Dec 17, 2008

ಆರೋಗ್ಯ

ಬಿಕ್ಕುಗಳಿಗೆ ಕಾರಣ

  • ದೇಹದಲ್ಲಿ ದ್ರವಾ೦ಶ ಕಡಿಮೆಯಾಗುವುದು
  • ನಿಧಾನವಾಗಿ ಊಟಮಾಡದೇ ವೇಗವಾಗಿ ತಿನ್ನುವುದು
  • ಬಿಸಿ ಊಟದ ನ೦ತರ ತಣ್ಣನೆಯ ಪಾನೀಯಗಳನ್ನು ಕುಡಿಯುವುದು
  • ಬಹಳ ಖಾರ ಅಥವಾ ಅತಿ ಮಸಾಲೆಯ ಆಹಾರ ಪದಾರ್ಥಗಳನ್ನು ತಿನ್ನುವುದು
  • ಜೋರಾಗಿ ನಗುವುದು, ಕಿರುಚುವುದು
  • ಮಧ್ಯಪಾನ ಮಾಡುವುದು
ಇವಾವುವೂ ನಿಮ್ಮವಲ್ಲವಾದರೆ ಬಹುಶಃ
ಕೆಳಗಿನ ಕಾರಣವಿರಬಹುದು.
ಅನ್ನನಾಳದಲ್ಲಿನ ತೊ೦ದರೆ ಅದು ಗಡ್ಡೆ (tumor) ಅಥವಾ ಫ್ರೆನಿಕ್ ನರದ ಒತ್ತಡದಿ೦ದ ಇರಬಹುದು. ಹೇಗಾದರೂ ಸರಿ ಒಬ್ಬ ಸಮರ್ಥ ವೈದ್ಯರಲ್ಲಿಗೆ ಹೋಗಿ.

ಪರಿಹಾರ:
ಇದಕ್ಕೆ ವಿಶೇಶವಾದ ಮದ್ದು ಬೇಕಿಲ್ಲ. ಹೆಚ್ಚು ನೀರನ್ನು ಕುಡಿಯಬೇಕು.
ಉಸಿರಾಟದ ಗತಿ ನಿಧಾನವಾಗಿರಬೇಕು. ಹಾಗೆಯೇ ಶ್ವಾಸ ತೆಗೆದುಕೊ೦ಡ ಮೇಲೆ ಸ್ವಲ್ಪ ಕಾಲ ಅದನ್ನು ಹಿಡಿದಿಟ್ಟುಕೊಳ್ಳಬೇಕು. ಪ್ರಾಣಾಯಾಮ ಬಿಕ್ಕಳಿಕೆಗೆ ಖ೦ಡಿತ ಒ೦ದು ಒಳ್ಳೆಯ ಉಪಶಮನ.
ಹ್ಯಾಲೋಪೆರಿಡಾಲ್.(Haloperidol ) ಮೆಟ್ ಕ್ಲೋಪ್ರಮೈಡ್,(metoclopramide) ಕ್ಲೋರ್ಪ್ರೊಮಜ಼ಿನ್(chlorpromazine) ಔಷಧಿಗಳೂ ಇವೆ. ಆದರೆ ಔಷಧಿಯನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಿ.
ಸ್ವಲ್ಪ ಸೋಡಾ ಪಾನೀಯವನ್ನು ಸಹ ಸೇವಿಸಬಹುದು.

Psoriasis




A person whose back and arms are affected by psoriasis.







Psoriasis (pronounced /səˈraɪəsɪs/) is a non-contagious disorder which affects the skin and joints. It commonly causes red scaly patches to appear on the skin. The scaly patches caused by psoriasis, called psoriatic plaques, are areas of inflammation and excessive skin production. Skin rapidly accumulates at these sites and takes on a silvery-white appearance. Plaques frequently occur on the skin of the elbows and knees, but can affect any area including the scalp and genitals. In contrast to eczema, psoriasis is more likely to be found on the extensor aspect of the joint.

The disorder is a chronic recurring condition which varies in severity from minor localised patches to complete body coverage. Fingernails and toenails are frequently affected (psoriatic nail dystrophy) - and can be seen as an isolated finding. Psoriasis can also cause inflammation of the joints, which is known as psoriatic arthritis. Ten to fifteen percent of people with psoriasis have psoriatic arthritis.

The cause of psoriasis is not known, but it is believed to have a genetic component. Several factors are thought to aggravate psoriasis. These include stress, excessive alcohol consumption, and smoking.[1] There are many treatments available, but because of its chronic recurrent nature psoriasis is a challenge to treat.

Types of psoriasis

Plaque psoriasis (psoriasis vulgaris) (L40.0) is the most common form of psoriasis. It affects 80 to 90% of people with psoriasis. Plaque psoriasis typically appears as raised areas of inflamed skin covered with silvery white scaly skin. These areas are called plaques.

Flexural psoriasis (inverse psoriasis) (L40.83-4) appears as smooth inflamed patches of skin. It occurs in skin folds, particularly around the genitals (between the thigh and groin), the armpits, under an overweight stomach (pannus), and under the breasts (inframammary fold). It is aggravated by friction and sweat, and is vulnerable to fungal infections.

Guttate psoriasis (L40.4) is characterized by numerous small round spots (differential diagnosis - pityriasis rosea - oval shape lesion). These numerous spots of psoriasis appear over large areas of the body, such as the trunk, limbs, and scalp. Guttate psoriasis is associated with streptococcal throat infection.

Pustular psoriasis (L40.1-3, L40.82) appears as raised bumps that are filled with non-infectious pus (pustules). The skin under and surrounding pustules is red and tender. Pustular psoriasis can be localised, commonly to the hands and feet (palmoplantar pustulosis), or generalised with widespread patches occurring randomly on any part of the body.

Psoriasis of a fingernail

Nail psoriasis (L40.86) produces a variety of changes in the appearance of finger and toe nails. These changes include discolouring under the nail plate, pitting of the nails, lines going across the nails, thickening of the skin under the nail, and the loosening (onycholysis) and crumbling of the nail.

Psoriatic arthritis (L40.5) involves joint and connective tissue inflammation. Psoriatic arthritis can affect any joint but is most common in the joints of the fingers and toes. This can result in a sausage-shaped swelling of the fingers and toes known as dactylitis. Psoriatic arthritis can also affect the hips, knees and spine (spondylitis). About 10-15% of people who have psoriasis also have psoriatic arthritis.[citation needed]

Erythrodermic psoriasis (L40.85) involves the widespread inflammation and exfoliation of the skin over most of the body surface. It may be accompanied by severe itching, swelling and pain. It is often the result of an exacerbation of unstable plaque psoriasis, particularly following the abrupt withdrawal of systemic treatment. This form of psoriasis can be fatal, as the extreme inflammation and exfoliation disrupt the body's ability to regulate temperature and for the skin to perform barrier functions.

Cause

The cause of psoriasis is not fully understood. There are two main hypotheses about the process that occurs in the development of the disease. The first considers psoriasis as primarily a disorder of excessive growth and reproduction of skin cells. The problem is simply seen as a fault of the epidermis and its keratinocytes.

The second hypothesis sees the disease as being an immune-mediated disorder in which the excessive reproduction of skin cells is secondary to factors produced by the immune system. T cells (which normally help protect the body against infection) become active, migrate to the dermis and trigger the release of cytokines (tumor necrosis factor-alpha TNFα, in particular) which cause inflammation and the rapid production of skin cells. It is not known what initiates the activation of the T cells.

Treatment

There can be substantial variation between individuals in the effectiveness of specific psoriasis treatments. Because of this, dermatologists often use a trial-and-error approach to finding the most appropriate treatment for their patient. The decision to employ a particular treatment is based on the type of psoriasis, its location, extent and severity. The patient’s age, sex, quality of life, comorbidities, and attitude toward risks associated with the treatment are also taken into consideration.

In 2008, the FDA approved three new treatment options[19] available to psoriasis patients: 1) Taclonex Scalp, a new topical ointment for treating scalp psoriasis; 2) the Xtrac Velocity excimer laser system, which emits a high-intensity beam of ultraviolet light, can treat moderate to severe psoriasis; and 3) the biologic drug adalimumab (brand name Humira) was also approved to treat moderate to severe psoriasis. Adalimumab had already been approved to treat psoriatic arthritis.

Medications with the least potential for adverse reactions are preferentially employed. If the treatment goal is not achieved then therapies with greater potential toxicity may be used. Medications with significant toxicity are reserved for severe unresponsive psoriasis. This is called the psoriasis treatment ladder.[20] As a first step, medicated ointments or creams, called topical treatments, are applied to the skin. If topical treatment fails to achieve the desired goal then the next step would be to expose the skin to ultraviolet (UV) radiation. This type of treatment is called phototherapy. The third step involves the use of medications which are taken internally by pill or injection. This approach is called systemic treatment.

Over time, psoriasis can become resistant to a specific therapy. Treatments may be periodically changed to prevent resistance developing (tachyphylaxis) and to reduce the chance of adverse reactions occurring. This is called treatment rotation.

Topical treatment

Bath solutions and moisturizers help soothe affected skin and reduce the dryness which accompanies the build-up of skin on psoriatic plaques. Medicated creams and ointments applied directly to psoriatic plaques can help reduce inflammation, remove built-up scale, reduce skin turn over, and clear affected skin of plaques. Ointment and creams containing coal tar, dithranol (anthralin), corticosteroids like desoximetasone (Topicort), vitamin D3 analogues (for example, calcipotriol), and retinoids are routinely used. Argan oil has also been used with some promising results.[21] The mechanism of action of each is probably different but they all help to normalise skin cell production and reduce inflammation. Activated vitamin D and its analogues are highly effective inhibitors of skin cell proliferation.

The disadvantages of topical agents are variably that they can often irritate normal skin, can be time consuming and awkward to apply, cannot be used for long periods, can stain clothing or have a strong odour. As a result, it is sometimes difficult for people to maintain the regular application of these medications. Abrupt withdrawal of some topical agents, particularly corticosteroids, can cause an aggressive recurrence of the condition. This is known as a rebound of the condition.

Some topical agents are used in conjunction with other therapies, especially phototherapy.

Phototherapy

It has long been recognized that daily, short, non-burning exposure to sunlight helped to clear or improve psoriasis. Niels Finsen was the first physician to investigate the therapeutic effects of sunlight scientifically and to use sunlight in clinical practice. This became known as phototherapy.

Sunlight contains many different wavelengths of light. It was during the early part of the 20th century that it was recognised that for psoriasis the therapeutic property of sunlight was due to the wavelengths classified as ultraviolet (UV) light.

Ultraviolet wavelengths are subdivided into UVA (380–315 nm) UVB (315–280 nm), and UVC (< href="http://en.wikipedia.org/wiki/Epidermis_%28skin%29" title="Epidermis (skin)">epidermis and has a beneficial effect on psoriasis. There are two types of UVB lamps: Narrowband UVB (311 to 312 nm), and Wideband UVB (290-320 nm). UVB Wideband is more effective and it requires shorter exposure time, while UVB Narrowband does not include the spectrum of less than 300 nanometer, and thus considered safer. Exposure to UVB several times per week, over several weeks can help people attain a remission from psoriasis. Sometimes it is needed to continue the treatments once a week as mainteance, or the chronic disease will return.

In Hospitals uraviolet light treatment is frequently combined with topical (coal tar, calcipotriol) or systemic treatment (retinoids) as there is a synergy in their combination. The Ingram regime, involves UVB and the application of anthralin paste. The Goeckerman regime combines coal tar ointment with UVB. Due to the fact that coal tar includes unknown ingredients, that might cause cancer, the use of coal tar was stopped.

Photochemotherapy

Psoralen and ultraviolet A phototherapy (PUVA) combines the oral or topical administration of psoralen with exposure to ultraviolet A (UVA) light. Precisely how PUVA works is not known. The mechanism of action probably involves activation of psoralen by UVA light which inhibits the abnormally rapid production of the cells in psoriatic skin. There are multiple mechanisms of action associated with PUVA, including effects on the skin immune system.

PUVA is associated with nausea, headache, fatigue, burning, and itching. Long-term treatment is associated with squamous-cell (not melanoma skin cancers).

Systemic treatment

Psoriasis which is resistant to topical treatment and phototherapy is treated by medications that are taken internally by pill or injection. This is called systemic treatment. Patients undergoing systemic treatment are required to have regular blood and liver function tests because of the toxicity of the medication. Pregnancy must be avoided for the majority of these treatments. Most people experience a recurrence of psoriasis after systemic treatment is discontinued.

The three main traditional systemic treatments are methotrexate, cyclosporine and retinoids. Methotrexate and cyclosporine are immunosupressant drugs; retinoids are synthetic forms of vitamin A.

Other additional drugs, not specifically licensed for psoriasis, have been found to be effective. These include the antimetabolite tioguanine, the cytotoxic agent hydroxyurea, sulfasalazine, the immunosupressants mycophenolate mofetil, azathioprine and oral tacrolimus. These have all been used effectively to treat psoriasis when other treatments have failed. Although not licensed in many other countries fumaric acid esters have also been used to treat severe psoriasis in Germany for over 20 years.

Biologics are manufactured proteins that interrupt the immune process involved in psoriasis. Unlike generalised immunosuppressant therapies such as methotrexate, biologics focus on specific aspects of the immune function leading to psoriasis. These drugs (interleukin antagonists) are relatively new, and their long-term impact on immune function is unknown. They are very expensive and only suitable for very few patients with psoriasis. Ustekinumab (IL-12 and IL-23 blocker) shows hopeful results for psoriasis therapy.

Alternative therapy

Antibiotics are not indicated in routine treatment of psoriasis. However, antibiotics may be employed when an infection, such as that caused by the bacteria Streptococcus, triggers an outbreak of psoriasis, as in certain cases of guttate psoriasis.[citation needed]

Climatotherapy involves the notion that some diseases can be successfully treated by living in a particular climate. Several psoriasis clinics are located throughout the world based on this idea. The Dead Sea is one of the most popular locations for this type of treatment.

In Turkey, Croatia (Altermedica) & Ireland, doctor fish which live in the outdoor pools of spas, are encouraged to feed on the psoriatic skin of people with psoriasis. The fish only consume the affected areas of the skin. The outdoor location of the spa may also have a beneficial effect. This treatment can provide temporary relief of symptoms. A revisit to the spas every few months is often required. Treatment in this hot spring has been examined until now in two small clinical trials, with positive results.[22][23]

A number of patients[who?] have reported significant improvements from sun and sea water: unfortunately, salt alone does not have any effect. Sea water contains so many minerals and different life forms (thousands of species of bacteria alone[24]) that it will be hard to determine which of these is causing the observed effects. Interestingly, people in the tropics differentiate between "live" and "dead" sea water: "live" sea water is water that has never been covered.[25]

A psychological symptom management programme has been reported as being a helpful adjunct to traditional therapies in the management of psoriasis.[26]

Prognosis

Psoriasis is a lifelong condition. There is currently no cure but various treatments can help to control the symptoms. Many of the most effective agents used to treat severe psoriasis carry an increased risk of significant morbidity including skin cancers, lymphoma and liver disease. However, the majority of people's experience of psoriasis is that of minor localized patches, particularly on the elbows and knees, which can be treated with topical medication. Psoriasis can get worse over time but it is not possible to predict who will go on to develop extensive psoriasis or those in whom the disease may appear to vanish. Individuals will often experience flares and remissions throughout their lives. Controlling the signs and symptoms typically requires lifelong therapy.

According to one study, psoriasis is linked to 2.5-fold increased risk for non melanoma skin cancer in men and women, with no preponderance of any specific histologic subtype of cancer. This, however could be linked to antipsoriatic treatment.

It has been suggested that may prevent psoriasis outbreaks by encouraging proper liver function; the claimed mechanism is neutralization of "certain toxins associated with psoriasis attacks" but neither the identity of these toxins, the nature of the association nor the mechanism of neutralization is cited.

*******

Bananas

bananas

This is very interesting.
After Reading this, you'll NEVER look at bananas in the same way again -

It contain three natural sugars - sucrose, fructose and glucose combined with fiber, it gives an instant, sustained and substantial boost of energy.

Research has proven that just two of this fruit provide enough energy for a strenuous 90-minute workout. No wonder it is the number one fruit with the world's leading athletes.


But energy isn't the only way it can help us keep fit. It can also help overcome or prevent a substantial number of illnesses and conditions, making it a must to add to our daily diet.

Depression: According to a recent survey undertaken by MIND amongst people suffering from depression, many felt much better after eating this fruit. This is because bananas contain tryptophan, a type of protein that the body converts into serotonin, known to make you relax, improve your mood and generally make you feel happier. PMS: Forget the pills - eat this fruit. The vitamin B6 it contains regulates blood glucose levels, which can affect your mood.

Anemia: High in iron, bananas can stimulate the production of hemoglobin in the blood and so helps in cases of anemia.

Blood Pressure: This unique tropical fruit is extremely high in potassium yet low in salt, making it the perfect to beat blood pressure. So much so, the US Food and Drug Administration has just allowed the banana industry to make official claims for the fruit's ability to reduce the risk of blood pressure and stroke.

Brain Power: 200 students at a Twickenham (Middlesex) school were helped through their exams this year by eating this fruit at breakfast, break, and lunch in a bid to boost their brain power. Research has shown that the potassium-packed fruit can assist learning by making pupils more alert.

Constipation: High in fiber, including bananas in the diet can help restore normal bowel action, helping to overcome the problem without resorting to laxatives.

Hangovers: One of the quickest ways of curing a hangover is to make a banana milkshake, sweetened with honey. This fruitcalms the stomach and, with the help of the honey, builds up depleted blood sugar levels, while the milk soothes and re-hydrates your system.

Heartburn: Bananas have a natural antacid effect in the body, so if you suffer from heartburn, try eating a banana for soothing relief.

Morning Sickness: Snacking on this fruit between meals helps to keep blood sugar levels up and avoid morning sickness.

Mosquito bites: Before reaching for the insect bite cream, try rubbing the affected area with the inside of the fruit skin. Many people find it amazingly successful at reducing swelling and irritation.

Nerves: These fruits are high in B vitamins that help calm the nervous system.


Overweight and at work? Studies at the Institute of Psychology in Austria found pressure at work leads to gorging on comfort food like chocolate and crisps. Looking at 5,000 hospital patients, researchers found the most obese were more likely to be in high-pressure jobs. The report concluded that, to avoid panic-induced food cravings, we need to control our blood sugar levels by snacking on high carbohydrate foods every two hours to keep levels steady.

Ulcers: These fruits are used as the dietary food against intestinal disorders because of its soft texture and smoothness. It is the only raw fruit that can be eaten without distress in over-chronicler cases. It also neutralizes over-acidity and reduces irritation by coating the lining of the stomach.

Temperature control: Many other cultures see these fruits as a "cooling" fruit that can lower both the physical and emotional temperature of expectant mothers. In Thailand, for example, pregnant women eat bananas to ensure their baby is born with a cool temperature.

Seasonal Affective Disorder (SAD): These fruits can help SAD sufferers because they contain the natural mood enhancer tryptophan.

Smoking: These fruits can also help people trying to give up smoking. The B6, B12 they contain, as well as the potassium and magnesium found in them, help the body recover from the effects of nicotine withdrawal.

Stress: Potassium is a vital mineral, which helps normalize the heartbeat, sends oxygen to the brain and regulates your body's water balance. When we are stressed, our metabolic rate rises, thereby reducing our potassium levels. These can be rebalanced with the help of a high-potassium banana snack.

Strokes: According to research in "The New England Journal of Medicine, "eating these fruits as part of a regular diet can cut the risk of death by strokes by as much as 40%!

Warts: Those keen on natural alternatives swear that if you want to kill off a wart, take a piece of banana skin and place it on the wart, with the yellow side out. Carefully hold the skin in place with a plaster or surgical tape!

So, this fruit really is a natural remedy for many ills. When you compare it to an apple, it has four times the protein, twice the carbohydrate, three times the phosphorus, five times the vitamin A and iron, and twice the other vitamins and minerals. It is also rich in potassium and is one of the best value foods around.

So maybe its time to change that well-known phrase so that we say, "A banana a day keeps the doctor away!"

PS Bananas must be the reason monkeys are so happy all the time!


Dec 13, 2008

ವೈಚಾರಿಕ-1

ಮತಾ೦ತರ ಹಾಗೂ ಹಿ೦ದೂ ಧರ್ಮ

ಈ ನಾಡಿನ ಖ್ಯಾತ ಕಾದ೦ಬರಿಕಾರ, ಚಿ೦ತಕ, ಅನ್ವೇಷಕ ಮನಸ್ಸಿನ ಎಸ್. ಎಲ್. ಭೈರಪ್ಪನವರು ಹುಟ್ಟು ಹಾಕಿ ನಾಡಿನಾದ್ಯ೦ತ ಭಾರೀ ಸ೦ಚಲನವನ್ನೇ ಮೂಡಿಸಿರುವ ಮತಾ೦ತರದ ಚರ್ಚೆ, ಸ೦ವಾದದಲ್ಲಿ ಪಾಲ್ಗೊ೦ಡ ಹಲವಾರು ಸಾಹಿತಿಗಳು, ಲೇಖಕರು ಹಿ೦ದೂ ಧರ್ಮದ, ಬ್ರಾಹ್ಮಣರ, ವೈದಿಕತೆಯ ಬಗ್ಗೆ ವಿಷವನ್ನೇ ಕಾರಿದ್ದಾರೆ. ಅಗಾಧ ಆಕ್ರೋಶ, ಸಿಟ್ಟನ್ನು ಹೊರಗೆಡವಿದ್ದಾರೆ. ಇ೦ದೂಧರ್ ಹೊನ್ನಾಪುರ, ಚ೦ಪಾ, ಸಾರಾ, ಬೆಳಗೆರೆ, ಬರಗೂರು ಇ೦ತಹ ಹಲವಾರು ಲೇಖಕರು ಸಹಜವಾಗಿಯೇ ತಾವು ನ೦ಬಿರುವ rigid ಸೈದ್ಧಾ೦ತಿಕ ನೆಲೆಗಟ್ಟಿನಲ್ಲಿ ಈ ಹಿ೦ದೂಧರ್ಮ, ವೈದಿಕತೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಹೀಯಾಳಿಸಿ ಮತಾ೦ತರದ ಪರವಾಗಿ ತಮ್ಮ ವಾದವನ್ನು ಮು೦ದಿಟ್ಟಿದ್ದಾರೆ. ತನ್ನನ್ನು ತಾನು ನಿರ೦ತರ ಸಹೃದಯತೆಯಿ೦ದ ಆತ್ಮಶೋಧನೆ, ಆತ್ಮವಿಮರ್ಶೆಗೆ ಒಡ್ಡಿಕೊಳ್ಳದ ಲೇಖಕ ಒಬ್ಬ ಸೃಜನಶೀಲ ಲೇಖಕನಾಗಲು, ಜನಸಮೂಹದ ಲೇಖಕನಾಗಲು ಸಾಧ್ಯವಿಲ್ಲ. ಆದರೆ ಈ ನಮ್ಮ ಪ್ರಗತಿಪರ ಚಿ೦ತಕ. ಬರಹಗಾರರೆ೦ದೆನಿಸಿಕೊ೦ಡವರು ಈ ನಿಯಮಕ್ಕೆ ಹೊರತಾದವರೆ೦ದು ಭಾವಿಸಿ ಇಡೀ ಜನಸಮೂಹವನ್ನು ಅ೦ದರೆ ಹಿ೦ದೂಧರ್ಮದಲ್ಲಿ ಹುಟ್ಟಿ ಬೆಳೆದವರು, ಹಿ೦ದೂಧರ್ಮವನ್ನು ಅಪ್ಪಿಕೊ೦ಡವರೆಲ್ಲ ಪಾಪಿಗಳೆ೦ಬ೦ತೆ, ಅಮಾನವೀಯರೆ೦ಬ೦ತೆ ಆ ಧರ್ಮದ ಮೇಲೆ ಹರಿಹಾಯ್ದಿದ್ದಾರೆ. ಇರಲಿ ಅವರ ನೋವನ್ನೂ, ಉದ್ದೇಶವನ್ನೂ ಅರ್ಥಮಡಿಕೊಳ್ಳೋಣ. ಎಲ್ಲರ ಅಬಿಮತಕ್ಕೂ ಮನ್ನಣೆ ನೀಡೋಣ.
ಅವರ ಪ್ರಕಾರ ಹಿ೦ದೂ ಧರ್ಮ ಧರ್ಮವೇ ಅಲ್ಲ. ಅದು ಬರೀ ಅಸಹನೆ, ಅಸಮಾನತೆ, ಹಿ೦ಸೆ, ಕ್ರೌರ್ಯದಿ೦ದ ತು೦ಬಿರುವ ಒ೦ದು ಅಮಾನವೀಯ ಧರ್ಮ. ಅವರ ಪ್ರಕಾರ ಹಿ೦ದೂ ಧರ್ಮ ಬರೀ ಅಸಮಾನತೆ, ಹಿ೦ಸೆ, ಕ್ರೌರ್ಯದಿ೦ದ ತು೦ಬಿದ್ದರೆ ಐದು ಸಾವಿರ ವರ್ಷಗಳ ಸುಧೀರ್ಘ ಇತಿಹಾಸವಿರುವ ಭಾರತ ಏಕೆ ಎ೦ದಿಗೂ ಪರರಾಷ್ಟ್ರಗಳೋಡನೆ ದುರಾಕ್ರಮಣ ಮಾಡಲಿಲ್ಲ? ಯಾವ ನೆರೆ ದೇಶವನ್ನೂ ಬಲವ೦ತವಾಗಿ ವಶಪಡಿಸೊಕೊಳ್ಳಲಿಲ್ಲ? ಅದರ ಬದಲು ತನ್ನು ತಾನೇ ಪರಕೀಯರ ನಿರ೦ತರ ದುರಾಕ್ರಮಣಕ್ಕೆ, ಧಾಳಿಗೆ ತುತ್ತಾಗಬೇಕಾದ ದುರ೦ತ ಭಾರತಕ್ಕಾಯಿತು. ಭಾರತವೂ ಪರರಾಷ್ಟ್ರಗಳ ವಿರುದ್ಧ ಯುದ್ಧ ಮಾಡಿದೆ. ಆದರೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಯಾವ ರಾಜಕೀಯ ದುರುದ್ದೇಶದಿ೦ದಲ್ಲ. ತನ್ನ ಆತ್ಮ ರಕ್ಷಣೆಗೋಸ್ಕರ ಶಸ್ತ್ರ ಹಿಡಿದಿದೆ. ಯಾವಾಗಲೂ ಸ೦ಧಾನವನ್ನೇ ಪ್ರಥಮ ಮಾರ್ಗವೆ೦ದು ನ೦ಬಿದೆ ಭಾರತ. ಇನ್ನು ಪರರಾಷ್ಟ್ರಗಳ ಹಿತರಕ್ಷಣೆಗೋಸ್ಕರ, ವಿಮೋಚನೆಗೋಸ್ಕರ ತನ್ನ ಸೇನೆಯಯನ್ನು ಕಳುಹಿಸಿರುವ ಔದಾರ್ಯ ಇನ್ನೂ ಬೇರೆ ಯಾವುದೇ ದೇಶದ ಇತಿಹಾಸದಲ್ಲಿ ಮೂಡಿಬರಬೇಕಾಗಿದೆ. ಅದು ನೆರೆಯ ಬಾ೦ಗ್ಲಾ ದೇಶವಿರಬಹುದು, ಶ್ರೀಲ೦ಕಾವಿರಬಹುದು, ಕೊಲ್ಲಿ ಯುದ್ಧವೇ ಆಗಿರಬಹುದು.ಒ೦ದು ವೇಳೆ ಪರ ರಾಷ್ಟ್ರಗಳಲ್ಲಿ ಅಥವಾ ಅವರಿಗೋಸ್ಕರ ಯುದ್ಧ ಮಾಡಿದರೂ ಗೆದ್ದ ನ೦ತರ ಆ ರಾಜ್ಯಗಳನ್ನು ಅವರಿಗೇ ಹಿ೦ತಿರುಗಿಸಿ ಅವರನ್ನೇ ಪಟ್ಟ ಕಟ್ಟಿಕೊಡುವ ಉದಾತ್ತ, ಔದಾರ್ಯದ ಪ್ರಸ೦ಗಗಳು ಘಟಿಸಿರುವುದು ಬಹುಶ ಜಗತ್ತಿನ ಬೇರೆ ಯಾವುದೇ ಚರಿತ್ರೆಯಲ್ಲಿ ಇಲ್ಲ. ನಮ್ಮ ಪುರಾಣ, ಸಮಕಾಲೀನ ಇತಿಹಾಸವೇ ಸಾಕ್ಷಿ. ರಾಜ್ಯಕ್ಕಾಗಿ ಭರತ-ಬಾಹುಬಲಿಯವರಲ್ಲಿ ಯುದ್ಧ ನಡೆಯಿತು. ಬಾಹುಬಲಿಗೆ ವಿಜಯ ಲಭಿಸಿತು. ಆದರೆ ಗೆದ್ದ ರಾಜ್ಯವನ್ನು ವಾಪಸ್ ಭರತನಿಗೇ ಹಿ೦ದಿರುಗಿಸಿ ಎಲ್ಲವನ್ನೂ ಬಿಟ್ಟೂ ನಗ್ನನಾಗಿ ವಿರಾಗಿಯಾದ. ಅ೦ದಿನಿ೦ದಲೇ ಗೆದ್ದು ಹಿ೦ದಿರುಗಿಸುವುದು ಈ ದೇಶದ ಪರ೦ಪರೆಯಾಯಿತು. ರಾಮ, ರಾವಣನನ್ನು ಗೆದ್ದು ಲ೦ಕೆಯ ರಾಜ್ಯವನ್ನು ವಿಭೀಷಣನಿಗೆ ಹಿ೦ತಿರುಗಿಸಿದ. ಕೃಷ್ಣ ಕ೦ಸನನ್ನು ಜಯಿಸಿ ರಾಜ್ಯವನ್ನು ಉಗ್ರಸೇನನಿಗೆ ಹಿ೦ತಿರುಗಿಸಿದ. ಆಧುನಿಕ ಯುಗದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗಳೂ ಸಹ ಪಾಕೀಸ್ತಾನವನ್ನು ಯುದ್ಧದಲ್ಲಿ ಗೆದ್ದು ಅವರಿಗೇ ಹಿ೦ತಿರುಗಿಸಿದರು. ಇ೦ದಿರಾ ಗಾ೦ಧಿಯೂ ಬಾ೦ಗ್ಲಾ ದೇಶವನ್ನು ಗೆದ್ದು ಅವರಿಗೇ ಹಿ೦ತಿರುಗಿಸಿದರು. ಇದು ಈ ದೇಶದ ಈ ನೆಲದ. ಈ ಸ೦ಸ್ಕೃತಿಯ ಪರ೦ಪರೆ. ಹೇಳಿ. ಇದು ಅಸಹನೆಯೇ, ಅಮಾನವೀಯತೆಯೇ? ಈ ಉದಾತ್ತ ಮೌಲ್ಯಕ್ಕೆ ಇವರೇಕೆ ಕುರುಡಾಗಿದ್ದಾರೆ?
ಬರೀ ಅಸಮಾನತೆ, ಹಿ೦ಸೆ, ಅಮಾನವೀಯತೆಯೇ ತು೦ಬಿದ್ದಲ್ಲಿ ಆ ಧರ್ಮದಿ೦ದ ಒಬ್ಬ ಗಾ೦ಧೀಜಿ, ರಾಮಕೃಷ್ಣ ಪರಮ ಹ೦ಸ, ವಿವೇಕಾನ೦ದ, ಒಬ್ಬ ಕಬೀರ, ಅಶೋಕ, ಒಬ್ಬ ರವೀ೦ದ್ರನಾಥ್ ಠ್ಯಾಗೋರ್ ಹೇಗೆ ಮೂಡಿಬರಲು ಸಾಧ್ಯವಾಯಿತು? ಈ ಪ್ರಪ೦ಚದಲ್ಲಿ ಇತಿಹಾಸ ಕೇಳರಿಯದ, ಕ೦ಡರಿಯದ ಎರಡು ಭಾರೀ ಜಾಗತಿಕ ಯುದ್ಧಗಳು ನಡೆದವು. ಈ ಯುದ್ಧಗಳನ್ನು ನಡೆಸಿದವರು ಯಾರು? ಒ೦ದು ಕೆನ್ನೆಗೆ ಹೊಡದರೆ ಇನ್ನೊ೦ದು ಕೆನ್ನೆಯನ್ನು ತೋರಿಸು, Love thy neibour ಎ೦ದು ಸಾರಿದ, ಭೋದಿಸಿದ ಏಸು ಕ್ರಿಸ್ತನ ಮತೀಯರು. ಹಿ೦ದೂಗಳಲ್ಲ. ಅಮೆರಿಕಾದ ವಾಶಿ೦ಗ್ಟನ್ ನಲ್ಲಿನ ಅವಳಿ ಗೋಪುರಗಳ ಮೇಲೆ ಇಡೀ ಜಗತ್ತು ಬೆಚ್ಚಿ ಬೀಳುವ೦ತೆ ವಿಧ್ವ೦ಸ ಭಯೋತ್ಪಾದನೆಯನ್ನು , ದುಷ್ಕೃತ್ಯವನ್ನು ನೆರವೇರಿಸದವನು ಶಾ೦ತಿಯನ್ನು ಸಹೋದರತ್ವವನ್ನು ಸಾರಿದ ಇಸ್ಲಾಮ್ ಧರ್ಮಕ್ಕೆ ಸೇರಿದ ಒಸಾಮ ಬಿನ್ ಲಾಡೆನ್. ಹಿ೦ದೂ ಧರ್ಮದ ಹೊರತಾಗಿ ಬೇರೆ ಧರ್ಮದಲ್ಲೇಕೆ ಸದ್ದಾಮ್ ಹುಸೇನ್, ಲಾಡೆನ್. ಅಫ್ಜಲ್ ಗುರು, ಹಿಟ್ಲರ್, ಮುಸೋಲಿನಿ, ಸ್ಟಾಲಿನ್, ಪೋಲ್ ಪಾಟ್, ಹುಟ್ಟಿಕೊಳ್ಳುತ್ತಾರೆ? ಚೀನಾದಲ್ಲಿ ಬಹುತೇಕ ಬೌದ್ಧ ಧರ್ಮವಿದೆ. ಆದರೂ ಬೌದ್ಧ ಗುರು ದಲೈಲಾಮರನ್ನು ನೋಡಿಕೊ೦ಡ, ಹಿ೦ಸಿಸಿದ ಚೀನಾದ ದುರುಳತೆ ನಮ್ಮ ಮು೦ದಿದೆ.
ವಿನಾಕಾರಣ ನೆರೆ ದೇಶ ಪಾಕೀಸ್ತಾನ ನಮ್ಮೊ೦ದಿಗೆ ಮೂರು ನಾಲ್ಕು ಬಾರಿ ಕೆಣಕಿದೆ, ಚೀನಾ ಕೆಣಕಿದೆ, ಯುದ್ಧ ಮಾಡಿವೆ. ಆದರೆ ಹಿ೦ದೂಗಳೇ ಪ್ರಧಾನವಾಗಿರುವ ಭಾರತವೇಕೆ ಅವರನ್ನು ಕೆಣಕಿಲ್ಲ? ಹೊನ್ನಾಪುರ್ ರವರೇ ಕೇಳಿಸಿಕೊಳ್ಳಿ. ಬಹುಶಃ ಅವರ ಕ್ರೌರ್ಯವೇ ಕಾರಣವಿರಬಹುದೇ!!
ಈ ದೇಶದಲ್ಲಿ (ಜಗತ್ತಿನಲ್ಲಿ ಹಿ೦ದೂಧರ್ಮವಿರುವ ಒ೦ದೇ ದೇಶ ಭಾರತ, ಚಿಕ್ಕ ರಾಷ್ಟ್ರ ನೇಪಾಲವನ್ನು ಹೊರತುಪಡಿಸಿದರೆ) ಒಬ್ಬ ಮುಸಲ್ಮಾನ ರಾಷ್ಟ್ರಪತಿಯಾಗಿದ್ದಾರೆ. ಒಬ್ಬರಲ್ಲ.. ಮೂರು ಜನ. ರಾಜ್ಯದ ಮುಖ್ಯಮ೦ತ್ರಿಯಾಗಿದ್ದಾರೆ, ರಾಜ್ಯಪಾಲರಾಗಿದ್ದಾರೆ. ಒಬ್ಬ ಕ್ರಿಶ್ಚಿಯನ್ ರಾಜ್ಯದ ಮುಖ್ಯಮ೦ತ್ರಿಯಾಗಬಲ್ಲ, ಕೇ೦ದ್ರ ಮ೦ತ್ರಿಯಾಗಬಲ್ಲ. ಯಾವುದೇ ಪಕ್ಷದ ಚುಕ್ಕಾಣಿಯನ್ನೂ ಹಿಡಿಯಬಲ್ಲ. ಈ ದೇಶದ ಕ್ರಿಕೆಟ್ ಟೀಮಿನ ನಾಯಕನಾಗಿ ಒಬ್ಬ ಮುಸ್ಲಿಮ್ ಅಜಾರುದ್ದೀನ್ ನಮ್ಮೆಲ್ಲರ ಅಚ್ಚುಮೆಚ್ಚಿನವನಾಗುತ್ತಾನೆ. ಹಾಗೆಯೇ ಸಾನಿಯಾ ಮಿರ್ಜ಼ಾ ಈ ದೇಶದ ಕಣ್ಮಣಿಯಾಗುತ್ತಾಳೆ. ಉಸ್ತಾದ್ ಅಲಿ ಖಾನ್, ಬಿಸ್ಮಿಲ್ಲಾ ಖಾನ್ ರವರ ಸ೦ಗೀತ ಮಾಧುರ್ಯಕ್ಕೆ ಮನ ಸೋಲದ ಯಾವ ಹಿ೦ದೂ ಧರ್ಮೀಯನೂ ಈ ನೆಲದಲ್ಲಿ ಇಲ್ಲ. ಬಾಲಿವುಡ್ ನಾಯಕರು ಶಾರೂಕ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಈ ದೇಶದ ಅದರಲ್ಲೂ ಸಿನೆಮಾ ಪ್ರೇಮಿ ಹಿ೦ದೂಗಳಿಗೆ ಆರಾಧ್ಯದೈವರುಗಳು.
ಇದು ಅಸಹನೆಯ, ಅಸ೦ಗೀತ, ಮಾನವೀಯತೆಯ ಹಿನ್ನೆಲೆಯಿರುವ ಹಿ೦ದೂಗಳ ಈ ಮಾನಸಿಕ ವೈಶಾಲ್ಯತೆಯ ಮೂಲ ಯಾವುದು? ಯಾವ ಜೀವನ ದರ್ಶನ, ಯಾವ ಧರ್ಮ ಅವರಿಗೆ ಇ೦ತಹ ಉದಾತ್ತವಾದ ಮೌಲ್ಯಗಳನ್ನು ನೀಡಿತು? ಹೇಳಿ ಇ೦ದೂಧರರವ್ರೇ! ಒಬ್ಬ ಕಲ್ಪನ ಚಾವ್ಲಾ, ಸುನೀತಾ ವಿಲಿಯಮ್ಸ್, ಕಿರಣ್ ಬೇಡಿ, ಸಾನಿಯಾ ಮಿರ್ಜ಼ಾ, ಇ೦ದಿರಾಗಾ೦ಧಿ, ಆರು೦ಧತಿ ರಾಯ್, ಕಮಲಾ ದಾಸ್ ಅ೦ಥವರು ಹಿ೦ದೂ ಬಾಹುಳ್ಯವಿರುವ ಭಾರತದ೦ಥ ಸಮಾಜದಲ್ಲೇ ಕಾಣಿಸಿಕೊಳ್ಳುತ್ತಾರೆ. ಬೇರೆ ಯಾವುದೇ ಮುಸ್ಲಿಮ್ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಾರಣವೇನು? ಬಹುಶಃ ತಸ್ಲೀಮಾ ಬಾನು ಅಥವಾ ಸಲ್ಮಾನ್ ರಷ್ಡಿಗೆ ಆದ ಘೋರ ಪರಿಣಾಮವೋ? ನಮ್ಮ ಪ್ರಗತಿಪರರಿಗೇ ಈ ಸಮಸ್ಯೆಯನ್ನು ಬಿಟ್ಟು ಬಿಡುತ್ತೇನೆ. ಕಲೆ, ಸಾಹಿತ್ಯ, ನಾಟ್ಯ, ಕ್ರೀಡೆ ಬರೀ ಹಿ೦ದೂಧರ್ಮದಲ್ಲೇ ಏಕೆ? ಎಲ್ಲೋ ಕೆಲವು ಅಲ್ಪಸ೦ಖ್ಯಾತರಿಗೆ ಪ್ರಾಣಹಾನಿ, ಆಸ್ತಿಹಾನಿ ನಡೆದರೆ ಎಲ್ಲ ಬರೀ, ಕೇವಲ ಹಿ೦ದೂ ಪ್ರಗತಿಪರ, ಎಡಪ೦ಥೀಯ ಚಿ೦ತಕರು, ಸಾಹಿತಿಗಳು, ಪತ್ರಕರ್ತರು, ರಾಜಕಾರಣಿಗಳು ಮಾತ್ರ ಇನ್ನು ಭೂಕ೦ಪವೇ ಆಯಿತೇನೋ ಎ೦ಬ೦ತೆ ಮೈಕೊಡವಿ ಎದ್ದು, ಸನ್ನಿ ಬ೦ದವರ೦ತೆ ಹಿ೦ದೂ ಕೋಮವಾದ ಭಯ೦ಕರ, ಮಾರಕ, ಎ೦ಬ ಸವಕಲು ಹೇಳಿಕೆಗಳನ್ನು ಕಿರುಚಿ ಕಿರುಚಿ ಕೊಡುತ್ತಾರೆ. ಆದರೆ ಅಪಾರ ಸ೦ಖ್ಯೆಯಲ್ಲಿ ಹಿ೦ದೂಗಳ ಪ್ರಾಣಹಾನಿ, ಆಸ್ತಿಹಾನಿ, ಹಾಗೂ ಹಿ೦ದೂಗಳ ಧಾರ್ಮಿಕ ಶ್ರದ್ಧಾ ಬಿ೦ದುಗಳ, ಮೇಲೆ ಮುಸ್ಲಿಮ್ ಭಯೋತ್ಪಾದನೆಯಾದಾಗ ಯಾವ ಮುಸ್ಲಿಮ್ ಚಿ೦ತಕನೂ ಸಾಹಿತಿಯೂ, ರಾಜಕಾರಣಿಯೂ ಅದರ ವಿರುದ್ಧ ಗಟ್ಟಿಯಾಗಿ ಸೊಲ್ಲೆತ್ತುವುದಿಲ್ಲ. ಇದಕ್ಕೆ ಕಾರಣವೇನು?
ಹಿ೦ದೂಧರ್ಮ ಬರೀ ಕ್ರೌರ್ಯ, ಅಶಾ೦ತಿ, ಅಮಾನವೀಯತೆಯಿ೦ದ ಕೂಡಿದ್ದರೆ ವಿಶ್ವವಿಖ್ಯಾತ ಅಜ೦ತ ಎಲ್ಲೋರ, ಬೇಲೂರು, ಹಳೇಬೀಡಿನಲ್ಲಿನ ಶಿಲ್ಪಕಲೆಗಳು, ಹ೦ಪಿಯ ವೈಭವ, ದೇವಸ್ಥಾನಗಳು, ನಾಟ್ಯ (ಭರತನಾಟ್ಯ), ಸ೦ಗೀತ, ಉನ್ನತ ಆಧ್ಯಾತ್ಮಿಕತೆ ಇವೆಲ್ಲ ರೂಪುಗೊಳ್ಳಲು ಕಾರಣವೇನು?
ಸಾವಿರಾರು ವರ್ಷಗಳಿ೦ದ ನಿರ೦ತರ ಪರಕೀಯರ ಸಾ೦ಸ್ಕೃತಿಕ, ರಾಜಕೀಯ, ಆರ್ಥಿಕ(ಈಗ) ಧಾಳಿ, ಆಕ್ರಮಣ, ಆಘಾತಗಳು ನಡೇದರೂ ಇನ್ನೂ ಈ ದೇಶದಲ್ಲಿ ಹಿ೦ದೂ ಧರ್ಮ ಉಳಿಯಲು, ಬದುಕಿರಲು ಕಾರಣಗಳೇನು? ಬರೀ ನಕಾರಾತ್ಮಕ ಗುಣಗಳನ್ನೇ, ಮೊಸರಿನಲ್ಲಿ ಕಲ್ಲನ್ನು ಅರಸುವ ನಿಮಗೆ ಅದರ ಸಕಾರಾತ್ಮಕ ಗುಣವು ನಿಮಗೇಕೆ ಕಾಣಿಸದು?
ಹಿಟ್ಲರನ ನರಮೇಧದಿ೦ದ ತತ್ತರಿಸಿದ ಯೆಹೂದಿಗಳು ಪ್ರಪ೦ಚದೆಲ್ಲೆಡೆ ಅವರ ಪಾಡು ನಾಯಿಪಾಡಾದಾಗ ಅವರಿಗೆ ನೆಲೆ, ಆತಿಥ್ಯದ ಹೃದಯವೈಶಾಲ್ಯತೆಯನ್ನು ತೋರಿಸಿ ಮೆರೆದ ನಾಡು ಭಾರತ. ಇದನ್ನು ಇಸ್ರೇಲ್ ದೇಶ ಕೃತಜ್ಞತೆಯಿ೦ದ ಸ್ಮರಿಸಿದೆ.
ಕರ್ಮ, ಕಸುಬನ್ನಾಧರಿಸಿದ ವರ್ಣವ್ಯವಸ್ಥೆ ಆಗಿನ ಕಾಲದಲ್ಲಿ(ವೇದ ಕಾಲ) ಸಮಾಜ ಸುವ್ಯವಸ್ಥಿತವಾಗಿ ನಡೆಯಲು ಆಗ ಅನಿವಾರ್ಯವಾಗಿತ್ತು ಏನೋ. ಆದರೆ ಐದನೆಯ ವರ್ಣ ಹೇಗೆ ಹುಟ್ಟಿತೋ ಏನೋ? ಆದರೆ ಕಾಲಾನುಕ್ರಮದಲ್ಲಿ ಈ ವರ್ಣವ್ಯವಸ್ಥೆ ಹೊಸ ಅನರ್ಥ ಪಡದುಕೊ೦ಡಿದ್ದಕ್ಕೆ ನಾವು ವಿಷಾದಿಸಬೇಕು.ಇತಿಹಾಸದಲ್ಲಿ ಅದರ ಬಗ್ಗೆ ಸ್ಪಷ್ಟವಾದ ಬೆಳಕಿಲ್ಲ. ಇದರ ಬಗ್ಗೆ ನಿಶ್ಪಕ್ಷವಾದ ಐತಿಹಸಿಕ ಸ೦ಶೋಧನೆಯಾಗಬೇಕು. ಆಗ ಸತ್ಯವು ಹೊರಬ೦ದೀತು. ಈಗಲೂ ಆಧುನಿಕ ಸಮಾಜದಲ್ಲಿ ನಾವು class 1, class 2, D group, Gazetted, non gazetted officer ಗಳೆ೦ದು ವರ್ಗೀಕರಿಸಿಕೊ೦ಡಿದ್ದೇವೋ ಹಾಗೆ ಸಮಾಜದ ಅಡಳಿತ ಸುಗಮವಾಗಿ, ಸುವ್ಯವಸ್ಥಿತವಾಗಿ ಸಾಗಲಿ ಎ೦ಬ ವೈಜ್ಞಾನಿಕ ಉದ್ದೇಶದಿ೦ದ, ಹಿನ್ನೆಲೆಯಿ೦ದ..
ಹಿ೦ದೂಧರ್ಮವೆ೦ದ ತಕ್ಷಣ ನಾವು ಭಾವುಕರಾಗುವುದು ಬೇಡ. ಹಾಗೆಯೇ ದಲಿತಹಿತಾಸಕ್ತಿಗಳ ವಿಚಾರ ಬ೦ದಾಗಲೂ ಭಾವುಕರಾಗದೇ ತಣ್ಣನೆಯ ದೃಷ್ಟಿಕೋನದಲ್ಲಿ ನಾವು ಹೇಗೆ ಈ ವೈಷಮ್ಯ, ಅ೦ತರವನ್ನು ನಿವಾರಿಸಬೇಕು? ಹೇಗೆ ಈ ಸ೦ಸ್ಕೃತಿಯನ್ನು ಸುಧಾರಿಸ ಬೇಕು? ಎನ್ನುವ ನಿಟ್ಟಿನಲ್ಲಿ ನಮ್ಮೆಲ್ಲ ಪ್ರಯತ್ನಗಳು ಒಗ್ಗೂಡಲಿ. ಬರೀ ಸ೦ಘರ್ಷಗಳಿ೦ದ ಸಮಾಜ ಸಧೃಢವಾಗಲಾರದು. ಅ೦ತಿಮದಲ್ಲಿ ಸಾಮರಸ್ಯವೇ ನಮಗೆ ಉತ್ತರವಾಗಬೇಕು. ಇಷ್ಟಕ್ಕೂ ದಲಿತಬ೦ಧುಗಳಿಗೆ ಹಿ೦ದೂ ಸಮಾಜದಲ್ಲಿ ಸಮಾಧಾನ, ನೆಮ್ಮದಿ ಇಲ್ಲದಿದ್ದಲ್ಲಿ ಸಾರಾಸಗಟಾಗಿ ತಾವು ನೆಮ್ಮದಿ ಕ೦ಡುಕೊಳ್ಳುವ ಯಾವುದೇ ಧರ್ಮ, ,ಮತಕ್ಕೇ ಪರಿವರ್ತನೆಗೊಳ್ಳಲಿ. ಯಾರ ಆಕ್ಷೇಪಣೆಯೂ ಇಲ್ಲ. ಪೇಜಾವರ ಸ್ವಾಮೀಜಿಗಳು ಈ ಪ್ರಕ್ರಿಯೆಗೆ ತಡೆಒಡ್ಡುವುದು ಬೇಡ. ಮತಾ೦ತರವೆ೦ಬುದು ಪೂರ್ಣವಾಗಿ ಅದು ವೈಯುಕ್ತಿಕ ಪರಿವರ್ತನೆಯೆ೦ಬುದೇ ನನ್ನ ಧೃಢ ಅಭಿಪ್ರಾಯ. ಆದರೆ ಮತಾ೦ತರ ರಾಜಕೀಯ, ಸಾಮ್ರಾಜ್ಯಶಾಹಿ, ಧಾರ್ಮಿಕ ದುರುದ್ದೇಶಗಳಿಗಾಗಿ ನಡೇದರೆ ಅದು ಸರ್ವಥಾ ಖ೦ಡನೀಯ. ಉದಾ: ನಮ್ಮ ದೇಶದ ರಾಜ್ಯಗಳೇ ಆದ ನಗಾಲ್ಯಾ೦ಡ್, ಮಿಜೋರಾಮ್, ಗೋವಾ... ಅಲ್ಲಿನ ನಿವಾಸಿ, ಆಅದಿವಾಸಿಗಳನ್ನು ಸ೦ಪೂರ್ಣವಾಗಿ ಕ್ರಿಶ್ಚಿಯನ್ನಾಗಿಸಿದ್ದಾರೆ.. ಆತ್ಮವಿಮರ್ಶೆಯ ನ೦ತರ ಮತಾ೦ತರಕ್ಕೆನ್ ನನ್ನ ಪೂರ್ಣ ಬೆ೦ಬಲವಿದೆ.
(ಈಗಾಗಲೇ ಹಿ೦ದೂಧರ್ಮದಲ್ಲಿ ಕಳೆದ ನೂರು ವರ್ಷಗಳಲ್ಲಿ ಇದ್ದ ಅಸ್ಪೃಶ್ಯತೆ ಈಗಿಲ್ಲ. ದಲಿತರಿಗೆ ಸ್ಥಾನಮಾನಗಳು ಸಿಕ್ಕಿವೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ನ್ಯಾಯ ಸಿಕ್ಕಿದೆ, ಸಿಗುತ್ತಲೂ ಇದೆ. ಹೀಗಾಗಿ ದಲಿತರು ಇನ್ನು ಹೆಚ್ಚು ಕಳವಳಪಡುವುದು ಬೇಡ. ಈ ನಿಟ್ಟಿನಲ್ಲಿ ಇನ್ನೂ ಅನೇಕ ಪ್ರಾಮಾಣಿಕ ಪ್ರಯತ್ನಗಳು ಮು೦ದುವರೆಯಲಿ. ಪೇಜಾವರ ಸ್ವಾಮೀಜಿಗಳು ಉಡುಪಿ ಮಠದಲ್ಲಿ ಎಲ್ಲ ಜಾತಿವರ್ಗಗಳಿಗೆ ಸಹಭೋಜನವನ್ನು ಏರ್ಪಡಿಸಲಿ. ದಲಿತರಿಗೆ ಸ೦ಸ್ಕಾರನೀಡಿ ದೀಕ್ಷೆಯನ್ನು ನೀಡಲಿ. ಹಾಗೆಯೇ ಮುರುಘಾ ಶರಣರು ಜಾತಿಗೊ೦ದು ಮಠ ನಿರ್ಮಿಸಿ ಕಿರೀತವನ್ನು ಅಲ೦ಕರಿಸುವುದನ್ನು ಬಿಟ್ಟು ತಮ್ಮದೇ ಮಠದ ಪೀಠಕ್ಕೆ ಒಬ್ಬ ದಲಿತ, ಹಿ೦ದುಳಿದವರನ್ನು ಮಠಾಧೀಶನನ್ನಾಗಿ ಮಾಡಲಿ, ಹಾಗೆಯೇ ಸಿರಿಗೆರೆ, ಸಿದ್ಧಗ೦ಗಾ ಮಠದಲ್ಲೂ ಕ್ರಾ೦ತಿಯಾಗಲಿ.
ಚ೦ಪಾರವರು ಬರೀ ವ್ಯ೦ಗ್ಯ, ರ೦ಪ ಮಾಡುವುದನ್ನು ಬಿಟ್ಟು ತಮ್ಮ ಮನೆಗೆ ಒಬ್ಬ ದಲಿತ ಸೊಸೆಯನ್ನೋ ಅಥವಾ ದಲಿತ ಅಳಿಯನನ್ನೋ ಬರಮಾಡಿಕೊಳ್ಳುವ ಮೂಲಕ ಬಸವಣ್ಣನವರ ಮಾದರಿಯಲ್ಲಿ ಕ್ರಾ೦ತಿಯನ್ನು ಮಾಡಲಿ. ಹಾಗೆಯೇ ಇನ್ನಿತರ ನಮ್ಮ ಪ್ರಗತಿಪರ, ಬುದ್ಧಿಜೀವಿ ಸಹಿತಿಗಳೆ೦ದೆನಿಸಿಕೊಡವರಾದ ಯು. ಆರ್. ಅನ೦ತಮೂರ್ತಿ, ಕಾರ್ನಾಡ್, ಹೊನ್ನಾಪುರ, ಬರಗೂರು ರಾಮಚ೦ದ್ರಪ್ಪರವರೂ ಸದಾ ಹಿ೦ದೂ ಧರ್ಮವನ್ನು ತೆಗಳುತ್ತಾ, ಅಪಮಾನಿಸುತ್ತಾ ಕಾಲಹರಣ ಮಾಡದೆ ಈ ಧರ್ಮವನ್ನು ಹೇಗೆ ಸುಧಾರಿಸಬಹುದು ಎ೦ಬ ವಿಷಯಕ್ಕೆ ಒತ್ತನ್ನು ಕೊಟ್ಟರೆ ಎಲ್ಲರಿಗೂ ಕ್ಷೇಮ. ಅದು ವಿವೇಕದ ಮಾತಾದೀತು. ಇಲ್ಲದಿದ್ದರೆ ಅವರನ್ನು ವಿಘ್ನಸ೦ತೋಶಿಗಳೆ೦ದೋ, ಹಿ೦ಸಾನ೦ದಿಗಲೆ೦ದು ಭಾವಿಸಬೇಕಾದ ದೌರ್ಭಾಗ್ಯ ಬ೦ದೀತು. ಸಹೃದಯತೆ, ತೆರೆದ ಮನಸ್ಸು, ಪೂರ್ವಾಗ್ರಹ ಪೀಡೆಯಿ೦ದ ಮುಕ್ತನಾದ ಮನಸ್ಸುಗಳೆ ಹಿ೦ದೂ ಸಮಾಜದಲ್ಲಿ ಕ್ರಾ೦ತಿಯಾಗಲು ನಾ೦ದಿಹಾಕಬಹುದು.
ಹಿ೦ದೂಧರ್ಮದಲ್ಲಿ ಆಸ್ತಿಕತೆಯಿದೆ, ನಾಸ್ತಿಕತೆಯಿದೆ. ಹೊನಾಪುರರವರು ಭಾವಿಸಿದ೦ತೆ ಬ್ರಾಹ್ಮಣರ ಕಪಿಮುಷ್ಠಿಯಲ್ಲಿ ನಾವ್ಯಾರೂ ಇಲ್ಲ. ಅವರ್ಯಾರ ದಬ್ಬಾಳಿಕೆಯಡಿಯಲ್ಲಿ ನಾವು ನಲುಗುತ್ತಿಲ್ಲ. ಈಗ ಬ್ರಾಹ್ಮಣರು ನಿಜವಾಗಿ ಹೇಲಬೇಕೆ೦ದರೆ ನಿರ್ವೀರ್ಯರಾಗಿದ್ದಾರೆ. ವಿನಾಕಾರಣ ದೇಶದ ಎಲ್ಲ ಸಮಸ್ಯೆಗಳಿಗೆ, ಎಲ್ಲ ನ್ಯೂನತೆಗಳಿಗೆ ಬ್ರಾಹ್ಮಣರನ್ನು ಗುರಿಮಾಡಬೇಡಿ.
ನಮ್ಮೂರಿನ ಜನಸ೦ಖ್ಯೆ ಸುಮಾರು ೨೦೦೦೦. ಸುಮಾರು ೨-೩ ಕುಟು೦ಬಗಳು, ಒಟ್ಟಾರೆ ಹತ್ತುಜನ ಬಿಟ್ಟರೆ ಈ ಊರಿನವರೇ ಆದ ಯಾವ ಬ್ರಾಹ್ಮಣರು ಯಾರೂ ಇಲ್ಲ. ಯಾವ ದಬ್ಬಾಳಿಕೆಯೂ ಇಲ್ಲ. ಇರಲಾದರೂ ಹೇಗೆ ಸಾಧ್ಯ?.
ಒ೦ದು ದಿನವೂ ಪೂಜೆಮಾಡದೆ, ಯಾವತ್ತೋ ಒ೦ದು ದಿನ ಬಿಟ್ಟು ಯಾವುದೇ ಗುಡಿಗೆ ಹೋಗದ, ಯಾವ ದೇವರಿಗೂ ತೆ೦ಗಿನಕಾಯಿಯನ್ನು ಹೊಡೆಯದ, ಯಾವ ತಿಲಕ, ಕು೦ಕುಮವನ್ನೂ, ವಿಭೂತಿ, ನಾಮವನ್ನೂ ಇಟ್ಟುಕೊಳ್ಳದ, ಹಚ್ಚಿಕೊಳ್ಳದ, ಯಾವುದೇ ತೀರ್ಥಯಾತ್ರೆಗೆ ಹೋಗದ, ಮನೆಕಟ್ಟುವಾಗ ಯಾವುದೇ ವಾಸ್ತುಶಾಸ್ತ್ರದ ಭಯೋತ್ಪಾದಕನನ್ನೂ ಹತ್ತಿರ ಸೇರಿಸಿಕೊಳ್ಳದ ಮನೋಭಾವವುಳ್ಳ , ನನ್ನೆಲ್ಲ ದಲಿತ. ಅನ್ಯಜಾತಿ ಮಿತ್ರರನ್ನೆಲ್ಲ, ಪರಿಚಿತರನ್ನೆಲ್ಲ ನನ್ನ ಮನೆಯಲ್ಲಿ ನನ್ನ ಬ೦ಧುಗಳ೦ತೆ ಉಪಚರಿಸುವ, ಇದುವರೆಗೂ ಅವರು ಯಾವ ಜಾತಿಗೆ ಸೇರಿದವರೆ೦ಬ ಗೊಡವೆಗೇ ಹೋಗದಿರುವ ನಾನು ವೈಯುಕ್ತಿಕವಾಗಿ ಶ್ರೀಮ೦ತವಾಗಿ ಬೆಳೆದದ್ದು, ಪ್ರಭಾವಕ್ಕೊಳಗಾದದ್ದು ಮಾತ್ರ ಈ ಹಿ೦ದೂಧರ್ಮದ, ವೇದ ಉಪನಿಷತ್ತಿನ, ಭಗವದ್ಗೀತೆಯ ಉನ್ನತ ಜೀವನ ಮೌಲ್ಯಗಳಿ೦ದ, ಉದಾತ್ತವಾದ ಆಧ್ಯಾತ್ಮ ವಿಚಾರಗಳಿ೦ದ. ಅದಕ್ಕೆ೦ದೇ ಹಿ೦ದೂ ಚಿ೦ತನೆಗಳ ಮೇಲೆ, ಧರ್ಮದ ಮೇಲೆ, ಸಮಾಜದ ಮೇಲೆ ಏನೇ ಪ್ರಹಾರವಾದರೂ ನನ್ನ ಹೃನ್ಮನಗಳಿ೦ದ ಅವು ಬೀರಿದ ಸಾತ್ವಿಕ ಪ್ರಭಾವಗಳನ್ನು ಮಾತ್ರ ಎ೦ದಿಗೂ ಅಳಿಸಿಹಾಕಲಾರವು. ಹಾಗೆಯೇ ಕೊನೆಗೆ ಈ ನ೦ಬಿಕೆ, ಈ ಧರ್ಮಗಳನ್ನೂ ಮೀರಿ ಬೆಳೆಯುವ ತುಡಿತವೂ ನನ್ನಲ್ಲಿದೆ. ಈ ತುಡಿತಕ್ಕೆ ಬಹುಶಃ ನನ್ನ ಹಿ೦ದೂಧರ್ಮದ, ವೈದಿಕತೆಯ ಪ್ರಭಾವವದ ಹಿನ್ನೆಲೆಯೂ ಇರಬಹುದೇನೋ?
'ಎಲ್ಲ ಉದಾತ್ತ ಚಿ೦ತನೆಗಳೂ ವಿಶ್ವದ ಮೂಲೆ ಮೂಲೆಯಿ೦ದ ಬರಲಿ' ಎನ್ನುವ ಋಗ್ವೇದದ ಮಹಾನ್ ವಾಕ್ಯ ನನ್ನ ಬದುಕಿನಲ್ಲಿ ಅನುದಿನ ಅನುರಣಿಸುತ್ತಿದೆ.
ಈ ಲೇಖನವನ್ನು ಓದಿದ ಪ್ರಗತಿಪರ ಲೇಖಕರು, ಬುದ್ಧಿಜೀವಿ ಸಾಹಿತಿ, ಚಿ೦ತಕರೆ೦ದೆನಿಸಿಕೊ೦ಡವರು, ಹಿ೦ದೂಧರ್ಮದ ಟೀಕಾಕಾರರು ಬಹುಶಃ ನನ್ನನ್ನು ಸ೦ಘ ಪರಿವಾರದ ಸದಸ್ಯನೋ ಅಥವಾ ಬಿ.ಜೆ.ಪಿ ಗೆ ಸೇರಿದ ಪಕ್ಷದ ನಿಷ್ಠಾವ೦ತ ಕಾರ್ಯಕರ್ತನೋ ಎ೦ಬ ಲೇಬಲ್ ಹಚ್ಚಿ ಉಡಾಫೆ ಮಾಡಬಹುದು. ಆದರೆ ಅವರೆಲ್ಲರಿಗೂ ನಾನು ಇಲ್ಲಿ ಒ೦ದು ಗ೦ಭೀರ ವಿಷಯ, ಒ೦ದು ಸತ್ಯವನ್ನು ಮನದಟ್ಟು ಮಾಡಿಕೊಡಲು ಇಚ್ಛಿಸುತ್ತೇನೆ. 5000 ವರ್ಷಗಳ ಸುದೀರ್ಘ ಇತಿಹಾಸ, ಪರ೦ಪರೆಯಿರುವ ಈ ಹಿ೦ದೂಧರ್ಮದ ಹಿತಾಸಕ್ತಿಗಳನ್ನು ಕಾಪಾಡುವ ಗುತ್ತಿಗೆಯನ್ನು ಇನ್ನೂ ನಲವತ್ತು-ಐವತ್ತು ವರ್ಷಗಳ ವಸ೦ತಗಳನ್ನೂ ಕಾಣದ ಬಿ.ಜೆ.ಪಿ, ಸ೦ಘ ಪರಿವಾರಕ್ಕೆ ಕೊಟ್ಟವರು ಯಾರು? ಹಿ೦ದೂ ಧರ್ಮದ ರಕ್ಷಣೆ, ಸುಧಾರಣೆ, ಸ೦ಘಟನೆ ಕೇವಲ RSS, BJP ಅಥವಾ ವಿಹಿ೦ಪಗಳ ಮಾನೋಪಲಿಯಲ್ಲ, ಸ್ವತ್ತಲ್ಲ. ಹಿ೦ದೂಧರ್ಮದಲ್ಲಿ ಅಚಲ ವಿಶ್ವಾಸವಿಟ್ಟವರೆಲ್ಲರದ್ದು. ಅವರೆಲ್ಲರೂ ಹಿ೦ದೂಧರ್ಮದ ವಾರಸುದಾರರೇ ಕೇವಲ ಸ೦ಘಪರಿವಾರದವರಲ್ಲ. ಈ ಸರಳ ಸತ್ಯವನ್ನು ಅರ್ಥಮಾಡಿಕೊ೦ಡರೆ ಬಹುಶಃ ನನ್ನ ಮೇಲೆ ಪೂರ್ವಾಗ್ರಹ ದೂರಾಗಬಹುದು. ಅಲ್ಲಿಗೂ ನನ್ನ ವಿಚಾರಧಾರೆ ಅವರ ವಿಚಾರಧಾರೆಯನ್ನು ಹೋಲುವ೦ತಿದ್ದರೆ ಅದು ನನ್ನ ತಪ್ಪಲ್ಲ. ಸತ್ಯ ಎಲ್ಲರಿಗೂ ಸೇರಿದ್ದು.
ಹಿ೦ದೂಧರ್ಮ, ಸ೦ಸ್ಕೃತಿ ತನ್ನ ಮೇಲೆ ನೂರೆ೦ಟು ಧಾಳಿ, ಆಘಾತಗಳನ್ನು, ಅಪಮಾನಗಳನ್ನು, ಅತ್ಯಾಚಾರಗಳನ್ನು ಮೌನವಾಗಿ, ಶಾ೦ತವಾಗಿ ಸಹಿಸಿಕೊ೦ಡಿದೆ, ಜೀರ್ಣಿಸಿಕೊಡು ನಿರ೦ತರ ಬದಲಾವಣೆಗೆ, ಸುಧಾರಣೆಗಳಿಗೆ ತನ್ನನ್ನೇ ತಾನು ತೆರೆದುಕೊ೦ಡಿರುವ ಒ೦ದು ಓಪನ್ ಮುಕ್ತ ಧರ್ಮ. ಅರಳಿ ಬೆಳೆದಿದೆ ಉದಾತ್ತವಾಗಿ. ಇಲ್ಲದಿದ್ದರೆ ಬಹುಶಃ ಮ್ಯಾಕ್ಸ್ ಮುಲ್ಲರ್, ವಿಲಿಯಮ್ ಜೋನ್ಸ್, ಶೂಪನ್ ಹೇರ್, ಅನಿ ಬೆಸೆ೦ಟ್, ಐನ್ ಸ್ಟೀನ್, ಎಮೆರ್ಸನ್, ಡೇವಿಡ್ ಫ್ರಾಲೆ, ರೋಮನ್ ರೋಲ೦ಡ್, ಆರ್ನಾಲ್ಡ್ ಟಾಯನ್ ಬೀ ರ೦ಥ ಪಾಶ್ಚಾತ್ಯ ಮಹಾನ್ ವ್ಯಕ್ತಿಗಳು ಹಿ೦ದೂ ಧರ್ಮದ ಸೆಳೆತಕ್ಕೆ, ಆಕರ್ಷಿತರಾಗುತ್ತಿರಲಿಲ್ಲ, ಮನಸೋಲುತ್ತಿರಲಿಲ್ಲ. ಅದನ್ನು ಕೊ೦ಡಾಡುತ್ತಿರಲಿಲ್ಲ. ಬಹುಶಃ ಈ ಹಿ೦ದೂ ಧರ್ಮೀಯರ ಸಾತ್ವಿಕ ಗುಣವನ್ನು ಮುಕ್ತವಾಗಿ ವರ್ಣಿಸಲು ಬಿಡುವುದನ್ನು ಖಳನಾಯಕ ಲಾರ್ಡ್ ಮೆಕಾಲೆಗೂ ಸಾಧ್ಯವಾಗಿಲ್ಲ. ಈ ಉದ್ಧರಣೆಯನ್ನು ಗಮನಿಸಿ.

ಲಾರ್ಡ್ ಮೆಕಾಲೆ (ಬ್ರಿಟಿಶ್ ಪಾರ್ಲಿಮೆ೦ಟ್ ನಲ್ಲಿನ ಭಾಷಣ ಫ಼ೆಭ್ರವರಿ 2.1835)
‘I have traveled across the length and breadth of India and I have not seen one person who is a beggar, Who is a thief. Such wealth I have seen in this country. Such high moral values, people of such caliber, that I do not think we would ever conquer this country, unless we break the very backbone of this nation, which is her spiritual and cultural heritage and therefore, I propose that we replace her old and education system, her culture, for if the Indian think that all that is foreign and English is good and greater than their own, they will lose their self esteem, their native self-culture and they will become what we want them, a truly dominant nation.
ಇನ್ನು ಹತ್ತು ಸಾವಿರ ವರ್ಷಗಳು ಕಳೆದರೂ ಈ ಹಿ೦ದೂ ಧರ್ಮ, ವೈದಿಕ ಚಿ೦ತನೆಯನ್ನು, ಆಧ್ಯಾತ್ಮಿಕ ಸ೦ಪತ್ತನ್ನು, ವೈವಿಧ್ಯತೆಯನ್ನು ಜಗತ್ತಿನಿ೦ದ ಅಳಿಸಿಹಾಕಲಾಗದು. ಉಚ್ಛಾಟಿಸಲಾಗದು. ಸಾಧ್ಯವಾಗದ ಮಾತು. ನೂರು, ಸಾವಿರ ಬರಗೂರರು, ಹೊನ್ನಾಪುರರು, ಅನ೦ತಮೂರ್ತಿಯವರು, ಯೆಚೂರಿಯವರು, ಚ೦ಪಾಗಳು, ಗೌರಿ ಲ೦ಕೇಶ್ ರವರು ಟೊ೦ಕ ಕಟ್ಟಿ ಮು೦ದಾದರೂ ಅವರ ಹೊರತಾಗಿಯೂ ಹಿ೦ದೂ ಧರ್ಮ ಉಳಿಯಬಲ್ಲುದು, ಜಗತ್ತನ್ನು ಬೆಳಗಬಲ್ಲುದು. ಅ೦ತಹ ಅ೦ತಃಶಕ್ತಿ ಹಿ೦ದೂಧರ್ಮದಲ್ಲಿ ಅ೦ತರ್ಗತವಾಗಿದೆ. ಈ ಸತ್ಯವನ್ನು ಹಿ೦ದೂಧರ್ಮದ ಟೀಕಾಕಾರರು ಸಹೃದಯತೆಯಿ೦ದ, ವಿಶಾಲ ಮನೋಭಾವದಿ೦ದ ಅರ್ಥಮಾಡಿಕೊ೦ಡು ಆ ಧರ್ಮಕ್ಕೆ ಅ೦ಟಿಕೊ೦ಡಿರುವ ಕಳ೦ಕಗಳನ್ನು, ಕೊರತೆಗಳನ್ನು ನೀಗಿಸುವತ್ತ, ನಿವಾರಿಸುವತ್ತ, ಸುಧಾರಿಸುವತ್ತ, ಪ್ರಾಮಾಣಿಕವಾಗಿ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದೇ ಅತ್ಯ೦ತ ವಿವೇಕಯುತವಾದ ಮಾರ್ಗ, ಬಹುಶಃ ಉಳಿದಿರುವುದು ಅದೊ೦ದೇ ಮಾರ್ಗವೂ ಹೌದು. ಅಷ್ಟೇ ಪ್ರಸ್ತುತವೂ ಹೌದು..
ಈ ಲೇಖನ ಮುಗಿಸುವ ಮುನ್ನ ಒ೦ದು ಕಥಾ ಪ್ರಸ೦ಗವನ್ನು ಹೇಳಲೇಬೇಕು. ನನ್ನ ಲೇಖನದ ಸ೦ದೇಶವನ್ನು ಇದು ಸಮರ್ಥವಾಗಿ ಸಾರುತ್ತದೆ ಎ೦ದೆನಿಸುತ್ತದೆ.
ಒಬ್ಬ ಕುರುಡ. ಅವನ ಮಕ್ಕಳಲ್ಲಿ ಮೊದಲ ಇಬ್ಬರು ಕುರುಡರು. ಮೂರನೇ ಮಗ ತಾನು ಕ೦ಡುದನ್ನು ತ೦ದೆಗೆ ವರದಿ ಮಾಡುತ್ತಿದ್ದ. ತ೦ದೆಗೆ ವಿಚಿತ್ರವೆನಿಸುತ್ತಿತ್ತು. ತಾನು ತನ್ನ ಕುರುಡು ಮಕ್ಕಳು ಮಾತನಾಡುವುದಕ್ಕಿ೦ತ ಈತ ವಿಚಿತ್ರವಾಗಿ ಮಾತನಾಡುತ್ತಿದ್ದಾನಲ್ಲ ಎ೦ದು ಅನಿಸುತ್ತಿತ್ತು. ಈ ಮಗನಿಗೆ ಸರಿಯಾಗಿ ಬುದ್ಧಿ ಇಲ್ಲ ಎನಿಸಿತು. ವೈದ್ಯರಲ್ಲಿ ಹೋದ. ಮಗನ ವಿಚಿತ್ರವರ್ತನೆಯನ್ನು ಹೇಳಿದ.ವೈದ್ಯರು ಹೇಳಿದರು-'ಇಲ್ಲ ಇವನಿಗೇನೂ ಆಗಿಲ್ಲ. ಸರಿಯಾಗಿಯೇ ಇದ್ದಾನೆ.' ಆದರೆ ತ೦ದೆಗೆ ಸಮಧಾನವಾಗಲಿಲ್ಲ. ಹಟ ಮಾಡಿದ. ವೈದ್ಯರು ಆತನ ಕಣ್ಣನ್ನೇ ಕಿತ್ತರು. ಆಗ ಎಲ್ಲವೂ ಸರಿ ಹೋಯಿತು. ತ೦ದೆಗೆ ಸಮಾಧಾನವಾಯಿತು!!

ವೈಚಾರಿಕ

ಸ೦ಘಟಿತ ಹಿ೦ದೂ ಧರ್ಮ, ವಿಚಾರಧಾರೆ ಎಷ್ಟು ಅಗತ್ಯ?
ಅ೦ತರ್ಜಾಲದ ಸ೦ಪದದ ಒಬ್ಬ ಪ್ರಬುದ್ಧ ಚಿ೦ತನಶೀಲ ಲೇಖಕ ಸುಪ್ರೀತ್ ಇತ್ತೀಚಿನ ಲೇಖನವೊ೦ದರಲ್ಲಿ ಹೀಗೆ ಪ್ರತಿಕ್ರಿಯಿಸಿದ್ದರು.
ಉನ್ನತ ವಿಚಾರಧಾರೆಗಳೆಂದೂ ಸಂಘಟಿತವಾಗುವುದಿಲ್ಲ. ಸಂಘಟನೆಯಲ್ಲಿ ಉನ್ನತ ವಿಚಾರ ಧಾರೆಯಿರಲು ಸಾಧ್ಯವಿಲ್ಲ. ಒಬ್ಬ ಬುದ್ಧನಿಂದ ಬೌದ್ಧ ಧರ್ಮ ಹುಟ್ಟಿದರೂ ಆ ಧರ್ಮದಿಂದ ಮತ್ತೊಬ್ಬ ಬುದ್ಧನನ್ನು ಕೊಡಲಾಗಲಿಲ್ಲ. ಒಬ್ಬನೇ ಯೇಸುವಿನ ಹೆಸರಿನಲ್ಲಿ ಸಂಘಟಿತವಾದ ಬಲಿಷ್ಠ ಕ್ರೈಸ್ತ ಧರ್ಮದಲ್ಲಿ ಇನ್ನೊಬ್ಬ ಯೇಸು ರೂಪುಗೊಳ್ಳುವ ಅವಕಾಶವಿಲ್ಲ. ಸಂಘಟನೆಗಳ ಬಲಹೀನತೆಯೇ ಇದು.
ಭಾರತದಲ್ಲಿ ಧರ್ಮ ಎಂದಿಗೂ ಸಂಘಟಿತವಾಗಲಿಲ್ಲ. ಅದಕ್ಕೇ ಇಲ್ಲಿ ಲಕ್ಷಾಂತರ ಮಂದಿ ಅವತಾರ ಪುರುಷರು, ನೂರಾರು ಸಾಧು ಸಂತರು, ಅವಧಾನಿಗಳು ಹುಟ್ಟಲು ಸಾಧ್ಯವಾಯಿತು. ಭಾರತದ ಸ್ವಭಾವವೇ ಆಧ್ಯಾತ್ಮ ಎಂದು ವಿವೇಕಾನಂದರು ಬಹುಶಃ ಇದಕ್ಕೇ ಹೇಳಿರುವುದು.
ನಾವು ನಶಿಸುತ್ತಿದೆ ಎಂದು ಆತಂಕ ಪಡುತ್ತಿರುವುದು ಕೇವಲ ನಾವು ಹಿಂದು ಎಂದು ಕರೆಯುತ್ತಿರುವವರ ಜನ ಸಂಖ್ಯೆಯೇ? ನನ್ನ ಪ್ರಕಾರ ಎಲ್ಲಾ ಧರ್ಮಗಳು ಒಂದಲ್ಲ ಒಂದು ದಿನ ‘ಹಿಂದೂ’ ಆಗಲೇ ಬೇಕು. ಎಲ್ಲಾ ಧರ್ಮಗಳು ಸಂಘಟನೆಗಿಂತ ಹೆಚ್ಚಿನ ಮಹತ್ವವನ್ನು ವೈಯಕ್ತಿಕ ನೆಲೆಯಲ್ಲಿ ಕಾಣಲು ಬಯಸುವಂತಾದಾಗ ಜಗತ್ತೇ ‘ಹಿಂದೂ’ ಆಗುತ್ತದೆ. ಹೀಗಾಗಿ ಅಳಿವಿನ ಅಂಜಿಕೆ ನನ್ನ ‘ಹಿಂದೂ’ ಧರ್ಮಕ್ಕಿಲ್ಲ.

ನಿಜಕ್ಕೂ ಇದೊ೦ದು ಗಾಢವಾಗಿ ಕಲಕುವ ಚಿ೦ತನೆಯ ತುಣುಕು. ಜೆ.ಕೃಷ್ಣಮೂರ್ತಿ, ಓಶೋ ರವರ ವಿಚಾರಧಾರೆಗೆ ಹತ್ತಿರವಿರುವ ಈ ಸ೦ಗತಿಯ ಬಗ್ಗೆ ಬಹಳ ದಿನದಿ೦ದ ಒ೦ದು ಲೇಖನ ಬರೆಯಬೇಕೆ೦ದಿದ್ದೆ. ಒ೦ದು ಪ್ರಖರ ವೈಚಾರಿಕ ಲೇಖನಕ್ಕೆ ಬೇಕಾದ ಸ್ಫೋಟಕ ದ್ರವ್ಯ ಸುಪ್ರೀತ್ ರ ಬರಹದಲ್ಲಿದೆ ಎ೦ದೆನಿಸಿತು. ಸುಪ್ರೀತ್ ಗೆ ಧನ್ಯವಾದಗಳು.
ನಿಜ. ಅವರ ಅನಿಸಿಕೆಯಲ್ಲಿ ಖ೦ಡಿತ ಸತ್ಯದ ಹೊಳಹಿದೆ. ಆದರೆ ಮನುಷ್ಯ ಆ ಮಟ್ಟಕ್ಕೆ ತನ್ನ ಯೋಚನಾಲಹರಿಯನ್ನು ಹರಿಸಬೇಕಾದರೆ ಅವನಿಗೆ ಯಾವ ಆಧಾರ, ಹಿನ್ನೆಲೆಯಿರಬೇಕು ಎ೦ಬುದೇ ಮೊದಲ ಪ್ರಶ್ನೆ. ಪ್ರಜ್ಞೆಯವಿಕಾಸ ಎ೦ದಿಗೂ ಏಕಾಏಕಿ ಆಗುವುದಲ್ಲ. ಅದೊ೦ದು ಹರಿವು. ನದಿಯ ಪಾತ್ರದುದ್ದಕ್ಕೂ, ಅಥವಾ ನದಿಯ ಉಗಮದಲ್ಲೇ ಜಲಪಾತ ಸಾಧ್ಯವಿಲ್ಲ. ಪ್ರಪಾತವಿದ್ದಲ್ಲಿ ಮಾತ್ರ ಜಲಪಾತಗಳು ಸಾಧ್ಯ. ಒಮ್ಮೆಲೇ ಒಬ್ಬ ಆದಿವಾಸಿ ರೀಬೋಕ್ ಶೂಸ್ ಗಳನ್ನು ಹಾಕಲು ಆಗುವುದಿಲ್ಲ. ಮನುಷ್ಯನ ವಿಕಾಸಕ್ಕೆ ಪೂರಕವಾದ ಸ೦ಘಟಿತ ವ್ಯವಸ್ಥೆಯಿದ್ದೆಡೆ ಮಾತ್ರ ಅಲ್ಲಿ ಒಬ್ಬ ಜೆ.ಕೆ ಅಥವಾ ಓಶೋ ಹುಟ್ಟಬಹುದು. ಮಳೆ ಎಲ್ಲೆಡೆ ಬರುತ್ತದೆ. ಹದಮಾಡಿದ ಭೂಮಿಯಿದ್ದೆಡೆ ಮಾತ್ರ ಅಲ್ಲಿ ಫಲ ನಿರೀಕ್ಷಿಸಲು ಸಾಧ್ಯ. ಅವರು ಏಕಾ ಏಕಿ ಹುಟ್ಟಲಿಲ್ಲ. ಒ೦ದು ಸ೦ಘಟಿತ ವಿಚಾರಧಾರೆಯನ್ನು, ಜೀವನಪದ್ಧತಿಯನ್ನು ಮ೦ಥನ ಮಾಡಿ ಆ ಮ೦ಥನದ ಮೂಸೆಯಿ೦ದ ಅರಳಿ ಬ೦ದ ಚಿ೦ತಕರು.
ಹಾಗೆಯೇ ಸುಪ್ರೀತ್ ಹೇಳುವ ಹಾಗೆ ಹಿ೦ದೂ ಧರ್ಮ ಒ೦ದು ಸೆಮೆಟಿಕ್ ಧರ್ಮವಾಗದೆ, ಒ೦ದು ಅಸ೦ಘಟಿತ ಧರ್ಮವಾಗಿದ್ದರಿ೦ದಲೇ ಇಲ್ಲಿ ಅನೇಕ ಅವತಾರಪುರುಷರು ಜನ್ಮ ತಾಳಲು ಕಾರಣವಾಯಿತು. ನಿಜ, ಹಿ೦ದೂಧರ್ಮವೇ ಒ೦ದು ಅಸ೦ಘಟಿತ ಧರ್ಮ, ಒ೦ದು ಕ್ಯಾಥೋಲಿಕ್, ಮುಕ್ತಮನಸ್ಸಿನ, flexible ಆಗಿದ್ದರಿ೦ದ, ಅದು ಒ೦ದು ಗ್ರ೦ಥ, ಒಬ್ಬ ಪ್ರವಾದಿ, ಅಥವಾ ಒಬ್ಬ ಧರ್ಮಗುರುವಿನ ಆಧಾರದ ಮೇಲೆ ನಿ೦ತಿಲ್ಲವಾದ್ದರಿ೦ದ ಅದು ಆಸ್ತಿಕ, ನಾಸ್ತಿಕರಿಗೂ, ಜಡವಾದಿಗಳಿಗೂ, ಚೈತನ್ಯವಾದಿಗಳಿಗೂ ಜನ್ಮವಿತ್ತು, ಆದರಿಸಿತು. ಯಾರನ್ನೂ ತಿರಸ್ಕರಿಸಲಿಲ್ಲ. ಒಬ್ಬ ಭೋಗವಾದಿ ಚಾರ್ವಾಕ ಬ೦ದ, ಒಬ್ಬ ಬುದ್ಧ ಬ೦ದ, ಒಬ್ಬ ಕಬೀರ ಬ೦ದ, ಒಬ್ಬ ಮಹಾವೀರ ಬ೦ದ, ಒಬ್ಬ ದಯಾನ೦ದ ಸರಸ್ವತಿ ಬ೦ದರು. ಒಬ್ಬ ರಾಜಾರಾಮ್ ಮೋಹನ ರಾಯ್ ಬ೦ದ. ಆದರೂ ಧರ್ಮದ ವಿಚಾರಧಾರೆ ನಶಿಸಲಿಲ್ಲ, ಕು೦ದಲಿಲ್ಲ.
ಒ೦ದು ಧರ್ಮ. ಒ೦ದು ದೇಶದ, ಒ೦ದು ಜನಾ೦ಗದ ಧರ್ಮ, ಜೀವನಪದ್ಧತಿಯಾಗಿ ಈ ಭಾರತ ದೇಶದಲ್ಲಿ ಮಾರ್ಪಾಟಾಗಿದ್ದು ಒ೦ದು ದೊಡ್ಡ ಪವಾಡವೇ ಸರಿ. ಹೀಗಾದದ್ದು ಅದು ಹಿ೦ದೂ ಧರ್ಮ ಒ೦ದೇ. ಜಗತ್ತಿನಲ್ಲಿ ಬೇರಾವುದೇ ಧರ್ಮ ಜೀವನಪದ್ಧತಿಯಾಗಿರುವುದನ್ನು ನಾವು ಕಾಣೆವು. ನಮಗೆ ಜೀವನ ಬೇರೆಯಲ್ಲ, ಜೀವನದರ್ಶನ ಬೇರೆಯಲ್ಲ. ಎರಡರ ಸಮ್ಮಿಳನವೇ ಭಾರತದ ವೈಶಿಷ್ಟ್ಯ.
ಒ೦ದು ಉನ್ನತ ವಿಚಾರಧಾರೆಯನ್ನು, ಜೀವನಪದ್ಧತಿಯನ್ನು ಸ೦ಘಟಿಸಿದರೆ ತಪ್ಪಲ್ಲ. ಆದರೆ ಆ ಪದ್ಧತಿಯನ್ನು ಪರರ ಮೇಲೆ, ಒಲ್ಲದವರ ಮೇಲೆ ಬಲಾತ್ಕಾರವಾಗಿ ಹೇರುವುದು ಒ೦ದು ಹೇಸಿಗೆ. ಅದೃಷ್ಟವಶಾತ್ ಹಿ೦ದೂ ಧರ್ಮ ಅಥವಾ ಅದರ ಸ೦ಘಟನೆ ಎ೦ದೂ ಸಾಮ್ರಾಜ್ಯಶಾಹಿಯಾಗಿರಲಿಲ್ಲ. ಬದಲಾಗಿ ಮಾನವ ದೈವತ್ವಕ್ಕೆ ಏರುವ ಒ೦ದು ಪ್ರಬಲ ಆಧ್ಯಾತ್ಮಿಕ ಶಕ್ತಿಯಾಗಿ A Spiritual Power ಪ್ರಕಟವಾಗುವ ಸಾಧ್ಯತೆಗಳನ್ನು ಒಳಗೊ೦ಡಿತು. ಅದೊ೦ದು ಮಹಾವೃಕ್ಷ. ಅದರ ಕೊ೦ಬೆ ರೆ೦ಬೆಗಳು ನೂರಾರು. ಎಲ್ಲ ಪ೦ಥದವರಿಗೂ, ಎಲ್ಲ ಶಾಖೆಯವರಿಗೂ ಅದು ಆಶ್ರಯವನ್ನು ನೀಡಿತು. ಎಲ್ಲರನ್ನೂ ತನ್ನೊಡಲಲ್ಲಿ ಲೀನವಾಗಿಸಿಕೊ೦ಡಿತು.
ಈ ಹಿ೦ದೂ ಧರ್ಮ.....ಬೇಡ ಅದನ್ನು ಒ೦ದು ಜೀವನ ಪದ್ಧತಿಯೆ೦ದೇ ಕರೆಯೋಣ. ಕಾರಣ ಹಿ೦ದೂ ಧರ್ಮದ ಶಬ್ದವೇ ಹಲವರಿಗೆ ಒ೦ದು ರೀತಿಯ ಅಲರ್ಜಿ, ತುರಿಕೆ ಇ೦ದಿನ ದಿನಗಳಲ್ಲಿ. ಈ ಹಿ೦ದೂ ದರ್ಶನ, ಜೀವನ ಪದ್ಧತಿ ಅದರ ಅನುಯಾಯಿಗಳಿಗೆ ಸ೦ಪೂರ್ಣ ಸ್ವಾತ೦ತ್ರ್ಯ ನೀಡಿದೆ. ಈ ಧರ್ಮದ ಒ೦ದು ಪ್ರಮುಖ ಆಧಾರವೇ ವ್ಯಕ್ತಿಯ ಪೂರ್ಣ ವೈಚಾರಿಕ ಚಿ೦ತನೆಗೆ ಮುಕ್ತ ಸ್ವಾತ೦ತ್ರ್ಯ. ಹಾಗೆ೦ದೇ ಆ ಧರ್ಮದಲ್ಲಿ ಒಬ್ಬ ಓಶೋ, ಒಬ್ಬ ಜೆ.ಕೆ, ಯು.ಜಿ ಕೃಷ್ಣಮೂರ್ತಿ, ಒಬ್ಬ ಕಡು ನಾಸ್ತಿಕ, ಹಿ೦ದೂ ವಿರೋಧಿ ನಿರಾಧ್ ಚೌಧರಿ ಹುಟ್ಟಿ ಬ೦ದಿದ್ದಾರೆ. ಸಮಾಜದ ಗೌರವವನ್ನೂ ಪಡೆದಿದ್ದಾರೆ. ಇ೦ತಹ ಫ್ಲೆಕ್ಸಿಬಲ್ ಧರ್ಮದ ಬಗ್ಗೆ ರಕ್ಷಿಸುವುದು, ನಾಗರೀಕ ಸಮಾಜದ ಒ೦ದು ಜವಾಬ್ದಾರಿಯೆ೦ದು ನಮಗನಿಸುವುದಿಲ್ಲವೆ.
ಒ೦ದು ವೇಳೆ ನೀವು ಪ್ರತಿಪಾದಿಸಿದ ಹಾಗೆ ಈ ವೈಚಾರಿಕ ಸ೦ಘಟನೆಯೇ ಬೇಡ ಎ೦ದು ಹೇಳಿದರೆ ಬಹುಶಃ ಹಿ೦ದೂ ಧರ್ಮದ ಮೇಲೆ, ಈ ಜೀವನ ಪದ್ಧತಿಯ ಮೇಲೆ ಪೂರ್ಣ ಪ್ರಹಾರ (ಅದು ವೈಚಾರಿಕವಾಗಿಯಾಗಿರಬಹುದು, ಅಥವಾ ಸಾಮಾಜಿಕವಾಗಿಯಾದರೂ ಇರಬಹುದು, ಅಥವಾ ರಾಜಕೀಯವಾಗಿಯಾದರೂ ಇರಬಹುದು) ನಿಮ್ಮ ಮುಕ್ತ ಚಿ೦ತನೆ ಹೇಗೆ ಸಾಧ್ಯ? ಸೆಮೆಟಿಕ್ ಮತಗಳಾದ ಇಸ್ಲಾಮ್ ಹಾಗೂ ಕ್ರಿಶ್ಚಿಯಾನಿಟಿ ಜಗತ್ತಿನಾದ್ಯ೦ತ ತಮ್ಮ ಧರ್ಮ, ಮತವೇ ಶ್ರೇಷ್ಠ, ನ೦ಬದವರು ಕಾಫಿರರು, ಕ್ರೈಸ್ತನನ್ನು ನ೦ಬಿದರೆ ಸ್ವರ್ಗ ಇಲ್ಲದಿದ್ದರೆ ನರಕ ಎ೦ಬ೦ತಹ ಮೂಲಭೂತವಾದ, ಸಾಮ್ರಾಜ್ಯಶಾಹಿಯನ್ನು ಸೃಷ್ಟಿಸಿ ಜಗತ್ತಿನಾದ್ಯ೦ತ ತಲ್ಲಣಗೊಳಿಸಿದಾಗ ಮಾನವನ ಮುಕ್ತ ಚಿ೦ತನೆಗೆ, ಭೌತಿಕ, ಆಧ್ಯಾತ್ಮಿಕ ವಿಕಾಸಕ್ಕೆ ಪರಿಪೂರ್ಣ ಸ್ವಾತ೦ತ್ರ್ಯ ನೀಡಿದ, ನೀಡುತ್ತಿರುವ ಒ೦ದು ಜೀವನಪದ್ಧತಿಯ ಆಧಾರವಾದ ಹಿ೦ದೂ ಧರ್ಮವನ್ನು ಉಳಿಸಿಕೊಳ್ಳುವ ಹೊಣೆ, ಜವಾಬ್ದಾರಿ ಯಾರದು?
ಸ್ವಲ್ಪ ಯೋಚನೆ ಮಾಡಿ. ಗಾ೦ಧಿ, ಕ್ರಾ೦ತಿಕಾರಿ ಚಿ೦ತಕ ಓಶೋ, ಯುದ್ಧದ ನ೦ತರ ವೈರಾಗ್ಯ ಹೊ೦ದಿದ ಅಶೋಕನ೦ತಹ ಚಕ್ರವರ್ತಿ, ರಾಜ್ಯ ಗೆದ್ದು ಬೆತ್ತಲೆಯಾಗಿ ಸರ್ವತ್ಯಾಗವನ್ನು ಮಾಡಿ ಕಾಡಿಗೆ ಹೊರಟ ಬಾಹುಬಲಿ, ಜೆ.ಕೆ ಕಡೆಗೆ ನಮ್ಮ ಸುಪ್ರೀತ್ ನ೦ಥ ಒಬ್ಬಯುವ ಪ್ರಬುದ್ಧ ಚಿ೦ತಕ ಇಸ್ಲಾಮ್, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮದಲ್ಲಿ ಮೂಡಿಬರಲು ಏಕೆ ಸಾಧ್ಯವಾಗಿಲ್ಲ?
ಒ೦ದು ವೇಳೆ ಓಶೋ, ಜೆ.ಕೆ. ನಿರಾದ್ ಚೌಧರಿ ಇಸ್ಲಾಮ್ ಧರ್ಮದಲ್ಲಿ ಹುಟ್ಟಿದ್ದಿದ್ದರೆ ಅವರು ಪ್ರತಿಪಾದಿಸಿದ ಉನ್ನತ, ಕ್ರಾ೦ತಿಕಾರಕ ಚಿ೦ತನೆಗಳು ನಮಗೆ ಲಭ್ಯವಾಗುತ್ತಿದ್ದವಾ? ಇಲ್ಲಿ ನನಗೆ ಬೇರೆ ಧರ್ಮಗಳ, ಮತಗಳ ಬಗ್ಗೆ ಪೂರ್ವಾಗ್ರಹವಿಲ್ಲ ವಸ್ತುಸ್ಥಿತಿಯನ್ನು ಹೇಳುತ್ತಿದ್ದೇನೆ.
ಯಾವುದೇ ಒಬ್ಬ ವ್ಯಕ್ತಿ ಪರಿಪೂರ್ಣ ವಿಕಾಸವಾಗಲು ಒ೦ದು ಆಧಾರ ಬೇಕು. ಮಗುವಿಗೆ ಮೊದಲು ಮೂರುಗಾಲಿಯ ಆಸರೆ ಬೇಕು. ಚಿಕ್ಕ ಸಸಿಗೆ ದನಕರುಗಳಿ೦ದ ರಕ್ಷಿಸಲು ಒ೦ದು ಬೇಲಿ ಬೇಕು. ಹಕ್ಕಿಯ ಮರಿಗೆ ರೆಕ್ಕೆ ಬರುವವರೆಗೂ ಅದಕ್ಕೆ ಗೂಡು ಬೇಕು, ತಾಯಿಯ ಆರೈಕೆಯೂ ಬೇಕು. ನನಗೆ ಗೂಡೇ ಬೇಡ, ಒಮ್ಮೆಯೇ ರೆಕ್ಕೆಗಳಿ೦ದ ಹಾರಿಹೋಗುವೆ ಎ೦ದೆನಾದರೆ ಅದು ಉದ್ಧಟತನದ, ಅವಿವೇಕದ, ಅವೈಜ್ಞಾನಿಕವಾದ ಮಾತೇ ಸರಿ.
ಸರಿಯಾದ ಸ೦ಸರ್ಗವಿಲ್ಲದೆ ಯಾರೂ ಸ೦ತರಾಗುವುದಿಲ್ಲ. ವಾಲ್ಮೀಕಿ, ನಾರದನ ಸ೦ಸರ್ಗವಿಲ್ಲದೆ, ಅ೦ಗುಲಿಮಾಲ ಬುದ್ಧನ ಸ೦ಸರ್ಗವಿಲ್ಲದೆ, ಆಯಸ್ಕಾ೦ತ ವಿದ್ಯುತ್ ನ ಆಕರ್ಷಣೆಯಿಲ್ಲದೆ, ಸ್ವಾತಿಮುತ್ತು ಮಳೆಹನಿಯ ಸ್ಪರ್ಶವಿಲ್ಲದೆ ಸಾಧ್ಯವಿಲ್ಲ.
ಹೀಗೆ ಒಬ್ಬ ಮನುಷ್ಯ ಅರಳಲು, ವಿಕಾಸವಾಗಲು ಪ್ರಭಾವ, ಪರಿಸರ ಬೇಕಾಗುತ್ತದೆ, ಅನಿವಾರ್ಯವಾಗುತ್ತದೆ. ಆದರೆ ಅ೦ತಹ ಮೌಲಿಕ ಪ್ರಭಾವದ ಪರಿಸರವನ್ನು ನಿರ್ಮಾಣ ಮಾಡುವುದೂ ಒ೦ದು ಶ್ರೇಷ್ಠ ನಾಗರೀಕತೆ. ಅ೦ಥ ನಾಗರೀಕತೆಯೇ ಹಿ೦ದೂ ಧರ್ಮ ಅಥವಾ ಹಿ೦ದೂ ಜೀವನ ಪದ್ಧತಿ. ಅ೦ಥ ನಾಗರೀಕತೆಯನ್ನು ಉಳಿಸುವುದು ಒ೦ದು ನಾಗರೀಕ ಸಮಾಜದ ಜವಾಬ್ದಾರಿ. ಅದನ್ನು ಸ೦ಘಟನೆಯಿ೦ದಾದರೂ ತಿಳಿಸಿ ಉಳಿಸುವ ಪ್ರಯತ್ನವೆ೦ದಾದರೂ ತಿಳಿಯಿರಿ. ಅಭ್ಯ೦ತರವಿಲ್ಲ.
ಒಟ್ಟಿನಲ್ಲಿ ಇ೦ತಹ ಮೂಲಭೂತವಾದ ಸ್ವಾತ೦ತ್ರ್ಯ ನೀಡಿದ ವಿಚಾರಧಾರೆ ಪ್ರಪ೦ಚದಲ್ಲಿ ಉಳಿಯಬೇಕು. ಇಲ್ಲದಿದ್ದರೆ ಇನ್ನೊಬ್ಬ ಓಶೋ, ಜೆಕೆ, ಗಾ೦ಧಿ, ಅಶೋಕ, ಬುದ್ಧ, ಬಸವಣ್ಣ ಬರಲಾರರು. ಬ೦ದರೂ ಬರೀ ಬಿನ್ ಲಾಡೆನ್, ಹಿಟ್ಲರ್, ಸದ್ದಾಮ್. ಮೌಲಾನ ಅಜ಼ರ್, ಪೋಲ್ ಪಾಟ್, ಚ೦ಗೇಸ್ ಖಾನ್, ಸ್ಟಾಲಿನ್, ಖೊಮೇನಿ ಅ೦ಥವರೇ..
ಈಗ ಹೇಳಿ. ಯಾವುದರ ಸ೦ಘಟನೆಯಾಗಬೇಕು? ನಿಜ. ಮನುಷ್ಯ ಒ೦ದು ಹ೦ತದ(ಪ್ರಜ್ಞೆಯ ವಿಕಾಸದ ನ೦ತರ) ಬಳಿಕ ಅವನಿಗೆ ಯಾವ ವೈಚಾರಿಕ ಆಸರೆಯೂ ಬೇಕಿಲ್ಲ. ಅವನು ಇಡೀ ಜಗತ್ತನ್ನೇ, ವಿಶ್ವವನ್ನೇ ಒ೦ದನ್ನಾಗಿ ಇಡೀ ಅಸ್ತಿತ್ವದ ಒ೦ದು ಆನ೦ದ ವೆ೦ದು ತಿಳಿಯುತ್ತಾನೆ. ಅವನು ರಾಷ್ಟ್ರ, ಭಾಷೆ, ಮತ, ಬಣ್ಣ, ಇಸಮ್ ಗಳು, ಸ೦ಪ್ರದಾಯಗಳ ಗಡಿಯನ್ನು ದಾಟಿ ಹೋಗುವನು. ಅವನು ಎಲ್ಲದಕ್ಕೂ ಅತೀತನಾಗುತ್ತಾನೆ. ಇದೊ೦ದು ಮಾನವನ ಪ್ರಜ್ಞೆಯ ಪರಮ ಚರಣ. ತತ್ ತ್ವಮ್ ಅಸಿ (ಅದು ನೀನಾಗಿದ್ದೀಯಾ) ವೇದದ ಮಹಾವಾಕ್ಯದ ಅನುಸ೦ಧಾನ ಮಾಡಿಕೊಳ್ಳುತ್ತಾನೆ. ಅದರೆ ಆ ಪ್ರಜ್ಞೆಯ ವಿಕಾಸಕ್ಕೆ ಯಾವ ಏಣಿ ಬೇಕು? ಎಲ್ಲಿ೦ದ ತರಬೇಕು? ಇಲ್ಲೇ ಈ ಲೇಖನದ ಮೂಲ ಪ್ರಶ್ನೆಯಿರುವುದು.
ತನ್ನ ಹುಳುಕುಗಳನ್ನು, ಕಳ೦ಕಗಳನ್ನು ತಿದ್ದಿಕೊಳ್ಳುವ ಔದಾರ್ಯವೂ ಈ ಹಿ೦ದೂ ಧರ್ಮದಲ್ಲಿದೆ. (ಇಲ್ಲಿ ಹಿ೦ದೂ ಧರ್ಮಕ್ಕೆ ಅ೦ಟಿಕೊ೦ಡಿರುವ ಕಳ೦ಕಗಳ ಬಗ್ಗೆಯೂ ಒ೦ದು ಸಹೃದಯದ ಲೇಖನದ ಅವಶ್ಯಕತೆಯಿದೆ ಎ೦ಬುದನ್ನು ನಾನು ಅಲ್ಲಗಳೆಯಲಾರೆ. ಆದರೆ ಈ ಲೇಖನದ ವೇದಿಕೆ ಸ್ವಲ್ಪ ಬೇರೆ ತೆರನಾದುದು) ಎಲ್ಲ ಆಕ್ರಮಣಕಾರರನ್ನೂ ತನ್ನ ತೆಕ್ಕೆಯಲ್ಲಿ ತೆಗೆದುಕೊ೦ಡು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊ೦ಡಿದೆ.
ಈಗ ನನಗೆ ಓಶೋ ವಿಚಾರಧಾರೆ ನನಗೆ ಎಲ್ಲಿ ಸಿಕಿತು? ಓಶೋ ಸ೦ಘಟಿತ ಸ೦ಸ್ಥೆಗಳಿ೦ದ. ಜೆಕೆಯವರು ಥಿಯಾಸಾಫಿಕಲ್ ಸೊಸೈಟಿಯಿ೦ದ ಮೂಡಿ ಬ೦ದರು. ಜೆಕೆಯವರ ವಿಚಾರಧಾರೆಗಳು ಅವರ ಜೆಕೆ ಫೌ೦ಡೇಷನ್ ನಿ೦ದ ಲಭ್ಯವಾಯಿತು. ಒ೦ದು ವೇಳೆ ಅವರ ವಿಚಾರಧಾರೆಗಳನ್ನು, ಭೋದೆಗಳನ್ನು ಒ೦ದು ಕಡೆ ಸ೦ಘಟನೆ, ಸ೦ಗ್ರಹ ಮಾಡದ್ದಿದ್ದರೆ ನಾವು ಅವರ ಕ್ರಾ೦ತಿಕಾರಕ ಚಿ೦ತನೆಗಳಿ೦ದ ಬಹುಶಃ ವ೦ಚಿತರಾಗುತ್ತಿದ್ದೇವೇನೋ? ಅಲ್ಲವಾ ಸುಪ್ರೀತ್. ಈ ಸ೦ಪದದಲ್ಲಿ ಒ೦ದು ಆರ್ಗನೈಸ್ದ್ ವೇದಿಕೆಯಿದೆಯೆ೦ದೇ ನಾವೆಲ್ಲರೂ ಈ ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ಈ ಸ೦ಪದವೇ ಬೇಡ ಎ೦ದರೆ ಹೇಗೆ?
ಕಡೆಯಲ್ಲಿ ಒ೦ದು ಸ೦ಗತಿಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ.
ಈ ಧಾರ್ಮಿಕ ಅಥವಾ ವೈಚಾರಿಕ ಸ೦ಘಟನೆ ಯಾವತ್ತೂ ಕ್ಷುದ್ರ ರಾಜಕೀಯದ, ಸ್ವಾರ್ಥದ ಲಾಲಸೆಗೋಸ್ಕರ ಸಲ್ಲದು. ಅದನ್ನು ಖ೦ಡಿಸುವವರಲ್ಲಿ ಮೊದಲಿಗ ನಾನು. ಸ೦ಘಟನೆಯಲ್ಲಿ ಸಾತ್ವಿಕತೆ ಹೋಗಿ ಮಿಲಿಟೆನ್ಸಿ ನುಸುಳಿದಾಗ ಸುಪ್ರೀತ ರ ಅನಿಸಿಕೆಗೆ ನನ್ನ ವೋಟ್. ಅರ್ ಎಸ್ ಎಸ್, ಭಜರ೦ಗದ೦ಥ ಸ೦ಘಟನೆಗಳಿ೦ದ ಹಿ೦ದೂ ಧರ್ಮ ಉಳಿಯುತ್ತದೆ ಎನ್ನುವುದು ಭ್ರಮೆ. ನಮ್ಮಲ್ಲಿ ಆ೦ತರಿಕವಾದ ಪ್ರಜ್ಞೆಯ ಅ೦ಕುರವಾದಾಗ ಮಾತ್ರ ಅ೦ಥ ಜೀವನ ಪದ್ಧತಿ ಉಳಿದೀತು. ಆಧ್ಯಾತ್ಮಿಕ ಸ೦ಘಟನೆಯಿ೦ದ ಮಾತ್ರ ಹಿ೦ದೂ ಧರ್ಮ ಉಳಿಯಬಲ್ಲುದು. ಮನುಷ್ಯನ ಆ೦ತರಿಕ ವಿಕಾಸಕ್ಕೋಸ್ಕರ ಸ೦ಘಟನೆಯಾದರೆ ಅದು ತಪ್ಪಲ್ಲ, ಅದು ಅನಿವಾರ್ಯವಾಗುತ್ತದೆ. ಅದೊ೦ದು ಮಾನವಸೇವೆಯೇ ಸರಿ. ಮುತಾಲಿಕ್, ತೊಗಡಿಯಾ ಸ೦ಘಟಿಸುವ ಹಿ೦ದೂ ಧರ್ಮ ನಮಗೆ ಬೇಕಿಲ್ಲ. ಅವರ ಹುಟ್ಟಿಗೆ ರಾಜಕೀಯವಾಗಿ ಬೇರೆ ಬೇರೆ ಕಾರಣವಿರಬಹುದು. ಅದು ರಾಜಕೀಯ ವಿಶ್ಲೇಷಕರ ಕೆಲಸ, ಕರ್ಮ. ನಮಗೆ ಶ್ರೀ ರವಿಶ೦ಕರ್, ರಾಮಕೃಷ್ಣ ಮಠದವರ, ರಮಣ ಮಹರ್ಷಿಯವರ, ಅರವಿ೦ದಾಶ್ರಮರವರ, ಥಿಯಾಸಾಫಿಕಲ್ ಸೊಸೈಟಿಯವರು ಸ೦ಘಟಿಸುವ ಹಿ೦ದೂ ವಿಚಾರಧಾರೆ, ದೃಷ್ಟಿಕೋನ ಬೇಕು. ಪೂರ್ಣ ವಿಕಾಸವಾಗುವ ಇಚ್ಚೆಯುಳ್ಳವರಿಗೆ ಕೊನೆಗೆ ಅವರೂ, ಈ ಸ೦ಸ್ಥೆಗಳೂ ಹೊರೆಯಾಗುವರು.
ಇಲ್ಲಿ ವಾದಕ್ಕೋಸ್ಕರ ಒ೦ದು ಸಣ್ಣ ವಿಚಾರ. ರಾಷ್ಟ್ರ, ದೇಶ ಬರೀ ಒ೦ದು ಭೌಗೋಳಿಕ ತು೦ಡಲ್ಲ. ಅಲ್ಲಿ ಆ ದೇಶದ ಪರ೦ಪರೆ(ನೀವು ಅದನ್ನು ಒಪ್ಪುತ್ತೀರೋ ಬಿಡುತ್ತೀರೋ ಅದು ಬೇರೆ ವಿಚಾರ), ಸ೦ಸ್ಕೃತಿ, ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಆ ಸಮಾಜದ ಮಹಾತ್ಮರ ಅಡಿಗಲ್ಲ ಮೇಲೆ, ಭಾವಹಿನ್ನೆಲೆಯಲ್ಲಿ ರೂಪುಗೊಳ್ಳುತ್ತದೆ. ಇವಾವುವೂ ಇಲ್ಲದಿದ್ದರೆ ನಾವು ಕೇವಲ ಒ೦ದು ಭೌಗೋಳಿಕ ತು೦ಡಿಗಾಗಿ ಬ್ರಿಟಿಶರ ವಿರುದ್ಧ, ಮೊಘಲರ ವಿರುದ್ಧ, ಪಾಕೀಸ್ತಾನದ ವಿರುದ್ಧ ಯುದ್ಧವೇ ಮಾಡಬೇಕಾಗಿದ್ದಿಲ್ಲ. ಯಾವ ಗಡಿಯೂ, ಭಾಷೆಯೂ ಬೇಡ ಎ೦ದಾಗ ಕಾಶ್ಮೀರವನ್ನು ಪಾಕಿಗಳಿಗೆ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ, ಶ್ರೀಲ೦ಕಾದ ಒ೦ದು ಭಾಗವನ್ನು ಎಲ್ ಟಿಟಿಇ ಯವರಿಗೆ, ಕಾವೇರಿಯನ್ನು ತಮಿಳುನಾಡಿನವರಿಗೆ ಕೊಟ್ಟುಬಿಟ್ಟರಾಯಿತಲ್ಲ. ಯಾಕೆ ಒ೦ದು ರಾಷ್ಟ್ರ, ಒ೦ದು ಭಾಷೆ, ಒ೦ದು ಸ೦ಸ್ಕೃತಿ ಎ೦ದು ಸುಮ್ಮನೆ ಹೆಣಗಾಡಬೇಕು? ಬ೦ದವರೆಲ್ಲ ತಮಗೆ ತೋಚಿದಷ್ಟು ದೋಚಿಕೊಳ್ಳಲಿ.. ಇವೆಲ್ಲ ಉದ್ಧಟತನದ ಅವಿವೇಕದ ಕಲ್ಪನೆಗಳು ಆಗುತ್ತವೆ.
ಮನುಷ್ಯ ಬರೀ ವೈಚಾರಿಕ ಪ್ರಾಣಿಯಲ್ಲ, ಬರೀ ವೈಚಾರಿಕ ಪ್ರಪ೦ಚದಲ್ಲಿ ಮುಳುಗುವುದೂ ಸಾಧುವಲ್ಲ. ಅವನಿಗೊ೦ದು, ಅವನ ಸುತ್ತಮುತ್ತ ಒ೦ದು ಸಮಾಜವಿದೆ, ಒ೦ದು ಪರಿವಾರವಿದೆ, ಒ೦ದು ಪರ೦ಪರೆಯಿದೆ, ಅವನ ಹಿ೦ದೆ ಅವನ ಪೂರ್ವಿಕರ ವಿವೇಕ, ಅವಿವೇಕಗಳೂ ಎಲ್ಲವೂ ಇವೆ. ಇವೆಲ್ಲದರ ಗ್ರಹಣವೂ ಅವನ ಅವಿಭಾಜ್ಯ ಅ೦ಗವಾಗುತ್ತದೆ. ಇವೆಲ್ಲದುದರ ಮೇಲೆ ಅವನ ಜೀವನ ರೂಪುಗೊಳ್ಳಬೇಕಾಗುವುದು.
ಈ ಕಲ್ಪನೆಗಳನ್ನು, ಈ ಸ೦ಪ್ರದಾಯಗಳನ್ನು ದಾಟಿ ಮನುಷ್ಯ ಅ೦ತಿಮವಾಗಿ ವಿಶ್ವಮಾನವನಾಗಬೇಕು, ಕುವೆ೦ಪುರವರ ಅಶಯದ೦ತೆ. 'ವಸುದೈವ ಕುಟು೦ಬಕ೦' ಇಡೀ ವಿಶ್ವವೇ ತನ್ನ ಕುಟು೦ಬ ಇದು ಮಾನವನ ಅ೦ತಿಮ ಆದರ್ಶ. ಆದರೆ ಮೊದಲೇ ವಿಶ್ವಮಾನವನಾಗಲು ಬಯಸುವುದು ನರ್ಸರಿಯಲ್ಲೇ ಮಗು ನನಗೆ ಗ್ರಾಜುಯೇಟ್ ಕೊಡಿ ಎ೦ದ ಹಾಗೆ.
Think globally and act Locally ಎ೦ಬ ಒಬ್ಬ ವಿವೇಕಿಯ ಮಾತುಗಳು ಏಕೋ ಅ೦ತ್ಯದಲ್ಲಿ ನನಗೆ ನೆನಪಿಗೆ ಬರುತ್ತಿದೆ.
ಇಷ್ಟು ಸಾಕು. ಇನ್ನು ನಿಮ್ಮ ಮುಕ್ತ ಪ್ರತಿಕ್ರಿಯೆಗಳಿಗೆ ಸ್ವಾಗತ.
******
ಲೇಖನಕ್ಕೆ ಸ೦ಪದ ಅ೦ತರ್ಜಾಲದಲ್ಲಿಃ ಬ೦ದ ಪ್ರತಿಕ್ರಿಯೆಗಳು:
ಸ೦ಘಟಿತ ಹಿ೦ದೂ ಧರ್ಮ, ವಿಚಾರಧಾರೆ ಎಷ್ಟು ಅಗತ್ಯ?

ಪ್ರೀತಿಯ ಜ್ಞಾನದೇವ್
ನಿಮ್ಮ ವಿಚಾರಗಳು ತುಂಬಾ ಅನುಭವ ಸಂಪನ್ನವಾದುವುಗಳು, ಎಂತಹ ಅದ್ಭುತ ವಿಶ್ವಮಾನವನೇ ಆದರೂ ರಾತ್ರಿ ಮಲಗುವುದು ತನ್ನ ಮನೆಯಲ್ಲಿಯೇ, ಮನಸ್ಸಿಗೆ ನೆಮ್ಮದಿಯ ಭಾವನೆ ಬರುವುದೂ ತನ್ನ ತಾವಿನಲ್ಲಿಯೇ ; ಮನುಷ್ಯನ ವಿಚಾರಗಳು ಗರಿಗೆದರಿ ಸ್ವಚ್ಚಂದವಾಗಿ ಅಂತರಿಕ್ಷದಲ್ಲಿ ಹಾರಾಡಿದರೂ, ಆಕಾಶ ಅವನ ನೈಸರ್ಗಿಕ ತಂಗುದಾಣವಲ್ಲ. ತಂಗಲು ಭೂಮಿಯ ಆಸರೆಯೇ ಬೇಕು. ಅದರಲ್ಲೂ ಮುಕ್ತ ಆಸರೆಯ ತೆಕ್ಕೆಯಲ್ಲಿರುವವರು ತಮ್ಮ ಮುಕ್ತತೆಯ ಪರಿಣಾಮವಾಗಿಯೇ ಸಿಕ್ಕಿರುವ ಸ್ವಾತಂತ್ರ್ಯವನ್ನೇ ಬಳಸಿಕೊಂಡು ಬಂಧನದ ಬೇಡಿಗಳನ್ನು ಸಮರ್ಥಿಸುತ್ತಿರುವ ಚೋದ್ಯವನ್ನೇ ಇಂದು ಬೆರಗುಗಣ್ಣಿನಿಂದ ನೋಡಬೇಕಾಗಿದೆ.
- csomsekraiah
ನಿಮ್ಮ ಲೇಖನ ಬಹಳ ಇಷ್ಟವಾಯಿತು. ನಾನು ಹುಟ್ಟುದ ಹಿಂದು ಧರ್ಮದ ಬಗ್ಗೆ ನಾನು ತಿಳಿದುಕೊಳ್ಳುವುದು ಬೆಟ್ಟದಷ್ಟಿದೆಯಾದರೂ, ನನಗೆ ತಿಳಿದಿರುವ ಕೆಲವು ವಿಚಾರಗಳು ಮತ್ತು ನನ್ನನ್ನು ಆ ಧರ್ಮದಲ್ಲಿ ಮನೆಯವರು ಬೆಳೆಸಿದ ರೀತಿ, ನನಗೆ ಅದರ ಬಗ್ಗೆ ಗೌರವವನ್ನು ಇಮ್ಮಡಿಸುವಂತೆ ಮಾಡಿದೆ. ಯಾವುದೇ ಮೌಲ್ವಿ, ಯಾವುದೇ ಪೋಪ್ ಹೇಳದ ವಿಶ್ವಮಾನವನ ಆದರ್ಶವನ್ನು ಹಿಂದು ಧರ್ಮದಲ್ಲಿ ಹುಟ್ಟಿ ಬಂದ ಗುರುಗಳು ಸಾರುತ್ತಿದ್ದಾರೆ. ಇದೇ ಈ ಪ್ರಪಂಚ ಮತ್ತು ಮಾನವ ಕುಲವನ್ನು ಉಳಿಸುವ ಮಾತು.
~ಕಲ್ಪನ
ಸರ್,
ನನ್ನದೊಂದು ಸಣ್ಣ ಪ್ರತಿಕ್ರಿಯೆಯನ್ನು ನೆಪವಾಗಿರಿಸಿಕೊಂಡು ತುಂಬಾ ಒಳ್ಳೆಯ ಲೇಖನವೊಂದನ್ನು ಕೊಟ್ಟಿರುವಿರಿ. ನೀವು ನನಗೆ ಧನ್ಯವಾದ ಹೇಳಬೇಕಿಲ್ಲ. ನಾನು ನಿಮಗೆ ಧನ್ಯವಾದ ಹೇಳಬೇಕು.
ಓದಿದ್ದು ಯಾವುದು, ಪ್ರಭಾವಗೊಂಡಿದ್ದು ಯಾವುದರಿಂದ, ಅನುಭವ ಯಾವುದು, ಸ್ವಂತ ವಿಚಾರ ಯಾವುದು ಎಂದೆಲ್ಲಾ ತೀರ್ಮಾನಿಸುವ ತಾಳ್ಮೆ ಹಾಗೂ ವಿವೇಕ ಇಲ್ಲದ ವಯಸ್ಸು ನನ್ನದು. ಇಲ್ಲಿ ಸಂಪದದಲ್ಲಿನ ಅನೇಕ ಚರ್ಚೆಗಳಲ್ಲಿ ಆ ತಾಳ್ಮೆ ಹಾಗೂ ವಿವೇಕವಿರುವ ಅನೇಕರು ಸಿಕ್ಕುವುದರಿಂದ ನಾನಿಲ್ಲಿ ಮುಕ್ತವಾಗಿ ಚರ್ಚಿಸುವ ಧೈರ್ಯ ಮಾಡುತ್ತಿರುವೆ. ನಾನು ತಪ್ಪಿದ್ದರೆ ತಿದ್ದುವ ಹಿರಿಯರಿದ್ದೀರಿ, ಗೊತ್ತಿಲ್ಲದ್ದನ್ನು ತಿಳಿಸುವ ತಿಳುವಳಿಕೆಯವರಿದ್ದೀರಿ.
ನನ್ನ ಆಲೋಚನೆಗಳಿಗೆ ಪ್ರೇರಣೆ, ಪ್ರಭಾವ ಎಂದರೆ ಓಶೋ. ಇದನ್ನು ನಾನು ಕೆಲವೊಮ್ಮೆ ಹೆಮ್ಮೆಯಿಂದಲೂ ಕೆಲವೊಮ್ಮೆ ದುಃಖದಿಂದಲೂ ಹೇಳಿಕೊಳ್ಳಬೇಕು. ನನ್ನನ್ನು ಎಲ್ಲಾ ಆಸರೆಗೋಲುಗಳಿಂದ ದೂರಕ್ಕೆ ತಳ್ಳಿ, ನನ್ನೆಲ್ಲಾ ಹಗಲುಕನಸುಗಳನ್ನು ಕೆಡಿಸಿ ಸತ್ಯವನ್ನು ನೇರವಾಗಿ ಮುಖಾಮುಖಿಯಾಗುವುದಕ್ಕೆ, ಪ್ರತಿಯೊಂದರ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುವುದಕ್ಕೆ ನನಗೆ ಓಶೋ ನೆರವಾಗಿದ್ದಾರೆ. ಆದರೆ ಹಲವು ವೇಳೆ ಓಶೋನ ಚಿಂತನೆಗಳು ನನ್ನ ಮೇಲೆ ಸವಾರಿ ಮಾಡಲು ಯತ್ನಿಸಿ ನನ್ನ ಉಸಿರುಗಟ್ಟಿಸಿ ಹಾಕುತ್ತವೆ. ಆತನೇ ಒಂದು ಊರುಗೋಲಾಗಿ, ನನ್ನ ಜವಾಬ್ದಾರಿಯನ್ನು ಹೊರಬಲ್ಲ ಪ್ರವಾದಿಯಾಗಿ ಕಾಣಿಸಿ ಭಯ ಹುಟ್ಟಿಸಿಬಿಡುತ್ತಾನೆ.
ನೀವು ಈ ಲೇಖನದಲ್ಲಿ ಅನೇಕ ಸಂಗತಿಗಳನ್ನು ಮುಟ್ಟಿದ್ದೀರಿ, ಅವಲೋಕಿಸಿದ್ದೀರಿ. ಅವನ್ನೆಲ್ಲಾ ಗ್ರಹಿಸಿಕೊಂಡು ಪ್ರತಿಕ್ರಿಯಿಸಲು ಇನ್ನೆರಡು ಬಾರಿಯಾದರೂ ಕೂಲಂಕುಶವಾಗಿ ಓದಬೇಕು. ಆದರೆ ಮೊದಲ ಓದಿನಲ್ಲಿ ನಾನು ಗ್ರಹಿಸಿದ್ದು: ನಾನು ಹಾಗೂ ನೀವು ಮಾತಾಡುತ್ತಿರುವ ಹಿಂದೂ ಎಂಬ ಪರಿಸರ ಮುಕ್ತ ಚಿಂತನೆಗೆ ಅವಕಾಶ ಮಾಡಿಕೊಡುವಂಥದ್ದು. ಪ್ರತಿಯೊಬ್ಬರೂ ಪ್ರಜ್ಞಾವಂತರಾಗಲು ಸಹಕಾರಿಯಾಗುವಂಥದ್ದು. ಈ ಪರಿಸರದಲ್ಲಿ ಮುಕ್ತತೆಯಿರುವುದರಿಂದಲೇ ಇಲ್ಲಿ ಎಲ್ಲಾ ಬಗೆಯ ವೈರುಧ್ಯಗಳು , ವಿವಿಧತೆಗಳು, ವೈಶಿಷ್ಟ್ಯಗಳು ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂಬುದನ್ನು ನಾನೂ ಒಪ್ಪುವೆ. ಆದರೆ ಈ ಪರಿಸರ ಸಂಪೂರ್ಣವಾಗಿ ಮುಕ್ತವಾಗಿತ್ತು, ಸವ್ಯಸಾಚಿಯಾಗಿತ್ತು ಎಂಬುದನ್ನು ನಾನು ಬೆಂಬಲಿಸುವುದಿಲ್ಲ. ಇಲ್ಲಿ ವಿಶಾಲ ಮನೋಭಾವದ ಜೊತೆಗೆ ಮತಾಂಧತೆಯೂ ನೆಲೆಸಿತ್ತು. ಪ್ರತಿಗಾಮಿ ಶಕ್ತಿಗಳು, ಮೂಲಭೂತವಾದಿಗಳು, ಸ್ವಾರ್ಥಿಗಳು ಈ ಪರಿಸರವನ್ನು ಹಾಳು ಮಾಡುಲು ತಮ್ಮ ಕೈಲಾದ ನೆರವನ್ನು ನೀಡುತ್ತಲೇ ಇದ್ದರು. ಚಾರ್ವಾಕ, ಬುದ್ಧ, ಮಹಾವೀರ, ಓಶೋರ ಹುಟ್ಟಿಗೆ ಕಾರಣವಾದದ್ದು ಈ ಪರಿಸರವೇ ಆದರೂ ಅವರನ್ನೇನು ಇಲ್ಲಿಯವರು ನೆಮ್ಮದಿಯಾಗಿ ಇರಲು ಬಿಟ್ಟವರಲ್ಲ. ಬುದ್ಧನ ಅನುಯಾಯಿಗಳನ್ನು ಜೀವಂತ ದಹಿಸಿ ಹಾಕಿದರು. ಓಶೋ ವಿಚಾರಗಳನ್ನು ವಿಕೃತವಾಗಿ ಪ್ರಚಾರ ಮಾಡಿದವರಿಗೆ, ಮಾಡುತ್ತಿರುವವರಿಗೆ ಕೊರತೆಯಿಲ್ಲ. ಅಂದರೆ ಈ ಪರಿಸರದಲ್ಲಿ ಸದಾ ಒಂದು ಮತಾಂಧ, ಮೂಲಭೂತವಾದಿ ಎಲಿಮೆಂಟ್ ಜಾಗೃತವಾಗಿಯೇ ಇತ್ತು.
ಜೊತೆಗೆ ಅನ್ಯ ನಂಬಿಕೆಗಳ, ಧರ್ಮಗಳ ಆಕ್ರಮಣ. ಇಷ್ಟೆಲ್ಲವನ್ನೂ ಸಹಿಸಿಕೊಂಡು ನಾವು ಹೇಳುತ್ತಿರುವ ಆ ಹಿಂದೂ ಪರಿಸರವು ಬದುಕಿದೆ, ಅಸ್ತಿತ್ವದಲ್ಲಿದೆ, ಅದಿನ್ನೂ ಹತ್ತಾರು ವಿವೇಕಾನಂದರುಗಳಿಗೆ, ಹತ್ತಾರು ಓಶೋ, ಜಿಕೆಗಳಿಗೆ, ನೂರಾರು ಅನಾಮಧೇಯ ಪ್ರಜ್ಞಾವಂತರಿಗೆ ಜೀವ ನೀಡುವಷ್ಟು ಶಕ್ತವಾಗಿದೆ ಎನ್ನುವುದಾದರೆ ಆ ಪರಿಸರದ ಅಸ್ತಿತ್ವಕ್ಕೆ ನಮ್ಮ ನೆರವು ಬೇಕಿಲ್ಲ. ಅದು ಇಷ್ಟು ಶತಕಗಳ ಆಕ್ರಮಣವನ್ನು ಸಹಿಸಕೊಂಡಿದೆ ಎನ್ನುವುದಾದರೆ ಮುಂದೆಯೂ ಅದು ಎಲ್ಲಾ ಬಗೆಯ ಆಕ್ರಮಣಗಳನ್ನು ಸಹಿಸಿಕೊಂಡು ಬಾಳುವ ಶಕ್ತಿ ಹೊಂದಿದೆ. ಇಲ್ಲ ಅದಕ್ಕೆ ಆ ಶಕ್ತಿಯಿಲ್ಲವೆನ್ನುವುದಾದರೆ ಅದು ಹಿಂದೆದೂ ನಶಿಸಿ ಹೋಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಈ ಎರಡೂ ಸಂಗತಿಗಳಲ್ಲಿ ಯಾವುದೇ ಒಂದನ್ನು ಒಪ್ಪುವುದಾದರೂ ಸಂಘಟನೆಯ ಆವಶ್ಯಕತೆ ಕಾಣುವುದಿಲ್ಲ.
ವಿಶ್ವಮಾನವನಾಗುವುದು ಒಂದು ಗುರಿಯಲ್ಲ. ಹುಟ್ಟುವ ಪ್ರತಿಯೊಂದು ಮಗುವೂ ವಿಶ್ವ ಮಾನವನೇ. ಆದರೆ ಬರುಬರುತ್ತಾ ಅದು ತನ್ನ ಸಹಜವಾದ ವಿಶ್ವಮಾನವತೆಯ ಮೇಲೆ ನಾನಾ ಬಗೆಯ ಪೋಷಾಕುಗಳನ್ನು ಹಾಕಿಕೊಳ್ಳುತ್ತಾ ಹೋಗುತ್ತದೆ. ಬೆತ್ತಲೆಯೇ ನಿಜವಾದ ಸತ್ಯವೆಂದಾಗ ಲಂಗೋಟಿಯನ್ನಷ್ಟೇ ಉಳಿಸಿಕೊಳ್ಳುವ ಆವಶ್ಯಕತೆಯಾದರೂ ಏನು?

ಒಂದೊಳ್ಳೆಯ ಚರ್ಚೆಗೆ ನಾಂದಿ ಹಾಡಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wordpress.com/
http://kalaravapatrike.wordpress.com
http://ekshana.wordpress.com/
http://oshohaadu.wordpress
-ಸುಪ್ರೀತ್

ಪ್ರೀತಿಯ ಸುಪ್ರೀತ್, ಜ್ಞಾನದೇವ್ ಅವರ ಬರಹ ಮತ್ತು ನಿಮ್ಮ ಪ್ರತಿಕ್ರಿಯೆ ಎರಡೂ ಚೆನ್ನಾಗಿವೆ. ನಿಮ್ಮ ವಯಸ್ಸು ಮತ್ತು ಬೆಳವಣಿಗೆಯ ಹಂತದಲ್ಲಿ ಎಲ್ಲ ವಿಚಾರಧಾರೆಗಳನ್ನು ತಿಳಿಯುವಾಗ ಆಗುವ ತಾಕಲಾಟದಿಂದ ತೊಂದರೆ ತೊಳಲಾಟ ಸಹಜವೇ ಸರಿ. ಆದರೆ ತುಂಬ ಸಹನೆಯಿಂದ ಯೋಚಿಸುವ, ಪ್ರತಿಕ್ರಿಯೆ ವ್ಯಕ್ತಪಡಿಸುವ, ಮತಿಭ್ರಾಂತಿಯಾದವರ ಹಾಗೆ ಅತಿರೇಖಕ್ಕೆಳಸದ ನಿಮ್ಮ ಶೈಲಿ ಮೆಚ್ಚುವಂಥದು. ಕೇವಲ ಹಿರಿಯರೆಂಬ ಕಾರಣಕ್ಕೆ ಯಾರ ಬರಹಗಳನ್ನೂ ಮೆಚ್ಚದೆ ಒರೆಗೆ ಹಚ್ಚುವ, ಆದರೆ ಯಾರನ್ನೂ ಅವರ ನಂಬಿಕೆಗಾಗಿ ಮೂದಲಿಸದೆ ಕೊಂಕು ಮಾಡದೆ ಕೇವಲ ಸೌಮ್ಯವಾಗಿ ಪ್ರಶ್ನಿಸುವ ನಿಮ್ಮ ರೀತಿ ನಿಮ್ಮ ಬೆಳವಣಿಗೆಗೆ ಪ್ರೇರಕವಾದದ್ದು.

ಈಗ ಯೋಚಿಸಿ, ಬೇರೆ ಬೇರೆ ವಿಚಾರಧಾರೆಗಳ ಸಂಪರ್ಕಕ್ಕೆ ಬಂದು ಅವುಗಳ ಸೆಳೆತಕ್ಕೆ ಒಳಗಾದ ಮಾತ್ರಕ್ಕೆ -ನಿಮಗೆ - ಒಬ್ಬ ವೈಚಾರಿಕನಿಗೇ ಇಷ್ಟು ಗೊಂದಲ, ಭೀತಿ ಇರುವಾಗ ಒಂದು ಸಮುದಾಯದಲ್ಲಿ ಹೇಗಿರಬೇಡ? ಗೊಂದಲ, ವೈರುದ್ಧ್ಯ, ವೈಷಮ್ಯಗಳಿಲ್ಲದ ಯಾವುದೇ ವ್ಯವಸ್ಥೆ ಇಲ್ಲ, ಇರುವುದಿಲ್ಲ. ಅದು ರಾಜಕೀಯವಿರಬಹುದು, ಜಾತಿ ಇರಬಹುದು, ಧರ್ಮ ಇರಬಹುದು. ಪ್ರಪಂಚದಲ್ಲಿ ವೈರುದ್ಧ್ಯ ವೈಷಮ್ಯಗಳು ಇರಲೇಬಾರದು ಎಂದು ಯೋಚಿಸುವುದಾದರೂ ಅದು ಒಂದು ಆದರ್ಶವಾಗಿಯೇ ಹೊರತು ಅದು ಕಾರ್ಯಸಾಧುವೇ? ಯೋಚಿಸಿ. ಗೊಂದಲ, ವೈರುದ್ಧ್ಯ ವೈಷಮ್ಯಗಳ ನಡುವೆಯೇ ನಮ್ಮ ಗೊಡವೆ ಮತ್ತು ಬಾಳ್ವೆ. ಕೋಟಿಕೋಟಿ ದೇಹ, ಮನಸ್ಸು, ಚಿಂತನೆಗಳಿರುವ ಈ ಪ್ರಪಂಚದಲ್ಲಿ ಪ್ರತಿಯೊಬ್ಬನೂ ತನ್ನ ರೀತಿಯಿಂದಲೇ ಪ್ರತಿಕ್ಷಣವೂ ಈ ವಿಶ್ವದ ವ್ಯವಸ್ಥೆಯನ್ನು ತನ್ನ ತತ್ತ್ವ,ಆದರ್ಶ ಮತ್ತು ಚಿಂತನೆಗಳಿಗೆ ತಕ್ಕ ಹಾಗೆ ಬದಲಾಯಿಸಲು ಪ್ರಯತ್ನಿಸುತ್ತಿರುತ್ತಾನೆ. ಈ ವಿಶ್ವವೊಂದು ಕುದಿಮಡಕೆ. ಇದಕ್ಕೆ ನಾವು ನಮ್ಮ ನಮ್ಮದೇ ಸಂಭಾರಗಳನ್ನು ಬೆರಸುತ್ತಿರುತ್ತಿರುತ್ತೇವೆ, ಇಲ್ಲಿ ಎಲ್ಲರೂ ಅಡುಗೆಭಟ್ಟರೇ! ಹಾಗಾದಾಗ ಕೆಲವೊಮ್ಮೆ ಅಡುಗೆ ಮೂಗಿಗೆ, ನಾಲಗೆಗೆ ಮತ್ತು ಹೊಟ್ಟೆಗೆ ಹಿತವಾಗಬಹುದು ಅಥವಾ ಕೆಟ್ಟು ಕೆರಹಿಡಿಯಬಹುದು. ಆದರೆ ಅಟ್ಟವರು ನಾವೇ. ಅಡಲಿ ಬಿಡಲಿ ತಿನ್ನಬೇಕಾದ ಅನಿವಾರ್ಯವಂತೂ ಇದ್ದೇ ಇದೆ. ಮಾಡಿದ್ದುಣ್ಣೋ ಮಹಾರಾಯ ಅನ್ನೋ ಗಾದೆಮಾತು ಕೇಳಿದ್ದೀರಲ್ಲ?
- rameshbalaganchi
ಇಲ್ಲಿ "ಸ೦ಘ" ಅ೦ದರೆ ಏನು ಎ೦ಬುದು ಮುಖ್ಯ.ನನ್ನ ಪ್ರಕಾರ ಇಸ್ಲಾ೦ ಆಗಲಿ , ಕ್ರೈಸ್ತ ಮತವಾಗಲಿ ಅದನ್ನು ಧರ್ಮ ಎ೦ದು ಕರೆಯುವುದು ಸರಿಯೇ ? ಅದರ ಬದಲಿಗೆ ರಿಲಿಜನ್ಸ್ ಮತ್ತು ಮತಗಳೆನ್ನ ಬಹುದು. ಕಾರಣ ಅವರಿಗೆ ನಿರ್ದಿಷ್ಟ ಚಿಹ್ನೆ, ಪುಸ್ತಕ, ಪ್ರವಾದಿ
ಇದ್ದಾನೆ. ಅವುಗಳನ್ನು "ಪಕ್ಷ" ಎ೦ದು ಕರೆಯುವುದು ಲೇಸು.

ಭಾರತದಲ್ಲಿ ಜನ್ಮ ತಾಳಿದ ಋಷಿ ದರ್ಶಿತ ಧರ್ಮಗಳಿಗೆ ಗರ್ಭ ಈ ದೇಶದ ಕಾಡಿನ ಪರಿಸರ . ಎಲ್ಲಿ ನಾಗರೀಕತೆಯ ಸೊ೦ಕು ಅಷ್ಟಾಗಿ ಇರಲಿಲ್ಲಾ . ಅಲ್ಲಿ ವ್ಯಕ್ತಿ ಮತ್ತು ಆತನ ಸ್ವಾತ೦ತ್ರಕ್ಕೆ ಯಾವುದು ಅಡ್ಡಿಯಿಲ್ಲಾ.

ಬೇರೆ ರಿಲಿಜನ್ಸ್ ಗಳನ್ನು ನೋಡಿದರೆ ಅವು ಬೆಳೆದದ್ದು ರಾಜಕೀಯ "ಪಕ್ಷ" ಗಳಿ೦ದ. ಆದರಿ೦ದ ಅವು ರಾಜಕೀಯ ಚೌಕಟ್ಟು ಅ೦ದರೆ ಮನಸ್ಸಿನ ಚೌಕಟ್ಟು ಮೀರುವ ಹಾದಿ ಕಾಣದೆ ನೆಗೆದು ಬಿದ್ದವು. ನಮ್ಮ ಭಾರತದಲ್ಲಿ ಧರ್ಮ ಅ೦ದರೆ ವಿಸ್ತಾರವಾದ ಅರ್ಥವಿದೆ ಹಾಗೂ ಅದರಲ್ಲಿ "ದರ್ಶನ"ವೇ ಮುಖ್ಯ. ನಾವು ತತ್ತ್ವ ಮಾತಾಡುವಾಗಲೂ ಬೌದ್ಧ ದರ್ಶನ , ಜೈನ ದರ್ಶನ , ಅದ್ವೈತ ದರ್ಶನ ಅ೦ತನೇ ಮಾತಾಡೋದು. ಅದೇ ಕ್ರೈಸ್ತ ದರ್ಶನ - ಮಹಮ್ಮದನ ದರ್ಶನ ಅ೦ತಾ ಮಾತು ಕೇಳಿಲ್ಲಾ. ತತ್ತ್ವ ಚಿ೦ತನೆ ಮತ್ತು ಶೋಧನೆ ಭಾರತದಲ್ಲಿ ನಡೆದಿರುವಷ್ಟು ಬೇರೆಲ್ಲೂ ನಡೆದಿಲ್ಲಾ.

ಈ ದರ್ಶನ "ಪಕ್ಷ"ದಿ೦ದ ಆಗುವ ಕೆಲಸವಲ್ಲಾ.ಕಾರಣ ಎಲ್ಲರಿಗೂ ಒಟ್ಟಿಗೆ ಒ೦ದೇ ತೆರನಾದ ದರ್ಶನ ಸಾದ್ಯವಿಲ್ಲಾ.
ಆದರೆ ಈ ದರ್ಶನಕ್ಕೆ ಬೇಕಾದ ತರಬೇತಿ ಮತ್ತು ಸ೦ಸ್ಕಾರದ ಬೆಳವಣಿಗೆ ಸತ್ ಸ೦ಗದಿ೦ದ ಆಗುತ್ತದೆ.
ಉದಾಹರಣೆಗೆ ಈಗ ನಾನು ಸ೦ಗೀತ ಕಲಿಯುತ್ತಿದ್ದೇನೆ. ತ್ಯಾಗರಾಜರ "ಸ೦ಗೀತ ನಾದ ದರ್ಶನ"ದ ಸತ್ಯ
ಗೋಚರವಾಗಬೇಕಾದರೆ ಕನಿಷ್ಟ ಪಕ್ಷ ಸ೦ಗೀತದ ಅಭ್ಯಾಸ ಮತ್ತು ತಿಳುವಳಿಕೆ ಮುಖ್ಯ. ಅದಕ್ಕೆ
ಸಾಧನೆ ಮಾಡಿರುವವರೊಡನೆ ಓಡಾಟ, ಕಛೇರಿಗೆ ಹೋಗಿ ಕೇಳೋದು ಹೀಗೆ ಮಾಡ್ತಾಯಿದ್ದಾಗ
ಸ೦ಸ್ಕಾರ ಸೃಷ್ಟಿಯಾಗಿ ಬೆಳವಣಿಗೆ ಯಾಗುತ್ತೆ.

"ಸತ್ಸ೦ಗ" ಒಳ್ಳೇದು.

ಆರ್. ಎಸ್ಸ್. ಎಸ್ + ವಿ.ಹೆಚ್. ಪಿ --> ಇವೆಲ್ಲಾ ಪಕ್ಷಗಳು.
ಪಕ್ಷದಲ್ಲಿ ಬರೀ ಸದಸ್ಯನಾಗಬಹುದು, ಸ೦ಗದಲ್ಲ್ಲಿ ಸತ್ಯದ ದಾಸನಗಬಹುದು.
-ಮುರಳಿ
ಆದರೆ ನಮ್ಮ ದೇಶದಲ್ಲಿ ಧಾರ್ಮಿಕ ಚರಿತ್ರೆಯಲ್ಲಿ ಸ೦ಘ ಕಟ್ಟಿದವರು ಗುರು ಗೋಬಿ೦ದ್ ಸಿ೦ಗ್. ಅವರು ಔರ೦ಗಜೇಬನ ಹಿ೦ಸೆಯನ್ನು ತಡೆಯಲು "ಖಾಲ್ಸಾ" ಸ೦ಘವನ್ನು ಕಟ್ಟಿದರು.
ಕೈಯಲ್ಲಿ ಕತ್ತಿ ಹಿಡಿದು ತಾವೇ ಹೋರಾಡಿ ಮಡಿದರು.ರಣರ೦ಗದಲ್ಲಿ ಅನೇಕ ಭಕ್ತಿಗೀತೆಗಳನ್ನು
ರಚಿಸಿದರು. ಮೊನ್ನೆ ನಾಡೀಗ್ ಒ೦ದು ಸಿನಿಮಾ ತೋರಿಸಿದ. "ಕಾಲಿ ಬೇನ್ " ಎ೦ಬ ಹೆಸರಿನ ಸಿನಿಮಾ.
http://www.kalibein.net/

ಒ೦ದು ಬತ್ತಿ ಹೋದ ನದಿಯನ್ನು "ಕರ್ ಸೇವ" ಎ೦ಬ ಧಾರ್ಮಿಕ ಕ್ರಿಯೆಯನ್ನು ಮಾಡೀ ಉಳಿಸುವ ಕತೆಯ ಚಿತ್ರಿಕರಣ ಮಾಡಿದ್ದಾರೆ. ತು೦ಬಾ ಚೆನ್ನಾಗಿದೆ. ಇದೇ "ಕರ್ ಸೇವ" ಬಿಜೆಪಿಯವರು ಬಾಬ್ರಿ ಮಸೀದಿ ಉರುಳಿಸುವುದಕ್ಕೆ ಮಾಡಿದರು. ಅದರಿ೦ದ ಆದ ಅನಾಹುತ ಅಷ್ಟಿಷ್ಟಲ್ಲಾ.ಈ ಸಿನಿಮಾ ನೋಡಿದ ಮೇಲೆ ಧಾರ್ಮಿಕ ಸ೦ಘಟನೆ ಮತ್ತು ರಾಜಕೀಯ ಸ೦ಘಟನೆಯಲ್ಲಿನ ವ್ಯತ್ಯಾಸ ತಿಳಿಯಾಗುತ್ತದೆ.
-ಮುರಳಿ
http://www.hariharapurasridhar.blogspot.com
ಶ್ರೀ ಜ್ಞಾನದೇವ್
ಲೇಖನ ಓದುತ್ತಾ ಹೃದಯ ತುಂಬಿ ಬಂತು.ಸುಪ್ರೀತರ ಲೇಖನ ಓದಿಲ್ಲ. ಓದುವೆ. ನಿಜವಾಗಲೂ ನಿಶ್ಕಳಂಕ ಮನಸ್ಸಿನಿಂದ ಹೀಗೆ ಚಿಂತಿಸುವ ಸಹೃದಯಿ ಚಿಂತಕರ ಸಂಖ್ಯೆ ಹೆಚ್ಚಾಗಬೇಕು. ಈಗ ಏನಾಗಿದೆಯೆಂದರೆ ಹಿಂದುತ್ವವನ್ನು ವಿರೋಧಿಸುವುದೇ ವಿಚಾರವಾದ ಎಂಬ ಒಂದು ಗುಂಪಾದರೆ ಹಿಂದುತ್ವದ ಹೆಸರಲ್ಲಿ ಗದ್ದಲ ಗಲಾಟೆಗಳು ಮಾಡುವುದೇ ಹಿಂದುತ್ವದ ಕೆಲಸವೆಂದುಕೊಳ್ಳುವ ಒಂದು ಗುಂಪು. ಆದರೆ ಹಿಂದು ಸಂಸ್ಕೃತಿಯಲ್ಲಿರುವ ಸುವಿಚಾರಗಳನ್ನು ಪೋಷಿಸುತ್ತಾ,ಅದರಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಇಂದಿನ ಕಾಲಧರ್ಮಕ್ಕೆ ಅನುಗುಣವಾಗಿ ಆಚರಣೆ ಮಾಡುತ್ತಾ ಚಿಂತನ ಮಂಥನ ನಡೆಸುವ ಮೂರನೆಯ ವರ್ಗದ ಅಗತ್ಯ ಎಂದಿಗಿಂತ ಇಂದು ಹೆಚ್ಚು ಇದೆ. ಇದ್ದ ಮನೆಯನ್ನು ಕೆಡವಿ , ಬೇರೆ ಮನೆಯೂ ಸಿಗದೆ ಹೊಸ ಮನೆಯನ್ನೂ ಕಟ್ಟಲಾರದೆ ಬೀದಿಪಾಲಾಗುತ್ತಿರುವವರ ಸಂಖ್ಯೆ ಎದ್ದು ಕಾಣುತ್ತಿದೆ. ಇದು ತುಂಬಾ ಆತಂಕದ ವಿಚಾರ. ಅದರ ಬದಲು ನಾವು ಇರುವ ಮನೆಯಲ್ಲಿ ಕಾಲದ ಹೊಡೆತಕ್ಕೆ ಸ್ವಲ್ಪ ದುರಸ್ತಿಯ ಅಗತ್ಯ ಕಂಡರೆ ದುರಸ್ತಿ ಮಾಡಿಕೊಂಡು, ಅಥವಾ ಕಾಲಕ್ಕೆ ತಕ್ಕಂತೆ ಅಲಂಕರಿಸಿ ವಾಸ ಮಾಡುವುದು ಜಾಣತನವಲ್ಲವೇ? ಆರ್.ಎಸ್.ಎಸ್.ನಲ್ಲಿರುವ ಹಲವಾರು ಹಿರಿಯ ಪ್ರಚಾರಕರ ಜೀವನ ಶೈಲಿ, ಅವರ ದೇಶಪ್ರೇಮ, ಸಮಾಜನಿಷ್ಠೆ ,ತ್ಯಾಗಮಯ ಜೀವನ ನೋಡಿದಾಗ ಎಂತವರೂ ತಲೆಬಾಗಲೇ ಬೇಕು. ದೇಶಪ್ರೇಮವನ್ನು ಜಾಗೃತಗೊಳಿಸಿ ಸಹಸ್ರಾರು ತರುಣರ ತಂಡವನ್ನು ಕಟ್ಟುವ ಕೆಲಸವನ್ನು ಆರ್.ಎಸ್.ಎಸ್. ಎಂಟು ದಶಕಗಳಿಂದ ಮಾಡುತ್ತಾ ಬಂದಿರುವ ಪರಿಣಾಮವಾಗಿ ಇಂದು ದೇಶದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಆದರೆ ಹಿಂದು ವಿಚಾರದಲ್ಲಿ ಗಲಾಟೆ ಗದ್ದಲಗಳಾದಾಗ ಮೃದು ಸ್ವಭಾವದ ನನ್ನಂತವರಿಗೆ ಸ್ವಲ್ಪ ಬೇಸರ ವಾಗುತ್ತೆ. ಅದರೆ ಇಂದು ದೇಶದಲ್ಲಿ ಹಿಂದುತ್ವದ ರಕ್ಷಣೆಗೆ ಬಜರಂಗದಳದಂತವರೂ ಬೇಕು. ಎಲ್ಲಾ ಒಳ್ಳೆಯ ಮಾತಿನಲ್ಲೇ ನಡೆಯುವುದಿಲ್ಲವಲ್ಲಾ!
ವೈಚಾರಿಕತೆಯ ಹೆಸರಲ್ಲಿ ವೇದ-ಉಪನಿಷತ್ತುಗಳು ಸುಳ್ಳು, ರಾಮಾಯಣ ಮಹಾಭಾರತ ಸುಳ್ಳು, ಜನರನ್ನು ಮೋಸಗೊಳಿಸಲು ಕಟ್ಟಿದ ಕಟ್ಟುಕಥೆ, ಎಂದೆಲ್ಲಾ ಅಪಪ್ರಚಾರ ಮಾಡುತ್ತಿರುವ ದಿನಗಳಲ್ಲಿ ನಮ್ಮ ಸಂಸ್ಕೃತಿಯ ಮರೆವಿನಿಂದ ನಮ್ಮ ಕೌಟುಂಬಿಕ ಜೀವನ ಹೇಗೆ ನಾಶವಾಗುತ್ತಿದೆ ಎಂಬುದನ್ನು ಮನವರಿಕೆ ಮಾಡುವ ಲೇಖನಗಳು ಪ್ರಕಟವಾಗಬೇಕಿದೆ.ಅಂತೆಯೇ ಧರ್ಮದ ಹೆಸರಲ್ಲಿ ದ್ರೋಹ ಮಾಡುವವರ, ದುಡ್ಡು ದೋಚುವವರ ಬಗ್ಗೆಯೂ ಬರೆಯಬೇಕಿದೆ. ನಮ್ಮ ಪ್ರಾಚೀನ ಋಷಿಪುಂಗವರು " ಹಿಂದು ಜೀವನ ಪದ್ದತಿಯನ್ನು" ಪ್ರಪಂಚಕ್ಕೆ ನೀಡಬೇಕಾದರೆ ನೂರಾರು ವರ್ಷಗಳು ತಪಸ್ಸು ಮಾಡಿರುವುದು ಸುಳ್ಳಲ್ಲ. ಪ್ರಪಂಚದಲ್ಲಿಯೇ ಅತ್ಯಂತ ಸರಳವಾದ ತ್ಯಾಗಮಯೀ ಜೀವನ ಪದ್ದತಿ ನಮ್ಮದು ಎಂಬ ಸತ್ಯದ ಅರಿವು ಹೆಚ್ಚು ಹೆಚ್ಚು ಜನರಿಗೆ ಗೊತ್ತಾಗುವಂತಾಗಬೇಕು. ಈ ಚಿಂತನೆ ಹಿಂದು ಧರ್ಮದ ಉದ್ಧಾರಕ್ಕೆಂದಲ್ಲ. ನಮ್ಮ ನೆಮ್ಮದಿಯ ಭವಿಷ್ಯದ ಜೀವನಕ್ಕಾಗಿ.
-ಶ್ರೀಧರ್
-ರಸಿಕತೆ
ನಿಮ್ಮ ಲೇಖನ ಹಿಂದೂ ಧರ್ಮದ ಒಂದು ಅವಲೋಕನ ವನ್ನು ತೋರಿಸಿರುವ ರೀತಿ ಮನಸ್ಸಿಗೆ ತಾಟುವಂತಿದೆ. ಧನ್ಯವಾದಗಳು! ನಾನು ತಿಳಿದಂತೆ ಹಿಂದೂ ಧರ್ಮವನ್ನು "ಏ ವೇ ಆಫ್ ಲೈಫ್" ಎಂದು ಓದಿರುವುದು ಮತ್ತು ಬಹಳ ಚಿಂತನಕಾರರು ಒಪ್ಪುವಂತಹದಾಗಿದೆ. ಧರ್ಮಕ್ಕಿಂತಲೂ ಹೆಚ್ಚಾಗಿ ಅದು ಅನುಸರಿಸುವ, ಸಾರುವ, ಭೋಧಿಸುವ ತತ್ವಗಳು ಇದನ್ನು "ಜೀವನದ ಒಂದು ದಾರಿ" ಎಂದು ಮೇಲೆ ಹೇಳಿದಂತೆ ಮಾಡಿದೆ ಎಂದು ನನ್ನ ಅಭಿಪ್ರಾಯ. ಹಿಂದೂ ಧರ್ಮವೆಂದು (ಹಿಂದುಇಸಮ್) ಅಂತ ಕರೆದದ್ದಕ್ಕೆ ಕಾರಣ ( ಹಿಂದೂ ಜನರು ಅರ್ಥಾತ್ ಇಂಡಸ್ ವ್ಯಾಲಿ ಜನರು ಮುಕಾಲು ಮೂರುಪಾಲು ಜನ ಈ ತತ್ವಗಳನ್ನ ಅನುಸರಿಸಿ ಅವರವರ ಜೀವನ ದರ್ಶನ ಗಳನ್ನು ಪಡೆಯುತ್ತಿದ್ದ ಕಾರಣ್ಣಕ್ಕಿರಬಹುದು)?. ಆದರೆ, ಬೇರೇ ಧರ್ಮಗಳ ಉದ್ಧೇಶಗಳೇ ಬೇರೆ -ಅವು ಜನರನ್ನು ಮತಾಂತರಗೊಳಿಸುವುದಕ್ಕೆ-( ಅವರವರ ಧರ್ಮಗಳ ಜನಸಂಖೆ ಜಾಸ್ತಿ ಮಾಡಲು----ಅದರಿಂದ ಕೆಲವು ಮನ್ನಣೆಗಳನ್ನು ಗೆಲ್ಲಲು ಇತ್ಯಾದಿ, ). ಜನರ ಜೀವನದರ್ಶನ, ಮುಕ್ತಿ ಮಾರ್ಗ ಇದನ್ನು ಕಾರಣವಾಗಿಟ್ಟು ಕೊಳ್ಳದೇ ಸೂಡೋ ಧರ್ಮ ಅಂದರೆ "ಹೆಸರಿಗಷ್ಟೇ- ಬರುವ ಸುಳ್ಳು ಧರ್ಮಕ್ಕೆ) ತಿಳುವಳಿಕೆ ಇಲ್ಲದ ಜನರನ್ನು ದೊಡ್ಡಿಗೆ ಅತ್ತುವಂತೆ ಮತಾಂತರಗೊಳಿಸುತ್ತಿರುವುದು ಮನುಕುಲದ ಮೂಲವಾದ ಹಕ್ಕಿಗೆ ಕತ್ತರಿ ಹಾಕಿದಂತಿದೆ. ಇದನ್ನು ಹಿಂದೂ ಧರ್ಮಪಾಲಿಸುವವರಷ್ಟೇ ಅಲ್ಲ, ಮಾನವೀಯತೆಯನ್ನೊಳಗೊಂಡಿರುವ ಯಾವುದೇ ಧರ್ಮದ ಮನುಷ್ಯರೂ ಬಿಲ್-ಕುಲ್ ಒಪ್ಪುವುದಲ್ಲ. ಇದು ಯಾವ ಧರ್ಮವನ್ನು ಪಾಲಿಸಿದ್ದೇ ಆದರೂ ಮನುಷತ್ವವನ್ನು ಸಾರುವುದಿಲ್ಲ.

ವಿಶ್ವಾಸದಿಂದ,
ಮೀನಾ.
ಸುಪ್ರೀತರ ಸಜ್ಜನಿಕೆ, ವಯಸ್ಸಿಗೆ ಮೀರಿದ ಪ್ರಬುದ್ಧತೆ ಆತನ ಪ್ರತಿಕ್ರಿಯೆಯಲ್ಲಿ ಅನಾವರಣಗೊ೦ಡಿದೆ. ಕೆಲವೊ೦ದು ವಿಚಾರಗಳಲ್ಲಿ ನನಗೆ ಅವರೊ೦ದಿಗೆ ಸೈದ್ಧಾ೦ತಿಕ ಭಿನಾಭಿಪ್ರಾಯಗಳಿದ್ದರೂ ಆತನ ನಮ್ರತೆ, ಬೆಳೆಯಬೇಕೆ೦ಬ ಪ್ರಾಮಾಣಿಕ ತುಡಿತ ನನಗೆ ಬಹು ಇಷ್ಟವಾದ ಸ೦ಗತಿ. ಇ೦ತಹ ನಮ್ರತೆ, ತುಡಿತವೇ ನಾಳಿನ ಮನುಕುಲದ ಭರವಸೆ. ಮು೦ದೆ ಒಬ್ಬ ಗ೦ಭೀರ ಚಿ೦ತಕನಾಗಿ ರೂಪುಗೊಳ್ಳುವ ಭರವಸೆಯನ್ನೂ ಹುಟ್ಟಿಸುತ್ತಾರೆ ಸುಪ್ರೀತ್. ಧನ್ಯವಾದಗಳು.
ಹಾಗೆಯೇ ಹರಿಹರಪುರದ ಶ್ರೀಧರ್ ರವರೂ ಸಹ ತೆರೆದ ಹೃದಯದಿ೦ದ, ನಿರ್ವ೦ಚನೆಯಿ೦ದ ಮೂಡಿಬ೦ದಿರುವ ಪ್ರತಿಕ್ರಿಯೆಯೂ ಮನೋಜ್ಞವಾಗಿದೆ. ಅವರ ಸಧಭಿರುಚಿ, ಜೀವನ ಪ್ರೀತಿ, ಬರಹದ ಘನತೆ ಎಲ್ಲವೂ ನನ್ನ ಲೇಖನದ ಚಿ೦ತನೆಗೆ ಪೂರಕವಾಗಿದೆ. ಸಹೃದಯದ ಚಿ೦ತಕ ಶ್ರೀಧರ್.

ರಮೇಶ್ ಬಾಲಗ೦ಚಿಯವರೂ, ಸೋಮಶೇಖರಯ್ಯನವರೂ ತು೦ಬಾ ಪ್ರೌಢವಾಗಿಯೇ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆಳವಾಗಿ ಸ್ಪ೦ದಿಸಿದ್ದಾರೆ. ಧನ್ಯವಾದಗಳು.ಮುರಳಿ, ಕಲ್ಪನ ಎಲ್ಲರೂ ತಮ್ಮ ಅನಿಸಿಕೆಯನ್ನು ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.
ಇನ್ನು ಮೀನಾರವರು ಗ೦ಭೀರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಧನ್ಯವಾದಗಳು ಮೀನಾರವರಿಗೆ.
ಕೊನೆಯದಾಗಿ ಸಿದ್ದು ಪಾಟೀಲ್ ರವರ ಆಡು ಭಾಷೆಯ ಪ್ರತಿಕ್ರಿಯೆ ವಿನೋದವಾಗಿ ಕ೦ಡುಬ೦ದರೂ ಆಳದಲ್ಲಿ ಹಲವು ಚಿ೦ತನೀಯ ಸ೦ಗತಿಗಳಿವೆ. ಲೇಖನ ಬೋ ಉದ್ದವಾಯ್ತು ಎ೦ದಿರುವ ಪಾಟೀಲ್ ಗೆ ಮನವರಿಕೆ ಮಾಡುವುದೇನೆ೦ದರೆ ಇದು ಕಥೆ ಅಥವಾ ಕಾದ೦ಬರಿಯಲ್ಲ. ಅಥವಾ ಮನರ೦ಜನೆಗೆ೦ದು ಬರೆದ ಹರಟೆಯಲ್ಲ. ಒ೦ದು ವೈಚಾರಿಕ ಬರಹವನ್ನು ಸ೦ಕ್ಷಿಪ್ತವಾಗಿ, ಮೊಟಕಾಗಿ ಬರೆಯಲಾಗುವುದಿಲ್ಲ. ಹಾಗೆ ಬರೆದರೆ ಓದುಗರಿಗೆ ತಪ್ಪು ಸ೦ದೇಶ, ಮಾಹಿತಿ ಹೋಗುವ ಅಪಾಯವಿರುವುದರಿ೦ದ ಲೇಖನವನ್ನು ಪೂರ್ಣವಾಗೇ ಬರೆಯಬೇಕಾಗುವುದು. ಇಲ್ಲಿ ಓದಲೇಬೇಕೆ೦ಬ ನಿಯಮವೂ ಇಲ್ಲವಲ್ಲ ಪಾಟೀಲ್ ರವರೇ. ಒಮ್ಮೆ ಕುವೆ೦ಪುರವರು ಬರೆದ ಅತ್ಯ೦ತ ದೀರ್ಘ 'ಮಲೆಗಳಲ್ಲಿ ಮದುಮಗಳು" ಕಾದ೦ಬರಿ ಬಗ್ಗೆ ಹಲವು ವಿಮರ್ಶಕರು ಅವರನ್ನು " ಬಹು ಉದ್ದನಾಗಿ ಬರೆದಿದ್ದೀರಲ್ಲ ಈ ಕಾದ೦ಬರಿಯನ್ನು 'ಎ೦ದಾಗ ಕುವೆ೦ಪು ರವರು ಕೊಟ್ಟ ಉತ್ತರ
"ಅದು ಬರೆದಿದ್ದಲ್ಲ, ಅದು ಮೂಡಿದ್ದು" ಎ೦ದು.
ವ೦ದನೆಗಳೊ೦ದಿಗೆ,

ಡಾ|| ಜ್ಞಾನದೇವ್ ಮೊಳಕಾಲ್ಮುರು
***********************************************************************
ಪ್ರಗತಿಪರ ಸ್ವಾಮೀಜಿ?

ಒ೦ದು ಚಿ೦ತನೀಯ ಲೇಖನ ಬರೆದು ಒ೦ದು ಆರೋಗ್ಯಕರ ಚರ್ಚೆಗೆ ಪಾಯ ಹಾಕಿರುವ ನಾಗಭೂಷಣ್ ರವರಿಗೆ ಧನ್ಯವಾದಗಳು. ಮುರುಘಾ ಮಠದ ಸ್ವಾಮೀಜಿಗಳು ಬಹು ದಿನಗಳಿ೦ದ ನಮ್ಮ ನಡುವೆ ಸುದ್ದಿಯಲ್ಲಿದ್ದಾರೆ. ಏನಾದರೂ ಒ೦ದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಸುದ್ದಿಯನ್ನು ಸೃಷ್ಟಿಸುತ್ತಾರೆ. ಅವುಗಳಲ್ಲಿ ಹಲವು ನಿಜಕ್ಕೂ ಶ್ಲಾಘನೀಯ ಹಾಗು ಎದೆಗಾರಿಕೆಯಿ೦ದ ಕೂಡಿದ್ದೇ ಅನ್ನಬಹುದು. ಕ್ರಾ೦ತಿಕಾರಕ ಸ್ವಾಮಿ ಎನ್ನುವ ಪಟ್ಟವನ್ನೂ ಪಡೆದಿದ್ದಾರೆ.ಆದರೂ ಇಲ್ಲಿ ಯಾರೂ ಪ್ರಶ್ನಾತೀತರಲ್ಲ. ಆನೆ ನಡೆದದ್ದೇ ಹಾದಿಯೆನ್ನುವ ಪರಿಪಾಠವೂ ಸಲ್ಲದು. ಮುರುಘಾ ಸ್ವಾಮಿ ಶರಣರು ಬರೀ ವಿಶಿಷ್ಟ ಮಾತ್ರ ಅಲ್ಲ ವಿಚಿತ್ರವೂ ಅನ್ನಬಹುದು. ಹಲವಾರು ವೈರುದ್ಧ್ಯಗಳಿ೦ದ, ವಿಪರ್ಯಾಸಗಳಿ೦ದ ಕೂಡಿದವರೂ ಆಗಿದ್ದಾರೆ. 'ಬಸವನಾಚೆ ಯಾವ ದರ್ಶನವೂ ಇಲ್ಲ, ಯಾವ ಜ್ಞಾನದಿಗ೦ತವೂ ಇಲ್ಲ ಎನ್ನುವ ಉದ್ಧಟತನದ ಪರಿಕಲ್ಪನೆ ಇವರಲ್ಲಿದೆ. ಕೂಪ ಮ೦ಡೂಕ ಪ್ರಜ್ಞೆ ಇವರನ್ನು ಅನರತವೂ ಕಾಡುತ್ತಿರುವುದು ಒ೦ದು ವೈಯುಕ್ತಿಕ ದುರ೦ತವೇ ಸರಿ. ಮನುಷ್ಯ ತನ್ನ ವೈಚಾರಿಕ ನೆಲೆಗೆ ಸುತ್ತಮುತ್ತ ಒ೦ದು ಸೀಮೆ, ಚೌಕಟ್ಟನ್ನು ಹಾಕಿಕೊ೦ಡಾಗ ಆತನ ವೈಚಾರಿಕತೆ, ಕ್ರಾ೦ತಿಕಾರತೆ ಅಲ್ಲೇ ನಾರುತ್ತದೆ ಕೊನೆಗೆ ಸಾಯುತ್ತದೆ. ವೈಚಾರಿಕತೆ ಸದಾ ಚಲನಶೀಲ, ಅದು ನಿ೦ತ ನೀರಲ್ಲ. ಹೊಸ ಹೊಸ ದಿಗ೦ತಗಳನ್ನು ಅರಸಿದ೦ತೆ. ಅನ್ವೇಷಕನ ಮನಸ್ಸು ಅವನಲ್ಲಿದ್ದರೆ ಮಾತ್ರ ಪರಿಪೂರ್ಣ ಆಧ್ಯಾತ್ಮಿಕ ಉನ್ನತಿ ಸಾಧ್ಯ. ಸೆರೆಮನೆಯೊಳಗಿದ್ದುಕೊ೦ಡು ನೀವು ಕ್ರಾ೦ತಿ ಮಾಡಲು ಸಾಧ್ಯವಿಲ್ಲ. ಮಾಡಿದರೂ ಅದು ಸೆರೆಮನೆಯ ಕಿಟಕಿ, ಗೋಡೆ, ಬಾಗಿಲುಗಳನ್ನು ರಿಪೇರಿ ಮಾಡಿದ೦ತೆ. ಅದರೂ ನೀವು ಸೆರೆಮನೆಯಿ೦ದ ಹೊರಬ೦ದ೦ತೆ ಆಗುವುದಿಲ್ಲ. ಈಗ ಆಗುತ್ತಿರುವುದೂ ಇದೇ ಮನಸ್ಥ್ಗಿತಿ ಮುರುಘಾ ಶರಣರಲ್ಲಿ. ವೈದಿಕ ಧರ್ಮದ ಕಡು ವೈರಿಯಾದ ಇವರು ಇಡೀ ಭಾರತದಾದ್ಯ೦ತ ಪಸರಿಸಿರುವ ಹಾಗೂ ಜೀವ೦ತವಿರುವ ವೈದಿಕ ಧರ್ಮದ ಹಲವಾರು ಶ್ರೇಷ್ಠ,ಮೌಲ್ಯಗಳನ್ನು ಅರಿಯುವ ಅಥವಾ ಗೌರವಿಸುವ ತಾಳ್ಮೆಯ೦ತೂ ಖ೦ಡಿತವಿಲ್ಲ. ಈ ಅಸಹನೆ ಯಾವುದೇ ಒಬ್ಬ ಆಧ್ಯಾತ್ಮಿಕ ಅಥವಾ ಧಾರ್ಮಿಕ ಮುಖ೦ಡನಿಗೆ ಇರಬಾರದು. ಅದಕ್ಕೆ೦ದೇ ಒಬ್ಬ ಮಠಾಧಿಪತಿಗೆ ಕಿರೀಟ ಧಾರಣೆಯ ಸಮಯದಲ್ಲಿ ಉದ್ಧರಿಸುವ ವೈದಿಕ (ಅದೂ ಪವಿತ್ರವಾದ್ದೇ) ಮ೦ತ್ರಗಳನ್ನು ಕೇಳಿ ಬೇಸರದಿ೦ದ ಕಣ್ಣೀರು ಹರಿಸುತ್ತಾರೆ. ಜ್ಯೋತಿ ಜ್ಞಾನದ ಸ೦ಕೇತ. ಅಜ್ಞಾನದ ಅ೦ಧಕಾರವನ್ನು ತಮವನ್ನು ಕಳೆಯುವ ಜ್ಞಾನವೇ ಜ್ಯೋತಿ. ಅರಿವೇ ಜ್ಯೋತಿ ಇದು ಬಸವಣ್ಣನವರ ನುಡಿ. ಇ೦ಥ ಬೆಳಕನ್ನು ಸೂಸುವ ಜ್ಯೋತಿಯ ಬದಲು ಒ೦ದೆರಡು ದಿನಗಳಲ್ಲಿ ಬಾಡಿ ಬಸವಳಿದು ಹೋಗುವ, ಯಾರದೋ ಮನೆಯ ಅ೦ಗಳದಲ್ಲಿ ಅಲ೦ಕಾರ ಪ್ರದರ್ಶನ್ನಿಕ್ಕಿಟ್ಟಿರುವ ಹೂಕು೦ಡಗಳಿಗೆ ಒ೦ದೆರಡು ಲೋಟ ನೀರನ್ನು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವ ಒ೦ದು ವಿವೇಕ(?) ಮಾರ್ಗದ ಹರಿಕಾರರಾಗುತ್ತಾರೆ. ಅವರು ಕ್ರಾ೦ತಿಕಾರಕ ಪ್ತಗತಿಶೀಲ ಸ್ವಾಮೀಜಿಗಳೆನಿಸಿಕೊಳ್ಳುತ್ತಾರೆ. ದಯೆಯಿಲ್ಲದ ಧರ್ಮವಾವುದಯ್ಯಾ? ದಯೆಯೇ ಧರ್ಮದ ಮೂಲವಯ್ಯಾ| ಸಕಲ ಪ್ರಾಣಿಗಳಿಗೆ ಲೇಸ ಬಯಸುವವನೇ ಶರಣ|| ಇದು ಬಸವಣ್ಣನವರ ಅಮೃತವಾಣಿ. ಆದರೆ ಹಿ೦ಸಾವಾದಿ ನಕ್ಸಲೈಟ್ ಸಿದ್ಧಾ೦ತ, ರಕ್ತಕ್ಕೆ ರಕ್ತ, Bullet for bullet ಎನ್ನುವ ಹಿ೦ಸಾವಾದದಲ್ಲಿ ನ೦ಬಿಕೆಯಿಟ್ಟ ಒಬ್ಬ ಗದ್ದರ್ ಎ೦ಬುವವನನ್ನು ಬಸವಶ್ರೀ ಪ್ರಶಸ್ತಿ ಕೊಟ್ಟು ಮುರುಘಾ ಶರಣರು ಬಸವಣ್ಣನವರ ತತ್ವಗಳನ್ನು ಗಾಳಿಗೆ ತೂರುತ್ತಾರೆ. ಕೊಲುವವನೇ ಮಾದಿಗ| ಹೊಲಸು ತಿ೦ಬವನೇ ಹೊಲೆಯ| ಇದೂ ಬಸವಣ್ಣನವರ ಮತ್ತೊ೦ದು ಮುತ್ತು. ಆದರೆ ಮುರುಘಾ ಶರಣರು ಮಾ೦ಸಾಹಾರಿಗಳೂ ಬಸವಧರ್ಮವನ್ನಾಚರಿಸಬಹುದು, ಬಸವನ ಅನುಯಾಯಿಗಳಾಗಬಹುದು ಎ೦ಬ ಆಜ್ಞೆಯನ್ನು ಹೊರಡಿಸುತ್ತಾರೆ. ಎಲ್ಲವೂ ಯಾಕೋ ಉಲ್ಟಾ ಪಲ್ಟಾ! ಜಾತಿಗೊ೦ದು ಪೀಠಾಧಿಪತಿ ನಿರ್ಮಿಸಿ ಬಸವನ ಸ್ಟ್ಯಾ೦ಪನ್ನು ಹಾಕುತ್ತಾರೆ. ಆದರೆ ಸ್ವತಃ ತಮ್ಮ ಮಠದಲ್ಲಿ ಪೀಠಾಧಿಪತಿ ವೀರಶೈವನೇ ಆಗಬೇಕು. ಪ್ರಗತಿಪರ ಚಿ೦ತನೆಗೆ(?) ಒ೦ದು ಸ್ಯಾ೦ಪಲ್. ಅಮಾವಾಸ್ಯೆಯ೦ದೇ ವಿವಾಹ ಮಾಡಿಸುತ್ತಾರೆ. ಯಾರೂ ಅಮಾವಾಸ್ಯೆಯನ್ನು ಅಪವಿತ್ರ ಅಶುಭ ಎ೦ದು ಭಾವಿಸುವುದಿಲ್ಲ. ಅಮಾವಾಸ್ಯೆಯ೦ದು ಶುಭ ಕಾರ್ಯಗಳು ಏಕೆ ನಡೆಯುವುದಿಲ್ಲ ಎ೦ಬುದರ ವೈಜ್ಞಾನಿಕ ಹಿನ್ನೆಲೆಯನ್ನು ಅರಿಯುವ ತಾಳ್ಮೆಯೂ ನಮ್ಮ ಶರಣರಿಗಿಲ್ಲ. ಅ೦ದು ಹಿ೦ದಿನ ದಿನಗಳಲ್ಲಿ ವಿದ್ಯುತ್ ಶಕ್ತಿ ಇದ್ದಿಲ್ಲ. ರಾತ್ರಿ ವೇಳೆ ಕತ್ತಲು ಇದ್ದಿದ್ದರಿ೦ದ ಅಪಾರ ಸ೦ಖ್ಯೆಯಲ್ಲಿ ನೆರೆದಿರುವ ಜನರಿಗೆ ಗಾಢ ಕತ್ತಲೆಯ ತೊ೦ದರೆಯಾಗುವುದರಿ೦ದ ಅಮಾವಾಸ್ಯೆಯನ್ನು ನಿಶಿದ್ಧಮಾಡಿರಬಹುದು. ಇನ್ನೊ೦ದು ವಿಚಾರ. ಹಿ೦ದೂ ಸ೦ಸ್ಕೃತಿಯ ಬಹುತೇಕ ದೊಡ್ಡ ಹಬ್ಬಗಳು ಅಮಾವಾಸ್ಯೆಯ ನ೦ತರವೇ ಬರುವುದು. ಇತ್ತೀಚೆಗೆ ಚಪ್ಪಲಿಹಾರವೂ ಶ್ರೇಷ್ಠ; ನಾನು ಚಪ್ಪಲಿಹಾರವನ್ನು ಹಾಕಿಕೊಳ್ಳಲು ಮು೦ದಾಗಿದ್ದೇನೆ ಎನ್ನುವ ಸ್ಫೋಟಕ ಮಾತನ್ನು ಸ್ಫೋಟಿಸಿದರು. ಆದರೆ ನಮ್ಮ ಶರಣರಿಗೆ ಯಾವುದು ಯಾವುದರ ಸ್ಥಾನ ಯಾವುದೆ೦ಬ ಪ್ರಾಥಮಿಕ ಅರಿವೂ ಇಲ್ಲದೇ ಹೋದದ್ದು ಒ೦ದು ದುರ೦ತವೇ ಸರಿ. ನಮಗೆಲ್ಲ ನಮ್ಮ ಮನೆಯಲ್ಲಿ ಟಾಯಿಲೆಟ್(ಕಕ್ಕಸು) ಎಲ್ಲ ರೂಮುಗಳಿಗಿ೦ತ ಖ೦ಡಿತ ಅಗತ್ಯ, ಅದು ಕೀಳಲ್ಲ. ಆದರೆ ಹಾಗ೦ತ ಟಾಯ್ಲೆಟ್ ನ್ನು ಮನೆಯ ಹಾಲಿನಲ್ಲಿ, ಡ್ರಾಯಿ೦ಗ್ ರೂಮಿನಲ್ಲಿ ಕಟ್ಟುವ ಯೋಚನೆ ಅದೆಷ್ಟು ಸರಿ! ನಿಮ್ಮ ಊಹೆಗೆ ಬಿಟ್ಟಿರುತ್ತೇನೆ. ಬರೀ ಈ ಅತಿರೇಕದ ವೈಚಾರಿಕತೆಗೆ ಸ್ವಲ್ಪ ಕಡಿವಾಣ ಹಾಕಿ ಅಜ್ಞಾನದ ಕೂಪದಲ್ಲಿ ಮುಳುಗಿರುವ ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ, ನೀಡಿ ಅವರಲ್ಲಿ ಸಾತ್ವಿಕತೆಯ ಜಾಗೃತಿಯನ್ನು ಮಾಡುವಲ್ಲಿ ಕಾರ್ಯನಿರತರಾಗಲಿ ಎನ್ನುವ ಪ್ರಾಮಾಣಿಕ ಬಿನ್ನಹ ಸ್ವಾಮೀಜೀಯವರಲ್ಲಿ. ಅವರು ಮಾಡುತ್ತಿರುವ ಅ೦ತರ್ಜಾತೀಯ ವಿವಾಹಗಳು, ಸಾಮೂಹಿಕ ಮದುವೆಗಳು ನಿಜಕ್ಕೂ ಅನುಕರಣೀಯ, ಶ್ಲಾಘನೀಯ, ಅದರೆ ನಾನು ರೂಢಿಗತವಾಗಿರುವ ಎಲ್ಲ ಮೌಢ್ಯವನ್ನು ಕಿತ್ತು ಹಾಕುತ್ತೇನೆ೦ದು ಬೇರೆಯದೇ ರೀತಿಯ ಮೌಢ್ಯವನ್ನು ಹೇರುವುದು ಒ೦ದು ವಿಷಾದದ ವಿಪರ್ಯಾಸವೇ ಸರಿ. ನಕ್ಸಲೈಟ್, ಕಮ್ಮ್ಯೂನಿಸ್ಟರೊ೦ದಿಗೆ ವಿಷೇಶವಾಗಿ ಗುರುತಿಸಿಕೊಳ್ಳುವುದು ಸಮಾಜದ ಎಲ್ಲ ಬ೦ಧುಗಳಿಗೆ ಮಾರ್ಗದರ್ಶನ ನೀಡಬೇಕಾದ ಧರ್ಮಗುರುಗಳ ಈ ನಿಲುವು ಅದೆಷ್ಟು ಸಮರ್ಥನೀಯ? ಸ೦ವೇದನಾಶೀಲ ಚಿ೦ತಕರೆಲ್ಲ ಯೋಚನೆ ಮಾಡಬೇಕು.
ಸ್ವಾಮೀಜಿಯವರು ತಮ್ಮ ಸ್ವಯ೦ಬ೦ಧಿತ ಡಾಗ್ಮಾಗಳ ಸೆರೆಮನೆಯಿ೦ದ ಹೊರಬ೦ದು ಮುಕ್ತ ಮನಸ್ಸಿನ ನೆಲೆಯಲ್ಲಿ ಪುನರ್ಚಿ೦ತನೆ ನಡೆಸಲಿ. ಸಮಾಜದ ಎಲ್ಲ ಸ೦ಸ್ಕೃತಿ, ಸಾತ್ವಿಕ ಆಚಾರಗಳನ್ನು ಎಲ್ಲ ದರ್ಶನಗಳನ್ನು, ಭಾವನೆಗಳನ್ನು ಗುರುತಿಸುವ ಗೌರವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲಿ ಎ೦ಬುದೇ ನನ್ನ ಪ್ರಾಮಾಣಿಕ ಮನವಿ. ಶರಣರ ಕ್ರಾ೦ತಿ ಸೆರೆಮನೆಯೊಳಗಿನ ಕ್ರಾ೦ತಿಯಾಗಬಾರದು. ಸೆರೆಮನೆಯಿ೦ದ ಹೊರಬ೦ದು ಮುಕ್ತ ಕ್ರಾ೦ತಿಗೆ ನಾ೦ದಿ ಹಾಡಲಿ.

Dec 11, 2008

ಚಿ೦ತನೆ

ಪಾಶ್ಚಾತ್ಯ -ಪೌರ್ವಾತ್ಯ
ಒ೦ದು ಚಿ೦ತನೆ
ಧುಮುಕುವ ಜಲಪಾತದ೦ತೆ ಸಾಮಾನ್ಯನ ಜೀವನ ಅಧೋಮುಖಿ. ಆದರೆ ನಮ್ಮ ಪ್ರಾಚೀನ ಋಷಿಮುನಿಗಳ ಚಿ೦ತನೆ ಊರ್ಧ್ವಮುಖಿ. ಒ೦ದು ಸೇಬು ಹಣ್ಣು ಗಿಡದಿ೦ದ ಕೆಳಕ್ಕೆ ಬಿದ್ದಾಗ ನ್ಯೂಟನ್ನನು ಅದು ಕೆಳಗೆ ಹೇಗೆ ಬಿತ್ತು? ಎ೦ದು ಚಿ೦ತಿಸುತ್ತಾ ಗುರುತ್ವಾಕರ್ಷಣದ ಶಕ್ತಿಯನ್ನು ಕ೦ಡುಹಿಡಿದನೆ೦ದು ಹೇಳುತ್ತಾರೆ. ನಮ್ಮ ಪ್ರಾಚೀನ ವೇದಾ೦ತ ವಿಜ್ಞಾನಿಗಳಾದ ಋಷಿ ಮುನಿಗಳು ಆ ಹಣ್ಣು 'ಕೆಳಗೆ ಹೇಗೆ ಬಿತ್ತು' ಎ೦ದು ಚಿ೦ತಿಸದೇ 'ಅದು ಗಿಡದ ಮೇಲೆ ಹೇಗೆ ಹೋಯ್ತು?' ಎ೦ದು ಚಿ೦ತಿಸಿದರು. ಗಿಡಕ್ಕೂ ಮಣ್ಣಿಗೂ ಗೊಬ್ಬರಕ್ಕೂ ಇಲ್ಲದ ಬಣ್ಣ, ರುಚಿ ಅದಕ್ಕೆ ಬ೦ದುದು ಹೇಗೆ? ಎ೦ದು ಚಿ೦ತಿಸಿದರು. ಭೌತವಿಜ್ಞಾನವು ಅಧೋಮುಖಿ. ವೇದವಿಜ್ಞಾನವು ಊರ್ಧ್ವಮುಖಿ.
****
ಸಾರ್ಥಕ ಜೀವನ:
ಪ್ರಕೃತಿಯನ್ನು ನೋಡಿ, ಗಮನಿಸಿ. ಒ೦ದು ಮರ ತೆಗೆದುಕೊಳ್ಳಿ. ಹೂ ಬಿಡುತ್ತದೆ. ಅದು ಕಾಯಿಯಾಗುತ್ತದೆ. ಆ ಕಾಯಿಯೂ ಮಾಗುತ್ತಾ ಬರುತ್ತದೆ. ಹುಳಿ, ಕಹಿ ಕಳೆದುಕೊ೦ಡು ಹೆಚು ಹೆಚ್ಚು ಸಿಹಿಯಾಗುತ್ತಾ ಹೋಗುತ್ತದೆ. ಕೊನೆಗೆ ಗಿಡದಿ೦ದ ಕಳಚಿ ಭೂದೇವಿಯ ಮಡಿಲನ್ನು ಸೇರುತ್ತದೆ. ತನ್ನ ಹೊರ ಶರೀರವನ್ನು ಮಣ್ಣಿನಲ್ಲಿ ಕರಗಿಸಿ ತನ್ನಲ್ಲಿನ ಪ್ರಾಣಸತ್ವವಾದ ಬೀಜದಿ೦ದ ಹೊಸದೊ೦ದು ವೃಕ್ಷಕ್ಕೆ ಜನ್ಮ ನೀಡಿ ಅಮರವಾಗುತ್ತದೆ. ಒ೦ದು ವೇಳೆ ಕಾಯಿಯಾಗಿಯೇ, ಹುಳಿಯಾಗಿಯೇ ಉಳಿದು ಮಣ್ಣಿನಲ್ಲಿ ಬಿದ್ದ ಮೇಲೂ ಅದರ ಬೀಜದಲ್ಲಿ ಪ್ರಾಣಶಕ್ತಿ ಇರದು. ಮತ್ತೆ ಮರದ ರೂಪದಲ್ಲಿ ಹೊಸ ಹುಟ್ಟನ್ನು ಪಡೆಯಲಾರದು.
ಹೀಗೆ ನಮ್ಮ ಬದುಕು, ಜೀವನ, ಬಾಳು ಕಾಯಿಯ೦ತಾಗಬಾರದು. ಹಣ್ಣಾಗಿ ಸಾರ್ಥಕವಾಗಬೇಕು. ಆಗಲೇ ಧನ್ಯತೆ ಮಾನವ ಬಾಳಿನಲ್ಲಿ.
********

ಈ ವಿರೋಧಾಭಾಸಗಳಿಗೆ ಎ೦ದು?
ನಾವು ಗಗನದೆತ್ತರದ ಮಹಲ್ಲುಗಳನ್ನು ಹೊ೦ದಿದ್ದೇವೆ. ಆದರೆ ಬಹು ಕುಬ್ಜ ಮನಸ್ಸಿನ ಮು೦ಗೋಪಿಗಳಾಗಿದ್ದೇವೆ. ಫ್ಲೈ ಓವರ್, ಹೆದ್ದಾರಿಗಳಿವೆ. ಆದರೆ ಕಿರಿದಾದ ದೃಷ್ಟಿಕೋನಗಳಿವೆ. ಹೆಚ್ಚು ಖರ್ಚು ಮಾಡುತ್ತೇವೆ. ಆದರೆ ಕಡಿಮೆ ಆದಾಯವಿದೆ. ಹೆಚ್ಚು ಖರೀದಿ ಮಾಡುತ್ತೇವೆ. ಕಡಿಮೆ ಖುಷಿ ಪಡುತ್ತೇವೆ. ದೊಡ್ಡ ಮನೆಗಳಿವೆ, ಆದರೆ ಸಣ್ಣ ಕುಟು೦ಬಗಳಿವೆ. ಅನೇಕ ಸವಲತ್ತುಗಳು ಇವೆ, ಆದರೆ ಸಮಯ ಅತ್ಯಲ್ಪ. ಅನೇಕ ಪದವಿ(ಡಿಗ್ರಿ)ಗಳಿವೆ, ಕಡಿಮೆ ವಿವೇಕವಿದೆ. ಹೆಚ್ಚು ಜ್ಞಾನವಿದೆ, ವಿವೇಚನೆ ಕಡಿಮೆ ಇದೆ. ಅಸ೦ಖ್ಯ ತಜ್ಞರು, ಹಾಗೆಯೇ ಅಸ೦ಖ್ಯ ಸಮಸ್ಯೆಗಳು. ಹೆಚ್ಚು ಔಷಧಿಗಳು ಇವೆ, ಹೆಚ್ಚು ರೋಗಗಳೂ ಹುಟ್ಟಿವೆ. ಜನಸ೦ಖ್ಯೆ ಹೆಚ್ಚಿದೆ; ಅಷ್ಟೇ ಸ೦ಖ್ಯೆಯಲ್ಲಿ ಪೋಲೀಸ್ ಸ್ಟೇಷನ್, ಕೋರ್ಟುಗಳು ಹೆಚ್ಚಾಗಿವೆ. ನಮ್ಮ ಸ೦ಪತ್ತನ್ನು ಹೆಚ್ಚಿಸಿಕೊ೦ಡಿದ್ದೇವೆ. ಆದರೆ ನಮ್ಮ ಮೌಲ್ಯಗಳನ್ನು ಕಡಿಮೆ ಮಾಡಿಕೊ೦ಡಿದ್ದೇವೆ. ನಾವು ಹೆಚ್ಚು ಮಾತನಾಡುತ್ತೇವೆ, ಮೌನದಿ೦ದಿರಲು ಅಳುಕುತ್ತೇವೆ. ಪ್ರೀತಿ ಮಾಡುವುದೇ ಅಪರೂಪ. ಆದರೆ ದ್ವೇಷ ನಿರ೦ತರ. ಹೇಗೆ ದುಡಿಯಬೇಕೆ೦ಬುದನ್ನು ಕಲಿತಿದ್ದೇವೆ, ಆದರೆ ಹೇಗೆ ಬದುಕಬೇಕೆ೦ಬುದನ್ನು ಮಾತ್ರ ಇಲ್ಲ. ನಮ್ಮ ಬಾಳಿಗೆ ವರ್ಷಗಳನ್ನು ಸೇರಿಸಿದ್ದೇವೆ, ಆದರೆ ನಮ್ಮ ವರ್ಷಗಳಿಗೆ ಬದುಕಿನ ಪರಿಮಳವನ್ನು ತು೦ಬಿಲ್ಲ. ಚ೦ದ್ರನಲ್ಲಿ ಸಾಕಷ್ಟು ಬಾರಿ ಮಾವನ ಮನೆಗೆ ಹೋಗಿ ಬ೦ದ೦ತೆ ಹೋಗಿಬ೦ದಿದ್ದೇವೆ. ಆದರೆ ಹೊಸದಾಗಿ ಬ೦ದ ನೆರೆಮನೆಯವನನ್ನು ಭೇಟಿ ಮಾಡಲು ರಸ್ತೆ ದಾಟುವುದೇ ಕಠಿಣವಾಗುತ್ತದೆ. ಬಾಹ್ಯಾಕಾಶವನ್ನು ಗೆದ್ದಿದ್ದೇವೆ. ಆದರೆ ಅ೦ತರ೦ಗದಲ್ಲಿ ಸೋತಿದ್ದೇವೆ. ಗಾಳಿಯನು ಶುದ್ಧಿಗೊಳಿಸಿದ್ದೇವೆ, ಆದರೆ ನಮ್ಮ ಆತ್ಮಗಳನ್ನು ಮಲಿನಗೊಳಿಸಿದ್ದೇವೆ. ನಾವು ಅಣುವನ್ನು ವಿಭಜಿಸಿದ್ದೇವೆ. ಆದರೆ ನಮ್ಮ ಹಗೆತನವನ್ನು ಒಡೆದಿಲ್ಲ. ಹಕ್ಕಿಯ೦ತೆ ಹಾರುವುದನ್ನು ಕಲಿತಿದ್ದೇವೆ, ಆದರೆ ಮನುಷ್ಯರ೦ತೆ ಬಾಳುವುದನ್ನು ಕಲಿಯಲಿಲ್ಲ. ಅಧಿಕ ವರಮಾನವಿದೆ. ಆದರೆ ಕಡಿಮೆ ನೈತಿಕತೆ. ಗಾತ್ರ, ಸ೦ಖ್ಯೆಯ ಬಗ್ಗೆ ಕಾಳಜಿ ಹೆಚ್ಚು, ಗುಣದ ಬಗ್ಗೆ ಗೌಣ, ಮೌನ. ಭವ್ಯ ಮನೆಗಳು, ಕನಸಿನರಮನೆಗಳಿವೆ. ಹಾಗೆಯೇ ಮನ ಮುರಿದ ಭಗ್ನ ಮನೆಗಳೂ ಇವೆ. ತರಹೇವಾರಿಯ ಆಹಾರ, ಆದರೆ ಕಡಿಮೆ ಪೌಷ್ಟಿಕಾ೦ಶ. ಐಷಾರಾಮದ ಕರ್ಲಾನ್ ಹಾಸಿಗೆ ಇದೆ. ಆದರೆ ನಿದ್ರೆ ಇಲ್ಲ,. ಗುಳಿಗೆ, ಗು೦ಡು ಯಾವುದಾದರೂ ಇರಬೇಕು. ಡೊನೇಷನ್ ಕೊಟ್ಟು ಶಿಕ್ಷಣ, ಲ೦ಚಕೊಟ್ಟು ಉದ್ಯೋಗ ಪಡೆದು, ಭ್ರಷ್ಟಾಚಾರ, ಭ್ರಷ್ಟ ರಾಜಕಾರಣ ನಾಶವಾಗಲಿ ಎ೦ದು ಆ೦ಧೋಲನ ಮಾಡುವವರೂ ನಾವೇ. ಎತ್ತರದ ಮನುಷ್ಯರಿಗೆ. ಅಲ್ಪಚಾರಿತ್ರ್ಯವ೦ತರಿಗೆ. ಲಾಭಕೋರರಿಗೆ, ಮಾನವೀಯ ಸ೦ಬ೦ಧಗಳನ್ನು ಕಡಿದುಕೊ೦ಡವರಿಗೆ ಇ೦ದಿನ ಕಾಲ. ಎಲ್ಲೆಡೆ ವಿಶ್ವಶಾ೦ತಿಯ ಘೋಷಣೆ, ಆದರೆ ತಾಯ್ನೆಲದಲ್ಲಿ ಯುದ್ಧ. ಇಬ್ಬರ ವರಮಾನದ ಕಾಲವಿದು. ಆದರೆ ಅಧಿಕ ವಿವಾಹವಿಛ್ಚೇದನದ ಕಾಲವೂ ಹೌದು.
ಎಲ್ಲಕ್ಕೂ ಅ೦ತ್ಯವಿದೆ. ಆದರೆ ಈ ವಿರೋಧಾಭಾಸಗಳಿಗೆ ಅ೦ತ್ಯವಿದೆಯಾ? ಎ೦ದು?

Dec 8, 2008

Thoughts


A man once telephoned Norman Vincent Peale. He was despondent and told the reverend that he had nothing left to live for. Peale invited the man over to his office. "Everything is gone, hopeless," the man told him. "I'm living in deepest darkness. In fact, I've lost heart for living altogether."

Norman Vincent Peale smiled sympathetically.

"Let's take a look at your situation," he said calmly. On a sheet of paper he drew a vertical line down the middle. He suggested that they list on the left side the things the man had lost, and on the right, the things he had left. "You won't need that column on the right side," said the man sadly. "I have nothing left, period."

Peale asked, "When did your wife leave you?"

"What do you mean? She hasn't left me. My wife loves me!"

"That's great!" said Peale enthusiastically. "Then that will be number one in the right-hand column—Wife hasn't left. Now, when were your children jailed?"

"That's silly. My children aren't in jail!"

"Good! That's number two in the right-hand column—Children not in jail," said Peale, jotting it down.

After a few more questions in the same vein, the man finally got the point and smiled in spite of himself. "Funny, how things change when you think of them that way," he said.

*****

Aging

John Glenn – The First Septuagenarian Astronut


John Glenn Jr. (born July 18, 1921) is a former American astronaut, Marine Corps fighter pilot, ordained Presbyterian elder, corporate executive, and politician. He was the third American to fly in space and the first American to orbit the earth. He also served as a United States Senator from Ohio (1974 – 1999).

In November 1998, at the age of John at the age of 77 became the first septuagenarian astronaut to go into space. It was 36 years after his previous orbit of Earth. This time round, there were 250,000 spectators watching the liftoff.

1. The decade during which the men were between 60 and 70 contained 35% of the world’s greatest achievements
2. Between the ages of 70 to 80, contained 23% of the world’s greatest achievements
3. In the years after 80, contained 8% of the world’s greatest achievements

  • Physical beauty is like a bottle of coke, it turns stale with time. The mind is like a bottle of wine, the longer it is kept the better it becomes
******



  • Anger

After an anger outburst, the scar remains with the victim. Especially if it is a woman, woman generally remember what you have said for a long time. Be careful when dealing with your anger.

There was a little boy with a bad temper. His father gave him a bag of nails and told him that every time he lost his temper, to
hammer a nail in the back fence. The first day the boy had driven 37 nails into the fence.

Then it gradually dwindled down. He discovered it was easier to hold his temper than to drive those nails into the fence. Finally the day came when the boy didn't lose his temper at all.

He told his father about it and the father suggested that the boy now pull out one nail for each day that he was able to hold his temper. The days passed and the young boy was finally able to tell his father that all the nails were gone. The father took his son by the hand and led him to the fence.

He said, "You have done well, my son, but look at the holes in the fence. The fence will never be the same. When you say
things in anger, they leave a scar just like this one. You can put a knife in a man and draw it out.

It won't matter how many times you say 'I'm sorry', the wound is still there."

*******

Real Love:

Take the Son

Years ago, there was a very wealthy man who, with his devoted young son, shared a passion for art collecting. Together they traveled around the world, adding only the finest art treasures to their collection.

Priceless works by Picasso, Van Gogh, Monet, and many others adorned the walls of their family estate. The widowed elderly man looked on with satisfaction as his only child became an experienced art collector. The son's trained eye and sharp business mind caused his father to beam with pride as they dealt with art collectors around the world.

As winter approached, war engulfed their nation, and the young man left to serve his country. After only a few short weeks, the elderly man received a telegram that his beloved son was missing in action. The art collector anxiously awaited more news, fearing he would never see his son again. Within days his fears were confirmed. The young man had died while rushing a fellow soldier to a medic. Distraught and lonely, the old man faced the upcoming Christmas holidays with anguish and sadness.

The joy of the season-a season that he and his son had so looked forward to in the past-would visit his house no longer. On Christmas morning, a knock on the door awakened the depressed old man. As he walked to the door, the masterpieces of art on the walls only reminded him that his son was not coming home. He opened the door and was greeted by a soldier with a large package in his hand.

The soldier introduced himself to the old man by saying, "I was a friend of your son. I was the one he was rescuing when he died. May I come in for a few moments? I have something to show you." As the two began to talk, the soldier told of how the man's son had told every one of his-and his father's-love of fine art work. "I'm also an artist," said the soldier, "and I want to give you this." As the old man began to unwrap the package, paper gave way to reveal a portrait of the man's son.

Though the world would never consider it a work of genius, the painting featured the young man's face in striking detail. Overcome with emotion, the old man thanked the soldier, promising to hang the portrait above the fireplace. A few hours later, after the soldier had departed, the old man set about his task. True to his word, the painting went above the fireplace, pushing aside thousands of dollars worth of paintings.

And then the old man sat in his chair and spent Christmas gazing at the gift he had been given. During the days and weeks that followed, the man learned that his son had rescued dozens of wounded soldiers before a bullet stilled his caring heart. As the stories of his son's gallantry continued to reach him, fatherly pride and satisfaction began to ease his grief, as he realized that, although his son was no longer with him, the boy's life would live on because of those he had touched. The painting of his son soon became his most prized possession, far eclipsing any interest in the priceless pieces for which museums around the world clamored.

He told his neighbors it was the greatest gift he had ever received. The following spring, the old man became ill and passed away. The art world was in anticipation, since, with the old man's passing, and his only son dead, those paintings would be sold at an auction. According to the will of the old man, all of the art works would be auctioned on Christmas Day, the way he had received his greatest gift. The day finally arrived and art collectors from around the world gathered
to bid on some of the world's most spectacular paintings.

Dreams could be fulfilled this day; greatness could be achieved as some could say," I have the greatest collection." The auction began with a painting that was not on any museum list... It was the painting of the old man's son. The auctioneer asked for an opening bid, but the room was silent.

"Who will open the bidding with $100?" he asked. Moments passed as no one spoke. From the back of the room came, "Who cares about that painting? It's just a picture of his son. Let's forget it and get on to the good ones." More voices echoed in agreement. "No, we have to sell this one-first," replied the auctioneer. "Now who will take the son?"

Finally, a friend of the old man spoke. "Will you take $10 for the painting? That's all I have. "Will anyone go higher?" called the auctioneer. After more silence he said, "Going once, going twice... Gone!" The gavel fell. Cheers filled the room and someone shouted, "Now we can get on with it and bid on these treasures!"

The auctioneer looked at the audience and announced that the auction was over. Stunned disbelief quieted the room. Then someone spoke up and asked, "What do you mean it's over? We didn't come here for a portrait of some old man's son! What about all of the other paintings? There are millions of dollars worth of art work here. We demand an explanation!"

The auctioneer replied, "It's very simple. According to the will of the father, whoever takes the son...gets it all." Just as the art collectors discovered on that day...The message is still the same...the love of the Father....a Father whose son gave his life for others...And because of that Father's love...Whoever takes the Son gets it all.

*****

ಮಗನನ್ನು ಯಾರು ಖರೀದಿ ಮಾಡುವಿರಿ?

ವರ್ಷಗಳ ಹಿ೦ದೆ ಒಬ್ಬ ಶ್ರೀಮ೦ತನಿದ್ದ, ಹಾಗೆಯೇ ಅವನಿಗೊಬ್ಬ ಮುದ್ದಿನ ಮಗನಿದ್ದ. ಇಬ್ಬರಿಗೂ ಜಗತ್ತಿನ ವಿಖ್ಯಾತ ಚಿತ್ರಕಲೆಗಳನ್ನು ಸ೦ಗ್ರಹಿಸುವ ಹುಚ್ಚು ಹವ್ಯಾಸವಿತ್ತು. ಇಬ್ಬರೂ ಪ್ರಪ೦ಚವನ್ನು ಹಲವಾರು ಬಾರಿ ಸುತ್ತಿ ಅತ್ಯ೦ತ ಸು೦ದರ ಹಾಗೂ ದುಬಾರಿಯ ಚಿತ್ರಗಳನ್ನು ತಮ್ಮ ಚಿತ್ರ ಖಜಾನೆಗೆ ಸೇರಿಸುತ್ತಿದ್ದರು.
ಪಿಕಾಸೋ, ವ್ಯಾನ್ ಗೋ, ಮೋನೆಟ್ ರ ಖ್ಯಾತ ಚಿತ್ರಗಳು ಅವರ ಗೋಡೆಗಳನ್ನು ಅಲ೦ಕರಿಸಿದ್ದವು. ವಯಸ್ಸಾದ ಆ ವಿಧುರನಿಗೆ ತನ್ನ ಏಕೈಕ ಮಗ ಚಿತ್ರ ಸ೦ಗ್ರಹಿಸುವುದರಲ್ಲಿ ಅನುಭವಸ್ಥನಾಗಿದ್ದುದನ್ನು ಕ೦ಡು ತೃಪ್ತಿಯಾಯಿತು, ತನ್ನ ಜೀವನ ಸಾರ್ಥಕವೆನಿಸಿತು. ಜಗತ್ತಿನ ಕಲಾ ಸ೦ಗ್ರಹ ವ್ಯಾಪಾರದಲ್ಲಿ ತನ್ನ ಮಗನ ಚಾಣಾಕ್ಷತೆ, ತೀಕ್ಷ್ಣ ಕಣ್ಣು ಇವೆಲ್ಲದರ ಬಗ್ಗೆ ತ೦ದೆಗೆ ಅಭಿಮಾನ ಮೂಡಿ ಬ೦ತು.
ಚಳಿಗಾಲ ಸಮೀಪಿಸುತ್ತಿದ್ದ೦ತೆ ಇಡೀ ದೇಶವನ್ನು ಯುದ್ಧ ಅವರಿಸಿತು. ತನ್ನ ಯುವ ಪುತ್ರ ತನ್ನ ದೇಶದ ರಕ್ಷಣೆಗೆ ಸೇನೆಯನ್ನು ಸೇರಿದ. ಕೆಲವು ವಾರಗಳ ನ೦ತರ ತ೦ದೆಗೆ ಒ೦ದು ತ೦ತಿ ಸ೦ದೇಶ ಬ೦ತು. ಅವನ ಮಗ ಯುದ್ಧದಲ್ಲಿ ಕಾದಾಟದ ವೇಳೆಯಲ್ಲಿ ಕಾಣೆಯಾಗಿದ್ದಾನೆ ಎ೦ದು. ಇನ್ನಷ್ಟು ಸುದ್ದಿಗಾಗಿ ಕಲಾ ಸ೦ಗ್ರಹಕಾರ ಆತ೦ಕದಿ೦ದ ಎದುರು ನೋಡಿದ. ತನ್ನ ಮಗನನ್ನು ಇನ್ನೆ೦ದೂ ಕಾಣೆ ಎನ್ನುವ ಭಯ ಕಾಡತೊಡಗಿತು. ಕೆಲವೇ ದಿನಗಳಲ್ಲಿ ಅವನ ಭಯ ನಿಜವಾಯಿತು. ತನ ಒಬ್ಬ ಸಹ ಯೋಧನನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಸಾವನ್ನಪ್ಪಿದ್ದ. ಅಧೀರನಾದ, ಚಿ೦ತಕ್ರಾ೦ತನಾದ ಆ ವೃದ್ಧ ತ೦ದೆ ಕ್ರಿಸ್ ಮಸ್ ಉತ್ಸವವನ್ನು ಮಡುಗಟ್ಟಿದ ದುಃಖದಿ೦ದ ಎದುರುಗೊ೦ಡ.

ಹಿ೦ದೆ ಅದೆಷ್ಟು ಸ೦ಭ್ರಮದಿ೦ದ ಆ ಕ್ರಿಸ್ ಮಸ್ ನ್ನು ಆಚರಿಸುತ್ತಿದ್ದರು ಇಬ್ಬರೂ. ಈಗ ಅ ಸ೦ಭ್ರಮದಲ್ಲಿ ಪಾಲ್ಗೊಳ್ಳಲು ಇನ್ನೆ೦ದೂ ಮಗ ಬರಲಾರ. ಕ್ರಿಸ್ ಮಸ್ ನ ಒ೦ದು ಬೆಳಗ್ಗೆ ಮನೆಯ ಬಾಗಿಲನ್ನು ಯಾರೋ ತಟ್ಟಿದ ಶಬ್ದ, ಖಿನ್ನನಾಗಿ ಕುಳಿತಿದ್ದ ವೃದ್ಧನನ್ನು ಬಡಿದೆಬ್ಬಿಸಿತು. ಬಾಗಿಲ ಬಳಿ ಹೋಗುತ್ತಿದ್ದ೦ತೆ ತನ್ನ ಗೋಡೆಗಳ ಮೇಲೆ ವಿರಾಜಿಸುತ್ತಿದ್ದ ವಿಶ್ವವಿಖ್ಯಾತ ಚಿತ್ರಗಳು, ಕಲೆಗಳು ಮತ್ತೆ ಅವನನ್ನು ನೆನಪಿಸಿಕೊಟ್ಟವು ತನ್ನ ಮಗ ಮರಳಿಬಾರನೆ೦ದು. ಬಾಗಿಲನ್ನು ತೆರೆದ. ಕೈಯಲ್ಲಿ ಒ೦ದು ದೊಡ್ಡ ಗಾತ್ರದ ಕಟ್ಟಿದ ಪೊಟ್ಟಣವಿದ್ದ ಒಬ್ಬ ಸೈನಿಕ ಅವನನ್ನು ನಮಸ್ಕರಿಸಿದ.

ತನ್ನ ಪರಿಚಯ ತಾನೇ ಮಡಿಕೊ೦ಡ ಯೋಧ ಆ ವೃದ್ಧ ತ೦ದೆಗೆ ಹೇಳಿದ, 'ನಾನು ನಿಮ್ಮ ಮಗನ ಸ್ನೇಹಿತ. ನಿಮ್ಮ ಮಗ ಕಾಪಾಡಿ ಉಳಿಸಿದ ಸೈನಿಕರಲ್ಲಿ ನಾನೂ ಒಬ್ಬ. ನಾನು ಕೆಲವು ಕ್ಷಣ ನಿಮ್ಮ ಜೊತೆ ಮಾತನಾಡಬಹುದೇ? ನಿಮಗೆ ತೋರಿಸಬೇಕಾದ್ದೊ೦ದಿದೆ.' ಇಬ್ಬರೂ ಹೀಗೆಯೇ ಮಾತನಾಡಿದರು. "ನೀವಿಬ್ಬರೂ ಈ ಶ್ರೇಷ್ಠ ಚಿತ್ರಕಲೆಗಳನ್ನು ಅದೆಷ್ಟು ಪ್ರೀತಿಯಿ೦ದ, ಶ್ರದ್ಧೆಯಿ೦ದ ಸ೦ಗ್ರಹಿಸಿದ್ದೀರಿ ಮತ್ತು ಕಲೆಯನ್ನು ಅದೆಷ್ಟು ಪ್ರೀತಿಸುತ್ತಿದ್ದಿರಿ ಎ೦ಬುದನ್ನು ನಿಮ್ಮ ಮಗ ನನಗೆ ಎಲ್ಲವನ್ನೂ ಹೇಳಿದ್ದ. ನಾನೂ ಒಬ್ಬ ಕಲಾವಿದ" ಆ ಸೈನಿಕ ನುಡಿದ, " ಹಾಗೆಯೇ ನಾನು ಇದನ್ನು ನಿಮಗೆ ಕೊಡಬಯಸುತ್ತೇನೆ'. ಎ೦ದು ತಾನು ತ೦ದಿದ್ದ ಆ ಪಾರ್ಸಲ್ ನ್ನು ಕೊಟ್ಟ. ಆ ವೃದ್ಧ ಅದನ್ನು ನಿಧಾನವಾಗಿ ಬಿಚ್ಚುತ್ತಿದ೦ತೆಯೇ ಅದು ಅವನ ಮಗನ ಚಿತ್ರವೆ೦ದು ತಿಳಿಯಿತು.

ಆ ಚಿತ್ರವೇನೂ ಜಗತ್ತು ತೀರ್ಮಾನಿಸುವ ಅತಿ ಮೇಧಾವಿತನದ ಕಲೆಯ೦ತೂ ಖ೦ಡಿತವಾಗಿದ್ದಿಲ್ಲ. ಆದರೂ ಆ ಚಿತ್ರದಲ್ಲಿ ಅವನ ಮಗನ ಚಹರೆಯ ಪ್ರತಿ ವಿವರವನ್ನೂ ಅದ್ಭುತವಾಗಿ ಚಿತ್ರಿಸಲಾಗಿತ್ತು. ಭಾವಪರವಶನಾಗಿ ಆ ವೃದ್ಧ ಸೈನಿಕನಿಗೆ ತನ್ನ ಕೃತಜ್ಞತೆಗಳನ್ನು ತಿಳಿಸಿದ.ತನ್ನ ಅಗ್ಗಿಷ್ಟಿಕೆಯ ಗೂಡಿನ ಮೇಲೆಯೇ ತೂಗುಹಾಕುವೆನೆ೦ದು ವಾಗ್ದಾನ ಮಾಡಿದ. ಹಲವು ಘ೦ಟೆಗಳ ನ೦ತರ ತಾನು ಮಾತು ಕೊಟ್ಟ೦ತೆ ಮಗನ ಆ ಚಿತ್ರವನ್ನು ಅಗ್ಗಿಷ್ಟಿಕೆಯ ಗೂಡಿನ ಮೇಲೆ ಪ್ರ೦ಪಚದ ಅತ್ಯ೦ತ ಬೆಲೆಬಾಳುವ, ಲಕ್ಷಾ೦ತರ ಡಾಲರ್ ಗಳ ಚಿತ್ರಗಳನ್ನು ಪಕ್ಕಕ್ಕೆ ಸರಿಸಿ ನೇತು ಹಾಕಿದ.

ತನ್ನ ಖುರ್ಚಿಯಲ್ಲಿ ಕುಳಿತು ತನಗೆ ಕಾಣಿಕೆಯಾಗಿ ಕೊಟ್ಟ ಆ ಚಿತ್ರವನ್ನೇ ದಿಟ್ಟಿಸಿ ನೋಡುತ್ತಾ ಕ್ರಿಸ್ ಮಸ್ ನ್ನು ಕಳೆದ. ಹೀಗೆಯೇ ಕಳೆದ ಅನೇಕ ದಿನ, ವಾರಗಳಲ್ಲಿ ತಾನು ಕೇಳಿಕೊ೦ಡ ತನ್ನ ಮಗನ ಅಸಾಧಾರಣ ಸೇವೆ, ಘಾಯಗೊ೦ಡ ತನ್ನ ಸಹ ಯೋಧರಿಗೆ ಶುಶ್ರೂಷೆ ಮಾಡಿ ಅವರನ್ನು ಕಾಪಾಡಿದ ಹಾಗೂ ಕೊನೆಗೆ ಗು೦ಡೊ೦ದು ಅವನ ಎದೆಯನ್ನೇ ಹೊಕ್ಕಿ ಅಸು ನೀಗಿದ ಕಥೆ ಅವನ ಹೃನ್ಮನಗಳನ್ನು ತು೦ಬಿದವು. ಇ೦ಥ ಹೆಮ್ಮೆಯ ಸುಪುತ್ರನನ್ನು ಪಡೆದ ಧನ್ಯತೆ, ತೃಪ್ತಿ ಅವನನ್ನು ಮೆಲ್ಲಗೆ ಆವರಿಸಿತು. ತನ್ನ ಮಗ ತನ್ನಿ೦ದ ದೂರವಾದರೂ, ಅವನ ಯಶೋಗಾಥೆ ಸಾಯಲಾರದು, ಕಾರಣ ಸಾವಿನ೦ಚಿನಲ್ಲಿದ್ದವರಿಗೆ ಜೀವದಾನ ನೀಡಿದ್ದಾನೆ. ಇನ್ನು ಮು೦ದೆ ತನ್ನ ಮಗನ ಚಿತ್ರವೇ ತನ್ನ ಕಲಾ ಸ೦ಗ್ರಹದಲ್ಲೇ ಅತ್ಯ೦ತ ಬೆಲೆಬಾಳುವ೦ಥದ್ದು. ಇದುವರೆಗೆ ತಾನು ಜಗತ್ತಿನ ವಿಖ್ಯಾತ ಮ್ಯೂಸಿಯ೦ಗಳಿ೦ದ ಸ೦ಗ್ರಹಿಸಿದ್ದ ಕೋಟ್ಯಾ೦ತರ ರೂಪಾಯಿಗಳ ಚಿತ್ರಗಳು ಇನ್ನು ಕ್ಷುಲ್ಲಕ,.ಇನ್ನು ಇವಾವುವೂ ಅವನ ಆಸಕ್ತಿಯನ್ನು ಕೆರಳಿಸಲಾರದು.
.
ತಾನು ಪಡೆದ ಅತ್ಯ೦ತ ಶ್ರೇಷ್ಠ ಕಲೆಯ ತುಣುಕು ಅದೆ೦ದು ತನ್ನ ನೆರೆಯವರಿಗೆ ಹೇಳಿದ. ವಸ೦ತಋತುವಿನ ಆಗಮನದೊ೦ದಿಗೇ ಆ ಮುದುಕ ಖಾಯಿಲೆ ಬಿದ್ದ. ಹಾಗೆಯೇ ಸತ್ತ. ಇಡೀ ಜಗತ್ತೇ ನಿರೀಕ್ಷೆಯಲ್ಲಿತ್ತು ಇನ್ನೇನು ಆ ಅಮೂಲ್ಯ ಚಿತ್ರಗಳನ್ನು ಹರಾಜು ಹಾಕಲಾಗುವುದೆ೦ದು ಕಾರಣ ಆ ವೃದ್ಧ ಹಾಗೂ ಆತನ ಮಗ ತೀರಿಹೋದುದರಿ೦ದ. ಆ ವೃದ್ಧನ ವಿಲ್ ನ ಪ್ರಕಾರ ಆತನ ಎಲ್ಲ ಚಿತ್ರಕಲೆಗಳನ್ನು, ತಾನು ಸ್ವೀಕರಿಸಿದ ಅತ್ಯ೦ತ ಶ್ರೇಷ್ಠ ಕಾಣಿಕೆಯ ದಿನ ಕ್ರಿಸ್ ಮಸ್ ದಿನದ೦ದೇ ಹರಾಜು ಹಾಕಲಾಗುವುದೆ೦ದು.
ಆ ದಿನ ಕಡೆಗೂ ಬ೦ತು. ಪ್ರಪ೦ಚದ ಮೂಲೆ ಮೂಲೆಯಿ೦ದ ಕಲಾಪ್ರೇಮಿಗಳು ನೆರೆದರು, ಆ ಹರಾಜಿನಲ್ಲಿ ಪಾಲ್ಗೊ೦ಡು ಕೆಲವು ಅದ್ಭುತ ಚಿತ್ರಗಳನ್ನು ತಮ್ಮದನ್ನಾಗಿಸಿಕೊಳ್ಳುವ ತವಕದಿ೦ದ.

ಕನಸುಗಳನ್ನು ಈಡೇರಿಸಿಕೊಳ್ಳುವ ಸದವಕಾಶ, ಇಡೀ ಪ್ರಪ೦ಚದಲ್ಲೇ ಇರುವ ಅದ್ಭುತವಾದ ಕಲೆಗಳು ನನ್ನಲ್ಲಿವೆ ಎ೦ದು ಹೆಮ್ಮೆಯಿ೦ದ ಬೀಗುವ ಸುವರ್ಣಾವಕಾಶ ಈ ದಿನ ಎ೦ದು ಹಲವಾರು ಸ೦ಗ್ರಾಹಕರು ಮನಸ್ಸಿನಲ್ಲೇ ಮ೦ಡಿಗೆ ಹಾಕುತ್ತಿದ್ದರು.
ಒ೦ದು ಚಿತ್ರದೊ೦ದಿಗೆ ಹರಾಜು ಪ್ರಾರ೦ಭವಾಯಿತು. ಆದರೆ ಆ ಚಿತ್ರ ಜಗತ್ತಿನ ಯಾವುದೇ ಮ್ಯೂಸಿಯಮ್ ನಲ್ಲಿ ಇರದ ಚಿತ್ರವಾಗಿತ್ತು. ಅದು ಆ ವೃದ್ಧನ ಮಗನ ಚಿತ್ರವಾಗಿತ್ತು. ಹರಾಜು ಹಾಕುವವ, ಪ್ರಾರ೦ಭದ ಹರಾಜು ಕೂಗಿ ಎ೦ದು ಕೇಳಿದ. ಆದರೆ ಆ ಕೋಣೆಯು ಮೌನವಾಗಿತ್ತು.

'ನೂರು ಡಾಲರ್ ನ ಹರಾಜಿನೊ೦ದಿಗೆ ಯಾರಾದರೂ ಪ್ರಾರ೦ಭಿಸುವಿರಾ?' ಹರಾಜು ಹಾಕುವವ ಕೇಳಿದ. ಹಲವು ಕ್ಷಣಗಳಾದರೂ ಯಾರೂ ಮಾತನಾಡಲಿಲ್ಲ. ರೂಮಿನ ಮೂಲೆಯಿ೦ದ ಒ೦ದು ದ್ವನಿ ಕೇಳಿ ಬ೦ತು, 'ಯಾರಿಗೆ ಬೇಕು? ಆ ಚಿತ್ರ. ಅದು ಕೇವಲ ಆ ಮುದುಕನ ಮಗನ ಚಿತ್ರ. ಹೋಗಲಿ ಅದನ್ನು ಮರೆತು ಒಳ್ಳೆಯ ಚಿತ್ರಕಲೆಗಳ ಬಗ್ಗೆ ನೋಡೋಣ'. ಬಹುತೇಕ ಎಲ್ಲರೂ ದನಿಗೂಡಿಸಿದರು.
"ಇಲ್ಲ. ನಾವು ಈ ಚಿತ್ರಕಲೆಯನ್ನು ಮೊದಲು ಮಾರಲೇ ಬೇಕು. ಇಲ್ಲದಿದ್ದರೆ ಹರಾಜು ಇಲ್ಲ." ಉತ್ತರಿಸಿದ ಹರಾಜು ಹಾಕುವವ, " ಮಗನನ್ನು ಯಾರು ಖರೀದಿ ಮಾಡುವಿರಿ?

ಕೊನೆಗೆ ಆ ಮುದುಕನ ಒಬ್ಬ ಸ್ನೇಹಿತ ಮು೦ದೆ ಬ೦ದು ಹೇಳಿದ,'ಈ ಚಿತ್ರವನ್ನು ಹತ್ತು ಡಾಲರಗಳಿಗೆ ಕೊಡುವೆಯಾ? ನನ್ನಲ್ಲಿ ಇರುವುದು ಅಷ್ಟೇ.'
"ಇನ್ನ್ಯಾರಾದರೂ ಹೆಚ್ಚಿಗೆ ಹರಾಜು ಕೂಗುವಿರಾ?' ಲಿಲಾವುಗಾರ ಕೂಗಿದ.
ಅಲ್ಲಿ ಬರೀ ಮೌನ. ಸ್ವಲ್ಪ ಹೊತ್ತಿನ ನ೦ತರ ಅವನು ಹೇಳಿದ,'ಒ೦ದು ಸಾರಿ, ಎರಡು ಸಾರಿ....... ಆಯಿತು!" ಸುತ್ತಿಗೆ ಬಡಿದ.
ಎಲ್ಲರಲ್ಲೂ ಉಲ್ಲಾಸ, ಆನ೦ದ. " ಸರಿ, ಈಗ ನಾವು ಒಳ್ಳೆಯ ಚಿತ್ರಕಲೆಗಳಿಗೆ ಹರಾಜು ಕೂಗೋಣ. ಎಷ್ಟಾದರೂ ಸರಿ ಈ ನಿಧಿಗಳಿಗೆ". ಕೂಗಿ ಹೇಳಿದರು.
ಆ ಹರಾಜು ಹಾಕುವವ ಅಲ್ಲಿ ನೆರೆದ ಎಲ್ಲ ಸಭಿಕರನ್ನು ನೋಡಿ, "ಈ ಹರಾಜು ಕಾರ್ಯಕ್ರಮ ಮುಗಿದಿದೆ" ಎ೦ದು ಘೋಷಿಸಿದ. ಅಶ್ಚರ್‍ಯ, ದಿಗ್ಭ್ರಮೆ ಕೋಣೆಯನ್ನು ನೀರವಗೊಳಿಸಿತು. ಆಗ ಯಾರೋ ಒಬ್ಬ ನಿ೦ತು ಹೇಳಿದ, 'ಏನಿದು? ಮುಗಿದಿದೆ ಎ೦ದರೆ? ನಾವು ಯಾರೋ ಒಬ್ಬ ಮುದುಕನ ಮಗನ ಚಿತ್ರವನ್ನು ಖರೀದಿಸಲೆ೦ದು ಇಲ್ಲಿ ಬ೦ದಿಲ್ಲ! ಇನ್ನಿತರ ಚಿತ್ರಕಲೆಗಳ ಬಗ್ಗೆ ಏನು ಸಮಾಚಾರ? ಮಿಲಿಯನ್ ಡಾಲರ್ ಬೆಲೆಬಾಳುವ ಬೇರೆ ಚಿತ್ರಗಳಿವೆ. ನಮಗೆ ಸಮಜಾಯಿಷಿ ಬೇಕು."

ಉಸಿರು ತೆಗೆದುಕೊಳ್ಳುತ್ತ ಉತ್ತರಿಸಿದ ಆ ಹರಾಜು ಹಾಕುವವ,
"ಇದು ಬಹಳ ಸರಳ. ಆ ತ೦ದೆಯ ವಿಲ್ ನ ಪ್ರಕಾರ "ಯಾರು ಮಗನ ಚಿತ್ರವನ್ನು ಖರೀದಿ ಮಾಡುತ್ತಾರೋ, ಅವರು ಎಲ್ಲವನ್ನೂ ಪಡೆಯುತ್ತಾರೆ!!"
ಕಲಾ ಸ೦ಗ್ರಹಕಾರರು ಆ ದಿನ ಒ೦ದ೦ತೂ ಸ೦ಗ್ರಹಿಸಿದರು. ಆ ಸ೦ದೇಶ.. ಅದೇ.. ತ೦ದೆಯ ಪ್ರೀತಿ....ಪರರಿಗೆ ತನ್ನ ಜೀವವನ್ನೇ ಧಾರೆಯೆರೆದ ಮಗನ ಆ ತ೦ದೆ... ಆ ತ೦ದೆಯ ಪ್ರೀತಿಗೆ೦ದೇ...ಯಾರು ಮಗನನ್ನು ಪಡೆಯುತ್ತಾರೋ ಅವರು ಎಲ್ಲವನ್ನೂ ಪಡೆಯುತ್ತಾರೆ.

(ಒ೦ದು ಚಿಕ್ಕ ಆ೦ಗ್ಲ ಕಥೆಯನ್ನು ಕನ್ನಡದ ರೂಪಕ್ಕೆ ಪುನರ್ ನಿರೂಪಿಸಲಾಗಿದೆ)

******

Why It Is So Hard To Let Go

The cheerful girl with bouncy golden curls was almost five. Waiting with her mother at the checkout stand, she saw them: a circle of glistening white pearls in a pink foil box.

"Oh please, Mommy. Can I have them? Please, Mommy, please?" Quickly the mother checked the back of the little foil box and then looked back into the pleading blue eyes of her little girl's upturned face. "A dollar ninety-five. That's almost $2.00. If you really want them, I'll think of some extra chores for you and in no time you can save enough money to buy them for yourself. Your birthday's only a week away and you might get another crisp dollar bill from Grandma."

As soon as Jenny got home, she emptied her penny bank and counted out 17 pennies. After dinner, she did more than her share of chores and she went to the neighbor and asked Mrs. McJames if she could pick dandelions for ten cents.

On her birthday, Grandma did give her another new dollar bill and at last she had enough money to buy the necklace.

Jenny loved her pearls. They made her feel dressed up and grown up. She wore them everywhere - Sunday school, kindergarten, even to bed. The only time she took them off was when she went swimming or had a bubble bath. Mother said if they got wet, they might turn her neck green.

Jenny had a very loving daddy and every night when she was ready for bed, he would stop whatever he was doing and come upstairs to read her a story. One night when he finished the story, he asked Jenny, "Do you love me?" "Oh yes, Daddy. You know that I love you." "Then give me your pearls." "Oh, Daddy, not my pearls. But you can have Princess - the white horse from my collection. The one with the pink tail. Remember, Daddy? The one you gave me. She's my favorite." "That's okay, Honey. Daddy loves you. Good night." And he brushed her cheek with a kiss.

About a week later, after the story time, Jenny's daddy asked again, "Do you love me?" "Daddy, you know I love you." "Then give me your pearls." "Oh Daddy, not my pearls. But you can have my baby doll. The brand new one I got for my birthday. She is so beautiful and you can have the yellow blanket that matches her sleeper." "That's okay. Sleep well. God bless you, little one. Daddy loves you" And as always, he brushed her cheek with a gentle kiss.

A few nights later when her daddy came in, Jenny was sitting on her bed with her legs crossed Indian-style. As he came close, he noticed her chin was trembling and one silent tear rolled down her cheek. "What is it, Jenny? What's the matter?" Jenny didn't say anything but lifted her little hand up to her daddy. And when she opened it, there was her little pearl necklace. With a little quiver, she finally said, "Here, Daddy. It's for you."

With tears gathering in his own eyes, Jenny's kind daddy reached out with one hand to take the dime-store necklace, and with the other hand he reached into his pocket and pulled out a blue velvet case with a strand of genuine pearls and gave them to Jenny. He had them all the time. He was just waiting for her to give up the dime-store stuff so he could give her genuine treasure.

So it is with our Heavenly Father. He is waiting for us to give up the cheap things in our lives so that he can give us beautiful treasure. Isn't God good?

Are you holding onto things which God wants you to let go of. Are you holding on to harmful or unnecessary partners, relationships, habits and activities which you have come so attached to that it seems impossible to let go? Sometimes it is so hard to see what is in the other hand but do believe this one thing.............

God will never take away something without giving you something better in ....

*****

The Wise Man and The Young Man


There was once an old wise man who live on top of a mountain. (I don’t know why the wise men always like to stay on top of mountains.) Whenever the villagers had a problem, they would climb up the mountain and ask the old man for advice.

One day a young man decided to climb up and ask the old man a question.

“Wise man,” he asked, “What makes a man truly great?”

The old man looked at him and said, “Do you sincerely want to know?”
“Yes, yes!” the young man replied the wise man.

“Well,” the wise old man said to him, “Let me tell you in the form of a story”

There was once a Greek man who suffered from a deadly disease. Knowing that he will die soon, he was the first to join the army when his country was in a battle with the enemy. Hoping to die in battle, he would fight in the front line, exposing himself without any worry for his life. Eventually they won the battle and he was still alive. His general was so impressed with his bravery which contributed much to the victory.

The general decided to promote him and award him with medals of bravery and honor. On the day of presentation, he was looking very down and sad. Curiously, the general asked him the reason why and was told of his deadly disease. “How could I let such a brave soldier die?”, the general thought. So the general hired the best physician and finally cured the soldier. But from that day onwards, the once valiant soldier was no longer seen at the front. He would always avoid danger and tries his best to avoid danger and protect his life.

“Young man”, he wise man said, “if you want to be truly great, you must not be scared of dying, you must be daring.”

Fear not that life shall come to an end, but rather fear that it shall never have a beginning.