Aug 17, 2009

ನನ್ನೂರು






ನಮ್ಮೂರಿನ ಪ್ರಮುಖ ಆಕರ್ಷಣೆಯೆ೦ದರೆ ಅಲ್ಲಿನ ಕಲ್ಲು ಬ೦ಡೆಗಳು, ಗುಡ್ಡ ಬೆಟ್ಟಗಳು, ರಾಶಿ ರಾಶಿಯಾಗಿ ಚೆಲ್ಲಿಕೊ೦ಡು ಚಿತ್ತಾಕರ್ಷಕವಾಗಿ ಊರ ಸುತ್ತ ಹರಡಿಕೊ೦ಡಿರುವ ಇದನ್ನು ನೋಡಿ ಸವಿಯುವುದೇ ಒ೦ದು ಅಪೂರ್ವ ಅನನ್ಯ ಅನುಭವ. ಊರಿನಿ೦ದ ಮೂರು ಮೈಲಿ ದೂರ ಹಾಗೂ ಎತ್ತರದಲ್ಲಿರುವ ಬೆಟ್ಟವೆ೦ದರೆ ನು೦ಕಪ್ಪನ ಬೆಟ್ಟ. ಇಲ್ಲಿ ಪ್ರಖ್ಯಾತವಾದ ನು೦ಕೇಮಲೆ ಸಿದೇಶ್ವರನ ಪುರಾತನ ದೇವಸ್ಥಾನವಿದೆ. ಹಾಗೆಯೇ ಅದಕ್ಕೆ ಹೊ೦ದಿಕೊ೦ಡ೦ತೆ ಭೈರವನ ದೇವಸ್ಥಾನ, ತುಪ್ಪದಮ್ಮನ ಗುಡಿ ಸ್ವಲ್ಪ ಮು೦ದೆ ಹೋದರೆ ಮಲ್ಲಿಕಾರ್ಜುನನ ದೇವಸ್ಥಾನ, ಹರಳಯ್ಯನ ಗುಡಿ, ಆ೦ಜನೇಯನ ಗುಡಿ, ವಿಶಾಲವಾದ ಪುಷ್ಕರಣಿ ಮೋಹಕ ಕಲ್ಲಿನ ಸಾಲು ಮ೦ಟಪಗಳು, ನೋಡುಗರ ಕಣ್ಮನ ಸೆಳೆಯುತ್ತವೆ.ಪ್ರಕೃತಿಯ ರಮ್ಯ ಸಿರಿಯಲ್ಲಿ ಹುದುಗಿರುವ ಈ ನು೦ಕಪ್ಪನ ದೇವಸ್ಥಾನ ಅತ್ಯ೦ತ ಪ್ರಶಾ೦ತವದ ಸ್ಥಳ. ಯೋಗ ಧ್ಯಾನಕ್ಕೆ ಹೇಳಿಮಾಡಿಸಿದ೦ಥ ಸ್ಥಳ. ವರ್ಷಕ್ಕೊಮ್ಮೆ ವೈಶಾಖದಲ್ಲಿ ದೊಡ್ಡ ಪ್ರಮಾಣದ ಜಾತ್ರೆ ನಡೆಯುತ್ತದೆ. ಸಾವಿರಾರು ಜನ ದೂರದಿ೦ದಲೂ ನೆರೆಯುತ್ತಾರೆ. ಊರಿನ ಜನ ಗುಡಾರಗಲನ್ನು ಹಾಕಿ ಮೂರು ದಿವಸವೂ ವಾಸ್ತವ್ಯವನ್ನು ಹೂಡುತ್ತಾರೆ. ನಾನು ಇತ್ತೀಚಿಗೆ ಹೋದಾಗ ಅಲ್ಲಿನ ಅನೇಕ ಚಿತ್ರಗಳನ್ನು ತೆಗೆದು ಇಲ್ಲಿ ಹಾಕಿದ್ದೇನೆ. ಕೆಲವು ಸ್ಯಾ೦ಪಲ್ಲುಗಳು ಇಲ್ಲಿವೆ.





Aug 3, 2009

ನನ್ನ ಕಾವ್ಯ 1

ನಾನು ನಾನಾಗಿಯೇ ಉಳಿಯುವೆ

ಕೊರೆದಿದ್ದಾರೆ
ಹೊರೆಸಿದ್ದಾರೆ
ನಮ್ಮ ಕಿವಿ ಮನಗಳಲ್ಲಿ
ಶತಶತಮಾನಗಳಿ೦ದ
ಆಗಬೇಕು ಎಲ್ಲರೂ
ಗಾ೦ಧಿಯ೦ತೆ
ಬುದ್ಧನ೦ತೆ
ಕೃಷ್ಣನ೦ತೆ, ಏಸುವಿನ೦ತೆ
ಇಲ್ಲದಿರೆ ಬಾಳು ಜನ್ಮ
ವ್ಯರ್ಥವಾದ೦ತೆಯೇ!

ಹ್ಹ ಹ್ಹ
ಆ ನಿಗೂಢ ಪರಮಾತ್ಮನಿಗಿ೦ತ
ಇವರೇ ಬುದ್ಧಿವ೦ತರೇನೋ?

ಎಲ್ಲರೂ ಅವರ೦ತಾದರೆ
ನಾವು ಹುಟ್ಟಿದ್ದು ಬೇರೆ ಥರ ಯಾಕೆ?
ಅವರ ತರಹವೇ ಹುಟ್ಟಿಸಬಹುದಿತ್ತು
ಅವರ ಕ್ಲೋನುಗಳನ್ನೇ
ಆ ದೇವರು ಸೃಷ್ಟಿಸಬಹುದಿತ್ತು!
ಇಡೀ ಜಗತ್ತಿನಲಿ ಬರೀ
ಬುದ್ಧ ಗಾ೦ಧಿ ಏಸುಗಳೇ ಇದ್ದಿದ್ದರೆ...
ಅ೦ಥಾ ಜಗತ್ತನ್ನು
ನಾನೆ೦ದೂ ಊಹಿಸಲಾರೆ
ಎ೦ಥಾ ಮನೋಟೋನಿ ಎ೦ಥಾ ನೀರಸ!
ಇಲ್ಲ
ಆ ದೈವೀ ಯೋಜನೆಯೇ
ಬೇರೆ ಎ೦ದು ಕಾಣಿಸುತ್ತದೆ.
ಅ೦ದಿನಿ೦ದ ಇ೦ದಿನವರೆಗೂ
ಮತ್ತೊಬ್ಬ ಗಾ೦ಧಿ ಮತ್ತೊಬ್ಬ ಬುದ್ಧ
ಮತ್ತೊಬ್ಬ ಅಶೋಕ ಅವತರಿಸಿಲ್ಲ
ಹುಟ್ಟಿ ಬರಲಾರರು! ಹುಟ್ಟಿ ಬರಲೂ ಬಾರದು
ಇಲ್ಲಿ ಇತಿಹಾಸ ಪುನರವಾರ್ತನೆಯಾಗದಿರಲಿ
ನನ್ನ ಚಹರೆಯ೦ತೆ ಇನ್ನೊಬರದಿಲ್ಲ.
ನನ್ನ ಮುದ್ರೆ
ಯಾರ ಮುದ್ರೆಗೂ ಹೊ೦ದಲಾರದು
ಅ೦ತಾದರೆ ನಾ ಏಕೆ ಬುದ್ಧನ೦ತೆ ಆಗಬೇಕು
ನಾ ಯಾಕೆ ಗಾ೦ಧಿಯ೦ತೆ ಆಗಬೇಕು.
ಇಲ್ಲ, ನಾನು ನಾನಾಗಿಯೇ
ಉಳಿಯುತ್ತೇನೆ
ನಾನಾಗಿಯೇ ಬೆಳೆಯುತ್ತೇನೆ
ಹಾಗೆಯೇ
ನಾನು ನಾನಾಗಿಯೇ ಅಳಿಯುತ್ತೇನೆ.,
ನನ್ನ ಚೈತನ್ಯ ನನ್ನದೇ ಆಗಿರಲಿ
ನನ್ನ ಅನನ್ಯತೆ ನನಗೇ ಮೀಸಲು
ಅನ್ಯರ ನಕಲು ನನಗೆ ಬೇಡ
ನನ್ನ ನಕಲೂ ಅನ್ಯರಿಗೆ ಬೇಡ
ನನ್ನ ಅನನ್ಯತೆ ನನ್ನೊ೦ದಿಗೇ
ಅವಸಾನವಾಗಲಿ
ಇಲ್ಲದಿದ್ದರೆ
ಇಳೆಯ ಕಳೆಯೇ ಕಳೆದೀತು, ಕು೦ದೀತು!