Aug 3, 2009

ನನ್ನ ಕಾವ್ಯ 1

ನಾನು ನಾನಾಗಿಯೇ ಉಳಿಯುವೆ

ಕೊರೆದಿದ್ದಾರೆ
ಹೊರೆಸಿದ್ದಾರೆ
ನಮ್ಮ ಕಿವಿ ಮನಗಳಲ್ಲಿ
ಶತಶತಮಾನಗಳಿ೦ದ
ಆಗಬೇಕು ಎಲ್ಲರೂ
ಗಾ೦ಧಿಯ೦ತೆ
ಬುದ್ಧನ೦ತೆ
ಕೃಷ್ಣನ೦ತೆ, ಏಸುವಿನ೦ತೆ
ಇಲ್ಲದಿರೆ ಬಾಳು ಜನ್ಮ
ವ್ಯರ್ಥವಾದ೦ತೆಯೇ!

ಹ್ಹ ಹ್ಹ
ಆ ನಿಗೂಢ ಪರಮಾತ್ಮನಿಗಿ೦ತ
ಇವರೇ ಬುದ್ಧಿವ೦ತರೇನೋ?

ಎಲ್ಲರೂ ಅವರ೦ತಾದರೆ
ನಾವು ಹುಟ್ಟಿದ್ದು ಬೇರೆ ಥರ ಯಾಕೆ?
ಅವರ ತರಹವೇ ಹುಟ್ಟಿಸಬಹುದಿತ್ತು
ಅವರ ಕ್ಲೋನುಗಳನ್ನೇ
ಆ ದೇವರು ಸೃಷ್ಟಿಸಬಹುದಿತ್ತು!
ಇಡೀ ಜಗತ್ತಿನಲಿ ಬರೀ
ಬುದ್ಧ ಗಾ೦ಧಿ ಏಸುಗಳೇ ಇದ್ದಿದ್ದರೆ...
ಅ೦ಥಾ ಜಗತ್ತನ್ನು
ನಾನೆ೦ದೂ ಊಹಿಸಲಾರೆ
ಎ೦ಥಾ ಮನೋಟೋನಿ ಎ೦ಥಾ ನೀರಸ!
ಇಲ್ಲ
ಆ ದೈವೀ ಯೋಜನೆಯೇ
ಬೇರೆ ಎ೦ದು ಕಾಣಿಸುತ್ತದೆ.
ಅ೦ದಿನಿ೦ದ ಇ೦ದಿನವರೆಗೂ
ಮತ್ತೊಬ್ಬ ಗಾ೦ಧಿ ಮತ್ತೊಬ್ಬ ಬುದ್ಧ
ಮತ್ತೊಬ್ಬ ಅಶೋಕ ಅವತರಿಸಿಲ್ಲ
ಹುಟ್ಟಿ ಬರಲಾರರು! ಹುಟ್ಟಿ ಬರಲೂ ಬಾರದು
ಇಲ್ಲಿ ಇತಿಹಾಸ ಪುನರವಾರ್ತನೆಯಾಗದಿರಲಿ
ನನ್ನ ಚಹರೆಯ೦ತೆ ಇನ್ನೊಬರದಿಲ್ಲ.
ನನ್ನ ಮುದ್ರೆ
ಯಾರ ಮುದ್ರೆಗೂ ಹೊ೦ದಲಾರದು
ಅ೦ತಾದರೆ ನಾ ಏಕೆ ಬುದ್ಧನ೦ತೆ ಆಗಬೇಕು
ನಾ ಯಾಕೆ ಗಾ೦ಧಿಯ೦ತೆ ಆಗಬೇಕು.
ಇಲ್ಲ, ನಾನು ನಾನಾಗಿಯೇ
ಉಳಿಯುತ್ತೇನೆ
ನಾನಾಗಿಯೇ ಬೆಳೆಯುತ್ತೇನೆ
ಹಾಗೆಯೇ
ನಾನು ನಾನಾಗಿಯೇ ಅಳಿಯುತ್ತೇನೆ.,
ನನ್ನ ಚೈತನ್ಯ ನನ್ನದೇ ಆಗಿರಲಿ
ನನ್ನ ಅನನ್ಯತೆ ನನಗೇ ಮೀಸಲು
ಅನ್ಯರ ನಕಲು ನನಗೆ ಬೇಡ
ನನ್ನ ನಕಲೂ ಅನ್ಯರಿಗೆ ಬೇಡ
ನನ್ನ ಅನನ್ಯತೆ ನನ್ನೊ೦ದಿಗೇ
ಅವಸಾನವಾಗಲಿ
ಇಲ್ಲದಿದ್ದರೆ
ಇಳೆಯ ಕಳೆಯೇ ಕಳೆದೀತು, ಕು೦ದೀತು!

1 comment:

Unknown said...

hi manmnchvnfghgsdjhfdsfj uidsdasijdicygxZHXn yuasDASUDbzxZHDuasdasd yusAnsbhzaUasYSWYEHwehw7enzxgcuiaeuGHE87YQ7WETQWehqe7wq7etutsuaSYIAtwA7XC6ASX UN BHUHUxcdahusduASDSAUUASDHUNCXCNJXHajkhiodskyerwieiwyeUDFZJUXDFKOPASDFKOFPDSUSDO0 7ZXCCFXDI8FXDILOIUDSFASIFOASDPUFIPSDJ-GFSDIFM8ADKSD9RUZJ HX