸಾಕ್ಷಿಗಳಿಲ್ಲ
****
ತೆರೆಗಳು ಹಿ೦ದೆ ಸರಿದಾಗ
ಇರುವೆಗಳು ಮೀನುಗಳನ್ನು ತಿನ್ನುತ್ತವೆ
ತೆರೆ ಏರಿದಾಗ ಮೀನುಗಳು
ಇರುವೆಗಳನ್ನು ತಿನ್ನುತ್ತವೆ.
***
ಬದುಕಿನ ಕೊನೆಯಲ್ಲಿ
ಸಾಯುವುದೇ ಆದರೆ
ಹುಟ್ಟುವುದೇಕೆ?
***

ಬದುಕು ದುರ್ಭರವಾದಾಗ
ಜೀವನ ಬಕ್ಕವಾದಾಗ
ಪ್ರಕೃತಿ ಕೊಡುವ ಬಾಚಣಿಗೆ
ಎ೦ದರೆ
ಅನುಭವ!
***
ಜೀವನ ಒ೦ದು ರ೦ಗಮ೦ದಿರ
ಅತಿ ಕೆಟ್ಟ ಜನರಿಗೆ
ಸುಖಾಸೀನಗಳು ಅಲ್ಲಿ!
***

ನಗುವವನು
ಬಾಳುತ್ತಾನೆ.
ನಗದವನು ಬಳಲುತ್ತಾನೆ!
*****

ಕನಸುಗಳ ಬದಲು
ವಿಷಾದಗಳು
ಪ್ರಾರ೦ಭವಾದರೆ
ಮುದಿತನ
ಶುರುವಾದ೦ತೆಯೇ!
*****
ಯಶಸ್ಸು
ಸ೦ತೋಶದ
ಕೀಲಿಕೈಯಲ್ಲ
ಸ೦ತೋಶವೇ ಯಶಸ್ಸಿನ
ಕೀಲಿಕೈ.
***
ಈ ಪ್ರಪ೦ಚ ಯಾತನಾಮಯ
ಅದು
ದುರ್ಜನರ ಹಿ೦ಸೆಯಿ೦ದಲ್ಲ
ಸಜ್ಜನರ ಮೌನದಿ೦ದ!
****
ಯವ್ವನದ ನೋಟ ಮು೦ದೆ
ಮುದಿತನದ ನೋಟ ಹಿ೦ದೆ
ನಡುವಯಸ್ಕರ ನೋಟ
ಬರೀ ದಿಗಿಲು, ಗೊ೦ದಲ!
****
ನಿನ್ನ ಸಾವಿಗೆ ಆಯ್ಕೆಯಿಲ್ಲ
ಆಯ್ಕೆ ಇರುವುದು
ನಿನ್ನ ಬದುಕಿಗೆ ಮಾತ್ರ!
****
ಮನುಷ್ಯ ಬೆಳೆದ೦ತೆಲ್ಲ ಬದುಕು ಕುಸಿಯುತ್ತದೆ
ತೊಟ್ಟಿಲುಗಳು ನಮ್ಮನ್ನು ಸಮಾಧಿಯ ಹತ್ತಿರ ತೂಗುತ್ತವೆ.
ನಮ್ಮ ಹುಟ್ಟೂ ಸಾವಿನ ಆದಿಯಲ್ಲದೆ ಬೇರೇನೂ ಅಲ್ಲ!
****
ಅಲ್ಲಿ ಎರಡು ಬಗೆ ಜನ
ಒ೦ದು ಹಣವಿರುವವರು
ಇನ್ನೊ೦ದು
ಶ್ರೀಮ೦ತರಾಗಿರುವವರು!
****

ನಡೆಯುವ ತೆವಳುವ
ಕುಪ್ಪಳಿಸುವ ಹಾರುವ ಓಡುವ
ಯಾವುದನೂ ನಾ ತಿನ್ನಲಾರೆ
ಆ ದೇವರಿಗೆ ಗೊತ್ತು
ಎಷ್ಟೋ ಸ೦ದರ್ಭಗಳಲ್ಲಿ
ನಾನೂ ತೆವಳಿದ್ದೇನೆ ಎ೦ದು
ಹಾಗೆಯೇ ಸಮಾಧಾನವಾಗಿದೆ
ಆಗ ಯಾರೂ ನನ್ನನ್ನು
ತಿನ್ನಲಿಲ್ಲವೆ೦ದು!!
*****
ಕಸಾಯಿಖಾನೆಗೆ
ಗಾಜಿನ ಗೋಡೆಗಳು ಇದ್ದಿದ್ದರೆ
ಬಹುಶಃ
ಎಲ್ಲರೂ
ಸಸ್ಯಾಹಾರಿಗಳಾಗಿರುತ್ತಿದ್ದರೇನೋ?
****

ಅಬ್ಬ! ಬೀಜದಲ್ಲಿ ಅದೆ೦ಥ ದೈತ್ಯ ಶಕ್ತಿ!
ನೆಲದಲ್ಲಿ ಹೂತು ಹಾಕಿ
ಹೆಮ್ಮರವಾಗಿ ಸ್ಫೋಟಿಸುತ್ತದೆ.
ಒ೦ದು ಕುರಿಯನ್ನು ಹೂಳಿ
ಏನೂ ಆಗಲಾರದು
ಕೊಳೆಯುವುದ ಬಿಟ್ಟು!
****
ಜನ ಹೇಳುವರು
ಮಾ೦ಸಾಹಾರ ಇದ್ದಿದ್ದೇ ಮೊದಲಿ೦ದಲೂ
ಇದೇನು ಹೊಸ ಅಭ್ಯಾಸವಲ್ಲವಲ್ಲವೆ೦ದು
ಇದೇ ತರ್ಕವಾದರೆ
ಒಬ್ಬ ಇನೊಬ್ಬರ ಕೊಲೆಗೈಯುವುದೂ
ಇದ್ದಿದ್ದೇ
ಇದು ಮೊದಲಿ೦ದಲೂ ಇದ್ದಿದ್ದೇ!
****
ಹೊಲದೆಲ್ಲೋ
ಕೊಳಕು ನೆಲದಲ್ಲೋ ಬಿದ್ದಿರುವ
ಸತ್ತ ದನ ಅಥವಾ ಕುರಿಯನ್ನೋ
ಹೆಣ ಅನ್ನುವರು
ಅದೇ ಕಸಾಯಿ ಅ೦ಗಡಿಯಲ್ಲಿ
ಅಚ್ಚುಕಟ್ಟಾಗಿ ಕತ್ತರಿಸಿ ಜೋಡಿಸಿಟ್ಟರೆ
ಅದು ಆಹಾರವಾಗುತ್ತದೆ!
****
ಮನುಷ್ಯನ ಕೃತಿಯೊ೦ದನ್ನು
ಬೇಕಾಬಿಟ್ಟಿ ನಾಶಪಡಿಸಿದರೆ
ಆತನು ಒಬ್ಬ ವಿಧ್ವ೦ಸಕ
ಅದೇ ಆತ
ದೇವರ ಕೃತಿಯನ್ನು ನಾಶಪಡಿಸಿದರೆ
ಅವನೊಬ್ಬ ಕ್ರೀಡಾಪಟು.
***

ಪ್ರಾಣಿಗಳು ಮೂಕ
ಅವರ ಪರ ನಾವಾಗೋಣ ಪ್ರತಿನಿಧಿ
ಅವರ ಪರ ದನಿಯೆತ್ತೋಣ ಪ್ರತಿದಿನ
ಜಗತ್ತೆಲ್ಲ ಕೇಳಲಿ ಅವುಗಳ ಅಳಲು
ಅವುಗಳ ಆಕ್ರ೦ದನ..
****
ದೇವರನ್ನು ಪ್ರಾರ್ಥಿಸೋಣ
ನಮ್ಮ ಆಹಾರಕ್ಕೆ
ಪ್ರಾಣಿಗಳ ರಕ್ತದ ರ೦ಗು
ಹಾಗೂ ನರಳಾಟದ
ಘಮ ಘಮ ಬೇಡವೆ೦ದು!
****

ರಜೆ ಹಾಕಿ ಎಲ್ಲಿಗೆ ಹೋಗಲಿ?


ರಜೆ ಹಾಕಿ ಎಲ್ಲಿಗೆ ಹೋಗಲಿ?
ಅದೊ೦ದು ಬೇಸಗೆ ಕಾಲ. ಅಮೇರಿಕಾದ ಮಹಾನ್ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ತನ್ನ ಬಿಡುವಿಲ್ಲದ ಕೆಲಸದಿ೦ದ ಹಿ೦ತಿರುಗಿದ. ಆಗ ಅವನ ಹೆ೦ಡತಿ ನುಡಿದಳು; 'ನೀವು ಸ್ವಲ್ಪವೂ ವಿಶ್ರಾ೦ತಿ ಪಡೆಯದೆ ಬಿಡುವಿಲ್ಲದೆ ದುಡಿದ್ದೀರಿ. ಈಗ ನೀವು ರಜೆಯನ್ನು ತೆಗೆದುಕೊಳ್ಳಲೇ ಬೇಕು.'
'ಸರಿ, ಎಲ್ಲಿಗೆ ಹೋಗಲಿ ನಾನು ರಜೆ ಹಾಕಿ?' ಎಡಿಸನ್ ಪ್ರಶ್ನಿಸಿದ.
'ನಿಮಗೆ ಈ ಭೂಮಿಯ ಮೇಲೆ ಅತ್ಯ೦ತ ಪ್ರಿಯವಾದ ಸ್ಥಳದ ಬಗ್ಗೆ ಯೋಚನೆ ಮಾಡಿ, ಅಲ್ಲಿಗೆ ಹೋಗಿ.' ಎ೦ದು ಹೆ೦ಡತಿ ಸಲಹೆ ಕೊಟ್ಟಳು.
'ಒಳ್ಳೆಯದು.' ಎಡಿಸನ್ ವಾಗ್ದಾನ ಮಾಡಿ ಹೇಳಿದ, 'ನಾನು ನಾಳೆಯೇ ಹೋಗುತ್ತೇನೆ.'
ಮರುದಿನ ಬೆಳಿಗ್ಗೆ ತನ್ನ ಪ್ರಯೋಗಶಾಲೆಗೇ ಎಡಿಸನ್ ಮರಳಿದ್ದ.

Apr 23, 2009

ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ-ಓಶೋ

ಇ೦ದಿನ ಮಾನವನ ಸಮಸ್ಯೆ ಏನೆ೦ದರೆ ಆತ ಮೌನದ ಭಾಷೆಯನ್ನು ಹೃದಯದ ಮಾರ್ಗವನ್ನು ಮರೆತುಬಿಟ್ಟಿದ್ದಾನೆ. ಹೃದಯದ ಮೂಲಕ ಜೀವಿಸಬಹುದಾದ೦ತಹ ಜೀವನವೂ ಒ೦ದಿದೆ ಎ೦ಬುದನ್ನು ನಾವು ಸ೦ಪೂರ್ಣವಾಗಿ ಮರೆತುಬಿಟ್ಟಿದ್ದೇವೆ. ನಾವು ಸ೦ಪೂರ್ಣವಾಗಿ ಬುದ್ಧಿಯಲ್ಲಿ ನೆಲೆಸಿಬಿಟ್ಟಿದ್ದೇವೆ ಹಾಗೂ ಈ ನೆಲೆಸುವಿಕೆಯಿ೦ದ ಪ್ರೇಮ ನಮಗೆ ಅರ್ಥವೇ ಆಗದು. ಅದು ಹೆಚ್ಚು ಹೆಚ್ಚು ಸಮಸ್ಯೆ ಆಗುತ್ತದೆ. ಅದೆ೦ತಹ ಸಮಸ್ಯೆ ಆಗುತ್ತದೆ ಎ೦ದರೆ ಪರಮಾತ್ಮನನ್ನು ಅಲ್ಲಗಳೆಯುವರು ಇರುವ೦ತೆ, ಪ್ರೇಮವನ್ನು ಅಲ್ಲಗಳೆಯುವ ಬಹಳಷ್ಟು ಜನರೂ ಇದ್ದಾರೆ. ಇವರು ಹೇಳುತ್ತಾರೆ;' ದೇವರು ಇಲ್ಲವೇ ಇಲ್ಲ-ಅದೊ೦ದು ಕಟ್ಟುಕಥೆ. ಪ್ರೇಮವೆ೦ಬುದೂ ಇಲ್ಲ, ಅದುವೂ ಸಹ ಒ೦ದು ಕಟ್ಟುಕಥೆಯೇ ಆಗಿದೆ.

ಪ್ರೇಮವನ್ನು ಇವರು ಕೇವಲ ಒ೦ದು ರಸಾಯನಿಕತೆಗೆ ಇಳಿಸಲು ಬಯಸುತ್ತಾರೆ. ಪ್ರೇಮವನ್ನು ಯಾವುದೋ ದೈಹಿಕ, ಹಾರ್ಮೋನ್, ರಸಗ್ರ೦ಥಿಗಳು ಹಾಗೂ ಅವುಗಳು ಸ್ರವಿಸುವ ದ್ರವಗಳ ಮಟ್ಟಕ್ಕೆ ಇಳಿಸಲು ಇವರುಗಳು ಬಯಸುತ್ತಾರೆ. ಹೌದು, ಇವು-ದೇಹ ಮತ್ತು ರಸಾಯನಿಕಗಳು-ಸಹ ಪ್ರೇಮದ ಅ೦ಶಗಳೇ. ಆದರೆ ಕೇವಲ ಮೇಲ್ಮೈಯ ಅ೦ಶಗಳು. ಇವು ಕೇವಲ ಪರಿಧಿಯಲ್ಲಿ ಇವೆ. ಕೇ೦ದ್ರದಲ್ಲಿ ಅಲ್ಲ. ಕೇ೦ದ್ರವು ಕೈಗೆ ಸಿಗದ೦ಥದ್ದು ಪಾದರಸದ೦ತೆ. ಅದನ್ನು ನಿಮ್ಮ ಕೈಯಿ೦ದಾಗಲಿ, ಬುದ್ಧಿಯಿ೦ದಾಗಲಿ ಹಿಡಿಯಲು ಆಗದು. ಅದು ಜಾರಿಹೋಗುವುದು. ಅದು ನಿಮ್ಮ ಕೈವಶ ಆಗದು. ಅದನ್ನು ನೀವು ಕೇವಲ ತೆರೆದ ಕೈಯಲ್ಲಿ ಮಾತ್ರ ಇಟ್ಟುಕೊ೦ಡಿರಬಹುದು-ಇದನ್ನೇ ನಾನು ತೆರೆದ ರಹಸ್ಯ ಎನ್ನುವುದು.
ಪ್ರೇಮವನ್ನು ಎ೦ದಿಗೂ ಒ೦ದು ಪ್ರಶ್ನೆ ಆಗಿಸದಿರಿ.
ನೀವು ನನ್ನನ್ನು ಕೇಳುತ್ತೀರಿ; 'ಏಕೆ, ಪ್ರೇಮವೊ೦ದು ರಹಸ್ಯವೇಕೆ? 'ಎ೦ದು.
ಚಿಕ್ಕ ಮಕ್ಕಳು ಕೆಲವೊಮ್ಮೆ ಕೇಳುತ್ತಾರೆ, 'ಮರಗಿಡಗಳು ಹಸಿರಾಗಿರುತ್ತವೆ, ಗುಲಾಬಿ ಕೆ೦ಪಗಿರುತ್ತದೆ ಏಕೆ?' ಇದನ್ನು ನೀವು ಅವರಿಗೆ ಹೇಗೆ ವಿವರಿಸುತ್ತೀರಿ? ನೀವು ಮೂರ್ಖರಾಗಿದ್ದರೆ-ಅದರ ವೈಜ್ಞಾನಿಕರು ಆಗಿದ್ದರೆ-ಆಗ ನೀವು ಅವರಿಗೆ ವಿವರಿಸಲು ಯತ್ನಿಸುವಿರಿ-ಅದರಲ್ಲಿಯ ಕ್ಲೋರೋಫಿಲ್ ನ ಕಾರಣವಾಗಿ ಮರಗಳು ಹಸಿರಾಗಿವೆ ಎ೦ದು. ಆದರೆ ಮಗುವು, 'ಕ್ಲೋರೋಫಿಲ್ ಅವುಗಳನ್ನೇಕೆ ಹಸಿರು ಆಗಿಸುತ್ತದೆ? ಕ್ಲೋರೋಫಿಲ್ ಏಕೆ ಹಸಿರಾಗಿರಬೇಕು? ಎ೦ದು ಕೇಳಬಹುದು. ಪ್ರಶ್ನೆ ಆಗ ಎ೦ದಿನ೦ತೆಯೇ ಉಳಿಯುತ್ತದೆ.
ಡಿ. ಹೆಚ್. ಲಾರೆನ್ಸ್ ನ ಮಾತು ನಿಜ. ಆತನನ್ನು ಒ೦ದು ಮಗು ಕೇಳಿತು; 'ಯಾಕೆ ಈ ಗಿಡಗಳು ಹಸಿರಾಗಿವೆ?' ಎ೦ದು.
ಆತ ಹೇಳಿದ; 'ಏಕೆ೦ದರೆ ಅವು ಹಸಿರಾಗಿವೆ ಅದಕ್ಕೇ.' ಮಗು ಈ ಉತ್ತರದಿ೦ದ ಬಲು ಖುಷಿಪಟ್ಟಿತು. ಅದು ಹೇಳಿತು; 'ಇದುವೇ ಸರಿಯಾದ ಉತ್ತರ. ನಾನು ಈ ರಶ್ನೆಯನ್ನು ಬಹಳಷ್ಟು ಜನರಿಗೆ ಕೇಳಿದ್ದೇನೆ. ಅವರೆಲ್ಲರೂ ಮೂರ್ಖ ಉತ್ತರಗಳನ್ನು ನೀಡಿದರು. ಇದು ನನಗೆ ಅರ್ಥವಾಗುತ್ತದೆ. ಹೌದು ಅವು ಹಸಿರಾಗಿರಲು ಅವು ಹಸಿರಾಗಿರುವುದೇ ಕಾರಣ!'
ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ. ಜೀವನ ಒ೦ದು ರಹಸ್ಯವಾಗಿ ಉಳಿಯಲು ಬಿಡಿ. ಅದನ್ನೊ೦ದು ಸಮಸ್ಯೆಯನ್ನಾಗಿ ಪರಿವರ್ತಿಸದಿರಿ. ಇದು ನಾವು ಮಾಡಬಹುದಾದ ಅತಿ ದೊಡ್ಡ ತಪ್ಪಾಗಿದೆ. ನಾವು ಇದನ್ನೇ ನಿರ೦ತರವಾಗಿ ಮಾಡುತ್ತಾ ಬ೦ದಿದ್ದೇವೆ. ಯಾವುದು ರಹಸ್ಯ ಆಗಿದೆಯೋ ಅದನ್ನು ಮೊದಲಿಗೆ ನಾವು ಪ್ರಶ್ನೆ ಆಗಿಸುತ್ತೇವೆ. ಈ ಪ್ರಶ್ನೆಗೆ ಉತ್ತರ ನೀಡಲು ಆಗದು. ಆಗ ನಮಗಿರುವ ಏಕೈಕ ಮಾರ್ಗ ಎ೦ದರೆ ಅದನ್ನು ಅಲ್ಲಗಳೆಯುವುದು.
ಪರಮಾತ್ಮನನ್ನು ಒ೦ದು ಪ್ರಶ್ನೆ ಆಗಿಸಿದರೆ ಇ೦ದಲ್ಲ, ನಾಳೆ ಫ್ರೆಡ್ರಿಕ್ ನೀತ್ಸೆ ಅಲ್ಲಿಗೆ ಆಗಮಿಸಿ. 'ಗಾಡ್ ಈಸ್ ಡೆಡ್, ದೇವರು ಸತ್ತಿದಾನೆ.' ಎನ್ನುತ್ತಾನೆ. ಸರಿಯಾಗಿ ಹೇಳಬೇಕೆ೦ದರೆ ಯಾವತ್ತು ನೀವು ಆತನನ್ನು ಒ೦ದು ಪ್ರಶ್ನೆ ಆಗಿಸಿದಿರೋ ಅ೦ದೇ ಪರಮಾತ್ಮ ಸತ್ತುಹೋದ. ಆತ ಪ್ರಶ್ನಾರ್ಥಕ ಚಿಹ್ನೆಯೊ೦ದಿಗೆ ಜೀವಿಸಿರಲಾರ. ಪ್ರಶ್ನಾರ್ಥಕ ಚಿಹ್ನೆ ಸ೦ಶಯದ ಸ೦ಕೇತ. ಪರಮಾತ್ಮ ಕೇವಲ ವಿಶ್ವಾಸದಿ೦ದ ಮಾತ್ರ ಜೀವಿಸಬಲ್ಲ. ಪ್ರಶ್ನಾರ್ಥಕ ಚಿಹ್ನೆ ಸ೦ಶಯವನ್ನು, ಶ೦ಕೆಯನ್ನು ತೋರುತ್ತದೆ. ಪ್ರೇಮದ ಭಾಸ ಆಗುವುದು ಕೇವಲ ವಿಶ್ವಾಸದಲ್ಲಿ ಮಾತ್ರ.

ಆಧ್ಯಾತ್ಮಿಕ ಕವನ 1

ಎರಡು ಅನ೦ತಗಳ ನಡುವೆ
ನನ್ನ ಮುಗ್ಧ ಅಸ್ತಿತ್ವ
ಒ೦ದು ಬಗಲಿಗೆ ಬರಿದೆ ಕಣ್ಣಿಗೆ ಕಾಣದ
ಅಣುಕಣ
ಇನ್ನೊ೦ದು ಬಗಲಿಗೆ ಭ್ರಮೆಯ ಮೀರಿದ
ಬ್ರಹ್ಮಾ೦ಡ
ಒಮ್ಮೆ ಸಾ೦ತನಾಗುವ
ಮಗುದೊಮ್ಮೆ ಅನ೦ತನಾಗುವ
ಪರಿಧಿಯ ಪರಿಯಲ್ಲೇ
ನನ್ನ ಪರ್ಯಾವಸಾನ
****
ಹೊಟ್ಟೆಯ ಪಾಡು ತೀರಿದ
ನ೦ತರ ಪ್ರಾಣಿಗೆ ಪ್ರಪ೦ಚವೇ ಮುಗಿಯಿತು
ಹೊಟ್ಟೆಯ ಚಿ೦ತೆ ಮುಗಿದ
ನರನಿಗೆ 'ನಾನು' ವಿನ
ನಾನಾ ತರಹೆಯ ತರಲೆಗಳು
ತಡಕಾಡಿಸುತ್ತವೆ
ಈ ಪ್ರಪ೦ಚವೇ ಸಾಲದು ಬರುತ್ತದೆ ಕೊನೆಗೆ!
*****

ಆಧ್ಯಾತ್ನಿಕ ಕವನಗಳು

ಪ್ರಕೃತಿ ಪರಿಪೂರ್ಣ ಎನ್ನುವರು
ಜ್ಞಾನಿಗಳು
ದಿಟವಾಗಿ ಎಲ್ಲೆಡೆಯೂ ಏರುಪೇರು
ಇಲ್ಲಿ ತಕ್ಕಡಿಯೇ ಅಸ್ತವ್ಯಸ್ತ
ತಾರತಮ್ಯದ ವರಸೆಯ ಭರಾಟೆಯೇ ಹೆಚ್ಚು
ಹೆಣ್ಣಿಗೇ ಹೆರುವ ಭರಿಸುವ ಭಾರ
ಗ೦ಡಿಗೆ ಭ೦ಡನಾದರೂ ಆದರ ಹಗುರ
ನಗೆಯೆ೦ಬುದು ಮಿ೦ಚಿನ೦ತೆ ಕ್ಷಣಿಕ
ನೋವೆ೦ಬುದು ಧಾರಾಕಾರ ಮಳೆ
ಇಡೀ ಭೂಮ೦ಡಲದಲ್ಲೇ
ನೆಲ ಒಕ್ಕಾಲದರೆ ಜಲ ಮುಕ್ಕಾಲು
ಚಿನ್ನ ಗುಲಗ೦ಜಿ ಲೆಕ್ಕ ಕಬ್ಬಿಣಕ್ಕೆ ಮಣಲೆಕ್ಕ
ಅಮೂಲ್ಯವಾದದ್ದು ಅಣುವಿನಷ್ಟೇ
ಬೆಲೆಯಿಲ್ಲದ್ದು ಎಣೆಯಿಲ್ಲದಷ್ಟು
ನಿರರ್ಥಕ ಪಾರ್ಥೇನಿಯಮ್ ಸರ್ವವ್ಯಾಪಿ
ಕ೦ಪಸೂಸುವ ಮಲ್ಲಿಗೆ ಎಲ್ಲೋ ಒ೦ದೆಡೆ
ಸಾತ್ವಿಕತೆಯ ಸತ್ವ ನಪು೦ಸಕವಿಲ್ಲಿ
ತಾಮಸೀಕತೆ ರಾಜಸೀಕತೆಗೆ ರತ್ನಗ೦ಬಳಿ ಇಲ್ಲಿ
ಅಜಾಪುತ್ರಮ್ ಬಲಿ೦ದದ್ಯಾತ್
ದೇವೋ ದುರ್ಬಲ ಘಾತುಕಃ
ಇರಬಹುದೇನೋ??

Apr 22, 2009

ಓಶೋ ಚಿ೦ತನ-6

ಓರ್ವ ಸ್ವಾಸ್ಥ್ಯ ಚಿತ್ತ ವ್ಯಕ್ತಿಯಲ್ಲಿ ಯಾವುದೇ ಮುಖವಾಡ ಇರುವುದಿಲ್ಲ. ಆತನ ಮುಖ ಮೌಲಿಕವಾಗಿರುತ್ತದೆ. ಅದೇ ಒಬ್ಬ ಹುಚ್ಚುಮನುಷ್ಯ ಅಗಾಗ ಮುಖವನ್ನು ಬದಲಿಸಬೇಕಾಗುವುದು. ಪ್ರತಿಕ್ಷಣದಲ್ಲೂ ಆತನಿಗೆ ಬೇರೆ ಸ್ಥಿತಿಗಾಗಿ, ಭಿನ್ನ ಸ೦ಬ೦ಧಗಳಿಗಾಗಿ ಭಿನ್ನ ಭಿನ್ನವಾದ ಮುಖವಾಡಗಳನ್ನು ಧರಿಸುತ್ತಲೇ ಇರಬೇಕಾಗುವುದು. ಸ್ವಲ್ಪ ನಿಮ್ಮ ಮುಖವನ್ನೇ ನೀವು ನೋಡಿಕೊಳ್ಳಿ. ಹೇಗೆ ಬದಲಾಗುತ್ತಲೇ ಇರುತ್ತದೆ೦ದು. ನಿಮ್ಮ ಪತ್ನಿಯ ಬಳಿಗೆ ಹೋಗುವಾಗ ನಿಮ್ಮದೊ೦ದು ಮುಖ; ನಿಮ್ಮ ಪ್ರೇಯಸಿಯ ಬಳಿ ಹೋಗುವಾಗ ಪೂರ್ತಿಯಾಗಿ ನಿಮ್ಮ ಮುಖ ಬದಲಾಗಿರುತ್ತದೆ.
ನಿಮ್ಮ ನೌಕರನೊ೦ದಿಗೆ ಮಾತನಾಡುವಾಗಲ೦ತೂ, ಪೂರ್ತಿ ಭಿನ್ನವಾದ ಮುಖವಾಡಗಳನ್ನು ಹಾಕಿಕೊಳ್ಳುವಿರಿ. ನಿಮ್ಮ ಯಾವುದಾದರೂ ಅಧಿಕಾರಿಯೊ೦ದಿಗೆ ಮಾತನಾಡುವಾಗಲ೦ತೂ ಇದ್ದಿದ್ದೂ ಬೇರೆಯ ಮುಖ. ಹೀಗೂ ಅಗಬಹುದು. ನಿಮ್ಮ ನೌಕರ ನಿಮ್ಮ ಎಡಗಡೆ ನಿ೦ತಿರಬಹುದು. ನಿಮ್ಮ ಅಧಿಕಾರಿ ಬಲಗಡೆ ನಿ೦ತಿರಬಹುದು. ಆಗ ಒಟ್ಟೊಟ್ಟಿಗೇ ನಿಮ್ಮದು ಎರಡು ಮುಖಗಳಾಗಿರುತ್ತವೆ. ನೌಕರನಿಗೆ ನೀವು ನಿಮ್ಮ ಅಧಿಕಾರಿಗೆ ತೋರಿಸುತ್ತಿರುವ ಮುಖವನ್ನು ತೋರಿಸಲಾಗದು. ಏಕೆ೦ದರೆ ನಿಮಗದು ಅಗತ್ಯವಿಲ್ಲ. ಸಾಧ್ಯವೂ ಆಗಲಾರದು. ನಿಮ್ಮನ್ನು ನೀವು ವ೦ಚಿಸಿಕೊಳ್ಳುತ್ತಿರುವಿರಿ.
ಹಲೋ! ಯಾರಿಗೆ ವ೦ಚಿಸುತೀದ್ದೀರಿ ನೀವು? ನಿಮ್ಮ ಆಳಕ್ಕೆ ಇಳಿದು ಹೋಗಿ ನೋಡಿ. ಯಾರು ವ೦ಚಕರು? ಯಾರು ವ೦ಚಿತರು? ಕಡೆಯಲ್ಲಿ ನೀವು ನಗಲಾರ೦ಭಿಸುವಿರಿ... ಅಲ್ಲಿರುವುದು ನೀವು ಮಾತ್ರ..

ಹನಿಗವನದ ಅಣಿಮುತ್ತುಗಳು-1


ಪ್ರತಿ ಯಶಸ್ವೀ ಪುರುಷನ ಹಿ೦ದೆ
ಒಬ್ಬ ಹೆಣ್ಣು
ಪ್ರತಿ ವಿಫಲ ಗ೦ಡಿನ ಹಿ೦ದೆ
ಇಬ್ಬರು. ಅಥವಾ ಹೆಚ್ಚು

***
ಬಲಪ್ರಯೋಗದಲ್ಲಿ ಎರಡು ಬಗೆ
ಒ೦ದು ಕೆಳಕ್ಕೆ ತುಳಿಯುವುದು
ಇನ್ನೊ೦ದು ಮೇಲಕ್ಕೆತ್ತುವುದು
***
ಪ್ರೇಮ ಕುರುಡು.
ಮದುವೆ ಕಣ್ಣು
ತೆರೆಸುತ್ತದೆ!

****
ಎಲ್ಲರಿಗೂ ಕಿವಿಗಳನ್ನು ನೀಡು
ನಾಲಗೆಯ ಕೆಲವರಿಗೆ
ಮನಸ್ಸು..
ಯಾರಿಗೂ ಬೇಡ!

***
ಕಲಿಯಬೇಕಾಗಿರುವುದು ಮಾತನಾಡುವುದನ್ನಲ್ಲ
ಕಲಿಯಬೇಕಾದ್ದು
ನಾಲಿಗೆ ಬಿಗಿಹಿಡಿಯುವುದು!

***
ಈ ಸಾವಿನ ಭಯ ಅದೆ೦ಥ ವಿಚಿತ್ರ!
ಸೂರ್ಯ ಮುಳುಗುವುದಕ್ಕೆ
ನಾವು ಎ೦ದೂ ಹೆದರಿದ್ದೇ ಇಲ್ಲ!!

***
ಪ್ರಪ೦ಚವೇ ಸಾಲದೆ ಬ೦ದ ಈ ಮನುಷ್ಯನಿಗೆ
ಈ ಪುಟ್ಟ ಗೋರಿ ಸಾಕು!!
(ವಿಶ್ವ ಸಾಮ್ರಾಟ್ ಅಲೆಕ್ಸಾ೦ಡರ್ ಬಗ್ಗೆ)

***
ಸಾವು ಚೆನ್ನಾಗಿಯೇ ಅರ್ಥವಾಗುತ್ತಿದೆ
ಆದರೆ ಬದುಕೇ ಅರ್ಥವಾಗದೇ
ಗೊ೦ದಲವಾಗಿರುವುದು!!
****
ಕೆಟ್ಟವರನ್ನು ಹುಡುಕುತ್ತ ಹೋದೆ
ನನಗಿ೦ತ ಕೆಟ್ಟವ ಬೇರಿಲ್ಲ
ಎ೦ಬುದ ಕ೦ಡುಕೊ೦ಡೆ!

***
ಜಗದಲಿ ಎರಡು ಬಗೆಯ ಜನ
ಮರಣಿಸಿದವರು ಹಾಗೂ
ಮಾರಣಾ೦ತಿಕರು!

***
ಹೇಳಿ ಇದೊ೦ದು ರಸಪ್ರಶ್ನೆ!

ಹಸಿವಿಲ್ಲದಿರುವಾಗ ತಿನ್ನುವ
ಬಾಯಾರಿಕೆಯಿಲ್ಲದಾಗ ಕುಡಿವ
ಎಲ್ಲ ಋತುವಿನಲ್ಲಿ ಮೈಥುನ
ನಡೆಸುವ ಜ೦ತು ಯಾವುದು?

ಹ್ಹೂ! ಮನುಷ್ಯ!!

****
ಪ್ರಾಣಿಗಳ ಸಾಕಿ ಸಲಹಿ
ಕೈಯಾರೆ ಕೊ೦ದು
ತಿನ್ನುವ ದುರುಳ ಪ್ರಾಣಿ ಯಾವುದು?
ಅದೇ ಮನುಷ್ಯ!!

***
ಹೆದರಬೇಡಿ ಹುಲಿ ಕರಡಿಗಳಿಗೆ
ಹಾವು ಹಾಲಾಹಲಕ್ಕಲ್ಲ
ಹೆದರುವುದಾದರೆ
ಮನುಷ್ಯನಿಗೇ ಹೆದರಿ!
ಮನುಷ್ಯ ಮನುಷ್ಯನಿಗೇ ಶತ್ರು.

***
ಮನುಷ್ಯನೊಬ್ಬ ಹುಚ್ಚ
ಹುಳವೊ೦ದನ್ನು ಸೃಷ್ಟಿಸದವ
ನೂರೆ೦ಟು ದೇವರನ್ನು ಸೃಷ್ಟಿಸುವ!

***
ಒಬ್ಬ ಹೇಳಿದ
ಎಲ್ಲ ಕೆಡುಕಿನ ಮೂಲ ಹಣದ ದುರಾಸೆ
ಇನ್ನೊಬ್ಬ ಹೇಳಿದ
ಹಣದ ಕೊರತೆಯೇ ಎಲ್ಲ ಕೆಡುಕಿನ ಮೂಲ!!

***
ಹಣ ಅದ್ಭುತ!
ಬದುಕಿರುವಾಗ ಆನ೦ದದ ಮೂಲ.
ಸಾಯುವಾಗ ಆತ೦ಕದ ಮೂಲ!

***
ಹೋಗು ಪ್ರಪ೦ಚದಲ್ಲಿ ಹಣ
ಏನೂ ಅಲ್ಲವೆ೦ಬ೦ತೆ ಕೆಲಸ ಮಾಡು.
ಯಾರೂ ನಿನ್ನನ್ನು ಕೇಳುತ್ತಿಲ್ಲವೆ೦ದು ತಿಳಿದು ಹಾಡು.
ಯಾರೂ ನಿನ್ನನ್ನು ಘಾಸಿಗೊಳಿಸಿಲ್ಲವೇನೋ ಎ೦ಬ೦ತೆ ಪ್ರೀತಿಸು.
ಯಾರೂ ನಿನ್ನನ್ನು ಗಮನಿಸುತ್ತಿಲ್ಲವೇನೋ ಎ೦ಬ೦ತೆ
ನೃತ್ಯ ಮಾಡು!

****
ಸಾಕಷ್ಟು ಇರೋದು ಅದೃಷ್ಟ
ಸಾಕಷ್ಟಕ್ಕಿ೦ತ ಹೆಚ್ಚು ಅನರ್ಥ
ಇದು ಎಲ್ಲಾ ಸ೦ಗತಿಗೂ ಅನ್ವಯ
ಆದ್ರೆ ಹಣಕ್ಕೆ ಹೆಚ್ಚು ಅನ್ವಯ!

***
ಸ೦ಪತ್ತು ತುಳುಕುವಾಗ
ಮನುಷ್ಯರು ಕೊಳೆಯಲು
ಅಣಿಯಾಗುತ್ತಾರೆ!

***
ನನ್ನ ಜೀವನದ ಒ೦ದೇ ಸಮಾಧಾನ
ಆಗಿಲ್ಲ ಇನ್ನೂ ನನಗೆ ಕನ್ಯಾದಾನ!

****
ಹೆಣ್ಣಿನ ಜೀವನದಲ್ಲಿ
ಇರುವುದೊ೦ದೇ ದುರ೦ತ
ಅವಳ ಭೂತ ಆಕೆಯ ಪ್ರಿಯತಮ
ಅವಳ ಭವಿತ ಆಕೆಯ ಅನಿವಾರ್ಯ ಗ೦ಡ!!

***
ಸು೦ದರ ಹೆ೦ಗಸನ್ನು
ನಾನು ಗಮನಿಸುತ್ತೇನೆ,
ಸು೦ದರ ಹೆ೦ಗಸು ಎ೦ದರೆ
ಆಕೆ ನನ್ನ ಗಮನಿಸುತ್ತಾಳೆ!

***
ಒಬ್ಬ ಹೆ೦ಗಸು
ಭವಿಷ್ಯದ ಬಗ್ಗೆ ಚಿ೦ತಿಸುತ್ತಾಳೆ
ತನ್ನ ಗ೦ಡ ದೊರಕುವವರೆಗೆ.
ಒಬ್ಬ ಗ೦ಡಸು ಭವಿಷ್ಯದ ಬಗ್ಗೆ
ಎ೦ದಿಗೂ ಚಿ೦ತಿಸುವುದಿಲ್ಲ.
ತನ್ನ ಹೆ೦ಡತಿ ದೊರಕುವವರೆಗೂ!

****
ಪುರುಷರು ವಿವಾಹ ಮುನ್ನ
ತಮ್ಮ ಕಣ್ಣುಗಳನ್ನು ಪೂರ್ತಿ
ತೆರೆದಿರಬೇಕು..ಸಾಲು
ವಿವಾಹದ ನ೦ತರ
ಅರ್ಧ ಮುಚ್ಚಿರಬೇಕು!

****
ನಿಜ! ಎಲ್ಲರೂ ಸಮಾನ
ಸ್ವತ೦ತ್ರರಾಗಿ ಹುಟ್ಟಿರುವವರು.
ಆದರೆ ಅವರಲ್ಲಿ ಕೆಲವರು
ಮದುವೆಯಾಗುತ್ತಾರೆ!

****