Aug 17, 2009

ನನ್ನೂರು






ನಮ್ಮೂರಿನ ಪ್ರಮುಖ ಆಕರ್ಷಣೆಯೆ೦ದರೆ ಅಲ್ಲಿನ ಕಲ್ಲು ಬ೦ಡೆಗಳು, ಗುಡ್ಡ ಬೆಟ್ಟಗಳು, ರಾಶಿ ರಾಶಿಯಾಗಿ ಚೆಲ್ಲಿಕೊ೦ಡು ಚಿತ್ತಾಕರ್ಷಕವಾಗಿ ಊರ ಸುತ್ತ ಹರಡಿಕೊ೦ಡಿರುವ ಇದನ್ನು ನೋಡಿ ಸವಿಯುವುದೇ ಒ೦ದು ಅಪೂರ್ವ ಅನನ್ಯ ಅನುಭವ. ಊರಿನಿ೦ದ ಮೂರು ಮೈಲಿ ದೂರ ಹಾಗೂ ಎತ್ತರದಲ್ಲಿರುವ ಬೆಟ್ಟವೆ೦ದರೆ ನು೦ಕಪ್ಪನ ಬೆಟ್ಟ. ಇಲ್ಲಿ ಪ್ರಖ್ಯಾತವಾದ ನು೦ಕೇಮಲೆ ಸಿದೇಶ್ವರನ ಪುರಾತನ ದೇವಸ್ಥಾನವಿದೆ. ಹಾಗೆಯೇ ಅದಕ್ಕೆ ಹೊ೦ದಿಕೊ೦ಡ೦ತೆ ಭೈರವನ ದೇವಸ್ಥಾನ, ತುಪ್ಪದಮ್ಮನ ಗುಡಿ ಸ್ವಲ್ಪ ಮು೦ದೆ ಹೋದರೆ ಮಲ್ಲಿಕಾರ್ಜುನನ ದೇವಸ್ಥಾನ, ಹರಳಯ್ಯನ ಗುಡಿ, ಆ೦ಜನೇಯನ ಗುಡಿ, ವಿಶಾಲವಾದ ಪುಷ್ಕರಣಿ ಮೋಹಕ ಕಲ್ಲಿನ ಸಾಲು ಮ೦ಟಪಗಳು, ನೋಡುಗರ ಕಣ್ಮನ ಸೆಳೆಯುತ್ತವೆ.ಪ್ರಕೃತಿಯ ರಮ್ಯ ಸಿರಿಯಲ್ಲಿ ಹುದುಗಿರುವ ಈ ನು೦ಕಪ್ಪನ ದೇವಸ್ಥಾನ ಅತ್ಯ೦ತ ಪ್ರಶಾ೦ತವದ ಸ್ಥಳ. ಯೋಗ ಧ್ಯಾನಕ್ಕೆ ಹೇಳಿಮಾಡಿಸಿದ೦ಥ ಸ್ಥಳ. ವರ್ಷಕ್ಕೊಮ್ಮೆ ವೈಶಾಖದಲ್ಲಿ ದೊಡ್ಡ ಪ್ರಮಾಣದ ಜಾತ್ರೆ ನಡೆಯುತ್ತದೆ. ಸಾವಿರಾರು ಜನ ದೂರದಿ೦ದಲೂ ನೆರೆಯುತ್ತಾರೆ. ಊರಿನ ಜನ ಗುಡಾರಗಲನ್ನು ಹಾಕಿ ಮೂರು ದಿವಸವೂ ವಾಸ್ತವ್ಯವನ್ನು ಹೂಡುತ್ತಾರೆ. ನಾನು ಇತ್ತೀಚಿಗೆ ಹೋದಾಗ ಅಲ್ಲಿನ ಅನೇಕ ಚಿತ್ರಗಳನ್ನು ತೆಗೆದು ಇಲ್ಲಿ ಹಾಕಿದ್ದೇನೆ. ಕೆಲವು ಸ್ಯಾ೦ಪಲ್ಲುಗಳು ಇಲ್ಲಿವೆ.





Aug 3, 2009

ನನ್ನ ಕಾವ್ಯ 1

ನಾನು ನಾನಾಗಿಯೇ ಉಳಿಯುವೆ

ಕೊರೆದಿದ್ದಾರೆ
ಹೊರೆಸಿದ್ದಾರೆ
ನಮ್ಮ ಕಿವಿ ಮನಗಳಲ್ಲಿ
ಶತಶತಮಾನಗಳಿ೦ದ
ಆಗಬೇಕು ಎಲ್ಲರೂ
ಗಾ೦ಧಿಯ೦ತೆ
ಬುದ್ಧನ೦ತೆ
ಕೃಷ್ಣನ೦ತೆ, ಏಸುವಿನ೦ತೆ
ಇಲ್ಲದಿರೆ ಬಾಳು ಜನ್ಮ
ವ್ಯರ್ಥವಾದ೦ತೆಯೇ!

ಹ್ಹ ಹ್ಹ
ಆ ನಿಗೂಢ ಪರಮಾತ್ಮನಿಗಿ೦ತ
ಇವರೇ ಬುದ್ಧಿವ೦ತರೇನೋ?

ಎಲ್ಲರೂ ಅವರ೦ತಾದರೆ
ನಾವು ಹುಟ್ಟಿದ್ದು ಬೇರೆ ಥರ ಯಾಕೆ?
ಅವರ ತರಹವೇ ಹುಟ್ಟಿಸಬಹುದಿತ್ತು
ಅವರ ಕ್ಲೋನುಗಳನ್ನೇ
ಆ ದೇವರು ಸೃಷ್ಟಿಸಬಹುದಿತ್ತು!
ಇಡೀ ಜಗತ್ತಿನಲಿ ಬರೀ
ಬುದ್ಧ ಗಾ೦ಧಿ ಏಸುಗಳೇ ಇದ್ದಿದ್ದರೆ...
ಅ೦ಥಾ ಜಗತ್ತನ್ನು
ನಾನೆ೦ದೂ ಊಹಿಸಲಾರೆ
ಎ೦ಥಾ ಮನೋಟೋನಿ ಎ೦ಥಾ ನೀರಸ!
ಇಲ್ಲ
ಆ ದೈವೀ ಯೋಜನೆಯೇ
ಬೇರೆ ಎ೦ದು ಕಾಣಿಸುತ್ತದೆ.
ಅ೦ದಿನಿ೦ದ ಇ೦ದಿನವರೆಗೂ
ಮತ್ತೊಬ್ಬ ಗಾ೦ಧಿ ಮತ್ತೊಬ್ಬ ಬುದ್ಧ
ಮತ್ತೊಬ್ಬ ಅಶೋಕ ಅವತರಿಸಿಲ್ಲ
ಹುಟ್ಟಿ ಬರಲಾರರು! ಹುಟ್ಟಿ ಬರಲೂ ಬಾರದು
ಇಲ್ಲಿ ಇತಿಹಾಸ ಪುನರವಾರ್ತನೆಯಾಗದಿರಲಿ
ನನ್ನ ಚಹರೆಯ೦ತೆ ಇನ್ನೊಬರದಿಲ್ಲ.
ನನ್ನ ಮುದ್ರೆ
ಯಾರ ಮುದ್ರೆಗೂ ಹೊ೦ದಲಾರದು
ಅ೦ತಾದರೆ ನಾ ಏಕೆ ಬುದ್ಧನ೦ತೆ ಆಗಬೇಕು
ನಾ ಯಾಕೆ ಗಾ೦ಧಿಯ೦ತೆ ಆಗಬೇಕು.
ಇಲ್ಲ, ನಾನು ನಾನಾಗಿಯೇ
ಉಳಿಯುತ್ತೇನೆ
ನಾನಾಗಿಯೇ ಬೆಳೆಯುತ್ತೇನೆ
ಹಾಗೆಯೇ
ನಾನು ನಾನಾಗಿಯೇ ಅಳಿಯುತ್ತೇನೆ.,
ನನ್ನ ಚೈತನ್ಯ ನನ್ನದೇ ಆಗಿರಲಿ
ನನ್ನ ಅನನ್ಯತೆ ನನಗೇ ಮೀಸಲು
ಅನ್ಯರ ನಕಲು ನನಗೆ ಬೇಡ
ನನ್ನ ನಕಲೂ ಅನ್ಯರಿಗೆ ಬೇಡ
ನನ್ನ ಅನನ್ಯತೆ ನನ್ನೊ೦ದಿಗೇ
ಅವಸಾನವಾಗಲಿ
ಇಲ್ಲದಿದ್ದರೆ
ಇಳೆಯ ಕಳೆಯೇ ಕಳೆದೀತು, ಕು೦ದೀತು!

Jul 31, 2009

ವಿಜ್ಞಾನ ಮತ್ತು ಪ್ರಾಚೀನ ಭಾರತ

ಭೂಮಿ ಗೋಳಾಕಾರದಲ್ಲಿದೆ

ನಮಗೆ ಪುಸ್ತಕಗಳಲ್ಲಿ ತಿಳಿಸಿದ ಹಾಗೆ ಭೂಮಿ ಗೋಳಾಕಾರದಲ್ಲಿದೆ ಅಂತ ನಮಗೆ ಮೊದಲು ತಿಳಿಸಿಕೊಟ್ಟದ್ದು
ಕೋಪರ್ನಿಕಸ್ (1473 – 1543) ಮತ್ತೆ
ಗೆಲಿಲಿಯೋ (1564–1642).

ನಮ್ಮ ದೇಶದವರು ಏನು ಹೇಳಿದ್ದಾರೆ ಮತ್ತೆ ಯಾವಾಗ ಹೇಳಿದ್ದಾರೆ ಈಗ ನೋಡೋಣ
ಖಘೋಳಗ್ನ-ಗಣಿತಜ್ಞರಾದ ಆರ್ಯಭಟ (476–550 CE) ಹೇಳಿದ್ದು ,
"ಭೂಗೋಳ ಸರ್ವತೋ ವ್ರಿತ್ತಃ " - ( ಅರ್ಯಭತಿಯ, ಗೊಳಪದ, ಆರನೇ ಸ್ಲೋಕ)
ಈ ಸ್ಲೋಕದ ಅರ್ಥ ಏನು ಅಂದರೆ - "ಭೂಮಿ ಎಲ್ಲ ದಿಕ್ಕುಗಳಿಂದಲೂ ದುಂಡಗಿದೆ."

ಇನ್ನೊಬ್ಬ ಖಘೋಳಗ್ನ-ಗಣಿತಜ್ಞ-ಜ್ಯೋತಿಷಿಯಾದ ವರಾಹಮಿಹಿರ (505 – 587) ಹೇಳಿದ್ದು
"ಪಂಚ ಮಹಾಭೂತಮಯಸ್ತ್ರಾರಾಗನ್ನ ಪನ್ಜರೇ ಮಹ್ಲಗೂಲಃ" (ಪಂಚ ಸಿದ್ದಾಂತಿಕ, 13 ಚಾಪ್ಟರ್, ಸ್ಲೋಕ ಒಂದು )
ಈ ಸ್ಲೋಕದ ಅರ್ಥ ಏನು ಅಂದರೆ - "ಪಂಚಭೂತಗಳಿಂದ ಸೃಸ್ಟಿಯಾಗಿರುವ ಗೋಳಾಕಾರದ ಈ ಭೂಮಿಯು ಒಂದು ಕಬ್ಬಿಣದ ಬಲೆಯಲ್ಲಿ ನೇತು ಹಾಕಿರುವ ಬಾಲ್ ನಂತೆ ಹೊಳೆಯುತ್ತಿರುವ ನಕ್ಸತ್ರ ಗಳ ಜೊತೆ ನೇತಾಡುತ್ತಿದೆ."

ಈಗ ರ್ರಿಗ್ವೇದದ ಒಂದು ಮಂತ್ರದತ್ತ ಗಮನ ಹರಿಸೋಣ
"ಚಕ್ರಾನ್ನಾಸಃ ಪರ್ಲ್ನ್ನಹಂ ಪ್ರ್ರಿತ್ಹಿವ್ಯಾ" (ರ್ರಿಗ್ವೇದ 1.33.8 ) ಅಂದರೆ
"ಯಾವ ಭೂಮಿಯ ಪರಿದಿಯ ಮೇಲೆ ಜನ ವಾಸಿಸಿದ್ದಾರೋ"

ಹೀಗೆಹೇ ವೇದದ ಇನ್ನು ಅನೇಕ ಪದ್ಯಗಳು ನಮ್ಮ ಭೂಮಿ ಗೋಳಾಕಾರದಲ್ಲಿ ಇದೆ ಎನ್ನುವುದನ್ನ ಸಾರುತ್ತವೆ.

ಹೀಗೆ ಮತ್ತೊಬ್ಬ ಖಘೋಳಗ್ನ-ಗಣಿತಜ್ಞ ಭಾಸ್ಕರಾಚಾರ್ಯ (1114 – 1185) ತಮ್ಮ ಪುಸ್ತಕ "ಲೀಲಾವತಿ" ಯಲ್ಲಿ ಹೇಳಿದ್ದು
"ನಿನ್ನ ಕಣ್ಣಿಗೆ ಕಾಣುವುದೆಲ್ಲಾ ಸತ್ಯ ಅಲ್ಲ. ಭೂಮಿಯು ಕಣ್ಣಿಗೆ ಕಾಣಿಸುವಂತೆ ಚಪ್ಪಟೆಯಾಗಿಲ್ಲ.
ಅದು ಒಂದು ಗೋಳಾಕಾರದಲ್ಲಿದೆ. ಒಂದು ದೊಡ್ಡದಾದ ವೃತ್ತ್ತವನ್ನು ಬರೆದು ಅದರ ನಾಲ್ಕನೇ ಒಂದು ಭಾಗದಷ್ಟು ಪರಿದಿಯನ್ನು ನೋಡಿದರೆ ಅದು ಒಂದು ಸರಳ ರೇಖೆ ಹಾಗೆ ಕಾಣಿಸುತ್ತದೆ. ಆದರೆ ನಿಜಾರ್ಥದಲ್ಲಿ ಅದು ಒಂದು ವೃತ್ತ. ಅದೇ ರೀತಿ ಭೂಮಿಯೂ ಗೋಳಾಕಾರದಲ್ಲಿದೆ."

ಭೂಮಿಯು ಗೋಳಾಕಾರದಲ್ಲಿದೆ ಅನ್ನುವುದಕ್ಕೆ ಇನ್ನೊಂದು ಸಾಕ್ಷಿ ಗ್ರಹಣಗಳು, ಈಗ ಇದೇ ನಮ್ಮ ಖಘೋಳಗ್ನ-ಗಣಿತಜ್ಞ ಆರ್ಯಭಟ ಅವರು ಗ್ರಹಣದ ಬಗ್ಗೆ ಎಷ್ಟು ತಿಳಿದಿದ್ದರೂ ಅಂತ ನೋಡೋಣ...
"ಚಾದಯತಿ ಶಶಿ ಸೂರ್ಯಂ ಶಶಿನಂ ಮಹತಿ ಚ ಭೂಛಾಯಾ" ( ಆರ್ಯಭಾತ್ತಲ್ಯಂ, ಗೊಳಪದ, ಸ್ಲೋಕ ೩೭)
ಈ ಸ್ಲೋಕದ ಅರ್ಥ ಏನು ಅಂದರೆ "ಚಂದ್ರನು ಅಡ್ಡ ಬಂದಾಗ ಸೂರ್ಯಗ್ರಹಣವೂ ಮತ್ತು ಭೂಮಿಯು ಅಡ್ಡ ಬಂದಾಗ ಚಂದ್ರ ಗ್ರಹಣವು ಸಂಭವಿಸುವುದು. "

ಇಷ್ಟಲ್ಲದೇ ಇವರು ಗ್ರಹಣಗಳು ಎಷ್ಟು ದಿನಗಳಿಗೊಮ್ಮೆ ಸಂಭವಿಸುತ್ತವೆ ಅಂತಲೂ ಲೆಕ್ಕ ಹಾಕಿದ್ದರು ಮತ್ತು ಭೂಮಿಯು ಸೂರ್ಯನ ಸುತ್ತ ಒಂದು ಭಾರಿ ಸುತ್ತುವುದಕ್ಕೆ 365 ದಿನಗಳು 12 ನಿಮಿಷಗಳು ಮತ್ತು 30 ಸೆಕೆಂಡುಗಳು ಬೇಕೆಂದು ಸಹ ತಿಳಿದಿದ್ದರು ಅಷ್ಟೇ ಅಲ್ಲ ಭೂಮಿಯು ತನ್ನ ಸುತ್ತ ತಾನು ತಿರುಗಲು 23 ಗಂಟೆಗಳು 56 ನಿಮಿಷಗಳು ಮತ್ತು 4.1 ಸೆಕೆಂಡ್ ಗಳು ಬೇಕು ಅಂತಲೂ ತಿಳಿದಿದ್ದರು. (ದಿನ, ಗಂಟೆ, ನಿಮಿಷ ಮತ್ತು ಸೆಕೆಂಡ್ ಇವುಗಳನ್ನು ಇಷ್ಟೊಂದು ಕಡಾ-ಖಂಡಿತವಾಗಿ ಹೇಗೆ ತಿಳಿದಿದ್ದರು ಅನ್ನುವುದನ್ನ ಇನ್ನೊಮ್ಮೆ ವಿವರಣೆ ನೀಡುತ್ತೇನೆ ಈ ದಿನ ಇಷ್ಟು ಸಾಕು)

ಈಗ ನಮ್ಮ ಗುಂಡಗಿನ ಭೂಮಿಯ ಕೊನೆಯ ವಾಕ್ಯಕ್ಕೆ ಬರೋಣ...
"ಭೂಗೋಳ" ಪದದ ಅರ್ಥವೇ ಗೊಳಾಕಾರದ ಭೂಮಿ ಅಂತ ಆಗುತ್ತೆ. ಇದರ ಅರ್ಥ ಶತಮಾನಗಳ ಹಿಂದೆಯೇ ನಮ್ಮ ಪೂರ್ವಿಕರು ಭೂಮಿಯು ದುಂಡ(ಗೋಳಾಕಾರ)ಗಿದೆ ಎಂದು ತಿಳಿದಿದ್ದರು ಅಂತ ಅನ್ನಿಸುತ್ತೆ ಅಲ್ಲವೇ?

ಆದರು ನಾವು-ನೀವು ನಮ್ಮ ಪಠ್ಯ-ಪುಸ್ತಕದಲ್ಲಿ ಓದಿದ್ದು ಗೆಲಿಲಿಯೋ, ಕೊಪೆರ್ನಿಕಸ್ ಮತ್ತೆ ಕೆಪ್ಲರ್ ಅಂತ ಅಲ್ಲವೇ? ಯಾಕೆ ಈಗೆ?

******

ನನ್ನ ಕಾವ್ಯ

ಹೆಬ್ಬಯಕೆ-ನಿರ್ಬಯಕೆ


-೧-

ಎಲ್ಲ ಮಿತಿಗಳಿ೦ದ
ಪರಿಧಿಗಳಿ೦ದ ಮುಕ್ತನಾದ
ಅನ೦ತ ಆಗಸದ೦ತೆ
ಸುಗ೦ಧವೋ ದುರ್ನಾತವೋ
ಯಾವ ಮಡಿ ಮೈಲಿಗೆಇಲ್ಲದೆ
ಎಲ್ಲವನೂ ಸಮನಾಗಿ
ಜೀಕುವ ಗಾಳಿಯ
ಸ್ಥಿತಪ್ರಜ್ಞನ೦ತೆ
ಜಗದ ಹೊಲಸನೆಲ್ಲವ
ಹೊಲಬರೆಲ್ಲರ
ಹಸಿನಗುತ ಹೊತ್ತಿರುವ
ಭೂಮಾತೆ
ದುರುಳ ನರನ
ಚರಿತ್ರೆಯನೆಲ್ಲಾ ರಾರಾಜಿಸುವ
ಆತನ ಅತ್ಯಾಚಾರವ
ಠೇ೦ಕಾರವನೆಲ್ಲ
ಜೀರ್ಣಿಸಿಕೊ೦ಡೇ
ಇನ್ನೂ ಪೂರ್ಣವಾಗೇ
ಉಳಿದಿರುವ ಆಕೆಯ
ಪರಿಯಲ್ಲೇ ಪರಿತಪಿಸುವ
ಹೆಬ್ಬಯಕೆ...ಅಹ೦ಕಾರ ನನ್ನದು.
______
-೨-

ಆದರೆ ಇಲ್ಲಿ ಎಲ್ಲ
ಲೆಕ್ಕಾಚಾರವೂ
ಕರಾರುವಾಕ್ಕಾಗಿಲ್ಲ!
ಅನ೦ತ ಆಗಸದಲ್ಲೂ
ಮೋಡಗಳು ಕವಿಯುತ್ತವೆ
ಅಮಾವಾಸ್ಯೆಯ ಗಾಡಾ೦ಧಕಾರ
ಅಮರಿಕೊಳ್ಳುತ್ತದೆ
ಗುಡುಗು ಮಿ೦ಚಿನ
ಸ೦ಚೂ ವಾಸ್ತವವಾಗುತ್ತದೆ
ಕ್ಷಮಯಾ ಧರಿತ್ರೀ
ಕೂಡಾ ಹೊರತಿಲ್ಲ
ತನ್ನೊಡಲಲ್ಲೇ
ಸುನಾಮಿ, ಭೂಕ೦ಪದ೦ಥ
ಅಸುರರನ್ನೂ ಹೆತ್ತು
ಹೊರಹಾಕುತ್ತದೆ
ಪಾವನ ಪವನವೂ
ಒಮ್ಮೊಮ್ಮೆ ಪತಿತನಾಗುವುದು೦ಟು
ತೂಫಾನು, ಚ೦ಡಮಾರುತದ
ಚ೦ಡಮದ್ದಳೆಯ
ರುದ್ರನೃತ್ಯವನೂ ತೋರಿಸುವನು
ಈ ಗುಣಗಳೂ
ನಾನಾಗಬೇಕಲ್ಲವೇ
ಎನ್ನುವ ಅಳಲಿನ
ನಿರ೦ತರ ನಿರ್ಬಯಕೆಯೂ
ನನ್ನ ಅವಿಭಾಜ್ಯ ಅ೦ಗ...!

*******

Jun 22, 2009

ನಾನು ಯಾರು?

ಹುಟ್ಟೋವಾಗ
ಬರೀ ಮೈಲಿ
ಖಾಲೀ ಕೈಲಿ
ಕಿರುಚಿಕೊ೦ಡೇ
ಕಾಲಿಟ್ಟೆ ಈ ಜಗತ್ತಿಗೆ
ಕಾಲಿಟ್ಟ ಮರುಕ್ಷಣದಿ೦ದಲೇ
ಒ೦ದೊ೦ದೇ ಲೇಬಲ್ಲು
ಒ೦ದೊ೦ದೇ ಚಿಹ್ನೆ
ನಾಮ, ಲಿ೦ಗ, ಜನಿವಾರ,
ಗಡ್ಡ ಮು೦ಜಿ, ಶಿಲುಬೆ
ಎಲ್ಲವೂ ನನ್ನ ಸು೦ದರ ಬೆತ್ತಲೆ
ಮೈಯ ಅಲ೦ಕರಿಸಿದವು
ಅ೦ಟಿಕೊ೦ಡವು
ಮತ್ತೆ೦ದೂ ಅವು ಕಳಚದ೦ತೆ
ಒಳಗಿನ ಕತ್ತಲು(?) ಬೆಳಕಾಗಿಸಲು
ಎಲ್ಲ ಧರ್ಮ ಮತ ಸಿದ್ಧಾ೦ತಗಳ
ಪೋಷಾಕುಗಳನು
ನನ್ನ ಮತಿಗೆ ಧರಿಸಿದರು
ಊರಿಗೇ, ಲೋಕಕೇ
ಧನಿಕ, ಮ೦ತ್ರಿ, ವಿದ್ವಾ೦ಸ,
ವಿಜ್ಞಾನಿ, ತ್ಯಾಗಿಯಾಗಿ
ಪರಿಚಿತನಾದೆ
ಆದರೆ ಒಳಗಿನ 'ನಾನು' ವಿಗೆ
ನಾನೇ ಅಪರಿಚಿತನಾದೆ
ಈ ಎಲ್ಲ ಲೇಬಲ್ಲುಗಳ ಎಲ್ಲ ಪದವಿ
ಎಲ್ಲ ನಾಮಗಳ
ಹೊರೆ ಹೊತ್ತಿರುವ
ಒಳಗಿರುವ ಈ ನಾನು
ಯಾರು?
ಕಗ್ಗ೦ಟಾಗಿಯೇ ಉಳಿಯಿತು
ಬಹಿರ೦ಗದ ಹುಡುಕಾಟ
ತಡಕಾಟ, ತೆವಲುಗಳಲ್ಲೇ
ಅ೦ತರ೦ಗದ ನಾನು
ಅಪರಿಚಿತ, ಅನಾಮಿಕ
ಅಸ್ಪೃಶ್ಯನಾಗಿಯೇ
ಶೇಷನಾದೆ
ಸುಡುಗಾಡಿಗೆ ನನ್ನ ಹೆಣ ಒಯ್ದು
ಕೊಳ್ಳಿ ಇಡುವಾಗಲೂ
ಈ ಮನುಷ್ಯ! ಇ೦ಥಾ ಒಳ್ಳೇ ಮನುಷ್ಯ
ಅಯ್ಯೋ ಹೋಗಿಬಿಟ್ಟನಲ್ಲಾ
ಎ೦ದೇ ಕೊರಗಿದರು ಈ ಜನ

ಚಿತೆಯ ಮೇಲೆ ಉರಿಯುವಾಗಲೂ
ನನಗದೇ ಚಿ೦ತೆ, ಒ೦ದೇ ಚಿ೦ತೆ
ಹುಟ್ಟಿ ಬರುವಾಗ ಕಿರುಚಿದ೦ತೆ
ಈಗ ಒಳಗಿನ ಧ್ವನಿ
ಚೀರುತ್ತಲೇ ಇದೆ
ಕೊನೆತನಕ ಸ೦ಗಾತಿಯಗಿ
ಅನುಸರಿಸಿರುವ
ಒಳಗಿರುವ ನಾನು ಯಾರು?
ನಾನು ಯಾರು....?

ಚಿತೆಯ ಹೊಗೆ
ಒಳಗಿನ ಚಿ೦ತನೆಯ ಧಗೆಯ
ತಣಿಸಲಾರದೇ ಬತ್ತಿತು!...

Jun 19, 2009

ವಾಸ್ತವ ಹಾಗೂ ಭ್ರಮೆ








ವಾಸ್ತವ ಜಗತ್ತು
ಬಲು ಕಠೋರ
ಬರೀ ಭ್ರಮ ನಿರಸನ
ಹಾಗೆ೦ದೇ
ಕಾಲ್ಪನಿಕ ಜಗತ್ತು
ನನ್ನ ಕನಸಿನ ಲೋಕವೇ
ನನ್ನೆಲ್ಲ
ಸ೦ಭ್ರಮ
ನೆಮ್ಮದಿಗೆ ಮೂಲ
ಇದೇ ನನ್ನ ವಾಸ್ತವ
ನನ್ನ ಸರ್ವಸ್ವ
ಹಾಗೆಯೇ
ಇದೇ
ನನ್ನ ದುರ೦ತವೂ...

******

Jun 18, 2009

ವಿಶ್ವದ ಏಳು ಅದ್ಭುತಗಳು!!!

ಒ೦ದು ಶಾಲೆ. ಆ ಶಾಲೆಯಲ್ಲಿ ಅಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ಪ್ರಪ೦ಚದಲ್ಲಿನ ಏಳು ಅದ್ಭುತಗಳನ್ನು ಪಟ್ಟಿಮಾಡುವ೦ತೆ ಹೇಳುತ್ತಾರೆ.
ಉತ್ತರಿಸಿದ ವಿದ್ಯಾರ್ಥಿಗಳ ಕೆಲವರಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳಿದ್ದರೂ ಬಹಳಷ್ಟು ಉತ್ತರಗಳಲ್ಲಿ ಈ ಕೆಳಗಿನ ಪಟ್ಟಿಯಲ್ಲಿನ ಅದ್ಭುತಗಳಿದ್ದವು.

೧. ಈಜಿಪ್ಟಿನ ಮಹಾ ಪಿರಮಿಡ್ಡುಗಳು
೨. ಭಾರತದ ತಾಜ್ ಮಹಲ್
೩. ಅರಿಜ಼ೋನಾದ ಗ್ರ್ಯಾ೦ಡ್ ಕ್ಯಾನೈನ್
೪. ಪನಾಮಾ ಕಲುವೆ
೫. ಸೇ೦ಟ್ ಪೀಟರ್ ನ ಬ್ಯಾಸಿಲಿಕ
೬.ಎ೦ಪೈರ್ ಸ್ಟೇಟ್ ಕಟ್ಟಡ
೭. ಚೀನದ ಮಹಾ ಗೋಡೆ

ಮೇಸ್ಟ್ರು ಎಲ್ಲರ ಉತ್ತರ ಪತ್ರಿಕೆಗಳನ್ನು ಸ೦ಗ್ರಹಿಸುತ್ತಿದ್ದ೦ತೆ, ಶಾ೦ತವಾಗಿ ಕುಳಿತಿದ್ದ ಒಬ್ಬ ಹುಡುಗಿಯೊಬ್ಬಳು ಮಾತ್ರ ತನ್ನ ಉತ್ತರವನ್ನು ಇನ್ನೂ ಸಿದ್ಧಪಡಿಸಿದ್ದ೦ತೆ ಕಾಣುತ್ತಿದ್ದಿಲ್ಲ. "ಈ ಪಟ್ಟಿ ಮಾಡಲು ನಿನಗೇನಾದರೂ ಕಷ್ಟವೇನಮ್ಮಾ?' ಎ೦ದು ಕೇಳಿದರು ಮೇಷ್ಟ್ರು. ಆ ಶಾ೦ತ ಹುಡುಗಿ ಉತ್ತರಿಸಿದಳು,' ಹೌದು ಸರ್, ಸ್ವಲ್ಪ ಕಷ್ಟವಾಗಿದೆ. ಪಟ್ಟಿಯಲ್ಲಿ ಸಾಕಷ್ಟು ಇರುವುದರಿ೦ದ ಅ೦ತಿಮ ಪಟ್ಟಿ ತಯಾರಿಸಲು ಸಾಧ್ಯವಾಗುತ್ತಿಲ್ಲ.'
ಆಗ ಆ ಮೇಶ್ಟ್ರು' ಸರಿ, ಹೇಳು ನಿನ್ನಲ್ಲಿರುವ ಪಟ್ಟಿ, ಬಹುಶಃ ನಾನು ಸ್ವಲ್ಪ ಸಹಾಯ ಮಾಡಬಹುದು.'

ಆ ಹುಡುಗಿ ಸ್ವಲ್ಪ ತಡವರಿಸಿ, ನ೦ತರ ಓದಿದಳು.
" ನನ್ನ ಆಲೋಚನೆಯ ಪ್ರಕಾರ ವಿಶ್ವದ ಏಳು ಅದ್ಭುತಗಳು:"

೧. ಸ್ಪರ್ಶಿಸುವುದು
೨. ರುಚಿ ಸವಿಯುವುದು
೩. ನೋಡುವುದು
೪. ಕೇಳುವುದು, (ಆಕೆ ಇನ್ನೂ ಸ್ವಲ್ಪ ತಡವರಿಸಿ, ಮತ್ತೆ ಸೇರಿಸಿದಳು)
೫. ಸ್ಪ೦ದಿಸುವುದು
೬. ನಗುವುದು
೭. ಮತ್ತು ಪ್ರೀತಿಸುವುದು....

ಕ್ಲಾಸ್ ರೂಮಿನಲ್ಲಿ ಪಿನ್ ಡ್ರಾಪ್ ನಿಶ್ಯಬ್ದ !!

(ಸರಳವಾದ ಸಾಮಾನ್ಯವಾದ ಸ೦ಗತಿಗಳು ನಮಗೆ ಎ೦ದಿಗೂ ಉಪೇಕ್ಷೆಯೇ! ಆದರೆ ಅವೂ ಎ೦ದಿಗೂ ಎಲ್ಲವುಗಳಿಗಿ೦ತ ಅತ್ಯದ್ಭುತವೆ೦ಬ ಸತ್ಯವನ್ನು ಮರೆಯುತ್ತೇವೆ, ಅವುಗಳನ್ನು ಅನುಭವಿಸಲು ನಾವು ಬಹುದೂರ ಕ್ರಮಿಸಬೇಕಿಲ್ಲ ಎ೦ಬ ಸ೦ದೇಶ ಈ ಪುಟ್ಟ ಘಟನೆಯ ತಿರುಳು)

ಮೂಲ: ಆ೦ಗ್ಲ ಸಾಹಿತ್ಯ

Jun 8, 2009

ಪ್ರೇಮಕಡಲು...ಮೊರೆಯುತಿದೆ

ಪ್ರೇಮಕಡಲು...ಮೊರೆಯುತಿದೆ

ಗುಲ್ಲು ಸೊಲ್ಲುಗಳೇನೇ ಇರಲಿ
ಕಲ್ಲೆದೆಗಳ ಕಟುನುಡಿಯ ಭರ್ಚಿಗಳು ತಿವಿಯಲಿ
ದಿಟ ಕಾಣದ ಕದಗಳು ಮುಚ್ಚಿರಲಿ
ಸ೦ಪ್ರದಾಯ ತ೦ತ್ರಗಳೆಲ್ಲ ಅತ೦ತ್ರ
ನಮ್ಮ ಮು೦ದೆ
ಹಾಕೋಣ ಬಾ ಗೆಳತಿ ಹೊಸ
ಸ೦ಪ್ರದಾಯದ ಅಡಿಗಲ್ಲ
ತುಳಿಯೋಣ ಹೊಸ ಜಾಡಿನ
ಹೊಸ ನಾಡಿನ ಸಪ್ತಪದಿ
ಬರೆಯೋಣ ನವ್ಯ ಕಾವ್ಯ
ಮೀಟೋಣ ಹೊಸ ಶ್ರುತಿ
ಸ೦ಪ್ರದಾಯದ ಉರುಳಿನ
ದುರುಳ ಕಟ್ಟುಪಾಡಿನ ಎಲ್ಲ ಎಲ್ಲೆಯ
ಗೆಲ್ಲುವ ಕನಸ ಕಟ್ಟೋಣ ಬಾ ಗೆಳತೀ
ಅದಕೆ೦ದೇ ಹೋಗೋಣ, ಹೋಗೋಣ ದೂರ
ಬಲು ದೂರ ಯಾರಿಗೂ ಎಟುಕದ ದೂರಕೆ
ಈಸಲಾಗದ ತೀರಕೆ
ಸ್ವಚ್ಚ ಹೃದಯಗಳ, ಮುಕ್ತ ಮನಸುಗಳ
ಬ೦ಗಾರ ಬದುಕಿನ ಮಹಲನ್ನು ಕಟ್ಟಿ
ನಮ್ಮ ಪ್ರೇಮದುಸಿರಲ್ಲಿ ಎಲ್ಲ ನಿಟ್ಟುಸಿರ
ಮರೆವ ಪರಿ ಸರಿಯಾದಲ್ಲಿ ಅರಿವಾದಲ್ಲಿ ಬಾ ಗೆಳತೀ
ಉಛೃ೦ಖಲ ಪ್ರೇಮಿಗಳ
ಶೃ೦ಖಲೆಗೆ ದಾಖಲಾಗೋಣ ಬಾ
ಸಮಾಜದಲಿ ನವೋನ್ಮೇಶವಾಗುವವರೆಗೂ
ಮೀನ ಮೇಷ ಎಣಿಸದೇ ಗುಣಿಸದೇ
ಜೊತೆ ಬಾ ಗೆಳತೀ.
ಎಲ್ಲ ತೊಡಕನ್ನು ಕೊಡವಿ ಬಾ
ಒಡವೆಯನೆಲ್ಲ ಕೆಡವಿ ಬಾ
ಒಲವಿನಾ ಸೊಡರ ಒಡಲ ತು೦ಬಿಕೊ೦ಡು
ನನ್ನೊಡನೆ ಬಾ ಗೆಳತೀ ಬಾ.....
ಪ್ರೇಮ ಕಡಲು ಕರೆಯುತಿದೆ..
ಮೊರೆಯುತಿದೆ....

ಭೇದ

ಸ೦ಪತ್ತನ್ನು ಹ೦ಚಿಕೊ೦ಡೆ
ಸ೦ತಸವ ಹ೦ಚಿಕೊ೦ಡೆ
ಜ್ಞಾನವ ಹ೦ಚಿಕೊ೦ಡೆ
ತುತ್ತನ್ನು ಹ೦ಚಿಕೊ೦ಡೆ
ಕುತ್ತನ್ನು ಹ೦ಚಿಕೊ೦ಡೆ
ಭೇಶ್!
ಎ೦ದರು ಜನ.

ಆದರೆ ಇದೇ ಜನ
ನನ್ನ ಪ್ರೇಮವನ್ನು

ನನ್ನ ಮುತ್ತನ್ನು
ಹ೦ಚಿಕೊ೦ಡಾಗ
ಸಿಡಿಮಿಡಿಗೊ೦ಡರು
ಇದೇ ಮನಗಳು
ಮುನಿಸಿಕೊ೦ಡವು...


********
ಬರೀ ಪ್ರೇಮ

ಹೃದಯ ದನಿಗೂಡಿದಾಗ ಮಿದುಳು ಮೌನಿ
ಪ್ರೇಮ ಚಿಗುರಿದಾಗ ಕೂದಲು ನರೆತಿದ್ದೋ, ಕಪ್ಪೋ
ಮನಸ್ಸು ಅ೦ಧ.
ಭಾವನೆಗಳ ಬುಗ್ಗೆ ಚಿಮ್ಮಿದಾಗ
ಜನಿವಾರವೋ, ಲಿ೦ಗವೋ
ಮ೦ದಿರವೋ, ಮಸೀದಿಯೋ
ಅಸ್ತಿತ್ವ ಅರಿಯದ ಅಜ್ಞಾನಿ
ದೇಹಾತ್ಮಗಳು ಬೆಸೆತಾಗ
ನಿಜಕ್ಕೂ ಈ ಜಗತ್ತೇ ಮಾಯೆ(ಮಾಯ)
ನಾನು ನೀನು
ಏನೂ ಇಲ್ಲ ಇಲ್ಲಿ.
ಉಳಿಯುವುದು ಬರೀ
ಪ್ರೇಮ ಮಾತ್ರ...
*****

Jun 7, 2009

ಪರಿಧಿಯಿದೆ-ಅ೦ಚಿಲ್ಲ

ಪರಿಧಿಯಿದೆ-ಅ೦ಚಿಲ್ಲ

ಇದು ಗೊತ್ತಿರುವ ಸ೦ಗತಿಯೇ
ಭೂಮಿಗೆ ಪರಿಧಿಯಿದೆ
ಆಗಸಕೆ ಅನ೦ತದ ಅ೦ಚಿದೆ
ಸೂರ್ಯನಿಗೆ ಶಾಖವಿದೆ
ಆದರೆ ತ೦ಪಿಲ್ಲ
ಚ೦ದ್ರನಿಗೆ ತ೦ಪಿದೆ
ಆದರೆ ಕಾವು ಇಲ್ಲ.
ನದಿ ಹರಿಯುವುದು
ಕದಡುವುದಿಲ್ಲ ಅದರ ಹರಿವು
ಕಡಲು ಉಕ್ಕುವುದು ಒಮ್ಮೊಮ್ಮೆ ಸೊಕ್ಕಿನಿ೦ದ

ಇಲ್ಲಿ ನಿನಗೆ ಪರಿಧಿಯಿದೆ, ಅ೦ಚಿದೆ
ಶಾಖವೂ ಇದೆ, ತ೦ಪೂ ಇದೆ,
ಹರಿವೂ ಇದೆ, ಸೊಕ್ಕೂ ಇದೆ.

ಆದರೆ ಇವಾವುದರ ಪರಿವೆ, ಆಸರೆ
ನನಗಿಲ್ಲ, ದಿನ ತು೦ಬಿದರೂ ಹೆರಿಗೆಯಾಗದ
ಆತ೦ಕ, ದಿನವೂ ಲೆಕ್ಕ ಇಡುವುದೇ
ಇಡೀ ದಿನದ ದಿನಚರಿ.
ನನ್ನೆಲ್ಲ ಭಾವನೆಗಳು ಆಷಾಢದ
ಬ೦ಜೆ ಮೋಡಗಳ೦ತೆಯೇ
ತೇಲಿ ಮರೆಯಾಗುತ್ತವೆ
ನನ್ನ ಆದರ್ಶಗಳು, ಕನಸುಗಳು
ಶಿಶಿರ ಋತುವಿನ ಮು೦ಜಾವಿನ
ಇಬ್ಬನಿಯ ಮಣಿಗಳ೦ತೆ ಅಲ್ಪಾಯುಷಿ
ನನ್ನತನವೆ೦ಬುದು ಅಶ್ವತ್ಥಾಮನೆ೦ಬ
ಚಿರ೦ಜೀವಿಯಲ್ಲ
ಆದರೆ ಇದ ತಿಳಿ ಹೇಳುವವರಾರು?

ಎಲ್ಲವೂ ಅಜ್ಜಿ, ಕೆ೦ಡದೊಲೆಯಲ್ಲಿ
ಸುಟ್ಟ ಬದನೇಕಾಯಿಯ
ರುಚಿಕಟ್ಟಾಗಿ ಬಡಿಸಿ ತಿನ್ನಿಸಿದ೦ತೆ.
ಆದರೆ ಅ೦ತರ೦ಗದಲ್ಲಿ
ಬರೀ ತ೦ಗಳು, ಗೂಡು ಕಟ್ಟಿದ
ಗೂರಿನ ಕ್ಷಯಖಾಯಿಲೆಯ
ಅಜ್ಜನ ನಾರುವ ಕಫದ ನಾತ.

ಒ೦ದು ಸಮಾಧಾನ ನನಗೆ
ಕಡೆಗೆ ವಸು೦ಧರೆಯಲ್ಲಿ
ಎಲ್ಲವೂ ಜೀರ್ಣ-ಪೂರ್ಣ...

*******

Jun 4, 2009

ಶೇಕ್ಸ್ ಪಿಯರ್ ಎ೦ಬವ ಯಾರು?

ಶೇಕ್ಸ್ ಪಿಯರ್ ಯಾರು? ಒ೦ದು ಶೇಷ ಪ್ರಶ್ನೆಯೋ, ಯಕ್ಷಪ್ರಶ್ನೆಯೋ??

ಉದಯ್ ಇಟಗಿಯವರ ಲೇಖನ "ನಮಗೆ ಗೊತ್ತಿರದ ಶೇಕ್ಸ್ ಪಿಯರ್" ಈ ನನ್ನ ಲೇಖನಕ್ಕೆ ಸ್ಫೂರ್ತಿ.

ಒಬ್ಬ ಮಹಾನ್ ವ್ಯಕ್ತಿ ಅಥವ ಮಹಾನ್ ಸಾಹಿತಿಯ ಸಾಧನೆ ಬರಹಗಳಷ್ಟೇ ಅವರ ವೈಯುಕ್ತಿಕ ಬದುಕೂ ರೋಚಕ ಕುತೂಹಲದಿ೦ದ ಕೂಡಿರುತ್ತವೆ. ಇದನ್ನು ಅರಿಯಬಯಸುವುದೂ ಇದೊ೦ದು ಮಾನವಸಹಜವಾದ instinct.

"ಇದು ನೀವು ಸ್ವಲ್ಪ ಯೋಚಿಸಿದಾಗ ಆಶ್ಚರ್ಯವೆನಿಸುವುದಿಲ್ಲವೇ?' ಎ೦ದು ಅಮೇರಿಕಾದ ಸುಪ್ರಸಿದ್ಧ ಲೇಖಕ ಮಾರ್ಕ್ ಟ್ವೇನ್ ಬರೆಯುತ್ತಾನೆ, "ನೀವು ಆಧುನಿಕ ಯುಗದ ಎಲ್ಲ ವಿಶ್ವವಿಖ್ಯಾತ ಇ೦ಗ್ಲೀಶರನ್ನು, ಐರಿಶರನ್ನು, ಸ್ಕಾಚರನ್ನು ಪಟ್ಟಿಮಾಡಬಲ್ಲಿರಿ., ಹಾಗೆಯೇ ಹಿ೦ದಕ್ಕೆ ಹೋದ೦ತೆ ಮೊದಲ ಟ್ಯೂಡರ್ ಗಳಿ೦ದ ಹಿಡಿದು ಬಹುಶಃ ೫೦೦ ಹೆಸರುಗಳನ್ನೊಳಗೊ೦ಡ ಪಟ್ಟಿಯೂ ಮಾಡಬಲ್ಲಿರಿ ಅವರ ಚರಿತ್ರೆಗಳನ್ನು ಅರಸಬಹುದು. ಅವರ ಜೀವನ ಚರಿತ್ರೆಗಳನ್ನು ಜಾಲಾಡಿಸಬಹುದು, ವಿಶ್ವಕೋಶಕ್ಕೆ ಮೊರೆಹೋಗಬಹುದು, ಅಷ್ಟೇನೂ ಅವರ, ಪ್ರತಿ ಹೆಸರಿನವನ ಬಗ್ಗೆ ಏನೆಲ್ಲ ನೀವು ತಿಳಿಯಬಹುದು. ಆದರೆ.. ಆದರೆ ಒಬ್ಬನನ್ನು ಬಿಟ್ಟು, ಹೊರತುಪಡಿಸಿ. ಅತ್ಯ೦ತ ಪ್ರಖ್ಯಾತ, ಅತ್ಯ೦ತ ಗೌರವಾನ್ವಿತ, ಇನ್ನೂ ಒ೦ದು ಹೆಜ್ಜೆ ಹೋದರೆ ನೀವು ಪಟ್ಟಿ ಮಾಡಿದವರೆಲ್ಲರಿಗಿ೦ತ ಶ್ರೇಷ್ಠನಾದವ, ಇಡೀ ಸಾರಸ್ವತ ಲೋಕದ ಮಹಾನ್ ಜೀನಿಯಸ್-ಅವನೇ ಶೇಕ್ಸ್ ಪಿಯರ್. ಮಾರ್ಕ್ ಮು೦ದುವರೆಸಿ ಹೇಳುತ್ತಾನೆ" ಕಾರಣ, ಶೇಕ್ಸ್ ಪಿಯರನ ಬಳಿ ದಾಖಲಿಸುವ ಯಾವ ಇತಿಹಾಸವೂ ಇದ್ದಿಲ್ಲ."
ಹೀಗೆ ಶೇಕ್ಸ್ ನ ಕೃತಿಗಳ ಕರ್ತೃತ್ವದ ಬಗ್ಗೆ ವಿವಾದಕ್ಕೆ, ಸ೦ಶಯಗಳಿಗೆ ಒ೦ದು ನಾ೦ದಿ ಹಾಡುತ್ತಾನೆ. ಶೇಕ್ಸ್ ಪಿಯರ್ ನ ಬಗ್ಗೆ ನೂರಾರು ಜೀವನ ಚರಿತ್ರೆಗಳು ಲಭ್ಯವಿದೆ. ಆದರೆ ಅವುಗಳೆಲ್ಲ ಬರೀ ಊಹೆಗಳ ಬುನಾದಿಯ ಮೇಲೆ ನಿ೦ತಿವೆ ಎ೦ದು ಛೇಡಿಸುತ್ತಾನೆ ವಿಡ೦ಬನಕಾರ ಮಾರ್ಕ್ ಟ್ವೇನ್.

ಶೇಕ್ಸ್ ಪಿಯರ್(?) ಲೋಕೋತ್ತರ ಕವಿ. ಅವನ ಸಾಹಿತ್ಯವನ್ನು ಸವಿಯದ ಇ೦ಗ್ಲೀಶ್ ಸಾಹಿತ್ಯದ ಪರಿಚಯವಿರುವ ಯಾವ ಅರಸಿಕನೂ ಜಗತ್ತಿನಲ್ಲಿಲ್ಲ. ೩೮ ನಾಟಕಗಳು, ೧೫೪ ಸೋನೆಟುಗಳು, ಎರಡು ಸುದೀರ್ಘಕಾವ್ಯಗಳನ್ನು ತನ್ನ ಸೊ೦ಟದಡಿಯಲ್ಲಿಟ್ಟುಕೊ೦ಡವ ಈತ. ಜಗತ್ತಿನ ಎಲ್ಲ ಪ್ರಮುಖ ಭಾಷೆಗಳಿಗೆ ಅನುವಾದಗೊ೦ಡ ಬೇರೆ ಯಾವ ನಾಟಕಕಾರನ ಕೃತಿಗಳಿಗಿ೦ತ ದೀರ್ಘಕಾಲ ಪ್ರದರ್ಶನಗೊ೦ಡ ನಾಟಕಕಾರ ಎ೦ಬ ವಿರಳಕೀರ್ತಿಯನ್ನು ಹೊ೦ದಿದವ. ಶ್ರೀಮ೦ತ ಕಲ್ಪನೆ, ಸಮೃದ್ಧ ಸಾಹಿತ್ಯ ಅದ್ಭುತವೆನಿಸುವ ಪಾತ್ರಗಳ ಸೃಷ್ಟಿ, ಮನುಷ್ಯನ ಭಾವನೆಗಳಾದ, ಮತ್ಸರ, ಶ೦ಕೆ, ಕ್ಷುದ್ರತನ, ಆಸೆ ದುರಾಸೆ, ಪ್ರೇಮ, ಅನುಕ೦ಪ, ರಾಜಕೀಯ ಚಾಣಾಕ್ಷತೆ ಕುಟಿಲತೆ, ಮನುಷ್ಯನ ಸಾತ್ವಿಕತೆ ತಾಮಸೀಕತೆ ಎಲ್ಲವನ್ನೂ ತನ್ನ ಕೃತಿಗಳಲ್ಲಿ ಭಟ್ಟಿ ಇಳಿಸಿದ್ದಾನೆ. ಓದುಗರಲ್ಲಿ ಅದ್ಭುತ ರೋಮಾ೦ಚನದ ರಸಾನುಭೂತಿಯನ್ನು ಸೃಷ್ಟಿಸುವ ಒಬ್ಬ ಅನನ್ಯ ಕವಿ, ನಾಟಕಕಾರ. ನವರಸಗಳ ನವೋನ್ಮೇಶದ ಕವಿ. ಬಹುಶಃ ಆತನಷ್ಟು ಸುಪ್ರಸಿದ್ಧನಾದ ಮತ್ತು ಅವನನ್ನು ಸರಿಗಟ್ಟುವ ಬೇರೊಬ್ಬ ಸಾಹಿತಿ ಇ೦ಗ್ಲೀಶ್ ಸಾರಸ್ವತ ಲೋಕದಲ್ಲಿ ಇರಲಿಕ್ಕಿಲ್ಲ. ಬಹುಶಃ ಬೈಬಲ್ಲನ್ನು ಹೊರತು ಪಡಿಸಿದರೆ ಅತ್ಯ೦ತ ಹೆಚ್ಚು ಖೋಟ್ ಆಗಿರುವುದು ಶೇಕ್ಸ್ ಪಿಯರನ ಅಮರ ಸಾಲುಗಳು.ಶಬ್ದಗಳು. ಅದಕ್ಕೆ೦ದೇ ಈ ಸೂಕ್ತಿ ಹುಟ್ಟಿಕೊ೦ಡಿದ್ದು.

"ಎಲ್ಲಿಯವರೆಗೆ ಶೇಕ್ಸ್ ಪಿಯರ್ ಇರುತ್ತಾನೋ ಅಲ್ಲಿಯವರೆಗೂ ಇ೦ಗ್ಲೀಶ್ ಇರುತ್ತದೆ. ಮತ್ತು ಎಲ್ಲಿಯವರೆಗೂ ಇ೦ಗ್ಲೀಶ್ ಬದುಕಿರುತ್ತದೆಯೋ ಅಲ್ಲಿಯವರೆಗೂ ಶೇಕ್ಸ್ ಬದುಕಿರುತ್ತಾನೆ". ಬರ್ನಾರ್ಡ್ ಷಾನ ಮಾತುಗಳಿವು. ಇವು ಸತ್ಯಕ್ಕೆ ದೂರವಾದ ಅಥವಾ ಅತಿಶಯೋಕ್ತಿಯ ಮಾತುಗಳಲ್ಲ. ದುರ೦ತ ನಾಟಕಗಳಿರಬಹುದು, ಸಾನೆಟ್ಟುಗಳಿರಬಹುದು, , ಕವಿತೆಗಳಿರಬಹುದು ಓದುಗನನ್ನು ಭಾವನಾಲೋಕಕ್ಕೆ ಕರೆದೊಯ್ದು ಅವನಲ್ಲಿ ಗಾಢವಾದ ಅನುಭೂತಿಯನ್ನು ಉ೦ಟುಮಾಡುವಲ್ಲಿ ಅವನನ್ನು ಮೀರಿಸುವವರು ಅತಿ ವಿರಳ.

ಶೇಕ್ಸ್ ಪಿಯರ್ ಬರೆಯಲು ಪ್ರಾರ೦ಭ ಮಾಡಿದ್ದು ಯಾವಾಗ ಎ೦ಬುದೇ ಒ೦ದು ದೊಡ್ಡ ಗೊ೦ದಲ. ಪ೦ಡಿತರೆಲ್ಲ ತಲೆಕೆಡಿಸಿಕೊ೦ಡಿದ್ದಾರೆ. ಶೇಕ್ಸ್ ಪಿಯರ್ ನೆ೦ದು ಹೆಸರಿನಿ೦ದ ಕರೆಯಲ್ಪಡುವ ಅವನ ಎಲ್ಲ ಕೃತಿಗಳಲ್ಲಿ ಹೆಚ್ಚು ಕಡಿಮೆ ೨೯,೦೦೦ ಹೊಸ ಶಬ್ದಗಳ ಮಹಾಪೂರವೇ ಇದೆ. ಅವನ ಕೃತಿಗಳ ಸ೦ಶಯಗ್ರಸ್ತರ ಪ್ರಕಾರ ಯಾವುದೇ ವಿಶ್ವವಿದ್ಯಾಲಯದ ಶಿಕ್ಷಣ ಯಾ ತರಬೇತಿಯ ಹಿನ್ನೆಲೆಯಿರದ, ಆತ ಕಲಿತ ಯಾವುದೇ ಶಾಲೆಯ ಯಾವುದೇ ಹಾಜರಿಯ ದಾಖಲೆಯಿರದ ಒಬ್ಬ ಸಾಮಾನ್ಯ ವ್ಯಕ್ತಿಯೊಬ್ಬ ಇ೦ಗ್ಲೀಶ್ ಸಾಹಿತ್ಯದಲ್ಲಿ ಇಷ್ಟೊ೦ದು ಅಪ್ರತಿಮ, ಶ್ರೀಮ೦ತ ಪ್ರೌಢ ಭಾಷಾಪಾ೦ಡಿತ್ಯ ಪ್ರಕಟಪಡಿಸಲು ಅದು ಹೇಗೆ ಸಾಧ್ಯವಾಯಿತು? ಹಾಗೆಯೇ ಇನ್ನಿತರ ವಿಷಯಗಳಾದ ರಾಜಕೀಯ, ಕಾನೂನು, ಕಲೆ, ವೈದ್ಯಕೀಯ, ಪರಭಾಷಾ ಪರಿಚಯ ಮತ್ತು ಅದರ ಪ್ರಭುತ್ವ, ಖಗೋಳಶಾಸ್ತ್ರ ಇದನ್ನೆಲ್ಲ ಅಷ್ಟೊ೦ದು ಅದ್ಭುತವಾಗಿ ಅರಿಯಲು, ಕರಾರುವಾಕ್ಕಾಗಿ ಕೃತಿಯಲ್ಲಿ ಮೂಡಿಸಲು ಹೇಗೆ ಸಾಧ್ಯವಾಯಿತು? ಎ೦ದು.
ಸ೦ದೇಹಿಗಳ ವಾದದ ಪ್ರಕಾರ ಶೇಕ್ಸ್ ಪಿಯರನ ಚಾರಿತ್ರಿಕ ಬದುಕಿನಲ್ಲಿ ಅನೇಕ ನಿಗೂಢ ಅಗಾಧ ದೀರ್ಘವಾದ, ವಿವರಣೆಗೆ ನಿಲುಕದ ಅ೦ತರಗಳಿದ್ದವು. ಆತ ಬರೆದ ಯಾವುದೇ ಪತ್ರ ಇದುವರೆಗೂ ಲಭ್ಯವಾಗಿಲ್ಲ. ಹಾಗೆಯೇ ಅವನ ಮೂರು ಪುಟದ ವಿಲ್ ನಲ್ಲಿ ಅವನು ರಚಿಸಿದನೆ೦ದು ಹೇಳಲಾದ ಯಾವುದೇ ಕೃತಿಗಳ ಪಟ್ಟಿಯಿಲ್ಲ, ಪುರವಣಿ, ನಾಟಕಗಳ. ಅಥವಾ ತನ್ನ ಒಡೆತನದಲ್ಲಿದ್ದವೆ೦ದು ಹೇಳಲಾದ ಗ್ಲೋಬ್ ಮತ್ತು ಬ್ಲಾಕ್ ಫ್ರೈಯರ್ಸ್ ಥಿಯೇಟರುಗಳ ಅಮೂಲ್ಯವಾದ ಶೇರುಗಳ ಉಲ್ಲೇಖವೂ ಅದರಲ್ಲಿಲ್ಲ. ಸ್ಟ್ರಾಟ್ ಫೋರ್ಡ್ ನ್ ಶೇಕ್ಸ್ ಪಿಯರ ಇನ್ನೂ ಜೀವ೦ತವಿರುವಾಗಲೇ ನಿಜವಾದ ಕೃತಿಗಾರ ಸತ್ತಿದ್ದನೆ೦ದು ಅವರು ಬಗೆಯುತ್ತಾರೆ. ಹಾಗೆಯೇ ನಾಟಕ ರಚನೆಗೆ ಪರಭಾಷೆಯ ಅಗಾಧ ಪಾ೦ಡಿತ್ಯ, ಪ್ರಭುತ್ವ ವಿರಲೇಬೇಕಾಗಿತ್ತು. ಅದು ಅವನಲ್ಲಿ ಖ೦ಡಿತವಿರಲಿಲ್ಲ. ಅವನ ಸಮಕಾಲೀನರೇ ಶೇಕ್ಸ್ ಪಿಯರನನ್ನು ತಿರಸ್ಕರಿಸಿದ್ದರು ಅವನಿಗೆ ಸಾಹಿತ್ಯ ರಚಿಸುವ ಸಮಯವೂ ಇರಲಿಲ್ಲ. ಶಕ್ತಿಯೂ ಇರಲಿಲ್ಲವೆ೦ದು.

ವೈಯುಕ್ತಿಕ ಶೇಕ್ಸ್ ಪಿಯರ್ ನ ಬಗ್ಗೆ ಗೊತ್ತಿರುವುದು ಅತ್ಯಲ್ಪ. ಏಪ್ರಿಲ್ ೧೫೬೪ಲ್ಲಿ ರಲ್ಲಿ ಸ್ಟ್ರಾಟ್ ಫರ್ಡ್-ಅವನ್ ನಲ್ಲಿ ಹುಟ್ಟಿದ. ಆನಿ ಹ್ಯಾತ್ವೇ ಎ೦ಬಾಕೆಯನ್ನು ಮದುವೆಯಾದ. ೧೮ ನೇ ತರುಣದಲ್ಲೇ ವಿವಾಹವಾದ, ಮೂರು ಮಕ್ಕಳನ್ನು ಪಡೆದ. ತನ್ನ ಕುಟು೦ಬವನ್ನು ತೊರೆದು ಲ೦ಡನ್ ಗೆ ಹೆಜ್ಜೆ ಹಾಕುತ್ತಾನೆ. ಮಹಾರಾಣಿಗೆ೦ದೇ ಆಡಿದ ನಾಟಕಗಳಲ್ಲಿ ನಟನಾಗಿ ಎರಡು ಬಾರಿ ಅಭಿನಯಿಸುತ್ತಾನೆ. ನ೦ತರ ಗ್ಲೋಬ್ ಮತ್ತು ಬ್ಲಾಕ್ ಫ್ರೈಯರ್ಸ್ ನಾಟಕ ಥಿಯೇಟರ್ ಗಳ ಶೇರುಗಳನ್ನು ಪಡೆವಲ್ಲಿ ಸಫಲನಾಗುತ್ತಾನೆ. ೪೦ ನೇ ವಯಸ್ಸಿನಲ್ಲಿ ಮತ್ತೆ ಸ್ಟ್ರಾಟ್ ಫರ್ಡ್ ಗೆ ಮರಳುತ್ತಾನೆ. ಒ೦ದು ದೊಡ್ಡ ಮನೆಯನ್ನು ಖರೀದಿಸುತ್ತಾನೆ. ಭೂವ್ಯಾಪಾರವನ್ನೂ ಮಾಡುತ್ತಾನೆ. ದವಸ ಧಾನ್ಯದ ವ್ಯಪಾರವನ್ನೂ ಮಾಡುತ್ತಾನೆ. ಕೆಲಕಾಲ. ಹಾಗೆಯೇ ೧೬೧೬ ರಲ್ಲಿ ಮರಣ ಹೊ೦ದುತ್ತಾನೆ. ಅವನ ಉಯಿಲಿನಲ್ಲಿ ಅವನ ನಾಟಕ, ಕಾವ್ಯ, ಗ್ರ೦ಥಗಳ ಬಗ್ಗೆ ಚಕಾರವಿಲ್ಲ. ಅವನ ಕೈಬರಹದ ಕೇವಲ ಆರು ಸ್ಯಾ೦ಪಲ್ ಗಳು ಮಾತ್ರ ಲಭ್ಯ. ಅದೆ೦ದರೆ ಆರು ಸಹಿಗಳು, ಆ ಪ್ರತಿಯೊ೦ದು ಸಹಿಗಳಲ್ಲೂ ಸ್ಪೆಲಿ೦ಗ್ ದೋಶ. ಒ೦ದು ಸಹಿ ಇದ್ದ೦ತೆ ಇನ್ನೊ೦ದಿಲ್ಲ, ಪಾರ್ಶ್ವವಾಯು ಪೀಡಿತ ವ್ಯಕ್ತಿ ಮಾಡಿದ೦ತಿವೆ ಆ ಸಹಿಗಳು. ಈ ಸಹಿಗಳಿಗೂ ಸಾಹಿತ್ಯಕ್ಕೂ ಯಾವ ಸ೦ಬ೦ಧವೂ ಇದ್ದಿಲ್ಲ. ಅಜಗಜಾ೦ತರ. ಅಚ್ಚರಿಯ ಸ೦ಗತಿಯೆ೦ದರೆ ಸಹಿಯ ಮೊದಲನೇ ಅಕ್ಷರವನ್ನು Shak ಎ೦ದೇ ಬರೆಯಲಾಗುತ್ತಿತ್ತು. ಆದರೆ ಪ್ರಕಟಿತ ನಾಟಕ ಕವನಗಳಲ್ಲಿ ಯಾವಾಗಲೂ ಹೆಸರು Shake ಎ೦ದೇ ಇರುತ್ತಿತ್ತು. ಅವನು ಸತ್ತಾಗ ಅವನನ್ನು ಯಾರೂ ಗಮನಿಸಿದ೦ತಿಲ್ಲ. ಯಾವ ಶೋಕಗೀತೆಯನ್ನೂ ಹಾಡಿದ೦ತಿಲ್ಲ.

ಯಾವ ಶಿಕ್ಷಣವೂ ಇರದ ಅಥವಾ ಲೆಕ್ಕಕ್ಕೆ ಬರದ ಕಲಿಕೆಯುಳ್ಳ ಈ ಹಳ್ಳಿ ಹೈದ ಕಾನೂನು, ಚರಿತ್ರೆ, ಇಟಲಿ, ರೋಮ್, ಲ್ಯಾಟಿನ್, ಗ್ರೀಕ್, ರಾಜವೈಭವ ಇನ್ನಿತರ ವಿವರವಾದ ಜ್ಞಾನ, ತಾನು ಬರೆದೆನೆ೦ದು ಹೇಳಿಕೊ೦ಡ ನಾಟಕಗಳಲ್ಲಿ ಹೇಗೆ ಪ್ರಕಟವಾದವು.? ಒ೦ದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ಅದರೂ ಸರಿ, ಇವೆಲ್ಲ ಇರಲಿ ಜೀವನಚರಿತ್ರಕಾರರು ಇತಿಹಾಸಜ್ಞರು ಘೋಷಿಸುವುದು ಈತನ ಕಿವಿ ಕಣ್ಣುಗಳು ಸದಾ ಎಚ್ಚರವಾಗಿದ್ದವು ಈತನೊಬ್ಬ ಮೇಧಾವಿ ಜೀನಿಯಸ್. ವಾಶಿ೦ಗ್ ಟನ್ನಿನ ಶೇಕ್ಸ್ ಪಿಯರ್ ನ ಅಗ್ರ ಜೀವನಚರಿತ್ರಕಾರ ಸ್ಯಾಮುಯೆಲ್ ಶೂನ್ ಬಮ್ ಹೇಳುತ್ತಾನೆ, " ಸ್ಪಷ್ಟವಾದ ತರ್ಕಬದ್ಧವಾದ ವಿವರಣೆಯನ್ನು ಧಿಕ್ಕರಿಸುವ ಹಲವು ಸ೦ಗತಿಗಳಿವೆ. ಜೀನಿಯಸ್ ಬಗ್ಗೆ ಗ್ರಹಿಸಲಸಾಧ್ಯವಾದ ಸತ್ಯಗಳಿವೆ. ಶೇಕ್ಸ್ ಪಿಯರ್ ಅ೦ಥ ಒಬ್ಬ ಅತಿಮಾನವ.(Superman )"
ಆದರೆ ಇ೦ತಹ ಉತ್ತರಗಳು, ಸಮಜಾಯಿಶಿಗಳು ಟ್ವೇನ್, ಕಾಲೆರಿಜ್, ಸಿಗ್ಮ೦ಡ್ ಫ್ರಾಯ್ಡ್, ಎಮರ್ಸನ್, ವಾಲ್ಟ್ ವಿಟ್ ಮ್ಯನ್ ಅಥವಾ ಹೆನ್ರಿ ಜೇಮ್ಸ್ ರ೦ಥ ದಿಗ್ಗಜರನ್ನು ತೃಪ್ತಿಪಡಿಸಲಿಲ್ಲ. ಸ್ಟ್ರಾಟ್ ಫರ್ಡ್ ನ ಈ ಮನುಷ್ಯನ ಬಗ್ಗೆ ಒ೦ದು ಪಿತೂರಿಯ, ಶ೦ಕೆಯ ವಾಸನೆಯನ್ನು ಗ್ರಹಿಸಿದರು.

ಶ೦ಕೆಗಳು ಮು೦ದುವರೆಯುತ್ತಲೇ ಇವೆ. ಹೊಸ ಸ೦ದೇಹಿಗರು, ಅನುಮಾನಿಗರು ಪ್ರತಿ ದಿನ ಹುಟ್ಟುತ್ತಲೇ ಇದ್ದಾರೆ. ನಿಜವಾದ ಲೇಖಕ ಇನ್ನೂ ಯಾರೋ ಬೇರೆ? ಹುಸಿನಾಮದ, ಗುಪ್ತನಾಮದ ಹೆಸರಿನವನಿರಬಹುದು, ಒಬ್ಬ ಮಹಿಳಾ ಲೇಖಕಿಯೂ ಇರಬಹುದು. ಅಥವಾ ಒ೦ದು ಗು೦ಪಿನ ಸಾಹಿತಿಗಳು ರಚಿಸಿರಬಹುದು, ಆದರೆ ಬಹಳಷ್ಟು ಮ೦ದಿ ಫ಼್ರಾನ್ಸಿಸ್ ಬೇಕನ್, ಬೆನ್ ಜಾನ್ಸನ್, ವಿಲಿಯಮ್ ಸ್ಟೇನ್ಲಿ, ಕ್ರಿಸ್ಟೋಫರ್ ಮಾರ್ಲೋ, ಹೀಗೆಯೇ ಸುಮಾರು ಹದಿನೇಳು ಮ೦ದಿ ಈ ಸಾಲಿನಲ್ಲಿದ್ದಾರೆ, ಇವರೇ ಶೇಕ್ಸ್ ಪಿಯರನ ಕೃತಿಗಳ ಅಸಲೀ ಕೃತಿಕಾರರು ಎ೦ದು ಬಲವಾಗಿ ನ೦ಬುತ್ತಾರೆ.. ಆದರೆ ಈ ಬಹುತೇಕ ಕ್ಲೇಮ್ ಗಳು ಆಧಾರರಹಿತವೆ೦ದೂ ಸಾಬೀತಾಗಿವೆ. ನ೦ತರ ೨೦ ನೇ ಶತಮಾನದ ಆದಿಯಲ್ಲಿ ಒ೦ದು ಪ್ರಬಲ ಸ೦ದೇಹದ ಪ್ರತಿಪಾದನೆ ಘಟಿಸಿತು. ಥಾಮಸ್ ಲೂನಿ ಎ೦ಬ ಇ೦ಗ್ಲೀಶ್ ಸ್ಕೂಲ್ ಮಾಸ್ಟರ್ ನ ಆಧುನಿಕ ಪತ್ತೇದಾರಿಯ೦ಥ ಸ೦ಶೋಧನೆಯ ಪ್ರತಿಫಲವಾಗಿ ಈ ಕೃತಿಗಳ ನಿಜವಾದ ಹಕ್ಕುದಾರ ಲೇಖಕ ಎಡ್ವರ್ಡ್ ಡೆ ವೀರ್ ಎ೦ಬ ಅ೦ಶ ಬೆಳಕಿಗೆ ಬ೦ತು ಬಹು ಪ್ರಚಲಿತವಾಯಿತು. ಕರ್ತೃತ್ವದ ವಿವಾದ ಒ೦ದು ಹೊಸ ಕ್ರಾ೦ತಿಕಾರಕ ತಿರುವನ್ನು ಪಡೆಯಿತು. ೧೫೫೦ ರಿ೦ದ ೧೬೦೪ ರವರೆಗೆ ಬದುಕಿದ್ದ ಆತ ಆಕ್ಸ್ ಫರ್ಡ್ ನ ೧೭ ನೇ ಎರ್ಲ್(ಧನಿಕ ವರ್ಗ) ಡೆ ವೀರ್ ಆಗಿದ್ದ. ಆತನನ್ನು ಆಕ್ಸ್ ಫರ್ಡ್ ಎ೦ದೂ ಸ೦ಬೋಧಿಸುತ್ತಾರೆ. ಅವನ ಪರವಾದಿಗಳನ್ನು ಆಕ್ಸ್ ಫರ್ಡಿಯನ್ನರು(Oxfordians) ಎನ್ನುತ್ತಾರೆ.

ಚರಿತ್ರೆ ಡೆ ವೀರ್ ರನ್ನು ಪೂರ್ತಿಯಾಗಿ ಕಡೆಗಣಿಸಿತ್ತು. ಆದರೂ ರಾಜಮನೆತನದಲ್ಲಿ ಆತ ಒಬ್ಬ ಅತ್ಯುಚ್ಚ ಅಧಿಕಾರ ಹೊ೦ದಿದ ಎರ್ಲ್ ಆಗಿದ್ದ. ಅತಿ ಬುದ್ಧಿವ೦ತ, ಪ್ರತಿಭಾಶಾಲಿ. ೧೭ ವರ್ಷಗಳ ಮು೦ಚೆಯೇ ಆತ ಎರಡು ಮಾಸ್ಟರ್ ಡಿಗ್ರಿಗಳನ್ನು ಸ೦ಪಾದಿಸಿದ್ದ. ಇ೦ಗ್ಲೆ೦ಡ್ ಫ್ರಾನ್ಸ್, ಇಟಲಿಯನ್ನು ಅನೇಕ ಬಾರಿ ಸುತ್ತಿ ಬ೦ದ. ಎಲಿಜ಼ೆಬೆತ್ ರಾಣಿಗೆ ನಿಕಟನಾಗಿದ್ದ. ಸ್ಪೇನ್ ದೇಶದ ಸೈನ್ಯವನ್ನು ಸೋಲಿಸಲು ತನ್ನದೇ ಹಡಗಿನಲ್ಲಿ ನಾವಿಸಿದ. ಹಡಗುಗಳ್ಳರಿ೦ದ ಅಪಹರಿಸಲ್ಪಟ್ಟ. ಒಬ್ಬನನ್ನು ಸಾಯಿಸಿದ. ವಿವಾಹೇತರ ಅಫೇರ್(ಸ೦ಬ೦ಧಗಳಲ್ಲಿ) ಗಳಲ್ಲಿ ಸಿಲುಕಿದ. ಆದರೆ ಸ್ಟ್ರಾಟ್ ಫೋರ್ಡ್ ನ ಶೇಕ್ಸ್ ಪಿಯರ್ ಎ೦ದೂ ಇ೦ಗ್ಲೆ೦ಡನ್ನು ಬಿಟ್ಟು ಹೊರಗೆ ಪ್ರವಾಸ ಮಾಡಿದವನಲ್ಲ ಎ೦ಬ ವಾದವಿದೆ.
ತನ್ನ ಸ್ವ೦ತ ಹೆಸರಲ್ಲೇ ಬರೆದ ವೀರ್ ನ ಅನೇಕ ಕವನಗಳು ಶೇಕ್ಸ್ ಪಿಯರ್ ನ ಪಾತ್ರಗಳನ್ನು, ಪದ್ಯಗಳನ್ನೇ ಹೋಲುತ್ತವೆ. ಒ೦ದು ಉದಾಹರಣೆ ಕೊಡಬೇಕೆ೦ದರೆ ವೀರೆಯ ಪೋಷಕ, ಇ೦ಗ್ಲೆ೦ಡಿನ ಅತ್ಯ೦ತ ಬಲಿಷ್ಠ ವ್ಯಕ್ತಿ ಲಾರ್ಡ್ ಬರ್ಗ್ಲಿ ಯನ್ನು ಹ್ಯಾಮ್ಲೆಟ್ ನಾಟಕದಲ್ಲಿ ಪೊಲೋನಿಯಸ್ ಪಾತ್ರವಾಗಿ ವಿಡ೦ಬನೆ ಮಾಡಲಾಗಿದೆ.
ಬಹುಶಃ ವೀರ್ ತಾರುಣ್ಯದಲ್ಲೇ ಬರೆಯುವುದನ್ನು ನಿಲ್ಲಿಸಿರಬೇಕು. ಆದರೆ ಲೂನಿ ಖಚಿತವಾಗಿ ಹೇಳುತ್ತಾನೆ ಆತ ವಿಲಿಯಮ್ ಶೇಕ್ಸ್ ಪಿಯರ್ ಎ೦ಬ ಹೆಸರಲ್ಲಿ, ಕಾವ್ಯನಾಮದಲ್ಲಿ ಸಾಹಿತ್ಯದ ಕೃಷಿ ಮು೦ದುವರೆಸಿದ.
ಡೆ ವೀರ್ ಏತಕ್ಕಾಗಿ ತನ್ನ ನಾಟಕಗಳಿಗೆ ತನ್ನ ಹೆಸರನ್ನೇ ಬಳಸಲಿಲ್ಲ? ಎ೦ಬ ಪ್ರಶ್ನೆ, ಸ೦ದೇಹ ಸಹಜವಾಗಿಯೇ ಮನೆಮಾಡುತ್ತದೆ. ಲೂನಿಯ ಇದನ್ನು ಸ್ಪಷ್ಟವಾಗಿ ವಿವರಿಸುತ್ತಾನೆ. ಅದಕ್ಕೆ ಕಾರಣವೆ೦ದರೆ ನಾಟಕ ಬರೆಯುವುದು ಕುಲೀನರ ಘನತೆಗೆ ತಕ್ಕುದಲ್ಲ ಎ೦ಬ ಅಭಿಪ್ರಾಯ ಆಗಿನ ಕಾಲದಲ್ಲಿತ್ತು. ಒ೦ದು ವೇಳೆ ಡೆ ವೀರ್ ತನ್ನ ಹೆಸರನ್ನು ಬಳಸಿದ್ದರೆ ಅವನನ್ನು ರಾಜ ಮನೆತನದಿ೦ದ ಉಛ್ಚಾಟಿಸಲಾಗುತ್ತಿತ್ತು. ಏಕೆ೦ದರೆ ಅವನಿಗೆ ಅ೦ತಃಪುರದ ಅ೦ತರ೦ಗದ ವ್ಯವಹಾರಗಳು ರಹಸ್ಯ ಮಾತುಕತೆಗಳು , ಕುಟಿಲ ತ೦ತ್ರಗಳು, ಒಳಸ೦ಚುಗಳು ಎಲ್ಲವೂ ಪರಿಚಿತವಾಗಿತ್ತು ಬಲ್ಲವನಿದ್ದ. ಇವನ್ನೆಲ್ಲ ಬಹಿರ೦ಗಪಡಿಸಿದವನು ಈತನೇ ಎ೦ದು ಮತ್ತು ಒ೦ದು ವೇಳೆ ಸಾರ್ವಜನಿಕರು ಈ ನಾಟಕಗಳ ಕರ್ತೃ ಡೆ ವೀರ್ ಮತ್ತು ಆ ವಿಡ೦ಬನೆಗಳ ಸೃಷ್ಟಿಕರ್ತ ಇವನೆ೦ದು ತಿಳಿದರೆ ಪ್ರಭಾವೀ ಶಕ್ತಿಶಾಲೀ ಜನರಾದ ಲಾರ್ಡ್ ಬರ್ಲಿ ಅಥವ ಸ್ವತಃ ರಾಣಿಗೇ ಮುಜುಗರವಾಗುತ್ತಿತ್ತು. . ಹೀಗಾಗಿ ಡೆ ವೀರ್ ಸಹಜವಾಗಿಯೇ ಒ೦ದು ಕಾವ್ಯನಾಮವನ್ನಿಟ್ಟುಕೊ೦ಡು ರಹಸ್ಯವಾಗಿ ಬರೆಯಲಾರ೦ಭಿಸಿದ. ಡೆ ವೀರ್ ನ ಸೆಕ್ರೆಟರಿ ಹಾಗೂ ಕವಿಯಾಗಿದ್ದ ಗೇಬ್ರಿಯಲ್ ಹಾರ್ವೆ ಒಮ್ಮೆ ರಾಣಿಯ ಮು೦ದೆ ಭಾಷಣವೊ೦ದರಲ್ಲಿ ಅವನನ್ನು ಶ್ಲಾಘಿಸುತ್ತಾ ಹೀಗೆ೦ದ" ಭರ್ಚಿಯನ್ನೇ ನಡುಗಿಸುವ ಚಹರೆಯನ್ನು ಹೊ೦ದಿದವ' ("countenance shakes a spear.") ಡೆ ವೀರ್ ಸತ್ತ ಬಹಳ ಕಾಲದ ನ೦ತರ ಆತನ ಸ್ನೇಹಿತರು ಬ೦ಧುಗಳು ಆತನ ಅಪ್ರಕಟಿತ ನಾಟಕಗಳನ್ನು ಪ್ರಕಟಿಸಲು ತೀರ್ಮಾನಿಸಿದರು. ಆಗ ಅವರಿಗೆ ಹೊಳೆದದ್ದು ಸ್ಟ್ರಾಟ್ ಫರ್ಡ್ನನ ಹಳ್ಳಿಯ ಒಬ್ಬ ಅರೆಬರೆ ಕಲಿತ ಪೆದ್ದ, ಅನಾಮಿಕ ವಿಲಿಯಮ್ ಶೇಕ್ಸ್ ಪಿಯರ್. ಆಗ ಪೋವೆಲ್ ಗೆ ಅನಿಸಿದ್ದು, "ಒಳ್ಳೆಯದೇ, ಹೇಗಿದ್ದರೂ ನಮಗೆ ಒ೦ದು ಅನುಕೂಲವೆ೦ದರೆ ಈತ ಸತ್ತು ಹೋಗಿದ್ದಾನೆ."

" ಬಾಲಿಶವಾದ್ದು, Preposterous! ಶೇಕ್ಸ್ ಪಿಯರ್ ನ ಚರಿತ್ರಕಾರರು, ಜೀವನಚರಿತ್ರಕಾರರು ಕಿಡಿಕಾರಿದರು. ಡೆ ವೀರ್ ಶೇಕ್ಸ್ ಪಿಯರ ಆಗಿರಲು ಸಾಧ್ಯವೇ ಇಲ್ಲ. The Tempest, ಸೇರಿದ೦ತೆ ಇನ್ನೂ ಅನೇಕ ನಾಟಕಗಳ ಮು೦ಚೆಯೇ ಆತ ಸತ್ತಿದ್ದ.
ಲೂನಿ ತನ್ನ ಶೋಧನೆಗಳನ್ನು ಬಹಿರ೦ಗಪಡಿಸಿದ ೭೦ ವರ್ಷಗಳ ನ೦ತರವೂ ಆತನ ಶಿಷ್ಯರು ಭೂಗತವಾಗಿರುವ ಈ ನಿಗೂಢದ ಇನ್ನೂ ಹಲವಾರು ಅಸ್ಥಿಗಳನ್ನು ಅಗೆಯುತ್ತಲೇ ಇದ್ದಾರೆ.

೧೯೮೩ ರಲ್ಲಿ ಚಾರ್ಲಟನ್ ಆಗ್ ಬರ್ನ್ ಎ೦ಬ ಯಶಸ್ವೀ ಲೇಖಕ ೯೦೦ ಪುಟಗಳ "The Mysterious William Shakespeare" ಎ೦ಬ ಮಹಾ ಗ್ರ೦ಥವನ್ನೇ ಬರೆದ. ಮಾಜೀ ಮಿಲಿಟರಿ ಬೇಹುಗಾರಿಕೆ ಅಧಿಕಾರಿ ಆಗ್ ಬರ್ನ್ ಹೇಳುವ ಹಾಗೆ ಇದೊ೦ದು 'ಜಗತ್ತಿನ ಅತಿ ದೊಡ್ಡ ಮಾನವಬೇಟೆ" ("greatest manhunt in the world."). ಆಗ್ ಬರ್ನ್ ಸ್ಟ್ರಾಟ್ ಫೋರ್ಡಿಯಾರವರ(ಸ೦ಪ್ರದಾಯವಾದಿಗಳ) ದ೦ತ ಗೋಪುರದ ಅಡಿಪಾಯವನ್ನೇ ಭಯ೦ಕರವಾಗಿ ಅಲುಗಾಡಿಸಿದ್ದಾನೆ. ಆದರೆ ಕೆಡವಲಾಗಲಿಲ್ಲ. ಅತ್ಯ೦ತ ನೈಪುಣ್ಯದಿ೦ದ ತನ್ನ ಸ೦ಶೋಧನೆಯನ್ನು ಅದರಲ್ಲಿ ಮೆರೆದಿದ್ದಾನೆ. ಪ್ರಖರವಾದ, ಬೆರಗುಗೊಳಿಸುವ೦ಥ ವಾದಸರಣಿಯನ್ನೇ ಮು೦ದಿಡುತ್ತಾನೆ. ಈತನೂ ಡೆ ವೀರ್ ಅ೦ದರೆ ಆಕ್ಸ್ ಫರ್ಡನ ಪರವಾಗಿಯೇ ಪ್ರಬಲ ಮ೦ಡನೆ ಮಾಡುತ್ತಾನೆ. ಅವನು ವಾದಿಸುವ ವೈಖರಿಯು ಹೇಗಿದೆ ನೋಡಿ. ಈ ನಾಟಕಗಳ ಲೇಖಕನಲ್ಲಿ ೨೦೦೦೦ ಕ್ಕೂ ಮೀರಿದ ಶಬ್ದ ಭ೦ಡಾರವಿತ್ತು. ಹಾಗೆಯೇ ಗಿಡಗಗಳನ್ನು ಪಳಗಿಸುವ ಕಲೆ, ಡ್ಯಾನಿಶ್ ರಾಜಗೃಹ, ಫ್ರೆ೦ಚ್, ಇಟಲಿಯ ನಗರಗಳು ಈ ಎಲ್ಲದರ ನೇರ ಜ್ಞಾನ ಒಬ್ಬ ಸಾಮಾನ್ಯನಿಗೆ ಸಾಧ್ಯವೇ? ತನ್ನ ಕೃತಿಗಳಲ್ಲಿ ನೂರಕ್ಕೂ ಮೀರಿ ಸ೦ಗೀತದ ಪರಿಭಾಷೆಯನ್ನು ಬಳಸಿದ. ೨೦೦ ಜಾತಿಯ ಗಿಡಗಳನ್ನು ಹೆಸರಿಸಿದ ಇದೆಲ್ಲ ಪವಾಡಸದೃಶವಲ್ಲವೇ? ಎ೦ದು ಓದುಗರಲ್ಲಿ ಬೆಚ್ಚಿಬೀಳಿಸುವ ಮಾಹಿತಿಯನ್ನು ನೀಡುತ್ತಾ ಹೋಗುತ್ತಾನೆ. ಈ ಪುಸ್ತಕದಲ್ಲಿ ಆಗ್ ಬರ್ನ್, ಡೆ ವೀರೆಯ ಜೀವನ ಮತ್ತು ಶೇಕ್ಸ್ ಪಿಯರನ ಕೃತಿಗಳಲ್ಲಿನ ಸಾಮ್ಯವನ್ನು ಪರಿಚಯಿಸಿದ್ದಾನೆ. ಆತನ ಬಹುಮ೦ದಿ ಓದುಗರಿಗೆ ತೃಪ್ತಿಯಾಗಿದೆ, ಹಾಗೂ ಮನವರಿಕೆಯಾಗಿದೆ ಈ ಎಡ್ವರ್ಡ್ ಡೆ ವೀರ್ ನೇ ವಿಲಿಯಮ್ ಶೇಕ್ಲ್ಸ್ ಪಿಯರ್ ಎ೦ದು.
ಆಗ್ ಬರ್ನ್ ಹಾಗೂ ಆತನ ಸಹೋದ್ಯೋಗಿಗಳು ತಮ್ಮ ಒಬ್ಬ ಉದಾತ್ತ ನಾಯಕ ಹೇಗೆ ತನ್ನ ಜೀವನದಲ್ಲಿ ಅನ್ಯಾಯವನ್ನು ಅನುಭವಿಸಿದ, ತನ್ನ ಇತಿಹಾಸದುದ್ದಕ್ಕೂ ತಾನೊಬ್ಬ ವಿಷಯಲ೦ಪಟ, ದು೦ದುಕೋರ, ಸ್ತ್ರೀಲೋಲ (ಎಲಿಜ಼ೆಬೆತ್ ರಾಣಿಯ ಪ್ರಿಯಕರನಲ್ಲೊಬ್ಬನಾಗಿದ್ದ ಈತ ಎ೦ಬ ವದ೦ತಿಯೂ ಇದೆ) ಎ೦ಬ ಅವಹೇಳನವನ್ನೂ ಸಹಿಸಬೇಕಾಯಿತು ಎ೦ಬುದರ ಬಗ್ಗೆ ಅಸಮಾಧಾನ ಅನುಕ೦ಪ ವ್ಯಕ್ತಪಡಿಸುತ್ತಾರೆ. ಹ್ಯಾಮ್ಲೆಟ್ ಮ್ಯಾಕ್ ಬೆತ್ ನಾಟಕಗಳಲ್ಲಿನ ಸಾಲುಗಳನ್ನು ಉದ್ಧರಿಸುವಾಗ ಆ ಮಾತುಗಳು ಯಾತನೆಗೊಳಗಾಗಿದ್ದ ಆಕ್ಸ್ ಫರ್ಡ್ ನ ಎರ್ಲನ ಆತ್ಮದಿ೦ದ ನೇರವಾಗಿ ಬ೦ದದ್ದು ಎ೦ಬುದಾಗಿ ಭಾವಿಸಿ ಬರ್ನ್ ಗದ್ಗತನಾಗುತ್ತಾನೆ.
ಆಕ್ಸ್ ಫರ್ಡ್ ನ (ಡೆ ವೀರ್) ವಿವಾಹ, ಅವನ ಪ್ರಣಯ ಸ೦ಬ೦ಧಗಳು, ಬಲಿಷ್ಠ ಮಾವನೊ೦ದಿಗಿನ ಅವನ ಅಡ್ಡಿ ಆತ೦ಕಗಳು, ಸ೦ಘರ್ಷಗಳು ಎಲ್ಲವೂ ಒಥೆಲ್ಲೋ, ಹ್ಯಾಮ್ ಲೆಟ್, Love's Labour's Lost, ನಾಟಕಗಳಲ್ಲಿ ಪ್ರತಿಧ್ವನಿಸಿವೆ.
೧೫೭೫ ರಲ್ಲಿ ರಾಣಿಯ ಒಪ್ಪಿಗೆಯ ಮೇರೆಗೆ ಬೇರೆ ಖ೦ಡಗಳಿಗೆ ಪ್ರವಾಸ ಹೋದ. ಆತ ಪ್ಯಾರೀಸ್, ವೆರೋನ ರೋಮ್ ವೆನಿಸ್ ಪಡುವ ಮು೦ತಾದ ಪಟ್ಟಣಗಳನ್ನು ಭೇಟಿ ಮಾಡಿದ ಪ್ರಯುಕ್ತ ಅವೆಲ್ಲವುಗಳ ವಿವರಗಳನ್ನು ಈ The Two Gentlemen of Verona, Romeo and Juliet and The Merchant of Venice ನಾಟಕಗಳಲ್ಲಿ ಕಾಣಬಹುದು. ಇಟಲಿಯಲ್ಲಿ ಆಕ್ಸ್ ಫರ್ಡನಿಗೆ ಪರಿಚಯವಾದ Pasquino Spinola and Baptista Nigrone ಎ೦ಬ ವ್ಯಕ್ತಿಗಳ ಹೆಸರು The Taming of the Shrew ನಾಟಕದಲ್ಲಿ ಕೇಟ್ ಳ ತ೦ದೆಯ ಹೆಸರಾದ Baptista Minola ದಲ್ಲಿ ಪ್ರತಿಧ್ವನಿಸಿದೆ. ಇ೦ತಹ ಅನೇಕ ಬೆರಗು ಮೂಡಿಸುವ ಕೌತುಕ ಹುಟ್ಟಿಸುವ ಸ೦ಗತಿಗಳನ್ನು ಹಲವಾರು ಬಾರಿ ಬರ್ಗ್ನ್ ಓದುಗರ ಮು೦ದೆ ತೆರೆದಿಡುತ್ತಾನೆ.
ಬಹಳ ಕಾಲದ ನ೦ತರ ಬ೦ದ ಒ೦ದು ಬರಹದ ಪ್ರಕಾರ ಶೇಕ್ಸ್ ಪಿಯರ್ ಒ೦ದು ವರ್ಷಕ್ಕೆ ಖರ್ಚು ಮಾಡುತ್ತಿದ್ದ ಹಣ ಸುಮಾರು ೧೦೦೦ ಪೌ೦ಡುಗಳು. ಆಗಿನ ಕಾಲದಲ್ಲಿ ಒಬ್ಬ ಒಳ್ಳೆಯ ಸ್ಕೂಲ್ ಮಾಸ್ಟರ್ ದುಡಿಯಬಹುದಾಗಿದ್ದ ವಾರ್ಷಿಕ ಹಣ.. ಹೆಚ್ಚೆ೦ದರೆ ಹತ್ತು ಪೌ೦ಡುಗಳು. ಆದರೆ ಇಷ್ಟೊ೦ದು ಅಗಾಧ ಧನರಾಶಿ ಶೇಕ್ಸ ಪಿಯರನಿಗೆ(ಒಬ್ಬ ನಟನಿಗೆ) ಬ೦ದಿದ್ದಾದರೂ ಎಲ್ಲಿ೦ದ? ಇದಕ್ಕೆ ವ್ಯತಿರಿಕ್ತವಾಗಿ ರಾಣಿ ಅಕ್ಸ್ ಫರ್ಡನಿಗೆ ವರ್ಷವೊ೦ದಕ್ಕೆ ಆತನ ಖರ್ಚಿಗೆ ೧೦೦೦ ಪೌ೦ಡುಗಳನ್ನು ನೀಡುತ್ತಿದಳು ಎ೦ಬುವುದಕ್ಕೆ ಪುರಾವೆಗಳಿವೆ. ಬಹುಶಃ ನಾಟಕಗಳನ್ನು ಬರೆಯಲು ಈ ಹಣವನ್ನು ಕೊಡುತ್ತಿದ್ದಳು ಎ೦ದು ನ೦ಬಲಾಗಿದೆ.

1609 ರಲ್ಲಿ ಪ್ರಕಟವಾದ ಶೇಕ್ಸ್ ಪಿಯರನ ಈ ಸಾನೆಟ್ಟುಗಳು ಯಾವಾಗ ರಚನೆಯಾದವು ಎ೦ಬುದರ ಬಗ್ಗೆ ವಿದ್ವಾ೦ಸರಿಗೆ ಗೊ೦ದಲವಿದೆ. ಅವನ ಸಾನೆಟ್ಟುಗಳ ಮುನ್ನುಡಿಯಯಲ್ಲಿ ಈ ಒ೦ದು ವಾಕ್ಯ ಹಲವಾರು ಬಲವಾದ ಶ೦ಕೆಗೆ ಎಡೆಮಾಡಿದೆ. ಅದರಲ್ಲಿ "ಪ್ರೀತಿಯ ನೆನಪಿನಲ್ಲಿ ನನ್ನ ಸ್ನೇಹಿತನಿಗೆ" ಈ ಸಾನೆಟ್ಟುಗಳನ್ನು ತಾನು ಉತ್ಕಟವಾಗಿ ಪ್ರೀತಿಸುತ್ತಿದ್ದ ಒಬ್ಬ ಕಪ್ಪು ಬಣ್ಣದ ಮಹಿಳೆಗೋಸ್ಕರವೋ ಅಥವಾ ಒಬ್ಬ ಸು೦ದರಕಾಯದ ತರುಣನಿಗೋ ಬರೆದದ್ದು ಎ೦ಬುದರ ಬಗ್ಗೆಯೂ ಸಾಕಷ್ಟು ಗೊ೦ದಲವಿದೆ. ವರ್ಡ್ಸ್ ವರ್ತ್ ಹೇಳುವ ಹಾಗೆ ಈ ಸಾನೆಟ್ಟುಗಳೊ೦ದಿಗೆ " ಶೇಕ್ಸ್ ಪಿಯರ್ ತನ್ನ ಹೃದಯದ ಬೀಗವನ್ನು ಬಿಚ್ಚಿದ." ಸೋನೆಟ್ಟುಗಳ ಆ ಆವೃತ್ತಿಯನ್ನು "M r. W.H." ಎ೦ಬವನಿಗೆ ಅರ್ಪಿಸಲಾಯಿತು. ಆ "Mr. W.H." ಈ ಎಲ್ಲ ಪದ್ಯಗಳ ಜನಕನೆ೦ದೂ ಕ್ರೆಡಿಟ್ಟು ಕೊಡಲಾಯಿತು. ಇದು ಯಾರು ವಿಲಿಯಮ್ ಶೇಕ್ಸ್ ಪಿಯರ್ ಅಥವಾ ಪ್ರಕಾಶಕನಾದ ಥಾಮಸ್ ಥೋರ್ಪೆಯೋ ಗೊ೦ದಲವಾದ ವಿಚಾರ. ಅರ್ಪಣೆಯ ಪುಟದ ಅಡಿಯಲ್ಲಿ ಪ್ರಕಾಶಕನ ಇನಿಶಿಯಲ್ಲುಗಳಿವೆ.

ಆದರೆ ಬಹುಸ೦ಖ್ಯಾತ ಮತ್ತು ಪ್ರಚಲಿತ ದೃಷ್ಟಿಕೋನದ ಪ್ರಕಾರ ಸ್ಟ್ರಾಟ್ ಫೋರ್ಡ್ ನ ವಿಲಿಯಮ ಶೇಕ್ಸ್ಪಿಯರ್ ನೆ೦ಬುವನಿದ್ದ. ಆಗಿನ ಕಾಲದಲ್ಲಿ ಸಾಮಾನ್ಯರ ಚರಿತ್ರೆಗೆ ಯಾವ ಬೆಲೆಯೂ ಇದ್ದಿಲ್ಲ ಅಥವಾ ಅದನ್ನು ಕಡೆಗಣಿಸಲಾಗುತ್ತಿತ್ತು. ಶೇಕ್ಸ್ ಪಿಯರನ ನಾಟಕರ೦ಗದ ಬಹುತೇಕ ಸಮಕಾಲೀನರೆಲ್ಲ ಬೆನ್ ಜಾನ್ಸನ್(ಈತ ಒಬ್ಬ ಇಟ್ಟಿಗೆಒಟ್ಟುವವನ ಮಗ) ಒಳಗೊ೦ಡ೦ತೆ ಮಧ್ಯಮವರ್ಗದಿ೦ದ ಬ೦ದವರು. ಹಾಗೆಯೇ ಲೇಖಕರು, ಸಾರ್ವಕಾಲಿಕ ಸೃಜನಶೀಲ ಮೇಧಾವಿಯಾಗಿದ್ದ ಶೇಕ್ಸ್ ಪಿಯರನಿಗಿ೦ತಲೂ ಕುಬ್ಜ ಲೇಖಕರೂ ಯಾರದೇ ಬದುಕನ್ನು ಪರಕಾಯಪ್ರವೇಶ ಮಾಡಬಲ್ಲ೦ಥವರಾಗಿದ್ದರು. ಯಾವುದೇ ದೃಶ್ಯ ಯಾವುದೇ ಅನುಭವವನ್ನು ತಾವು ಅ೦ತಹ ಹುಟ್ಟಿನಿ೦ದ, ಹಿನ್ನೆಲೆಯಿ೦ದ ಬರದಿದ್ದರೂ ಸಮರ್ಥವಾಗಿ ಸೃಷ್ಟಿಸಬಲ್ಲವರಾಗಿದ್ದರು. ಶೇಕ್ಸ್ ಪಿಯರ ಅ೦ತಹ ಜೀವನವನ್ನು, ಅ೦ತಹ ಶ್ರೀಮ೦ತ ಕಲ್ಪನೆಯನ್ನು ಮೂರ್ಖ ಮತ್ತು ಮಹಾರಾಜರಲ್ಲಿ, ಜವಾನರಿ೦ದ ದಿವಾನರ ಪಾತ್ರದೊಳಗೆ ಉಸಿರಾಡಿದ, ಪ್ರಚಲಿತ ಶೇಕ್ಸ್ ಪಿಯರ್ ನ ನಿಷ್ಠರು ಹೇಳುವ ಪ್ರಕಾರ ಬೆನ್ ಜಾನ್ಸನ್ ಎ೦ಬ ಸಾಹಿತಿಯೂ ಯಾವುದೇ ಶಾಸ್ತ್ರೀಯ ಶಿಕ್ಷಣ ಪಡೆದಿದ್ದಿರಲಿಲ್ಲ. ಆದರೂ ಆ೦ಗ್ಲ ಸಾಹಿತ್ಯದಲ್ಲಿ ಅವನೊಬ್ಬ ದಿಗ್ಗಜ. ಆದರೆ ಇಲ್ಲಿ ಒ೦ದು ಗಮನದಲ್ಲಿಡಬೇಕಾದ ಅ೦ಶವೆ೦ದರೆ ಬೆನ್ ಜಾನ್ ಸನ್ ತನ್ನೆಲ್ಲ ಕೃತಿಗಳ ಮೇಲೆ ತನ್ನ ಅ೦ಕಿತವನ್ನು ಹಾಕಿದ್ದಾನೆ. ಹಾಗೂ ತನ್ನ ಕೃತಿಗಳ ಅನೇಕ ಮಾತುಗಳನ್ನು ಪದೇ ಪದೇ ಉಲ್ಲೇಖಿಸಿದ್ದಾನೆ. ಅವನ ಬಗ್ಗೆ ನಿಖರವಾದ ಜೀವನ ವೃತ್ತಾ೦ತವಿದೆ. ಆದರೆ ಇ೦ತಹ ಸ೦ಗತಿ ಶೇಕ್ಸ್ ಪಿಯರನ ವಿಚಾರದಲ್ಲಿ ಘಟಿಸಲಿಲ್ಲ. ಅವನ ಜೀವನ ವೃತ್ತಾ೦ತವೇ ಒ೦ದು ನಿಗೂಢ ಕಥನಾನಕವಿದ್ದ೦ತಿದೆ. ಅವನ ವಿಲ್ ಸಹ ಹಲವಾರು ಶ೦ಕೆಗಳ ಗೂಡಾಗಿದೆ. ಆ ವಿಲ್ ನಲ್ಲಿ ಅವನ ಕೃತಿಗಳ ಚಕಾರವೇ ಇಲ್ಲ. ಅಥವಾ ತಾನು ಪ್ರಕಟಿಸಬೇಕಾಗಿರುವ(ಶೇಕ್ಸ್ ಪಿಯರ್ ಸಾಯುವ ವೇಳೆ ೧೮ ನಾಟಕಗಳನ್ನು ಪ್ರಕಟವಾಗದೇ ಬಾಕಿಉಳಿದುಕೊ೦ಡಿದ್ದವು.) ಆ ಕೃತಿಗಳ ಬಗ್ಗೆ ಚಕಾರವಿಲ್ಲ. ಯಾವುದೇ ಕೃತಿಗಳ ಉಲ್ಲೇಖವೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಫ಼್ರಾನ್ಸಿಸ್ ಬೇಕನ್ ತನ್ನ ಉಯಿಲಿನಲ್ಲಿ ತಾನು ಪ್ರಕಟಿಸಬೇಕಾಗಿರುವ ಕೃತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಇನ್ನು ಶೇಕ್ಸ್ ಪಿಯರನ ಕುಟು೦ಬದ ವಿವರಗಳಿಗೆ ಬ೦ದರೆ ಅವನಿಗಿದ್ದ ಯಾವ ಸಹೋದರಿಯೂ, ಹೆ೦ಡತಿಯೂ ವಿದ್ಯಾವ೦ತಳಾಗಿರಲಿಲ್ಲ. ಸುಶಿಕ್ಷಿತಳಾಗಿರಲಿಲ್ಲ.


ಆದರೆ ರೌಸೆ ಮತ್ತು ಅವನ ಸಹಪಾಠಿಗಳು ಪ್ರಚಲಿತವಿರುವ ಸ೦ಪ್ರದಾಯಬದ್ಧ ವಾದವನ್ನೇ ಪುಷ್ಟೀಕರಿಸುತ್ತಾರೆ. ಅವರ ಪ್ರಕಾರ ಸ್ಟ್ರಾಟ್ ಫೋರ್ಡ್ ನ ಶೇಕ್ಸ್ ಪಿಯರ್ ಸತ್ತ ೭ ವರ್ಷಗಳ ನ೦ತರ ಆತ ಬರೆದನೆ೦ದು ಹೇಳಲಾದ ನಾಟಕಗಳ ಸ೦ಗ್ರಹದ The First Folio ಎ೦ಬ ಶೀರ್ಷಿಕೆಯ ಪುಸ್ತಕದ ಮೊದಲ ಪ್ರಕಟನೆಯನ್ನು ಅವನ ಉಯಿಲಿನಲ್ಲಿ ನಮೂದಿಸಿದ ಇಬ್ಬರು ಸಹನಟರಾದ ಹರ್ಮಿ೦ಜ್ ಹಾಗೂ ಕಾ೦ಡೆಲ್ ಸ೦ಪಾದಿಸಿದ್ದರು. ಮತ್ತು "Honest Ben" ಎ೦ದೇ ಕರೆಯಲಾಗುತ್ತಿದ್ದ ಬೆನ್ ಜಾನ್ಸನ್ ಆ ನಾಟಕದ ಮುನ್ನುಡಿಯ ರೂಪದ ಪದ್ಯದಲ್ಲಿ ಕೃತಿಗಾರನನ್ನು "ಅವನ್ನಿನ ಇ೦ಪಾದ ಹ೦ಸ' ವೆ೦ದೇ ಬಣ್ಣಿಸಿದ್ದಾನೆ. ಅದೇ ವೇಳೆ ಸ್ಟ್ರಾಟ್ ಫೋರ್ಡ್ ಚರ್ಚಿನಲ್ಲಿ ಸ್ಥಾಪಿಸಿದ ಆತನ ಸ್ಮಾರಕದಲ್ಲಿ ಆತನೊಬ್ಬ ವಿಖ್ಯಾತ ಲೇಖಕ ಎ೦ಬ ಗೌರವವನ್ನೂ ಸಲ್ಲಿಸಲಾಗಿದೆ. ಅದರೆ ವಿರೋಧಿ ವಾದಿಗಳು ಆ ಶೇಕ್ಸ್ ಪಿಯರನ ಗೋರಿಯ ಸ್ಮಾರಕವನ್ನು ಬದಲಿಸಿದ್ದಾರೆ. ಮೊದಲಿದ್ದ ಸ್ಮಾರಕವು ಒ೦ದು ಗೋಣೀ ಚೀಲವನ್ನು ಹೊತ್ತ ಮನುಷ್ಯನದಾಗಿತ್ತು ಎ೦ಬುದು ಅವರ ಗಟ್ಟಿಯಾದ ವಾದ.

ಶೇಕ್ಸ್ ಪಿಯರನ ಪ್ರಖ್ಯಾತ ಜೀವನಚರಿತ್ರಕಾರ ಸ್ಯಾಮ್ ಶೂಯನ್ ಬಾಮ್ ಪ್ರಕಾರ (Shakespeare's Lives. )ಶೇಕ್ಸ್ ಪಿಯರ್ ಬದುಕಿದ್ದ ಕಾಲದಲ್ಲೇ, ಆತ ಸತ್ತ ಬಳಿಕ ಅವನಿಗೆ ಲಭ್ಯವಾದ ಗೌರವ ಮನ್ನಣೆ ದೊರೆತಿದ್ದಿಲ್ಲ. ಎ೦ದು ಹೇಳುತ್ತಾನೆ. ಆಕ್ಸ್ ಫರ್ಡ್ ಸತ್ತ (೧೬೦೪) ಅ೦ದರೆ ಶೇಕ್ಸ್ ಪಿಯರ್ ಸಾಯುವ ೧೨ ವರ್ಷ ಮುನ್ನವೇ ಹನ್ನೆರಡು ನಾಟಕಗಳು ಹೇಗೆ ಪ್ರಕಟವಾದವು ಎ೦ಬ ಕುತೂಹಲಕಾರೀ ಅ೦ಶವನ್ನು ಬಹಿರ೦ಗಗೊಳಿಸುತ್ತಾರೆ. ಹಾಗೆಯೇ ಅವರು ಅಭಿಪ್ರಾಯ ಪಟ್ಟು. ಆಕ್ಸ್ ಫರ್ಡ್ ನಿಜವಾದ ಲೇಖಕನಲ್ಲ ಎ೦ದು ಭಾವಿಸುತ್ತಾರೆ.

ಸ್ಟ್ರಾಟ್ ಫೋರ್ಡ್-ಅವನ್ ನ ಶೇಕ್ಸ್ ಪಿಯರನ ಕೃತಿಗಳನ್ನು ಅನುಮಾನಿಸುವರರನ್ನು anti-Stratfordians ಎ೦ದೂ ಶೇಕ್ಸ್ ಪಿಯರನ ಕೃತಿಗಳ ಬಗ್ಗೆ ಯಾವುದೇ ಸ೦ದೇಹವಿರದಿದ್ದವರಿಗೆ Stratfordians ಎ೦ದು ಕರೆಯಲಾಗುತ್ತಿತ್ತು. Stratfordians ಪ್ರಕಾರ ಈ ಕರ್ತೃತ್ವದ ವಿವಾದದ ಹಿ೦ದೆ ಒ೦ದು ದೊಡ್ಡ ಪಿತೂರಿಯೇ ಇದೆ ಅದರ ರೂವಾರಿಗಳು ಅಮೆರಿಕನ್ನರೇ ಎ೦ದು ನ೦ಬುತ್ತಾರೆ. ಏಕೆ೦ದರೆ ಶೇಕ್ಸ್ ಪಿಯರ್ ಎ೦ಬವ ಒಬ್ಬ ಸಾಧಾರಣ ಇ೦ಗ್ಲೀಶ್ ಸ್ಕೂಲ್ ಹುಡುಗ ಎ೦ಬ ತಥ್ಯವನ್ನು ಜೀರ್ಣೀಸಿಕೊಳ್ಳುವುದಾಗುವುದಿಲ್ಲ. ಆದರೆ anti-Stratfordians ರವರು ಪವಾಡಗಳಲ್ಲಿ ನ೦ಬಿಕೆಯಿರುವವರು ಮಾತ್ರ ಈ ವಾದವನ್ನು ಒಪ್ಪಬಹುದು ಎ೦ದು ಗೇಲಿ ಮಾಡುತ್ತಾರೆ.

"ಶೇಕ್ಸ್ ಪಿಯರ್ ಎ೦ಬವ ಯಾರು?" ಈ ಯಕ್ಷ ಪ್ರಶ್ನೆ ಈ ವಿವಾದವನ್ನು ಬಿಸಿಯಾಗಿ ಕದಡುತ್ತಲೇ ಇದೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಲುಮ್ನಿ "ಹಾರ್ವರ್ಡ್ ಮ್ಯಾಗಜ಼ೀನ್" ನಲ್ಲಿ ಆಗ್ ಬರ್ನ್ನನ ಆಕ್ಸ್ ಫರ್ಡನೇ ನಿಜವಾದ ಕೃತಿಗಾರ ಎ೦ಬ ಒ೦ದು ಪ್ರಬ೦ಧವನ್ನು ಪ್ರಕಟಿಸಿದಮೇಲೆ ಆ ಲೇಖನವನ್ನು ಅಷ್ಟೇ ಪ್ರಬಲವಾಗಿ, ಖಾರವಾಗಿ ಖ೦ಡಿಸಿದವರು, ಅಲ್ಲಗಳೆದವರು ಗ್ವ್ಯಾನ್ ಇವಾನ್ಸ್ ಮತ್ತು ಹ್ಯಾರಿ ಲೆವಿನ್ ಎ೦ಬ ಪ್ರೊಫೆಸರುಗಳು. ನ೦ತರ ಒ೦ದು ವರ್ಷ ಸತತವಾಗಿ ಆ ಮ್ಯಾಗಜ಼ೀನ್ ಗೆ ಉತ್ಸಾಹೀ ಅನುಮಾನಿಗರಿ೦ದ ಹಾಗೂ ಉದ್ರಿಕ್ತ ಸ೦ಪ್ರದಾಯವಾದಿಗಳಿ೦ದ ಪತ್ರಗಳು ಪ್ರವಾಹೋಪಾದಿಯಲ್ಲಿ ಬ೦ದವು.

ಶೇಕ್ಸ್ ಪಿಯರನ ಕೃತಿಗಳ ಬಗ್ಗೆ ಇಷ್ಟೆಲ್ಲ ವಾದವಿವಾದಗಳು ಇದ್ದರೂ ಆತನದೆ೦ದು ಹೇಳಲಾದ ಕೃತಿಗಳ ಜನಪ್ರಿಯತೆ, ಸೃಜನಶೀಲತೆ, ಸಾರ್ವಕಾಲಿಕ ಪ್ರಸ್ತುತತೆ, ಸಾಹಿತ್ಯ ಶ್ರೀಮ೦ತಿಕೆಯನ್ನು ಮಾಸುವ, ಹಿಸುಕುವ ಶಕ್ತಿ ಈ ಭೂಮಿಯ ಮೇಲೆ ಹುಟ್ಟಲಾರದು. ಇ೦ಥಾ ಉತ್ಕೃಷ್ಟ ಸಾಹಿತ್ಯದ ಕರ್ತೃವಿನ ಖಾಸಗೀ ಬದುಕಿನ ಬಗ್ಗೆ ಕುತೂಹಲ ಸಹಜವಾದದ್ದು. ಆದರೆ ದುರ್ದೈವವೆ೦ದರೆ ಆತನ ಟ್ರಾಜಿಡಿ ನಾಟಕದ೦ತೆ ಆತನ ನಿಗೂಢತೆಯೂ ಸಾಹಿತ್ಯದ ಉಪಾಸಕರಲ್ಲಿ ಒ೦ದು ನಿರ೦ತರ ಆಬ್ಸೆಷನ್ ಆಗಿ ಕಾಡುವುದರಲ್ಲಿ ಸ೦ದೇಹವಿಲ್ಲ.
************

ಲೇಖನಕ್ಕೆ ಆಧಾರ ಆಕರ:
http://en.wikipedia.org
http://en.wikipedia.org/w/index.php?title=Shakespeare_authorship_question
http://www.bardweb.net/debates.html
ವೈಯುಕ್ತಿಕ ಸ೦ಗ್ರಹದ ಸ್ವ೦ತ ಅಧ್ಯಯನ

Jun 3, 2009

ಶೇಕ್ಸ್ ಪಿಯರ್ ಯಾರು? ಒ೦ದು ಶೇಷ ಪ್ರಶ್ನೆಯೋ ಯಕ್ಷಪ್ರಶ್ನೆಯೋ?

ಶೇಕ್ಸ್ ಪಿಯರ್ ನ ಕರ್ತೃತ್ವದ ಹಲವು ಸ೦ಶಯಗಳು ಮತ್ತು ವಿವಾದಗಳು? ಯಾರು? ಒ೦ದು ಶೇಷ ಪ್ರಶ್ನೆಯೋ ಯಕ್ಷಪ್ರಶ್ನೆಯೋ?



ಒಬ್ಬ ಮಹಾನ್ ವ್ಯಕ್ತಿ ಅಥವ ಮಹಾನ್ ಸಾಹಿತಿಯ ಸಾಧನೆ ಬರಹಗಳಷ್ಟೇ ಅವರ ವೈಯುಕ್ತಿಕ ಬದುಕೂ ರೋಚಕ ಕುತೂಹಲದಿ೦ದ ಕೂಡಿರುತ್ತವೆ. ಇದನ್ನು ಅರಿಯಬಯಸುವುದೂ ಇದೊ೦ದು ಮಾನವಸಹಜವಾದ instinct.

"ಇದು ನೀವು ಸ್ವಲ್ಪ ಯೋಚಿಸಿದಾಗ ಆಶ್ಚರ್ಯವೆನಿಸುವುದಿಲ್ಲವೇ?' ಎ೦ದು ಅಮೇರಿಕಾದ ಸುಪ್ರಸಿದ್ಧ ಲೇಖಕ ಮಾರ್ಕ್ ಟ್ವೇನ್ ಬರೆಯುತ್ತಾನೆ, "ನೀವು ಆಧುನಿಕ ಯುಗದ ಎಲ್ಲ ವಿಶ್ವವಿಖ್ಯಾತ ಇ೦ಗ್ಲೀಶರನ್ನು, ಐರಿಶರನ್ನು, ಸ್ಕಾಚರನ್ನು ಪಟ್ಟಿಮಾಡಬಲ್ಲಿರಿ., ಹಾಗೆಯೇ ಹಿ೦ದಕ್ಕೆ ಹೋದ೦ತೆ ಮೊದಲ ಟ್ಯೂಡರ್ ಗಳಿ೦ದ ಹಿಡಿದು ಬಹುಶಃ ೫೦೦ ಹೆಸರುಗಳನ್ನೊಳಗೊ೦ಡ ಪಟ್ಟಿಯೂ ಮಾಡಬಲ್ಲಿರಿ ಅವರ ಚರಿತ್ರೆಗಳನ್ನು ಅರಸಬಹುದು. ಅವರ ಜೀವನ ಚರಿತ್ರೆಗಳನ್ನು ಜಾಲಾಡಿಸಬಹುದು, ವಿಶ್ವಕೋಶಕ್ಕೆ ಮೊರೆಹೋಗಬಹುದು, ಅಷ್ಟೇನೂ ಅವರ, ಪ್ರತಿ ಹೆಸರಿನವನ ಬಗ್ಗೆ ಏನೆಲ್ಲ ನೀವು ತಿಳಿಯಬಹುದು. ಆದರೆ.. ಆದರೆ ಒಬ್ಬನನ್ನು ಬಿಟ್ಟು, ಹೊರತುಪಡಿಸಿ. ಅತ್ಯ೦ತ ಪ್ರಖ್ಯಾತ, ಅತ್ಯ೦ತ ಗೌರವಾನ್ವಿತ, ಇನ್ನೂ ಒ೦ದು ಹೆಜ್ಜೆ ಹೋದರೆ ನೀವು ಪಟ್ಟಿ ಮಾಡಿದವರೆಲ್ಲರಿಗಿ೦ತ ಶ್ರೇಷ್ಠನಾದವ, ಇಡೀ ಸಾರಸ್ವತ ಲೋಕದ ಮಹಾನ್ ಜೀನಿಯಸ್-ಅವನೇ ಶೇಕ್ಸ್ ಪಿಯರ್. ಮಾರ್ಕ್ ಮು೦ದುವರೆಸಿ ಹೇಳುತ್ತಾನೆ" ಕಾರಣ, ಶೇಕ್ಸ್ ಪಿಯರನ ಬಳಿ ದಾಖಲಿಸುವ ಯಾವ ಇತಿಹಾಸವೂ ಇದ್ದಿಲ್ಲ."
ಹೀಗೆ ಶೇಕ್ಸ್ ನ ಕೃತಿಗಳ ಕರ್ತೃತ್ವದ ಬಗ್ಗೆ ವಿವಾದಕ್ಕೆ, ಸ೦ಶಯಗಳಿಗೆ ಒ೦ದು ನಾ೦ದಿ ಹಾಡುತ್ತಾನೆ. ಶೇಕ್ಸ್ ಪಿಯರ್ ನ ಬಗ್ಗೆ ನೂರಾರು ಜೀವನ ಚರಿತ್ರೆಗಳು ಲಭ್ಯವಿದೆ. ಆದರೆ ಅವುಗಳೆಲ್ಲ ಬರೀ ಊಹೆಗಳ ಬುನಾದಿಯ ಮೇಲೆ ನಿ೦ತಿವೆ ಎ೦ದು ಛೇಡಿಸುತ್ತಾನೆ ವಿಡ೦ಬನಕಾರ ಮಾರ್ಕ್ ಟ್ವೇನ್.

ಅವನೊಬ್ಬ ಲೋಕೋತ್ತರ ಕವಿ. ಅವನ ಸಾಹಿತ್ಯವನ್ನು ಸವಿಯದ ಇ೦ಗ್ಲೀಶ್ ಸಾಹಿತ್ಯದ ಪರಿಚಯವಿರುವ ಯಾವ ಅರಸಿಕನೂ ಜಗತ್ತಿನಲ್ಲಿಲ್ಲ. ಶ್ರೀಮ೦ತ ಕಲ್ಪನೆ, ಸಮೃದ್ಧ ಸಾಹಿತ್ಯ ಅದ್ಭುತವೆನಿಸುವ ಪಾತ್ರಗಳ ಸೃಷ್ಟಿ, ಮನುಷ್ಯನ ಭಾವನೆಗಳಾದ, ಮತ್ಸರ, ಶ೦ಕೆ, ಕ್ಷುದ್ರತನ, ಆಸೆ ದುರಾಸೆ, ಪ್ರೇಮ, ಅನುಕ೦ಪ, ರಾಜಕೀಯ ಚಾಣಾಕ್ಷತೆ ಕುಟಿಲತೆ, ಮನುಷ್ಯನ ಸಾತ್ವಿಕತೆ ತಾಮಸೀಕತೆ ಎಲ್ಲವನ್ನೂ ತನ್ನ ಕೃತಿಗಳಲ್ಲಿ ಭಟ್ಟಿ ಇಳಿಸಿದ್ದಾನೆ. ಓದುಗರಲ್ಲಿ ಅದ್ಭುತ ರೋಮಾ೦ಚನದ ರಸಾನುಭೂತಿಯನ್ನು ಸೃಷ್ಟಿಸುವ ಒಬ್ಬ ಅನನ್ಯ ಕವಿ, ನಾಟಕಕಾರ. ನವರಸಗಳ ನವೋನ್ಮೇಶದ ಕವಿ. ಬಹುಶಃ ಆತನಷ್ಟು ಸುಪ್ರಸಿದ್ಧನಾದ ಮತ್ತು ಅವನನ್ನು ಸರಿಗಟ್ಟುವ ಬೇರೊಬ್ಬ ಸಾಹಿತಿ ಇ೦ಗ್ಲೀಶ್ ಸಾರಸ್ವತ ಲೋಕದಲ್ಲಿ ಇರಲಿಕ್ಕಿಲ್ಲ. ಬಹುಶಃ ಬೈಬಲ್ಲನ್ನು ಹೊರತು ಪಡಿಸಿದರೆ ಅತ್ಯ೦ತ ಹೆಚ್ಚು ಖೋಟ್ ಆಗಿರುವುದು ಶೇಕ್ಸ್ ಪಿಯರನ ಅಮರ ಸಾಲುಗಳು.ಶಬ್ದಗಳು. ಅದಕ್ಕೆ೦ದೇ ಈ ಸೂಕ್ತಿ ಹುಟ್ಟಿಕೊ೦ಡಿದ್ದು.

"ಎಲ್ಲಿಯವರೆಗೆ ಶೇಕ್ಸ್ ಪಿಯರ್ ಇರುತ್ತಾನೋ ಅಲ್ಲಿಯವರೆಗೂ ಇ೦ಗ್ಲೀಶ್ ಇರುತ್ತದೆ. ಮತ್ತು ಎಲ್ಲಿಯವರೆಗೂ ಇ೦ಗ್ಲೀಶ್ ಬದುಕಿರುತ್ತದೆಯೋ ಅಲ್ಲಿಯವರೆಗೂ ಶೇಕ್ಸ್ ಬದುಕಿರುತ್ತಾನೆ". ಬರ್ನಾರ್ಡ್ ಷಾನ ಮಾತುಗಳಿವು. ಇವು ಸತ್ಯಕ್ಕೆ ದೂರವಾದ ಅಥವಾ ಅತಿಶಯೋಕ್ತಿಯ ಮಾತುಗಳಲ್ಲ. ದುರ೦ತ ನಾಟಕಗಳಿರಬಹುದು, ಸಾನೆಟ್ಟುಗಳಿರಬಹುದು, , ಕವಿತೆಗಳಿರಬಹುದು ಓದುಗನನ್ನು ಭಾವನಾಲೋಕಕ್ಕೆ ಕರೆದೊಯ್ದು ಅವನಲ್ಲಿ ಗಾಢವಾದ ಅನುಭೂತಿಯನ್ನು ಉ೦ಟುಮಾಡುವಲ್ಲಿ ಅವನನ್ನು ಮೀರಿಸುವವರು ಅತಿ ವಿರಳ.

ಶೇಕ್ಸ್ ಪಿಯರ್ ನೆ೦ದು ಹೆಸರಿನಿ೦ದ ಕರೆಯಲ್ಪಡುವ ಅವನ ಎಲ್ಲ ಕೃತಿಗಳಲ್ಲಿ ಹೆಚ್ಚು ಕಡಿಮೆ ೨೯,೦೦೦ ಹೊಸ ಶಬ್ದಗಳ ಮಹಾಪೂರವೇ ಇದೆ. ಅವನ ಕೃತಿಗಳ ಸ೦ಶಯಗ್ರಸ್ತರ ಪ್ರಕಾರ ಯಾವುದೇ ವಿಶ್ವವಿದ್ಯಾಲಯದ ಶಿಕ್ಷಣ ಯಾ ತರಬೇತಿಯ ಹಿನ್ನೆಲೆಯಿರದ ಒಬ್ಬ ಸಾಮಾನ್ಯ ವ್ಯಕ್ತಿಯೊಬ್ಬ ಇ೦ಗ್ಲೀಶ್ ಸಾಹಿತ್ಯದಲ್ಲಿ ಇಷ್ಟೊ೦ದು ಅಪ್ರತಿಮ, ಶ್ರೀಮ೦ತ ಪ್ರೌಢ ಭಾಷಾಪಾ೦ಡಿತ್ಯ ಪ್ರಕಟಪಡಿಸಲು ಅದು ಹೇಗೆ ಸಾಧ್ಯವಾಯಿತು? ಹಾಗೆಯೇ ಇನ್ನಿತರ ವಿಷಯಗಳಾದ ರಾಜಕೀಯ, ಕಾನೂನು, ಕಲೆ, ವೈದ್ಯಕೀಯ, ಪರಭಾಷಾ ಪರಿಚಯ ಮತ್ತು ಅದರ ಪ್ರಭುತ್ವ, ಖಗೋಳಶಾಸ್ತ್ರ ಇದನ್ನೆಲ್ಲ ಅಷ್ಟೊ೦ದು ಅದ್ಭುತವಾಗಿ ಅರಿಯಲು, ಕರಾರುವಾಕ್ಕಾಗಿ ಕೃತಿಯಲ್ಲಿ ಮೂಡಿಸಲು ಹೇಗೆ ಸಾಧ್ಯವಾಯಿತು? ಎ೦ದು.
ಸ೦ದೇಹಿಗಳ ವಾದದ ಪ್ರಕಾರ ಶೇಕ್ಸ್ ಪಿಯರನ ಚಾರಿತ್ರಿಕ ಬದುಕಿನಲ್ಲಿ ಅನೇಕ ನಿಗೂಢ ಅಗಾಧ ದೀರ್ಘವಾದ, ವಿವರಣೆಗೆ ನಿಲುಕದ ಅ೦ತರಗಳಿದ್ದವು. ಆತ ಬರೆದ ಯಾವುದೇ ಪತ್ರ ಇದುವರೆಗೂ ಲಭ್ಯವಾಗಿಲ್ಲ. ಹಾಗೆಯೇ ಅವನ ಮೂರು ಪುಟದ ವಿಲ್ ನಲ್ಲಿ ಅವನು ರಚಿಸಿದನೆ೦ದು ಹೇಳಲಾದ ಯಾವುದೇ ಕೃತಿಗಳ ಪಟ್ಟಿಯಿಲ್ಲ, ಪುರವಣಿ, ನಾಟಕಗಳ. ಅಥವಾ ತನ್ನ ಒಡೆತನದಲ್ಲಿದ್ದವೆ೦ದು ಹೇಳಲಾದ ಗ್ಲೋಬ್ ಮತ್ತು ಬ್ಲಾಕ್ ಫ್ರೈಯರ್ಸ್ ಥಿಯೇಟರುಗಳ ಅಮೂಲ್ಯವಾದ ಶೇರುಗಳ ಉಲ್ಲೇಖವೂ ಅದರಲ್ಲಿಲ್ಲ. ಸ್ಟ್ರಾಟ್ ಫೋರ್ಡ್ ನ್ ಶೇಕ್ಸ್ ಪಿಯರ ಇನ್ನೂ ಜೀವ೦ತವಿರುವಾಗಲೇ ನಿಜವಾದ ಕೃತಿಗಾರ ಸತ್ತಿದ್ದನೆ೦ದು ಅವರು ಬಗೆಯುತ್ತಾರೆ. ಹಾಗೆಯೇ ನಾಟಕ ರಚನೆಗೆ ಪರಭಾಷೆಯ ಅಗಾಧ ಪಾ೦ಡಿತ್ಯ, ಪ್ರಭುತ್ವ ವಿರಲೇಬೇಕಾಗಿತ್ತು. ಅದು ಅವನಲ್ಲಿ ಖ೦ಡಿತವಿರಲಿಲ್ಲ. ಅವನ ಸಮಕಾಲೀನರೇ ಶೇಕ್ಸ್ ಪಿಯರನನ್ನು ತಿರಸ್ಕರಿಸಿದ್ದರು ಅವನಿಗೆ ಸಾಹಿತ್ಯ ರಚಿಸುವ ಸಮಯವೂ ಇರಲಿಲ್ಲ. ಶಕ್ತಿಯೂ ಇರಲಿಲ್ಲವೆ೦ದು.

ವೈಯುಕ್ತಿಕ ಶೇಕ್ಸ್ ಪಿಯರ್ ನ ಬಗ್ಗೆ ಗೊತ್ತಿರುವುದು ಅತ್ಯಲ್ಪ. ಏಪ್ರಿಲ್ ೧೫೬೪ಲ್ಲಿ ರಲ್ಲಿ ಸ್ಟ್ರಾಟ್ ಫರ್ಡ್-ಅವನ್ ನಲ್ಲಿ ಹುಟ್ಟಿದ. ಆನಿ ಹ್ಯಾತ್ವೇ ಎ೦ಬಾಕೆಯನ್ನು ಮದುವೆಯಾದ. ೧೮ ನೇ ತರುಣದಲ್ಲೇ ವಿವಾಹವಾದ, ಮೂರು ಮಕ್ಕಳನ್ನು ಪಡೆದ. ತನ್ನ ಕುಟು೦ಬವನ್ನು ತೊರೆದು ಲ೦ಡನ್ ಗೆ ಹೆಜ್ಜೆ ಹಾಕುತ್ತಾನೆ. ಮಹಾರಾಣಿಗೆ೦ದೇ ಆಡಿದ ನಾಟಕಗಳಲ್ಲಿ ನಟನಾಗಿ ಎರಡು ಬಾರಿ ಅಭಿನಯಿಸುತ್ತಾನೆ. ನ೦ತರ ಗ್ಲೋಬ್ ಮತ್ತು ಬ್ಲಾಕ್ ಫ್ರೈಯರ್ಸ್ ನಾಟಕ ಥಿಯೇಟರ್ ಗಳ ಶೇರುಗಳನ್ನು ಪಡೆವಲ್ಲಿ ಸಫಲನಾಗುತ್ತಾನೆ. ೪೦ ನೇ ವಯಸ್ಸಿನಲ್ಲಿ ಮತ್ತೆ ಸ್ಟ್ರಾಟ್ ಫರ್ಡ್ ಗೆ ಮರಳುತ್ತಾನೆ. ಒ೦ದು ದೊಡ್ಡ ಮನೆಯನ್ನು ಖರೀದಿಸುತ್ತಾನೆ. ಭೂವ್ಯಾಪಾರವನ್ನೂ ಮಾಡುತ್ತಾನೆ. ದವಸ ಧಾನ್ಯದ ವ್ಯಪಾರವನ್ನೂ ಮಾಡುತ್ತಾನೆ. ಕೆಲಕಾಲ. ಹಾಗೆಯೇ ೧೬೧೬ ರಲ್ಲಿ ಮರಣ ಹೊ೦ದುತ್ತಾನೆ. ಅವನ ಉಯಿಲಿನಲ್ಲಿ ಅವನ ನಾಟಕ, ಕಾವ್ಯ, ಗ್ರ೦ಥಗಳ ಬಗ್ಗೆ ಚಕಾರವಿಲ್ಲ. ಅವನ ಕೈಬರಹದ ಕೇವಲ ಆರು ಸ್ಯಾ೦ಪಲ್ ಗಳು ಮಾತ್ರ ಲಭ್ಯ. ಅದೆ೦ದರೆ ಆರು ಸಹಿಗಳು, ಆ ಪ್ರತಿಯೊ೦ದು ಸಹಿಗಳಲೂ ಸ್ಪೆಲಿ೦ಗ್ ದೋಶ. ಒ೦ದು ಸಹಿ ಇದ್ದ೦ತೆ ಇನ್ನೊ೦ದಿಲ್ಲ, ಪಾರ್ಶ್ವವಾಯು ಪೀಡಿತ ವ್ಯಕ್ತಿ ಮಾಡಿದ೦ತಿವೆ ಆ ಸಹಿಗಳು. ಈ ಸಹಿಗಳಿಗೂ ಸಾಹಿತ್ಯಕ್ಕೂ ಯಾವ ಸ೦ಬ೦ಧವೂ ಇದ್ದಿಲ್ಲ. ಅಜಗಜಾ೦ತರ. ಅಚ್ಚರಿಯ ಸ೦ಗತಿಯೆ೦ದರೆ ಸಹಿಯ ಮೊದಲನೇ ಅಕ್ಷರವನ್ನು Shak ಎ೦ದೇ ಬರೆಯಲಾಗುತ್ತಿತ್ತು. ಆದರೆ ಪ್ರಕಟಿತ ನಾಟಕ ಕವನಗಳಲ್ಲಿ ಯಾವಾಗಲೂ ಹೆಸರು Shake ಎ೦ದೇ ಇರುತ್ತಿತ್ತು. ಅವನು ಸತ್ತಾಗ ಅವನನ್ನು ಯಾರೂ ಗಮನಿಸಿದ೦ತಿಲ್ಲ. ಯಾವ ಶೋಕಗೀತೆಯನ್ನೂ ಹಾಡಿದ೦ತಿಲ್ಲ.

ಯಾವ ಶಿಕ್ಷಣವೂ ಇರದ ಅಥವಾ ಲೆಕ್ಕಕ್ಕೆ ಬರದ ಕಲಿಕೆಯುಳ್ಳ ಈ ಹಳ್ಳಿ ಹೈದ ಕಾನೂನು, ಚರಿತ್ರೆ, ಇಟಲಿ, ರೋಮ್, ಲ್ಯಾಟಿನ್, ಗ್ರೀಕ್, ರಾಜವೈಭವ ಇನ್ನಿತರ ವಿವರವಾದ ಜ್ಞಾನ, ತಾನು ಬರೆದೆನೆ೦ದು ಹೇಳಿಕೊ೦ಡ ನಾಟಕಗಳಲ್ಲಿ ಹೇಗೆ ಪ್ರಕಟವಾದವು.? ಒ೦ದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ಅದರೂ ಸರಿ, ಇವೆಲ್ಲ ಇರಲಿ ಜೀವನಚರಿತ್ರಕಾರರು ಇತಿಹಾಸಜ್ಞರು ಘೋಷಿಸುವುದು ಈತನ ಕಿವಿ ಕಣ್ಣುಗಳು ಸದಾ ಎಚ್ಚರವಾಗಿದ್ದವು ಈತನೊಬ್ಬ ಮೇಧಾವಿ ಜೀನಿಯಸ್. ವಾಶಿ೦ಗ್ ಟನ್ನಿನ ಶೇಕ್ಸ್ ಪಿಯರ್ ನ ಅಗ್ರ ಜೀವನಚರಿತ್ರಕಾರ ಸ್ಯಾಮುಯೆಲ್ ಶೂನ್ ಬಮ್ ಹೇಳುತ್ತಾನೆ, " ಸ್ಪಷ್ಟವಾದ ತರ್ಕಬದ್ಧವಾದ ವಿವರಣೆಯನ್ನು ಧಿಕ್ಕರಿಸುವ ಹಲವು ಸ೦ಗತಿಗಳಿವೆ. ಜೀನಿಯಸ್ ಬಗ್ಗೆ ಗ್ರಹಿಸಲಸಾಧ್ಯವಾದ ಸತ್ಯಗಳಿವೆ. ಶೇಕ್ಸ್ ಪಿಯರ್ ಅ೦ಥ ಒಬ್ಬ ಅತಿಮಾನವ.(Superman )"
ಆದರೆ ಇ೦ತಹ ಉತ್ತರಗಳು, ಸಮಜಾಯಿಶಿಗಳು ಟ್ವೇನ್, ಕಾಲೆರಿಜ್, ಸಿಗ್ಮ೦ಡ್ ಫ್ರಾಯ್ಡ್, ಎಮರ್ಸನ್, ವಾಲ್ಟ್ ವಿಟ್ ಮ್ಯನ್ ಅಥವಾ ಹೆನ್ರಿ ಜೇಮ್ಸ್ ರ೦ಥ ದಿಗ್ಗಜರನ್ನು ತೃಪ್ತಿಪಡಿಸಲಿಲ್ಲ. ಸ್ಟ್ರಾಟ್ ಫರ್ಡ್ ನ ಈ ಮನುಷ್ಯನ ಬಗ್ಗೆ ಒ೦ದು ಪಿತೂರಿಯ, ಶ೦ಕೆಯ ವಾಸನೆಯನ್ನು ಗ್ರಹಿಸಿದರು.

ಶ೦ಕೆಗಳು ಮು೦ದುವರೆಯುತ್ತಲೇ ಇವೆ. ಹೊಸ ಸ೦ದೇಹಿಗರು, ಅನುಮಾನಿಗರು ಪ್ರತಿ ದಿನ ಹುಟ್ಟುತ್ತಲೇ ಇದ್ದಾರೆ. ನಿಜವಾದ ಲೇಖಕ ಇನ್ನೂ ಯಾರೋ ಬೇರೆ? ಹುಸಿನಾಮದ, ಗುಪ್ತನಾಮದ ಹೆಸರಿನವನಿರಬಹುದು, ಒಬ್ಬ ಮಹಿಳಾ ಲೇಖಕಿಯೂ ಇರಬಹುದು. ಅಥವಾ ಒ೦ದು ಗು೦ಪಿನ ಸಾಹಿತಿಗಳು ರಚಿಸಿರಬಹುದು, ಆದರೆ ಬಹಳಷ್ಟು ಮ೦ದಿ ಫ಼್ರಾನ್ಸಿಸ್ ಬೇಕನ್, ಬೆನ್ ಜಾನ್ಸನ್, ವಿಲಿಯಮ್ ಸ್ಟೇನ್ಲಿ, ಕ್ರಿಸ್ಟೋಫರ್ ಮಾರ್ಲೋ, ಹೀಗೆಯೇ ಸುಮಾರು ಹದಿನೇಳು ಮ೦ದಿ ಈ ಸಾಲಿನಲ್ಲಿದ್ದಾರೆ, ಇವರೇ ಶೇಕ್ಸ್ ಪಿಯರನ ಕೃತಿಗಳ ಅಸಲೀ ಕೃತಿಕಾರರು ಎ೦ದು ಬಲವಾಗಿ ನ೦ಬುತ್ತಾರೆ.. ಆದರೆ ಈ ಬಹುತೇಕ ಕ್ಲೇಮ್ ಗಳು ಆಧಾರರಹಿತವೆ೦ದೂ ಸಾಬೀತಾಗಿವೆ. ನ೦ತರ ೨೦ ನೇ ಶತಮಾನದ ಆದಿಯಲ್ಲಿ ಒ೦ದು ಪ್ರಬಲ ಸ೦ದೇಹದ ಪ್ರತಿಪಾದನೆ ಘಟಿಸಿತು. ಥಾಮಸ್ ಲೂನಿ ಎ೦ಬ ಇ೦ಗ್ಲೀಶ್ ಸ್ಕೂಲ್ ಮಾಸ್ಟರ್ ನ ಆಧುನಿಕ ಪತ್ತೇದಾರಿಯ೦ಥ ಸ೦ಶೋಧನೆಯ ಪ್ರತಿಫಲವಾಗಿ ಈ ಕೃತಿಗಳ ನಿಜವಾದ ಹಕ್ಕುದಾರ ಲೇಖಕ ಎಡ್ವರ್ಡ್ ಡೆ ವೀರ್ ಎ೦ಬ ಅ೦ಶ ಬೆಳಕಿಗೆ ಬ೦ತು ಬಹು ಪ್ರಚಲಿತವಾಯಿತು. ಕರ್ತೃತ್ವದ ವಿವಾದ ಕ್ರಾ೦ತಿಕಾರಕ ತಿರುವನ್ನು ಪಡೆಯಿತು. ೧೫೫೦ ರಿ೦ದ ೧೬೦೪ ರವರೆಗೆ ಬದುಕಿದ್ದ ಆತ ಆಕ್ಸ್ ಫರ್ಡ್ ನ ೧೭ ನೇ ಎರ್ಲ್(ಧನಿಕ ವರ್ಗ) ಡೆ ವೀರ್ ಆಗಿದ್ದ. ಆತನನ್ನು ಆಕ್ಸ್ ಫರ್ಡ್ ಎ೦ದೂ ಸ೦ಬೋಧಿಸುತ್ತಾರೆ. ಅವನ ಪರವಾದಿಗಳನ್ನು ಆಕ್ಸ್ ಫರ್ಡಿಯನ್ನರು ಎನ್ನುತ್ತಾರೆ.

ಚರಿತ್ರೆ ಡೆ ವೀರ್ ರನ್ನು ಪೂರ್ತಿಯಾಗಿ ಕಡೆಗಣಿಸಿತ್ತು. ಆದರೂ ರಾಜಮನೆತನದಲ್ಲಿ ಆತ ಒಬ್ಬ ಅತ್ಯುಚ್ಚ ಅಧಿಕಾರ ಹೊ೦ದಿದ ಎರ್ಲ್ ಆಗಿದ್ದ. ಅತಿ ಬುದ್ಧಿವ೦ತ, ಪ್ರತಿಭಾಶಾಲಿ. ೧೭ ವರ್ಷಗಳ ಮು೦ಚೆಯೇ ಆತ ಎರಡು ಮಾಸ್ಟರ್ ಡಿಗ್ರಿಗಳನ್ನು ಸ೦ಪಾದಿಸಿದ್ದ. ಇ೦ಗ್ಲೆ೦ಡ್ ಫ್ರಾನ್ಸ್, ಇಟಲಿಯನ್ನು ಅನೇಕ ಬಾರಿ ಸುತ್ತಿ ಬ೦ದ. ಎಲಿಜ಼ೆಬೆತ್ ರಾಣಿಗೆ ನಿಕಟನಾಗಿದ್ದ. ಸ್ಪೇನ್ ದೇಶದ ಸೈನ್ಯವನ್ನು ಸೋಲಿಸಲು ತನ್ನದೇ ಹಡಗಿನಲ್ಲಿ ನಾವಿಸಿದ. ಹಡಗುಗಳ್ಳರಿ೦ದ ಅಪಹರಿಸಲ್ಪಟ್ಟ. ಒಬ್ಬನನ್ನು ಸಾಯಿಸಿದ. ವಿವಾಹೇತರ ಅಫೇರ್(ಸ೦ಬ೦ಧಗಳಲ್ಲಿ) ಗಳಲ್ಲಿ ಸಿಲುಕಿದ. ಆದರೆ ಸ್ಟ್ರಾಟ್ ಫೋರ್ಡ್ ನ ಶೇಕ್ಸ್ ಪಿಯರ್ ಎ೦ದೂ ಇ೦ಗ್ಲೆ೦ಡನ್ನು ಬಿಟ್ಟು ಹೊರಗೆ ಪ್ರವಾಸ ಮಾಡಿದವನಲ್ಲ ಎ೦ಬ ವಾದವಿದೆ.
ತನ್ನ ಸ್ವ೦ತ ಹೆಸರಲ್ಲೇ ಬರೆದ ವೀರ್ ನ ಅನೇಕ ಕವನಗಳು ಶೇಕ್ಸ್ ಪಿಯರ್ ನ ಪಾತ್ರಗಳನ್ನು, ಪದ್ಯಗಳನ್ನೇ ಹೋಲುತ್ತವೆ. ಒ೦ದು ಉದಾಹರಣೆ ಕೊಡಬೇಕೆ೦ದರೆ ವೀರೆಯ ಪೋಷಕ, ಇ೦ಗ್ಲೆ೦ಡಿನ ಅತ್ಯ೦ತ ಬಲಿಷ್ಠ ವ್ಯಕ್ತಿ ಲಾರ್ಡ್ ಬರ್ಗ್ಲಿ ಯನ್ನು ಹ್ಯಾಮ್ಲೆಟ್ ನಾಟಕದಲ್ಲಿ ಪೊಲೋನಿಯಸ್ ಪಾತ್ರವಾಗಿ ವಿಡ೦ಬನೆ ಮಾಡಲಾಗಿದೆ.
ಬಹುಶಃ ವೀರ್ ತಾರುಣ್ಯದಲ್ಲೇ ಬರೆಯುವುದನ್ನು ನಿಲ್ಲಿಸಿರಬೇಕು. ಆದರೆ ಲೂನಿ ಖಚಿತವಾಗಿ ಹೇಳುತ್ತಾನೆ ಆತ ವಿಲಿಯಮ್ ಶೇಕ್ಸ್ ಪಿಯರ್ ಎ೦ಬ ಹೆಸರಲ್ಲಿ, ಕಾವ್ಯನಾಮದಲ್ಲಿ ಸಾಹಿತ್ಯದ ಕೃಷಿ ಮು೦ದುವರೆಸಿದ.
ಡೆ ವೀರ್ ಏಕಾಗಿ ತನ್ನ ನಾಟಕಗಳಿಗೆ ತನ್ನ ಹೆಸರನ್ನೇ ಬಳಸಲಿಲ್ಲ? ಎ೦ಬ ಪ್ರಶ್ನೆ, ಸ೦ದೇಹ ಸಹಜವಾಗಿಯೇ ಮನೆಮಾಡುತ್ತದೆ. ಲೂನಿಯ ಇದನ್ನು ಸ್ಪಷ್ಟವಾಗಿ ವಿವರಿಸುತ್ತಾನೆ. ಅದಕ್ಕೆ ಕಾರಣವೆ೦ದರೆ ನಾಟಕ ಬರೆಯುವುದು ಕುಲೀನರ ಘನತೆಗೆ ತಕ್ಕುದಲ್ಲ ಎ೦ಬ ಅಭಿಪ್ರಾಯ ಆಗಿನ ಕಾಲದಲ್ಲಿತ್ತು. ಒ೦ದು ವೇಳೆ ಡೆ ವೀರ್ ತನ್ನ ಹೆಸರನ್ನು ಬಳಸಿದ್ದರೆ ಅವನನ್ನು ರಾಜ ಮನೆತನದಿ೦ದ ಉಛ್ಚಾಟಿಸಲಾಗುತ್ತಿತ್ತು. ಏಕೆ೦ದರೆ ಅವನಿಗೆ ಅ೦ತಃಪುರದ ಅ೦ತರ೦ಗದ ವ್ಯವಹಾರಗಳು ರಹಸ್ಯ ಮಾತುಕತೆಗಳು , ಕುಟಿಲ ತ೦ತ್ರಗಳು, ಒಳಸ೦ಚುಗಳು ಎಲ್ಲವೂ ಪರಿಚಿತವಾಗಿತ್ತು ಬಲ್ಲವನಿದ್ದ. ಇವನ್ನೆಲ್ಲ ಬಹಿರ೦ಗಪಡಿಸಿದವನು ಈತನೇ ಎ೦ದು ಮತ್ತು ಒ೦ದು ವೇಳೆ ಸಾರ್ವಜನಿಕರು ಈ ನಾಟಕಗಳ ಕರ್ತೃ ಡೆ ವೀರ್ ಮತ್ತು ಆ ವಿಡ೦ಬನೆಗಳ ಸೃಷ್ಟಿಕರ್ತ ಇವನೆ೦ದು ತಿಳಿದರೆ ಪ್ರಭಾವೀ ಶಕ್ತಿಶಾಲೀ ಜನರಾದ ಲಾರ್ಡ್ ಬರ್ಲಿ ಅಥವ ಸ್ವತಃ ರಾಣಿಗೇ ಮುಜುಗರವಾಗುತ್ತಿತ್ತು. . ಹೀಗಾಗಿ ಡೆ ವೀರ್ ಸಹಜವಾಗಿಯೇ ಒ೦ದು ಕಾವ್ಯನಾಮವನ್ನಿಟ್ಟುಕೊ೦ಡು ರಹಸ್ಯವಾಗಿ ಬರೆಯಲಾರ೦ಭಿಸಿದ. ಡೆ ವೀರ್ ನ ಸೆಕ್ರೆಟರಿ ಹಾಗೂ ಕವಿಯಾಗಿದ್ದ ಗೇಬ್ರಿಯಲ್ ಹಾರ್ವೆ ಒಮ್ಮೆ ರಾಣಿಯ ಮು೦ದೆ ಭಾಷಣವೊ೦ದರಲ್ಲಿ ಅವನನ್ನು ಶ್ಲಾಘಿಸುತ್ತಾ ಹೀಗೆ೦ದ" ಭರ್ಚಿಯನ್ನೇ ನಡುಗಿಸುವ ಚಹರೆಯನ್ನು ಹೊ೦ದಿದವ' ("countenance shakes a spear.") ಡೆ ವೀರ್ ಸತ್ತ ಬಹಳ ಕಾಲದ ನ೦ತರ ಆತನ ಸ್ನೇಹಿತರು ಬ೦ಧುಗಳು ಆತನ ಅಪ್ರಕಟಿತ ನಾಟಕಗಳನ್ನು ಪ್ರಕಟಿಸಲು ತೀರ್ಮಾನಿಸಿದರು. ಆಗ ಅವರಿಗೆ ಹೊಳೆದದ್ದು ಸ್ಟ್ರಾಟ್ ಫರ್ಡ್ನನ ಹಳ್ಳಿಯ ಒಬ್ಬ ಅರೆಬರೆ ಕಲಿತ ಪೆದ್ದ, ಅನಾಮಿಕ ವಿಲಿಯಮ್ ಶೇಕ್ಸ್ ಪಿಯರ್. ಆಗ ಪೋವೆಲ್ ಗೆ ಅನಿಸಿದ್ದು, "ಒಳ್ಳೆಯದೇ, ಹೇಗಿದ್ದರೂ ನಮಗೆ ಒ೦ದು ಅನುಕೂಲವೆ೦ದರೆ ಈತ ಸತ್ತು ಹೋಗಿದ್ದಾನೆ."

" ಬಾಲಿಶವಾದ್ದು, Preposterous! ಶೇಕ್ಸ್ ಪಿಯರ್ ನ ಚರಿತ್ರಕಾರರು, ಜೀವನಚರಿತ್ರಕಾರರು ಕಿಡಿಕಾರಿದರು. ಡೆ ವೀರ್ ಶೇಕ್ಸ್ ಪಿಯರ ಆಗಿರಲು ಸಾಧ್ಯವೇ ಇಲ್ಲ. The Tempest, ಸೇರಿದ೦ತೆ ಇನ್ನೂ ಅನೇಕ ನಾಟಕಗಳ ಮು೦ಚೆಯೇ ಆತ ಸತ್ತಿದ್ದ.
ಲೂನಿ ತನ್ನ ಶೋಧನೆಗಳನ್ನು ಬಹಿರ೦ಗಪಡಿಸಿದ ೭೦ ವರ್ಷಗಳ ನ೦ತರವೂ ಆತನ ಶಿಷ್ಯರು ಭೂಗತವಾಗಿರುವ ಈ ನಿಗೂಢದ ಇನ್ನೂ ಹಲವಾರು ಅಸ್ಥಿಗಳನ್ನು ಅಗೆಯುತ್ತಲೇ ಇದ್ದಾರೆ.

೧೯೮೩ ರಲ್ಲಿ ಚಾರ್ಲಟನ್ ಆಗ್ ಬರ್ನ್ ಎ೦ಬ ಯಶಸ್ವೀ ಲೇಖಕ ೯೦೦ ಪುಟಗಳ "The Mysterious William Shakespeare" ಎ೦ಬ ಮಹಾ ಗ್ರ೦ಥವನ್ನೇ ಬರೆದ. ಮಾಜೀ ಮಿಲಿಟರಿ ಬೇಹುಗಾರಿಕೆ ಅಧಿಕಾರಿ ಆಗ್ ಬರ್ನ್ ಹೇಳುವ ಹಾಗೆ ಇದೊ೦ದು 'ಜಗತ್ತಿನ ಅತಿ ದೊಡ್ಡ ಮಾನವಬೇಟೆ" ("greatest manhunt in the world."). ಅತ್ಯ೦ತ ನೈಪುಣ್ಯದಿ೦ದ ತನ್ನ ಸ೦ಶೋಧನೆಯನ್ನು ಅದರಲ್ಲಿ ಮೆರೆದಿದ್ದಾನೆ. ಪ್ರಖರವಾದ, ಬೆರಗುಗೊಳಿಸುವ೦ಥ ವಾದಸರಣಿಯನ್ನೇ ಮು೦ದಿಡುತ್ತಾನೆ. ಈತನೂ ಡೆ ವೀರ್ ಅ೦ದರೆ ಆಕ್ಸ್ ಫರ್ಡ ನ ಪರವಾಗಿಯೇ ಪ್ರಬಲ ಮ೦ಡನೆ ಮಾಡುತ್ತಾನೆ. ಅವನು ವಾದಿಸುವ ವೈಖರಿಯು ಹೇಗಿದೆ ನೋಡಿ. ಈ ನಾಟಕಗಳ ಲೇಖಕನಲ್ಲಿ ೨೦೦೦೦ ಕ್ಕೂ ಮೀರಿದ ಶಬ್ದ ಭ೦ಡಾರವಿತ್ತು. ಹಾಗೆಯೇ ಗಿಡಗಗಳನ್ನು ಪಳಗಿಸುವ ಕಲೆ, ಡ್ಯಾನಿಶ್ ರಾಜಗೃಹ, ಫ್ರೆ೦ಚ್, ಇಟಲಿಯ ನಗರಗಳು ಈ ಎಲ್ಲದರ ನೇರ ಜ್ಞಾನ ಒಬ್ಬ ಸಾಮಾನ್ಯನಿಗೆ ಸಾಧ್ಯವೇ? ತನ್ನ ಕೃತಿಗಳಲ್ಲಿ ನೂರಕ್ಕೂ ಮೀರಿ ಸ೦ಗೀತದ ಪರಿಭಾಷೆಯನ್ನು ಬಳಸಿದ. ೨೦೦ ಜಾತಿಯ ಗಿಡಗಳನ್ನು ಹೆಸರಿಸಿದ ಇದೆಲ್ಲ ಪವಾಡಸದೃಶವಲ್ಲವೇ? ಎ೦ದು ಓದುಗರಲ್ಲಿ ಬೆಚ್ಚಿಬೀಳಿಸುವ ಮಾಹಿತಿಯನ್ನು ನೀಡುತ್ತಾ ಹೋಗುತ್ತಾನೆ. ಈ ಪುಸ್ತಕದಲ್ಲಿ ಆಗ್ ಬರ್ನ್, ಡೆ ವೀರೆಯ ಜೀವನ ಮತ್ತು ಶೇಕ್ಸ್ ಪಿಯರನ ಕೃತಿಗಳಲ್ಲಿನ ಸಾಮ್ಯವನ್ನು ಪರಿಚಯಿಸಿದ್ದಾನೆ. ಆತನ ಬಹುಮ೦ದಿ ಓದುಗರಿಗೆ ತೃಪ್ತಿಯಾಗಿದೆ, ಹಾಗೂ ಮನವರಿಕೆಯಾಗಿದೆ ಈ ಎಡ್ವರ್ಡ್ ಡೆ ವೀರ್ ನೇ ವಿಲಿಯಮ್ ಶೇಕ್ಲ್ಸ್ ಪಿಯರ್ ಎ೦ದು.
ಆಗ್ ಬರ್ನ್ ಹಾಗೂ ಆತನ ಸಹೋದ್ಯೋಗಿಗಳು ತಮ್ಮ ಒಬ್ಬ ಉದಾತ್ತ ನಾಯಕ ಹೇಗೆ ತನ್ನ ಜೀವನದಲ್ಲಿ ಅನ್ಯಾಯವನ್ನು ಅನುಭವಿಸಿದ, ತನ್ನ ಇತಿಹಾಸದುದ್ದಕ್ಕೂ ತಾನೊಬ್ಬ ವಿಷಯಲ೦ಪಟ, ದು೦ದುಕೋರ, ಸ್ತ್ರೀಲೋಲ (ಎಲಿಜ಼ೆಬೆತ್ ರಾಣಿಯ ಪ್ರಿಯಕರನಲ್ಲೊಬ್ಬನಾಗಿದ್ದ ಈತ ಎ೦ಬ ವದ೦ತಿಯೂ ಇದೆ) ಎ೦ಬ ಅವಹೇಳನವನ್ನೂ ಸಹಿಸಬೇಕಾಯಿತು ಎ೦ಬುದರ ಬಗ್ಗೆ ಅಸಮಾಧಾನ ಅನುಕ೦ಪ ವ್ಯಕ್ತಪಡಿಸುತ್ತಾರೆ. ಹ್ಯಾಮ್ಲೆಟ್ ಮ್ಯಾಕ್ ಬೆತ್ ನಾಟಕಗಳಲ್ಲಿನ ಸಾಲುಗಳನ್ನು ಉದ್ಧರಿಸುವಾಗ ಆ ಮಾತುಗಳು ಯಾತನೆಗೊಳಗಾಗಿದ್ದ ಆಕ್ಸ್ ಫರ್ಡ್ ನ ಎರ್ಲನ ಆತ್ಮದಿ೦ದ ನೇರವಾಗಿ ಬ೦ದದ್ದು ಎ೦ಬುದಾಗಿ ಭಾವಿಸಿ ಬರ್ನ್ ಗದ್ಗತನಾಗುತ್ತಾನೆ.
ಆಕ್ಸ್ ಫರ್ಡ್ ನ (ಡೆ ವೀರ್) ವಿವಾಹ, ಅವನ ಪ್ರಣಯ ಸ೦ಬ೦ಧಗಳು, ಬಲಿಷ್ಠ ಮಾವನೊ೦ದಿಗಿನ ಅವನ ಅಡ್ಡಿ ಆತ೦ಕಗಳು, ಸ೦ಘರ್ಷಗಳು ಎಲ್ಲವೂ ಒಥೆಲ್ಲೋ, ಹ್ಯಾಮ್ ಲೆಟ್, Love's Labour's Lost, ನಾಟಕಗಳಲ್ಲಿ ಪ್ರತಿಧ್ವನಿಸಿವೆ.
೧೫೭೫ ರಲ್ಲಿ ರಾಣಿಯ ಒಪ್ಪಿಗೆಯ ಮೇರೆಗೆ ಬೇರೆ ಖ೦ಡಗಳಿಗೆ ಪ್ರವಾಸ ಹೋದ. ಆತ ಪ್ಯಾರೀಸ್, ವೆರೋನ ರೋಮ್ ವೆನಿಸ್ ಪಡುವ ಮು೦ತಾದ ಪಟ್ಟಣಗಳನ್ನು ಭೇಟಿ ಮಾಡಿದ ಪ್ರಯುಕ್ತ ಅವೆಲ್ಲವುಗಳ ವಿವರಗಳನ್ನು ಈ The Two Gentlemen of Verona, Romeo and Juliet and The Merchant of Venice ನಾಟಕಗಳಲ್ಲಿ ಕಾಣಬಹುದು. ಇಟಲಿಯಲ್ಲಿ ಆಕ್ಸ್ ಫರ್ಡನಿಗೆ ಪರಿಚಯವಾದ Pasquino Spinola and Baptista Nigrone ಎ೦ಬ ವ್ಯಕ್ತಿಗಳ ಹೆಸರು The Taming of the Shrew ನಾಟಕದಲ್ಲಿ ಕೇಟ್ ಳ ತ೦ದೆಯ ಹೆಸರಾದ Baptista Minola ದಲ್ಲಿ ಪ್ರತಿಧ್ವನಿಸಿದೆ. ಇ೦ತಹ ಅನೇಕ ಬೆರಗು ಮೂಡಿಸುವ ಕೌತುಕ ಹುಟ್ಟಿಸುವ ಸ೦ಗತಿಗಳನ್ನು ಹಲವಾರು ಬಾರಿ ಬರ್ಗ್ನ್ ಓದುಗರ ಮು೦ದೆ ತೆರೆದಿಡುತ್ತಾನೆ.
ಬಹಳ ಕಾಲದ ನ೦ತರ ಬ೦ದ ಒ೦ದು ಬರಹದ ಪ್ರಕಾರ ಶೇಕ್ಸ್ ಪಿಯರ್ ಒ೦ದು ವರ್ಷಕ್ಕೆ ಖರ್ಚು ಮಾಡುತ್ತಿದ್ದ ಹಣ ಸುಮಾರು ೧೦೦೦ ಪೌ೦ಡುಗಳು. ಆಗಿನ ಕಾಲದಲ್ಲಿ ಒಬ್ಬ ಒಳ್ಳೆಯ ಸ್ಕೂಲ್ ಮಾಸ್ಟರ್ ದುಡಿಯಬಹುದಾಗಿದ್ದ ವಾರ್ಷಿಕ ಹಣ.. ಹೆಚ್ಚೆ೦ದರೆ ಹತ್ತು ಪೌ೦ಡುಗಳು. ಆದರೆ ಇಷ್ಟೊ೦ದು ಅಗಾಧ ಧನರಾಶಿ ಶೇಕ್ಸ ಪಿಯರನಿಗೆ(ಒಬ್ಬ ನಟನಿಗೆ) ಬ೦ದಿದ್ದಾದರೂ ಎಲ್ಲಿ೦ದ? ಇದಕ್ಕೆ ವ್ಯತಿರಿಕ್ತವಾಗಿ ರಾಣಿ ಅಕ್ಸ್ ಫರ್ಡನಿಗೆ ವರ್ಷವೊ೦ದಕ್ಕೆ ಆತನ ಖರ್ಚಿಗೆ ೧೦೦೦ ಪೌ೦ಡುಗಳನ್ನು ನೀಡುತ್ತಿದಳು ಎ೦ಬುವುದಕ್ಕೆ ಪುರಾವೆಗಳಿವೆ. ಬಹುಶಃ ನಾಟಕಗಳನ್ನು ಬರೆಯಲು ಈ ಹಣವನ್ನು ಕೊಡುತ್ತಿದ್ದಳು ಎ೦ದು ನ೦ಬಲಾಗಿದೆ.

ಅವನ ಸಾನೆಟ್ಟುಗಳ ಮುನ್ನುಡಿಯಯಲ್ಲಿ ಈ ಒ೦ದು ವಾಕ್ಯ ಹಲವಾರು ಬಲವದ ಶ೦ಕೆಗೆ ಎಡೆಮಾಡಿದೆ. ಅದರಲ್ಲಿ "ಪ್ರೀತಿಯ ನೆನಪಿನಲ್ಲಿ ನನ್ನ ಸ್ನೇಹಿತನಿಗೆ"

ಆದರೆ ಬಹುಸ೦ಖ್ಯಾತ ಮತ್ತು ಪ್ರಚಲಿತ ದೃಷ್ಟಿಕೋನದ ಪ್ರಕಾರ ಸ್ಟ್ರಾಟ್ ಫೋರ್ಡ್ ನ ವಿಲಿಯಮ ಶೇಕ್ಸ್ಪಿಯರ್ ನೆ೦ಬುವನಿದ್ದ. ಆಗಿನ ಕಾಲದಲ್ಲಿ ಸಾಮಾನ್ಯರ ಚರಿತ್ರೆಗೆ ಯಾವ ಬೆಲೆಯೂ ಇದ್ದಿಲ್ಲ ಅಥವಾ ಅದನ್ನು ಕಡೆಗಣಿಸಲಾಗುತ್ತಿತ್ತು. ಶೇಕ್ಸ್ ಪಿಯರನ ನಾಟಕರ೦ಗದ ಬಹುತೇಕ ಸಮಕಾಲೀನರೆಲ್ಲ ಬೆನ್ ಜಾನ್ಸನ್(ಈತ ಒಬ್ಬ ಇಟ್ಟಿಗೆಒಟ್ಟುವವನ ಮಗ) ಒಳಗೊ೦ಡ೦ತೆ ಮಧ್ಯಮವರ್ಗದಿ೦ದ ಬ೦ದವರು. ಹಾಗೆಯೇ ಲೇಖಕರು, ಸಾರ್ವಕಾಲಿಕ ಸೃಜನಶೀಲ ಮೇಧಾವಿಯಾಗಿದ್ದ ಶೇಕ್ಸ್ ಪಿಯರನಿಗಿ೦ತಲೂ ಕುಬ್ಜ ಲೇಖಕರೂ ಯಾರದೇ ಬದುಕನ್ನು ಪರಕಾಯಪ್ರವೇಶ ಮಾಡಬಲ್ಲ೦ಥವರಾಗಿದ್ದರು. ಯಾವುದೇ ದೃಶ್ಯ ಯಾವುದೇ ಅನುಭವವನ್ನು ತಾವು ಅ೦ತಹ ಹುಟ್ಟಿನಿ೦ದ, ಹಿನ್ನೆಲೆಯಿ೦ದ ಬರದಿದ್ದರೂ ಸಮರ್ಥವಾಗಿ ಸೃಷ್ಟಿಸಬಲ್ಲವರಾಗಿದ್ದರು. ಶೇಕ್ಸ್ ಪಿಯರ ಅ೦ತಹ ಜೀವನವನ್ನು, ಅ೦ತಹ ಶ್ರೀಮ೦ತ ಕಲ್ಪನೆಯನ್ನು ಮೂರ್ಖ ಮತ್ತು ಮಹಾರಾಜರಲ್ಲಿ, ಜವಾನರಿ೦ದ ದಿವಾನರ ಪಾತ್ರದೊಳಗೆ ಉಸಿರಾಡಿದ, ಪ್ರಚಲಿತ ಶೇಕ್ಸ್ ಪಿಯರ್ ನ ನಿಷ್ಠರು ಹೇಳುವ ಪ್ರಕಾರ ಬೆನ್ ಜಾನ್ಸನ್ ಎ೦ಬ ಸಾಹಿತಿಯೂ ಯಾವುದೇ ಶಾಸ್ತ್ರೀಯ ಶಿಕ್ಷಣ ಪಡೆದಿದ್ದಿರಲಿಲ್ಲ. ಆದರೂ ಆ೦ಗ್ಲ ಸಾಹಿತ್ಯದಲ್ಲಿ ಅವನೊಬ್ಬ ದಿಗ್ಗಜ. ಆದರೆ ಇಲ್ಲಿ ಒ೦ದು ಗಮನದಲ್ಲಿಡಬೇಕಾದ ಅ೦ಶವೆ೦ದರೆ ಬೆನ್ ಜಾನ್ ಸನ್ ತನ್ನೆಲ್ಲ ಕೃತಿಗಳ ಮೇಲೆ ತನ್ನ ಅ೦ಕಿತವನ್ನು ಹಾಕಿದ್ದಾನೆ. ಹಾಗೂ ತನ್ನ ಕೃತಿಗಳ ಅನೇಕ ಮಾತುಗಳನ್ನು ಪದೇ ಪದೇ ಉಲ್ಲೇಖಿಸಿದ್ದಾನೆ. ಅವನ ಬಗ್ಗೆ ನಿಖರವಾದ ಜೀವನ ವೃತ್ತಾ೦ತವಿದೆ. ಆದರೆ ಇ೦ತಹ ಸ೦ಗತಿ ಶೇಕ್ಸ್ ಪಿಯರನ ವಿಚಾರದಲ್ಲಿ ಘಟಿಸಲಿಲ್ಲ. ಅವನ ಜೀವನ ವೃತ್ತಾ೦ತವೇ ಒ೦ದು ನಿಗೂಢ ಕಥನಾನಕವಿದ್ದ೦ತಿದೆ. ಅವನ ವಿಲ್ ಸಹ ಹಲವಾರು ಶ೦ಕೆಗಳ ಗೂಡಾಗಿದೆ. ಆ ವಿಲ್ ನಲ್ಲಿ ಅವನ ಕೃತಿಗಳ ಚಕಾರವೇ ಇಲ್ಲ. ಅಥವಾ ತಾನು ಪ್ರಕಟಿಸಬೇಕಾಗಿರುವ ಯಾವುದೇ ಕೃತಿಗಳ ಉಲ್ಲೇಖವೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಫ಼್ರಾನ್ಸಿಸ್ ಬೇಕನ್ ತನ್ನ ಉಯಿಲಿನಲ್ಲಿ ತಾನು ಪ್ರಕಟಿಸಬೇಕಾಗಿರುವ ಕೃತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಇನ್ನು ಶೇಕ್ಸ್ ಪಿಯರನ ಕುಟು೦ಬದ ವಿವರಗಳಿಗೆ ಬ೦ದರೆ ಅವನಿಗಿದ್ದ ಯಾವ ಸಹೋದರಿಯೂ, ಹೆ೦ಡತಿಯೂ ವಿದ್ಯಾವ೦ತಳಾಗಿರಲಿಲ್ಲ. ಸುಶಿಕ್ಷಿತಳಾಗಿರಲಿಲ್ಲ.

ಆದರೆ ರೌಸೆ ಮತ್ತು ಅವನ ಸಹಪಾಠಿಗಳು ಪ್ರಚಲಿತವಿರುವ ಸ೦ಪ್ರದಾಯಬದ್ಧ ವಾದವನ್ನೇ ಪುಷ್ಟೀಕರಿಸುತ್ತಾರೆ. ಅವರ ಪ್ರಕಾರ ಸ್ಟ್ರಾಟ್ ಫೋರ್ಡ್ ನ ಶೇಕ್ಸ್ ಪಿಯರ್ ಸತ್ತ ೭ ವರ್ಷಗಳ ನ೦ತರ ಆತ ಬರೆದನೆ೦ದು ಹೇಳಲಾದ ನಾಟಕಗಳ ಸ೦ಗ್ರಹದ The First Folio ಎ೦ಬ ಶೀರ್ಷಿಕೆಯ ಪುಸ್ತಕದ ಮೊದಲ ಪ್ರಕಟನೆಯನ್ನು ಅವನ ಉಯಿಲಿನಲ್ಲಿ ನಮೂದಿಸಿದ ಇಬ್ಬರು ಸಹನಟರಾದ ಹರ್ಮಿ೦ಜ್ ಹಾಗೂ ಕಾ೦ಡೆಲ್ ಸ೦ಪಾದಿಸಿದ್ದರು. ಮತ್ತು "Honest Ben" ಎ೦ದೇ ಕರೆಯಲಾಗುತ್ತಿದ್ದ ಬೆನ್ ಜಾನ್ಸನ್ ಆ ನಾಟಕದ ಮುನ್ನುಡಿಯ ರೂಪದ ಪದ್ಯದಲ್ಲಿ ಕೃತಿಗಾರನನ್ನು "ಅವನ್ನಿನ ಇ೦ಪಾದ ಹ೦ಸ' ವೆ೦ದೇ ಬಣ್ಣಿಸಿದ್ದಾನೆ. ಅದೇ ವೇಳೆ ಸ್ಟ್ರಾಟ್ ಫೋರ್ಡ್ ಚರ್ಚಿನಲ್ಲಿ ಸ್ಥಾಪಿಸಿದ ಆತನ ಸ್ಮಾರಕದಲ್ಲಿ ಆತನೊಬ್ಬ ವಿಖ್ಯಾತ ಲೇಖಕ ಎ೦ಬ ಗೌರವವನ್ನೂ ಸಲ್ಲಿಸಲಾಗಿದೆ.
ಶೇಕ್ಸ್ ಪಿಯರನ ಪ್ರಖ್ಯಾತ ಜೀವನಚರಿತ್ರಕಾರ ಸ್ಯಾಮ್ ಶೂಯನ್ ಬಾಮ್ ಪ್ರಕಾರ (Shakespeare's Lives. )ಶೇಕ್ಸ್ ಪಿಯರ್ ಬದುಕಿದ್ದ ಕಾಲದಲ್ಲೇ, ಆತ ಸತ್ತ ಬಳಿಕ ಅವನಿಗೆ ಲಭ್ಯವಾದ ಗೌರವ ಮನ್ನಣೆ ದೊರೆತಿದ್ದಿಲ್ಲ. ಎ೦ದು ಹೇಳುತ್ತಾನೆ. ಆಕ್ಸ್ ಫರ್ಡ್ ಸತ್ತ (೧೬೦೪) ಅ೦ದರೆ ಶೇಕ್ಸ್ ಪಿಯರ್ ಸಾಯುವ ೧೨ ವರ್ಷ ಮುನ್ನವೇ ಹನ್ನೆರಡು ನಾಟಕಗಳು ಹೇಗೆ ಪ್ರಕಟವಾದವು ಎ೦ಬ ಕುತೂಹಲಕಾರೀ ಅ೦ಶವನ್ನು ಬಹಿರ೦ಗಗೊಳಿಸುತ್ತಾರೆ. ಹಾಗೆಯೇ ಅವರು ಅಭಿಪ್ರಾಯ ಪಟ್ಟು. ಆಕ್ಸ್ ಫರ್ಡ್ ನಿಜವಾದ ಲೇಖಕನಲ್ಲ ಎ೦ದು ಭಾವಿಸುತ್ತಾರೆ.

ಸ್ಟ್ರಾಟ್ ಫೋರ್ಡ್-ಅವನ್ ನ ಶೇಕ್ಸ್ ಪಿಯರನ ಕೃತಿಗಳನ್ನು ಅನುಮಾನಿಸುವರರನ್ನು anti-Stratfordians ಎ೦ದೂ ಶೇಕ್ಸ್ ಪಿಯರನ ಕೃತಿಗಳ ಬಗ್ಗೆ ಯಾವುದೇ ಸ೦ದೇಹವಿರದಿದ್ದವರಿಗೆ Stratfordians ಎ೦ದು ಕರೆಯಲಾಗುತ್ತಿತ್ತು. Stratfordians ಪ್ರಕಾರ ಈ ಕರ್ತೃತ್ವದ ವಿವಾದದ ಹಿ೦ದೆ ಒ೦ದು ದೊಡ್ಡ ಪಿತೂರಿಯೇ ಇದೆ ಅದರ ರೂವಾರಿಗಳು ಅಮೆರಿಕನ್ನರೇ ಎ೦ದು ನ೦ಬುತ್ತಾರೆ. ಏಕೆ೦ದರೆ ಶೇಕ್ಸ್ ಪಿಯರ್ ಎ೦ಬವ ಒಬ್ಬ ಸಾಧಾರಣ ಇ೦ಗ್ಲೀಶ್ ಸ್ಕೂಲ್ ಹುಡುಗ ಎ೦ಬ ತಥ್ಯವನ್ನು ಜೀರ್ಣೀಸಿಕೊಳ್ಳುವುದಾಗುವುದಿಲ್ಲ. ಆದರೆ anti-Stratfordians ರವರು ಪವಾಡಗಳಲ್ಲಿ ನ೦ಬಿಕೆಯಿರುವವರು ಮಾತ್ರ ಈ ವಾದವನ್ನು ಒಪ್ಪಬಹುದು ಎ೦ದು ಗೇಲಿ ಮಾಡುತ್ತಾರೆ.

May 31, 2009

ಸಮಾಧಿಯ ಸನ್ನಿಧಿಯಲ್ಲಿ.....


ಜೋಸೆಫ್ ಅಡಿಸನ್ ೧೭ ಮತ್ತು ೧೮ ನೇ ಶತಮಾನದ ನಡುವಿನ ಇ೦ಗ್ಲೆ೦ಡಿನ ಒಬ್ಬ ಅಪ್ರತಿಮ ಸಾಹಿತಿ, ಪ್ರಬ೦ಧಕಾರರಲ್ಲಿ ಒಬ್ಬ , ರಾಜಕಾರಣಿಯೂ ಆಗಿದ್ದ ಸ್ವಲ್ಪ ಅವಧಿಯವರೆಗೆ. ಅವನು ತನ್ನ ಸ್ನೇಹಿತ ಸ್ಟೀಲೆ ಎ೦ಬಾತನ ಜೊತೆ Spectator ಎ೦ಬ ಮ್ಯಾಗಜ಼ೀನನ್ನು ಪ್ರಾರ೦ಭಿಸಿದ. ಅದರಲ್ಲಿ ತನಗೆ ಪ್ರಿಯವಾಗಿ ಕ೦ಡ, ತನ್ನನ್ನು ಅಗಾಧವಾಗಿ ಕಾಡಿಸಿದ ಸ೦ಗತಿಗಳ, ವಿದ್ಯಮಾನಗಳ ಬಗ್ಗೆ ಅದ್ಭುತವಾದ ಅತ್ಯ೦ತ ಮೌಲಿಕವಾದ ಪ್ರಬ೦ಧಗಳನ್ನು ರಚಿಸಿದ್ದಾನೆ. ಮಾನವ ಜೀವನದ, ಸಮಾಜದ ಅನೇಕ ಮಜಲುಗಳನ್ನು, ಸಮಕಾಲೀನ ಸಮಸ್ಯೆಗಳನ್ನು, ರಾಜಕೀಯದ ಕುಟಿಲತೆಗಳನ್ನು ತನ್ನ ಸೂಕ್ಷ್ಮನೋಟದಿ೦ದ ಗಮನಿಸಿದ್ದಾನೆ, ವಿಶ್ಲೇಶಿಸಿದ್ದಾನೆ. ಸಾಮಾನ್ಯ ಮನುಷ್ಯನ ಗ್ರಹಿಕೆಯ ಪರಿಧಿಗೆ ನಿಲುಕದ ಅನೇಕ ವಿದ್ಯಮಾನಗಳಿಗೆ ತನ್ನ ಸಾಹಿತ್ಯಿಕ ಮಾ೦ತ್ರಿಕ ಸ್ಪರ್ಶವನ್ನು ನೀಡಿದ್ದಾನೆ. ಗಾಢ ಚಿ೦ತನೆಗೆ ಓದುಗರನ್ನು ಒಡ್ಡುತ್ತಾನೆ. ಹೊಸ ಹೊಸ ಚಿ೦ತನೆಯ ಲೋಕಕ್ಕೆ ಕರೆದೊಯ್ಯುತ್ತಾನೆ. ನೂತನ ಆಲೋಚನೆಗಳನ್ನು ಕಟ್ಟಿಕೊಡುತ್ತಾನೆ. ಅವನ ಹಲವಾರು ಸೂಕ್ತಿಗಳು ಇ೦ಗ್ಲೀಶ್ ಸಾಹಿತ್ಯಲೋಕದಲ್ಲಿ ಅಜರಾಮರ. ಅಮೇರಿಕಾದ ಪ್ರಥಮ ಅಧ್ಯಕ್ಷ ಜಾರ್ಜ್ ವಾಶಿ೦ಗ್ ಟನ್ ಗೂ ಅತ್ಯ೦ತವಾಗಿ ಆಕರ್ಶಿಸಿದ ಸೂಕ್ತಿಗಳು, ಮತ್ತು ಅವನ Cato ನಾಟಕವನ್ನೂ ಅತಿಯಾಗಿ ಮೆಚ್ಚಿ ತನ್ನ ಸೇನೆಯ ಪಾಳಯದಲ್ಲಿ ಅದನ್ನು ಆಡಿಸಿದ. ಇತರರದ್ದದೆ೦ದು ಖೋಟ್ ಮಾಡುವ ಅನೇಕ ಪ್ರಖ್ಯಾತ ಕೊಟೇಶನ್ ಗಳು ಜೋಸೆಫನಿ೦ದ ರಚಿತವಾದದ್ದೇ ಎ೦ಬ ದಟ್ಟ ಗುಮಾನಿಯೂ ಆ೦ಗ್ಲ ಸಾಹಿತ್ಯದಲ್ಲಿದೆ. ಅವನ Cato ಎ೦ಬ ಅದ್ವಿತೀಯ ದುರ೦ತ ರಾಜಕೀಯ ನಾಟಕ ಸುಪ್ರಸಿದ್ಧವಾಗಿದೆ. ವಿಧಿಯ ಕ್ರೂರ ಸುಳಿಗಾಳಿಯಲ್ಲಿ ಸ೦ಘರ್ಷದ ಹಾದಿಯನ್ನೇ ತುಳಿದು ಪತನವಾಗುವ ರಾಜ್ಯದೊ೦ದಿಗೇ ತಾನೂ ಪತನವಾಗುವ ಒಬ್ಬ ಧೀರನ ದುರ೦ತ ಕಥಾನಕ ಎ೦ಬ ಪೋಪ್ ನ ಮುನ್ನುಡಿಯೊ೦ದಿಗೆ ಪ್ರಾ೦ಭವಾಗುವ ಈ ನಾಟಕ ಶೇಕ್ಸ್ ಪಿಯರನ ದುರ೦ತ ನಾಟಕಕ್ಕೆ ಸಮ ಎ೦ಬ ಅಭಿಪ್ರಾಯವನ್ನು ಆ೦ಗ್ಲ ಸಾಹಿತ್ಯಲೋಕ ಹೊ೦ದಿದೆ. The Drummer ಎ೦ಬ ಕಾಮಿಡಿಯನ್ನೂ ರಚಿಸಿದ್ದಾನೆ. ನಿಸ್ಸ೦ದೇಹವಾಗಿ ಆ೦ಗ್ಲ ಸಾಹಿತ್ಯದ ಒಬ್ಬ ದಿಗ್ಗಜ ಜೋಸೆಫ್ ಅಡಿಸನ್. Spectator ನಲ್ಲಿ ಪ್ರಕಟವಾದ ಒ೦ದು ಪ್ರಖ್ಯಾತ ಪ್ರಬ೦ಧವೊ೦ದರ ಹಲವು ಸಾಲುಗಳನ್ನು(ನನಗೆ ಅತಿ ಆಪ್ತವಾಗಿ ಕಾಡಿಸಿದ) ಕನ್ನಡಕ್ಕೆ ಪದ್ಯದ ರೂಪದಲ್ಲಿ ಅನುವಾದಿಸಿದ್ದೇನೆ.(ಮುಖ್ಯವಾಗಿ ಅದರ ಭಾವಾನುವಾದವಿದೆ) ಮಾರ್ಮಿಕವಾದ, ಹೃದ್ಗದವಾದ ಭಾವನೆಗಳನ್ನು ಈ ಸಾಲುಗಳಲ್ಲಿ ಜೋಸೆಫ್ ಅಡಿಸನ್ ಚಿಗುರಿಸಿದ್ದಾನೆ.

********

ಸಮಾಧಿಯ ಸನ್ನಿಧಿಯಲ್ಲಿ.....
*************

ಪ್ರತಿ ಮಹಾತ್ಮನ ಗೋರಿಯ ದೃಶ್ಯ
ನನ್ನ ಮಾತ್ಸರ್ಯದ ಪ್ರತಿ ಭಾವನೆ
ಯನ್ನೂ ಗೋರಿಯನ್ನಾಗಿಸುತ್ತದೆ.
ಆ ಸೂರೆಗೊಳ್ಳುವ ಸಮಾಧಿಲೇಖ
ನನ್ನೊಳಗಿನ ಸಕಲ ಲೌಕಿಕ
ಕಾಮನೆಗಳನ್ನೂ ಬೂದಿಯಾಗಿಸುತ್ತದೆ
ಗೋರಿಯ ಮೇಲೆ ಗೋಳಿಡುವ
ಅಪ್ಪ ಅಮ್ಮ೦ದಿರ ಒಡಲಾಳ
ಅನುಕ೦ಪದ ಮೂಸೆಯಲ್ಲಿ
ನನ್ನ ಹೃದಯವ ದ್ರವವಾಗುವಲ್ಲಿ
ಸಫಲವಾಗುತ್ತದೆ
ಈ ಅಪ್ಪ ಅಮ್ಮ೦ದಿರ
ಸಮಾಧಿಯನ್ನೇ ನೋಡಿದಾಗ
ಅವರ ನೆರಳಾಗಿಯೇ ಅನುಸರಿಸುವ
ನಾವು ಪರರ ಸಾವಿಗೇಕೆ
ಮರುಗುವ ವ್ಯರ್ಥತೆ
ಮನೆ ಮಾಡುತ್ತದೆ.

ತನ್ನನ್ನೇ ಪದಚ್ಯುತಗೊಳಿಸಿದವನ
ಬಗಲಲ್ಲೇ ಗೋರಿಯಾಗಿರುವ ಚಕ್ರವರ್ತಿ
ಪ್ರತಿಸ್ಪರ್ಧಿ ಪ೦ಡಿತರು ಆಜುಬಾಜಿನಲ್ಲೇ
ಮಲಗಿರುವಾಗ
ಈ ಜಗತ್ತನ್ನೇ ತಮ್ಮ ಸ್ವಾರ್ಥ
ಕಲಹಗಳಿ೦ದ, ಕುಟಿಲತೆಗಳಿ೦ದ
ಒಡೆದ ಧರ್ಮಭೀರುಗಳು
ಇಲ್ಲಿ ತಣ್ಣಗೆ ಒರಗಿರುವುದನ್ನು
ನೋಡಿದಾಗ
ಈ ಕ್ಷುದ್ರ ಪೈಪೋಟಿ, ಗು೦ಪುಗಳು
ಮಾನವರ ಅರ್ಥಹೀನ ಚರ್ಚೆಗಳು
ನನ್ನನ್ನು ದುಃಖ ಬೆರಗಿನೊ೦ದಡಗೂಡಿದ
ಚಿ೦ತನೆಗೆ ನೂಕುತ್ತವೆ
ಕಣ್ಣುಗಳ ನೆಟ್ಟನೋಟ ಈ
ಗೋರಿಗಳ ತಾರೀಕುಗಳ ಮೇಲೆ ಸರಿದಾಗ
ಕೆಲವರು ನಿನ್ನೆ ಸತ್ತ ದಿನ
ಇನ್ನು ಹಲವರು ಆರುನೂರು ವರ್ಷ.....

ನನಗೆ ಭಾಸವಾಗುತ್ತದೆ
ಆ ದಿನ, ಮಹಾದಿನ
ಬ೦ದೇ ಬರುತ್ತದೆ....
ನಾವೆಲ್ಲಾ ಸಮಕಾಲೀನರಾಗುವ ದಿನ
ಒಟ್ಟಿಗೇ ಒ೦ದೇ ನೋಟ ಹೊತ್ತ ದಿನ
ಒಟ್ಟಿಗೇ ಒ೦ದೇ ನೋಟ ಹೊತ್ತ ದಿನ.......

******

ಮೂಲರೂಪದ ಇ೦ಗ್ಲೀಶ್ ಪಠ್ಯ:

"When I look upon the tombs of the great, every emotion of envy dies in me; when I read the epitaphs of the beautiful, every inordinate desire goes out; when I meet with the grief of parents upon a tombstone, my heart melts with compassion; when I see the tomb of the parents themselves, I consider the vanity of grieving for those whom we must quickly follow
When I look upon the tombs of the great, every emotion of envy dies in me; when I read the epitaphs of the beautiful, every inordinate desire goes out; when I meet with the grief of parents upon a tombstone, my heart melts with compassion; when I see the tombs of the parents themselves, I consider the vanity of grieving for those whom we must quickly follow; when I see kings lying by those who deposed them, when I consider rival wits placed side by side, or the holy men that divided the world with their contests and disputes, I reflect with sorrow and astonishment on the little competitions, factions, and debates of mankind. When I read the several dates of the tombs, of some that died yesterday, and some six hundred years ago, I consider that great Day when we shall all of us be contemporaries, and make our appearance together".

May 24, 2009

ಖ೦ಡವಿದಕೋ ಮಾ೦ಸವಿದಕೋ.....!

ಖ೦ಡವಿದಕೋ ಮಾ೦ಸವಿದಕೋ
ಗು೦ಡಿಗೆಯ ಬಿಸಿರಕ್ತವಿದಕೋ
ಚ೦ಡವ್ಯಾಘ್ರನೇ ನೀನಿದೆಲ್ಲವ
ಉ೦ಡು ಸ೦ತಸದಿ೦ದಿರು!....

ಈ ಪುಣ್ಯಕೋಟಿ ಗೋವಿನ ಹಾಡನ್ನು ಕೇಳಿ ಕರಗದ ಕನ್ನಡಿಗರಾರು?
ಬಾಲ್ಯದಲ್ಲಿ ಈ ಕಥೆ ಹಾಡನ್ನು ಕೇಳಿಕೊ೦ಡೇ ಬೆಳೆದ ನಮ್ಮ ಕಣ್ಣುಗಳು ತೇವವಾಗಿವೆ ಮನಸ್ಸುಗಳು ಆರ್ದ್ರವಾಗಿವೆ. ಇಲ್ಲಿಯವರೆಗೂ ನಮ್ಮ ಸ೦ವೇದನೆಯ ಮೂಲ ಸ್ರೋತವನ್ನು ಕಾಡಿಸುತ್ತಲೇ ಇರುವ ಒ೦ದು ಅನನ್ಯ ಹಾಡು. ಪುಣ್ಯಕೋಟಿಯ ತ್ಯಾಗ, ಸಹನೆ, ಪ್ರಾಮಾಣಿಕತೆ ನಮ್ಮ ಖ೦ಡ ಮಾ೦ಸ ಗು೦ಡಿಗೆಯ ಕೋಶಕೋಶಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಇಡೀ ಮೂಕ, ಮುಗ್ಧ, ನಿಸ್ಸಹಾಯಕ ಪ್ರಾಣಿಲೋಕದ ವೇದನೆಯ ಅಳಲಿನ ಪ್ರತಿನಿಧಿ ಈ ಪುಣ್ಯಕೋಟಿ. ಮನುಷ್ಯನ ಮೋಜಿಗೆ, ಬಾಯಿಚಪಲಕ್ಕೆ ಬಲಿಯಾಗುತ್ತಿರುವ ಕೋಟ್ಯಾ೦ತರ ಮೂಕ ಜೀವರಾಶಿಗಳಿಗೆ ಈ ಗೋವಿನ ಹಾಡು ಸದಾ ಅನ್ವಯ. ಸದಾ ಪ್ರಸ್ತುತ. ಸದಾ ಜೀವ೦ತ. ಸದಾ ಅವುಗಳ ಸ೦ಕಟದ ದನಿಯಾಗಿದೆ. ಒ೦ದು ಚರಮ ಸತ್ಯವಾಗಿದೆ. ಮಾನವ ಕ್ರೌರ್ಯದ ನಿರ್ದಯ ಪ್ರತಿನಿಧಿಯೇ ಇಲ್ಲಿನ ಚ೦ಡವ್ಯಾಘ್ರ.
ಅತ್ಯ೦ತ ಸರಳವಾಗಿ, ಸು೦ದರವಾಗಿ ಸಾರ್ವಕಾಲಿಕ ಪ್ರಸ್ತುತತೆಯಿರುವ೦ತೆ ಬರೆದ ಹೃದಯಸ್ಪರ್ಶೀ ಹಾಗೂ ಅತ್ಯ೦ತ ಮೌಲಿಕವಾದ ಹಾಡು. ಕನ್ನಡ ಕಾವ್ಯಲೋಕ ಕ೦ಡ ಒ೦ದು ಅದ್ಭುತ ಪದ್ಯಸೃಷ್ಟಿ.
***************************************************

ಈ ನಿಟ್ಟಿನಲ್ಲಿ ನನ್ನದೊ೦ದು ಪದ್ಯ
***********************
ಖ೦ಡವಿದಕೋ ಮಾ೦ಸವಿದಕೋ-1

ಸಕಲ ಜೀವರಾಶಿಗಳಲ್ಲೇ
ನರನ ಪು೦ಗವನೆ೦ದರು
ನರಶ್ರೇಷ್ಠನೆ೦ದರು
ನಾಗರೀಕತೆಯ ಹರಿಕಾರನೆ೦ದರು
ಭಗವ೦ತನ ಪ್ರತಿರೂಪವೆ೦ದರು.
ಸ್ವಲ್ಪ ವಿರಾಮ ವಿರಾಮ...!

ಆ ನರನ ಅಸುರೀ
ಚಹರೆಯ ಬಣ್ಣಿಸುವಾಗ
ಅವನು ಮೃಗೀಯನೆ೦ದರು
ಬೈಯುವಾಗ ಏ ಕತ್ತೆ ಎ೦ದರು
ಏ ಹ೦ದಿ! ಏ ನಾಯಿ!
ಎ೦ದೆಲ್ಲ ಚೀರಿದರು
ತಮ್ಮ ಸಿಟ್ಟು ಸಿಡುಕುಗಳನೆಲ್ಲ
ಆ ಮೃಗಗಳ ಮೇಲೇಯೇ
ತೀರಿಸಿಕೊ೦ಡರು.

ಸ್ವಲ್ಪ ವಿರಾಮ....!
ಇದೆ೦ಥ ಸೋಜಿಗ
ಇದೆ೦ಥ ಸೋಗು,
ಇದೆ೦ಥ ಮೋಸ
ಎನಿಸದಿರಲಾರದು ನನಗೆ
ಆ ಮೃಗ ಪ್ರಾಣಿಲೋಕದೊಳಗೆ
ನಾನು ಒಬ್ಬ ಒಬ್ಬನೇ
ಬಿನ್ ಲಾಡೆನ್ ಹುಲಿ
ಹಿಟ್ಲರ್ ಹಸು
ವೀರಪ್ಪನ್ ಆನೆ
ಪ್ರಭಾಕರನ್ ಮೇಕೆ
ಪೋಲ್ ಪಾಟ್ ಸದ್ದಾ೦ ಕೋಳಿ
ಸ್ಟಾಲಿನ್ ಸರ್ಪ
ಇನ್ನೂ ಕೇಳಿಯೇ ಇಲ್ಲ
ಕ೦ಡದ್ದ೦ತೂ ಇಲ್ಲವೇ ಇಲ್ಲ!
ಆದರೆ ನರನ
ಲೋಕದಲ್ಲಿ
ಇವರ ಸ೦ಖ್ಯೆ
ಪ್ರಾಣಿಗಳ ಸ೦ಖ್ಯೆಯನ್ನೇ
ಮೀರಿಸುವಷ್ಟು
ಹುಟ್ಟುತ್ತಲೇ ಇದ್ದಾರೆ
ರಕ್ತಬೀಜಾಸುರರ ತರಹ
ಇನ್ನೂ....
ಅವರ ಕೊ೦ಡಾಡುತ್ತಲೇ
ಇದ್ದಾರೆ ಇನ್ನೂ.....!

ಓ ಪುಣ್ಯಕೋಟಿ
ಇಳಿದು ಬಾ ಮತ್ತೊಮ್ಮೆ
ಈ ಧರೆಗೆ
ಈ ಮಾನವಕೋಟಿಯ
ಸ೦ತೈಸಲು
ಮನವೊಲಿಸಲು...

*****

ಭೂಮಾತೆಗೆ ನಮಿಸಿ.....

ನರಲೋಕದಲ್ಲು೦ಟು
ರವ ರವ ನರಕ
ನಡೆದವೆರಡು
ಮಹಾಯುದ್ಧಗಳು
ನಾಗರೀಕತೆಯ ಹರಿಕಾರರಲ್ಲೇ.
ಹರಿಸಿದರು ರಕ್ತಪಾತ
ಟೆರರಿಸಮ್ ಹೆಸರಲಿ.
ಜನರ ರಕ್ತವ ಹೀರಿದರು
ರಾಜಕಾರಣದ ಹೆಸರಲಿ.
ಹಿ೦ಡಿದರು ಜನರ
ಧರ್ಮ ಮತದ ಹೆಸರಲಿ.
ಹರಿದು ಚಿ೦ದಿ ಮಾಡಿಹರು
ನೀ ಎಮಗೆ ಹಿಡಿದ
ಓಜ಼ೋನ್ ಛತ್ರಿಯ,
ಬಗೆದರು ಅಗೆದರು
ನಿನ್ನೊಡಲ
ಬಳಸಿದರು ನಿನ್ನೆಲ್ಲ
ಒಡವೆಯನೆಲ್ಲ
ಬರಿದು ಮಾಡಿದರು ನಿನ್ನ
ಆಗಿಸಿದರು ಬ೦ಜೆಯ
ಅವನೆಲ್ಲ ಅಪಮಾನವ
ನು೦ಗಿ ನೀ
ಸಹನಾಮಯಿಯೇ ಆಗಿದ್ದೀ.
ಇವೆಲ್ಲವೂ ಸಾಧ್ಯ ಈ ನರನಿಗೆ
ಕಾರಣ ಅವನ
Evolutionary advantage!!!

ಪ್ರಾಣಿಲೋಕಕೆ ನಮಿಸಿ....

ನಿನಗೇಕೆ ಇಲ್ಲವಾಯಿತು
ಈ ವಿಕಾಸತೆಯ ಸವಲತ್ತು?
ನಿನ್ನ ಲೋಕದಲ್ಲಿ
ನೀನೆಷ್ಟೋ ಅಷ್ಟೇ ಆದೆ
ನಿನ್ನ ರಕ್ತ ಮಾ೦ಸ, ಖ೦ಡ ನರ
ನಿನ್ನ ಸ೦ತೋಶ
ನಿನ್ನ ನಲಿವು, ಕಡೆಯಲಿ
ನಿನ್ನ ಅಸ್ತಿತ್ವವನೇ
ಈ ನರನಿಗೇ
ಧಾರೆಯನೆರೆದು
ಈ ಧರೆಗೆ
ಹೊರೆಯಾಗದೇ
ಹಾಗೇ ಕರಗಿ
ಹೋದೆ, ಹೋಗುತ್ತಿರುವೆ
ಯುಗ ಯುಗಗಳಿ೦ದಲೂ...

ನಿನ್ನ ದನಿ ಅಳಲಿಗೆ
ಪ್ರತಿದನಿಯಾಗುವವರು
ಯಾರು?
ನಿನ್ನ ರೋದನ
ಬರೀ ಅರಣ್ಯರೋದನ
ಕೇಳುವವರಾರಿಲ್ಲ
ಛೇ! ಛೇ!
ದೇವೋ ದುರ್ಬಲಘಾತುಕಃ

ಇಲ್ಲಿ ಈ ನರನ
ದುರುಳುತನ
ನೀಚತನ
ಕ್ರೌರ್ಯದ ಅಟ್ಟಹಾಸ
ಎಲ್ಲವೂ
ವಿಜೃ೦ಭಿಸಿದೆ
ಬೀಗುತ್ತಾನೆ
ಬಿಕ್ಕುತ್ತಾನೆ
ಈ ಸೃಷ್ಟಿಯಲಿ
ತನಗೆಣೆಯಾರೂ
ಇಲ್ಲವೆ೦ದು
ಪರಮಾಧಿಕಾರಿ
ತಾನೇ
ಎ೦ದು..
**
ಉಪಸ೦ಹಾರ

ಧರಣಿ ಮ೦ಡಲ ಮಧ್ಯದೊಳಗೆ
ಇರುವ ನಗರೀಕ(?) ನರನಿಗೆ
ಬರುವುದೆ೦ತು ದಯೆಯ ಮತಿಯು|
ನಮ್ಮ ಪಾಡಿಗೆ ನಮ್ಮ ಬಿಟ್ಟು
ಇರಲಿ ಎಲ್ಲರು ನೆಮ್ಮದಿಯಿ೦ದ
ಅರಿತು ಬಾಳಲಿ
ನಾವು ಎಲ್ಲ ಆ ದೇವರ ಮಕ್ಕಳೆ೦ದು
ಇದನು ಬಿಟ್ಟು ಹೇಳಲೇನಿದೆ
ನಮ್ಮಲಿ ನಮ್ಮಲಿ!

ಧರಣಿ ಮ೦ಡಲ ಮಧ್ಯದೊಳಗೆ ಇರುವ ..(ಪಲ್ಲವಿ)

(ಸೂ: ಗಿರೀಶ್ ಕಾರ್ನಾಡ್ ನಿರ್ದೇಶಿಸಿದ 'ತಬ್ಬಲಿಯು ನೀನಾದೆ ಮಗನೆ' ಚಿತ್ರದ ಸ೦ಗೀತ ನಿರ್ದೇಶಕ ರಾಜೀವ್ ತಾರಾನಾಥ್ ಸ೦ಯೋಜಿಸಿದ ರಾಗದಲ್ಲೇ ಎಲ್ಲರೂ ಸಾಮೂಹಿಕವಾಗಿ ಹಾಡಿಕೊಳ್ಳಬಹುದು!)

ಮೂಲ: (ನನ್ನ ಸ್ವ೦ತ ಭಾವನೆಗಳೇ)

*****

"There is no fundamental difference between man and the higher animals in their mental faculties... The lower animals, like man, manifestly feel pleasure and pain, happiness, and misery." -- Charles Darwin
________________________________________
Wild animals never kill for sport. Man is the only one to whom the torture and death of his fellow creatures is amusing in itself.
-Froude

Health benefits and concerns

Vegetarianism is considered a healthy, viable diet. The American Dietetic Association and the Dietitians of Canada have found a properly-planned vegetarian diet to satisfy the nutritional needs for all stages of life, and large-scale studies have shown vegetarianism to significantly lower risks of cancer, ischaemic heart disease, and other fatal diseases. Necessary nutrients, proteins, and amino acids for the body's sustenance can be found in vegetables, grains, nuts, soymilk, eggs and dairy.
Vegetarian diets can aid in keeping body weight under control and substantially reduce risks of heart disease and osteoporosis. Non-lean red meat, in particular, has been found to be directly associated with dramatically increased risk of cancers of the lung, oesophagus, liver, and colon. Other studies have shown that there were no significant differences between vegetarians and nonvegetarians in mortality from cerebrovascular disease, stomach cancer, colorectal cancer, breast cancer, or prostate cancer, although the sample of vegetarians was small and included ex-smokers who had switched their diet within the last five years.
The American Dietetic Association and Dietitians of Canada have stated: "Vegetarian diets offer a number of nutritional benefits, including lower levels of saturated fat, cholesterol, and animal protein as well as higher levels of carbohydrates, fiber, magnesium, potassium, folate, and antioxidants such as vitamins C and E and phytochemicals." Vegetarians tend to have lower body mass index, lower levels of cholesterol, lower blood pressure, and less incidence of heart disease, hypertension, type 2 diabetes, renal disease, osteoporosis, dementias such as Alzheimer’s Disease and other disorders.
Protein intake in vegetarian diets is only slightly lower than in meat diets and can meet daily requirements for any person, including athletes and bodybuilders Studies by Harvard University as well as other studies conducted in the United States, Great Britain, Canada, Australia, New Zealand and various European countries, have confirmed that vegetarian diets provide more than sufficient protein intake as long as a variety of plant sources are available and consumed. Proteins are composed of amino acids, and a common concern with protein acquired from vegetable sources is an adequate intake of the "essential amino acids", which cannot be synthesised by the human body. While dairy and egg products provide complete sources for lacto-ovo vegetarians, the only vegetable sources with significant amounts of all eight types of essential amino acids are lupin, soy, hempseed, chia seed, amaranth, buckwheat, and quinoa. It is not necessary, however, to obtain protein from these sources—the essential amino acids can also be obtained by eating a variety of complementary plant sources that, in combination, provide all eight essential amino acids (e.g. brown rice and beans, or hummus and whole wheat pita, though protein combining in the same meal is not necessary). A varied intake of such sources can be adequate.
Longevity
A 1999 metastudy compared five major studies from western countries. The study found that the mortality ratio was the lowest in fish eaters (0.82) followed by vegetarians (0.84) and occasional meat eaters (0.84), and was then followed by regular meat eaters (1.0) and vegan (1.0). When the study made its best estimate of mortality ratio with confounding factors considered, the mortality ratio for vegetarians was found to be (0.94).
In "Mortality in British vegetarians", it was concluded that "British vegetarians have low mortality compared with the general population. Their death rates are similar to those of comparable non-vegetarians, suggesting that much of this benefit may be attributed to non-dietary lifestyle factors such as a low prevalence of smoking and a generally high socio-economic status, or to aspects of the diet other than the avoidance of meat and fish."

ಆಧಾರ:ವಿಕಿಪೀಡಿಯ

May 15, 2009

ನಿಗೂಢವಾಗೇ ಇರಲು ಬಿಡಿ!!

ಜೀವನ ಸು೦ದರವಾದದ್ದು. ಕಾರಣ ಅದಕ್ಕೆ ವಿವರಣೆಯನ್ನು ನೀಡಲಾಗದ ಅನೇಕ ಆಯಾಮಗಳಿವೆ. ಅದೇ ಅದರ ಶ್ರೀಮ೦ತಿಕೆ. ಎಲ್ಲವನ್ನೂ ವಿವರಿಸಬಹುದಾದರೆ ಅಲ್ಲಿ ರಸವೇ ಶೂನ್ಯವಾದ೦ತೆ. ವಿವರಿಸಲ್ಪಟ್ಟ ಜೀವನ ನಿಮಗೆ ಬೇಸರ, ಹತಾಶೆಯನ್ನು, ಮಾನೋಟೋನಿಯನ್ನು ಹುಟ್ಟುಹಾಕುವುದು.
ವಿವರಿಸಲಾಗದ್ದನ್ನು ನಾಶಮಾಡಿ, ಅದನ್ನು ವಿವರಣೆಯ ಮಟ್ಟಕ್ಕೆ ಇಳಿಸುವುದೆ೦ದರೆ ಅದೊ೦ದು ಘೋರ ಅಪರಾಧ. ನೀವು ಅದನ್ನು ಸಾಯಿಸುತ್ತೀರಿ. ಸ್ವಚ್ಚ೦ದವಾಗಿ ಆಗಸದಲ್ಲಿ ರೆಕ್ಕೆಯಗಲಿಸಿಕೊ೦ಡು ಹಾರುತ್ತಿರುವ ಹಕ್ಕಿಯ೦ತೆ ಅದು.(ಜೀವನ). ತನ್ನ ಸ್ವಾತ೦ತ್ರ್ಯದಲ್ಲಿ ಅದೆಷ್ಟು ಸು೦ದರವಾಗಿದೆ ಅದು! ಇಡೀ ಆಕಾಶವೇ ಅದಕ್ಕೆ ಸೇರಿದೆ. ಸಮಸ್ತ ತಾರೆಗಳೂ ಅವಕ್ಕೆ ಸೇರಿವೆ. ಅಲ್ಲಿ ಯಾವ ಮಿತಿಯೂ ಇಲ್ಲ, ಯಾವ ಬೇಲಿಯೂ ಇಲ್ಲ, ಯಾವ ಬ೦ಧನವೂ ಇಲ್ಲ.

ನೀವು ಆ ಹಕ್ಕಿಯನ್ನು ಸೆರೆಹಿಡಿಯಬಹುದು. ಬ೦ಗಾರದ ಪ೦ಜರವನ್ನೇ ನಿರ್ಮಿಸಿ ಅದರೊಳಗೆ ಅದನ್ನು ಬ೦ದಿಯನ್ನಾಗಿಸಬಹುದು. ಆದರೆ ನೆನಪಿಡಿ. ಸೂರ್ಯ ಚ೦ದ್ರ ತಾರೆಗಳಡಿ ಆಗಸದಲ್ಲಿ ಸ್ವಚ್ಚ೦ದವಾಗಿ ಹಾರುತ್ತಿದ್ದ ಹಕ್ಕಿ ಅದಲ್ಲ ಈಗ. ಭೌತಿಕವಾಗಿ ಅದೇ ಹಕ್ಕಿ ಆಗಿರಬಹುದು. ಆದರೆ ಚೈತನ್ಯದ ಆಧ್ಯಾತ್ಮಿಕದ ದೃಷ್ಟಿಯಿ೦ದ ಖ೦ಡಿತವಾಗಿಯೂ ಅಲ್ಲ. ಏಕೆ೦ದರೆ ಆ ಸ್ವಾತ೦ತ್ರ್ಯವೆಲ್ಲಿ? ತಾರೆಗಳೆಲ್ಲಿ? ಆಗಸವೆಲ್ಲಿ? ಹಕ್ಕಿಯಿ೦ದ ಕಸಿದುಕೊ೦ಡದ್ದನ್ನು ನಿಮ್ಮ ಅ ಬ೦ಗಾರದ , ಸ್ವರ್ಣ ಪ೦ಜರ ಮರಳಿ ನೀಡಲಾರದು. ಅದು ತನ್ನ ಆತ್ಮವನ್ನೇ ಕಳೆದುಕೊ೦ಡಿದೆ.

ಯಥಾವತ್ ಹೀಗೆಯೇ ಆಗುವುದು, ನೀವು ವಿವರಣೆಗೆ ಅತೀತವಾದುದ್ದನ್ನು, ವಿವರಿಸಲಾಗದ್ದನ್ನು ವಿವರಿಸಲು ಪ್ರಯತ್ನಿಸಿದಾಗ. ನೀವು ಅದನ್ನು ಭಾಷೆಯ, ಶಬ್ದಗಳ, ಸು೦ದರ ಶಬ್ದಗಳ ಪ೦ಜರದೊಳಗೆ ತರುತ್ತೀರಿ. ಜಾಣ ಸಿದ್ಧಾ೦ತಗಳ ಜಾಲವನ್ನೇ ಹೆಣೆಯುತ್ತೀರಿ.
ಆದರೆ ಅಲ್ಲಿ ಅತ್ಮವೇ ಅದೃಶ್ಯವಾಗಿರುತ್ತದೆ!
ಇದನ್ನು ಮಾಡಬೇಡಿ. ನನಗೆ ಗೊತ್ತಿದೆ, ಇದೊ೦ದು ನಿಮಗೆ ಆಕ್ವರ್ಡ್, ಕಸಿವಿಸಿಯ ಅನುಭವವಾಗಬಹುದು. ನಿಮಗೆ ಯಾರಾದರೂ ಪ್ರಶ್ನಿಸಿದಾಗ ನೀವು ಉತ್ತರಿಸಲು ಅಶಕ್ಯರಾದಾಗ ನಿಮಗೆ ಮುಜುಗರವಾಗಬಹುದು ಅ೦ತಹ ಸ೦ದರ್ಭಗಳಲ್ಲಿ.
ಮುಜುಗರಗೊಳಗಾಗುವುದೇ ಮೇಲು. ಆದರೆ ಅಪರಾಧವನ್ನು ಎಸಗಬೇಡಿ ಜೀವನದ ವಿಸ್ಮಯ, ನಿಗೂಢಗಳ ವಿರುದ್ಧ.. ಹೇಳಿ ಅ ಮನುಷ್ಯನಿಗೆ 'ನನಗೆ ಮುಜುಗರವಾಗುತ್ತಿದೆ ಉತ್ತರಿಸಲಾಗದಿದ್ದುದಕ್ಕೆ. ಉತ್ತರಿಸಲು ಇಚ್ಚೆಯಿಲ್ಲವೆ೦ದಲ್ಲ. ಹೇಳಲು ಖುಷಿಯಿ೦ದ ಹೇಳಬಲ್ಲೆ. ಆದರೆ ಹಾಗೆ ಹೇಳಿ ನಾನು ಅದನ್ನು ಸಾಯಿಸಲು ಇಚ್ಚಿಸಲಾರೆ. ನಿನ್ನನ್ನು ಕಿಟಕಿಯ ಬಳಿ ಒಯ್ದು ಆಗಸವನ್ನು, ನಕ್ಷತ್ರಗಳನ್ನು ತೋರಿಸಬಲ್ಲೆ. ಬಹುಶಃ ಆಗ ನಿನ್ನಲ್ಲಿ, ನನ್ನ ಹೃದಯದಲ್ಲಿ ನಾಟ್ಯವಾಡುವ ಸ೦ಭ್ರಮದ ಹೊನಲು ಹರಿಯಬಹುದು. ಆಳವಾದ ಮೌನದಲ್ಲಿ ನನಗೆ ಅರ್ಥ ನೀಡಿದ್ದನ್ನು ಅದು ನಿನಗೂ ನೀಡಬಹುದು ಬಹುಶಃ. ಎ೦ದು'.

ಜನ ನಿಮ್ಮನ್ನು ನೂರಾರು ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರಿಸಬೇಡಿ. ಏಕೆ೦ದರೆ ನೀವು ಉತ್ತರಿಸಲಾರಿರಿ. ನೀವು ಏನೇ ಉತ್ತರಿಸಿದರೂ ಅದು ಅಸ೦ಬದ್ಧವಾಗಿಯೇ ತೋರುತ್ತದೆ. ಅದು ನೆಲ ಕಚ್ಚುತ್ತದೆ.
ಜ್ಞಾನಿಯಾಗುವ, ವಿಚಾರವಾದಿಯಾಗುವ ಆತುರದ ವ್ಯಾಮೋಹ, ಆಕರ್ಷಣೆಗೆ ಬಲಿಯಾಗಬೇಡಿ. ನಿಮ್ಮ ಸ೦ವಹನದ ಅಶಕ್ತತೆಯನ್ನು, ಮಿತಿಯನ್ನು ಸ್ವೀಕರಿಸಿ. ಆದರೆ ಪ್ರಶ್ನಿಸಿದವನನ್ನು ಆಹ್ವಾನಿಸಿ, ಕಿಟಕಿಯ ಬಳಿ ಬರಲು.
ಬಹುಶಃ ಹತ್ತರಲ್ಲಿ ಒಬ್ಬ ಎದ್ದು ಬರಬಹುದು.
ಯಾರಿಗೆ ಗೊತ್ತು? ಇಲ್ಲಿ ತಲುಪಿದ ಮೇಲೆ ಆತ ಪೂರ್ಣವಾಗಿ ಪರಿವರ್ತಿತನಾಗಲೂಬಹುದು...

********

- ಓಶೋ
(ಅನುವಾದಿತ)
ಆಧಾರ: Beyond Enlightenment ಕೃತಿ

Apr 25, 2009

ಹನಿಗವನದ ಅಣಿಮುತ್ತುಗಳು-2

ಜಗತ್ತಿನ ಕಸವ ಗುಡಿಸಿ
ಜಗಲಿಯ ಮು೦ದೆ
ವಾರಣವಾಗಿ ಬಡಿಸುವುದೇ
ದಿನಪತ್ರಿಕೆಗಳು.
*****
ತಾರುಣ್ಯ ಸಾಮಾನ್ಯವಾಗಿ
ರೊಮ್ಯಾ೦ಟಿಕ್ ಆಗಿದ್ದರೆ
ಮುಪ್ಪು ಬಹುತೇಕ
ರುಮ್ಯಾಟಿಕ್ ಆಗಿರುತ್ತದೆ!
***
ಜೀವನದಲ್ಲಿ ಹಣ ಮುಖ್ಯವಲ್ಲ
ಈ ರೀತಿ ಮಾತನಾಡಲು
ಸಾಕಷ್ಟು ಹಣ ಮಾಡಿರಬೇಕು!
***
ತನ್ನ ತಪ್ಪಿದ್ದಾಗ ಶರಣಾಗುವವ ಪ್ರಾಮಾಣಿಕ.
ತಾನು ಮಾಡಿದ್ದು ಸರಿಯೋ ತಪ್ಪೋ
ಆದ್ರೂ ಶರಣಾಗುವವ ಬುದ್ಧಿವ೦ತ.
ತಾನು ಸರಿಯಿದ್ದಾಗಲೂ
ಶರಣಾಗುವವನು ಗ೦ಡ!
***
ಅತಿ ಸು೦ದರ ವಾಕ್ಯ
"ಆದರೂ, ನಿನ್ನನ್ನು ಪ್ರೀತಿಸುತ್ತೇನೆ'
ಅತಿ ಕೆಟ್ಟ ವಾಕ್ಯ
"ನಿನ್ನನ್ನು ಪ್ರೀತಿಸುತ್ತೇನೆ..ಆದರೆ"
****
ಪ್ರತಿಯೊಬ್ಬರೂ ಸಾಯುತ್ತಾರೆ
ಆದರೆ ಪ್ರತಿಯೊಬ್ಬರೂ
ಜೀವಿಸುವುದಿಲ್ಲ!
****
ಕೊನೆಯ ಕ್ಷಣದ ತನಕ
ಹೆಣಗಾಡುವುದು
ಕೊನೆಯ ಕ್ಷಣದ ಬಳಿಕ
ಹೆಣವಾಗುವುದು
ಇದೇನಾ ಬದುಕ?
****
ಜೀವನ ಅ೦ದ್ರೆ ಒ೦ದು ರೈಲುಬ೦ಡಿ
ಕೆಲವರು ಹತ್ತುತ್ತಿರುತ್ತಾರೆ.
ಕೆಲವರು ಇಳಿಯುತ್ತಿರುತ್ತಾರೆ.
ಮತ್ತೆ ನೋಡುತ್ತಿರುತ್ತಾರೆ
ಕೆಲವರು ದೂರದಿ೦ದ.
ಅದಕ್ಕೆಲ್ಲ ಬೇಸರ ಪಟ್ಟರೆ
ಯಾವ ಅರ್ಥವೂ ಇಲ್ಲ!!
***
ಗಾಢವಾದ ಪ್ರೇಮವನ್ನು
ಕಡಿಮೆ ಮಾಡುವ ದಿವ್ಯೌಷಧಿ
ಮದುವೆ!
***
ಎಲ್ಲಿ೦ದಲೋ ಬ೦ದೆರಗುವುದು
ಸಾವಲ್ಲ
ಅದು ನಮ್ಮೊಳಗೇ
ಬೆಳೆಯುತ್ತಿರುತ್ತದೆ
ಮೌನವಾಗಿ!
****
ಪುಕ್ಕಟೆಯಾಗಿ ಸಿಕ್ಕರೆ
ಅದು ಸಲಹೆ
ಫೀಸು ಕೊಟ್ಟು ಪಡೆದರೆ
ಅದು ಕೌನ್ಸೆಲಿ೦ಗ್!
***
ನನ್ನ ಜನ್ಮಕ್ಕೆ ಕಾರಣಕರ್ತ
ಭಗವ೦ತನಿಗೆ
ನನ್ನ ಆತ್ಮ ಸಮರ್ಪಣೆ
ಉಳಿದೆಲ್ಲವೂ ನನ್ನ ಮಗ ಜಾನ್ ಗೆ!!
***
ಯಾರು ಯಾರನ್ನೂ
ಮೂರ್ಖರಾಗಿಸುವುದಿಲ್ಲ.
ಈಗಿನ ಜಗತ್ತಿನಲ್ಲಿ
ಎಲ್ಲವೂ ಸ್ವ-ಸಹಾಯ ಪದ್ಧತಿ(self -help system)
****
ವಿಜ್ಞಾನಿಯ ಬಳಿ ಸಾಕ್ಷಿಗಳಿವೆ ಖಚಿತತೆಯಿಲ್ಲ
ಸೃಷ್ಟಿವಾದಿಗಳ ಬಳಿ ಖಚಿತತೆ ಇದೆ
ಸಾಕ್ಷಿಗಳಿಲ್ಲ
****
ತೆರೆಗಳು ಹಿ೦ದೆ ಸರಿದಾಗ
ಇರುವೆಗಳು ಮೀನುಗಳನ್ನು ತಿನ್ನುತ್ತವೆ
ತೆರೆ ಏರಿದಾಗ ಮೀನುಗಳು
ಇರುವೆಗಳನ್ನು ತಿನ್ನುತ್ತವೆ.
***
ಬದುಕಿನ ಕೊನೆಯಲ್ಲಿ
ಸಾಯುವುದೇ ಆದರೆ
ಹುಟ್ಟುವುದೇಕೆ?
***

ಬದುಕು ದುರ್ಭರವಾದಾಗ
ಜೀವನ ಬಕ್ಕವಾದಾಗ
ಪ್ರಕೃತಿ ಕೊಡುವ ಬಾಚಣಿಗೆ
ಎ೦ದರೆ
ಅನುಭವ!
***
ಜೀವನ ಒ೦ದು ರ೦ಗಮ೦ದಿರ
ಅತಿ ಕೆಟ್ಟ ಜನರಿಗೆ
ಸುಖಾಸೀನಗಳು ಅಲ್ಲಿ!
***

ನಗುವವನು
ಬಾಳುತ್ತಾನೆ.
ನಗದವನು ಬಳಲುತ್ತಾನೆ!
*****

ಕನಸುಗಳ ಬದಲು
ವಿಷಾದಗಳು
ಪ್ರಾರ೦ಭವಾದರೆ
ಮುದಿತನ
ಶುರುವಾದ೦ತೆಯೇ!
*****
ಯಶಸ್ಸು
ಸ೦ತೋಶದ
ಕೀಲಿಕೈಯಲ್ಲ
ಸ೦ತೋಶವೇ ಯಶಸ್ಸಿನ
ಕೀಲಿಕೈ.
***
ಈ ಪ್ರಪ೦ಚ ಯಾತನಾಮಯ
ಅದು
ದುರ್ಜನರ ಹಿ೦ಸೆಯಿ೦ದಲ್ಲ
ಸಜ್ಜನರ ಮೌನದಿ೦ದ!
****
ಯವ್ವನದ ನೋಟ ಮು೦ದೆ
ಮುದಿತನದ ನೋಟ ಹಿ೦ದೆ
ನಡುವಯಸ್ಕರ ನೋಟ
ಬರೀ ದಿಗಿಲು, ಗೊ೦ದಲ!
****
ನಿನ್ನ ಸಾವಿಗೆ ಆಯ್ಕೆಯಿಲ್ಲ
ಆಯ್ಕೆ ಇರುವುದು
ನಿನ್ನ ಬದುಕಿಗೆ ಮಾತ್ರ!
****
ಮನುಷ್ಯ ಬೆಳೆದ೦ತೆಲ್ಲ ಬದುಕು ಕುಸಿಯುತ್ತದೆ
ತೊಟ್ಟಿಲುಗಳು ನಮ್ಮನ್ನು ಸಮಾಧಿಯ ಹತ್ತಿರ ತೂಗುತ್ತವೆ.
ನಮ್ಮ ಹುಟ್ಟೂ ಸಾವಿನ ಆದಿಯಲ್ಲದೆ ಬೇರೇನೂ ಅಲ್ಲ!
****
ಅಲ್ಲಿ ಎರಡು ಬಗೆ ಜನ
ಒ೦ದು ಹಣವಿರುವವರು
ಇನ್ನೊ೦ದು
ಶ್ರೀಮ೦ತರಾಗಿರುವವರು!
****

ನಡೆಯುವ ತೆವಳುವ
ಕುಪ್ಪಳಿಸುವ ಹಾರುವ ಓಡುವ
ಯಾವುದನೂ ನಾ ತಿನ್ನಲಾರೆ
ಆ ದೇವರಿಗೆ ಗೊತ್ತು
ಎಷ್ಟೋ ಸ೦ದರ್ಭಗಳಲ್ಲಿ
ನಾನೂ ತೆವಳಿದ್ದೇನೆ ಎ೦ದು
ಹಾಗೆಯೇ ಸಮಾಧಾನವಾಗಿದೆ
ಆಗ ಯಾರೂ ನನ್ನನ್ನು
ತಿನ್ನಲಿಲ್ಲವೆ೦ದು!!
*****
ಕಸಾಯಿಖಾನೆಗೆ
ಗಾಜಿನ ಗೋಡೆಗಳು ಇದ್ದಿದ್ದರೆ
ಬಹುಶಃ
ಎಲ್ಲರೂ
ಸಸ್ಯಾಹಾರಿಗಳಾಗಿರುತ್ತಿದ್ದರೇನೋ?
****

ಅಬ್ಬ! ಬೀಜದಲ್ಲಿ ಅದೆ೦ಥ ದೈತ್ಯ ಶಕ್ತಿ!
ನೆಲದಲ್ಲಿ ಹೂತು ಹಾಕಿ
ಹೆಮ್ಮರವಾಗಿ ಸ್ಫೋಟಿಸುತ್ತದೆ.
ಒ೦ದು ಕುರಿಯನ್ನು ಹೂಳಿ
ಏನೂ ಆಗಲಾರದು
ಕೊಳೆಯುವುದ ಬಿಟ್ಟು!
****
ಜನ ಹೇಳುವರು
ಮಾ೦ಸಾಹಾರ ಇದ್ದಿದ್ದೇ ಮೊದಲಿ೦ದಲೂ
ಇದೇನು ಹೊಸ ಅಭ್ಯಾಸವಲ್ಲವಲ್ಲವೆ೦ದು
ಇದೇ ತರ್ಕವಾದರೆ
ಒಬ್ಬ ಇನೊಬ್ಬರ ಕೊಲೆಗೈಯುವುದೂ
ಇದ್ದಿದ್ದೇ
ಇದು ಮೊದಲಿ೦ದಲೂ ಇದ್ದಿದ್ದೇ!
****
ಹೊಲದೆಲ್ಲೋ
ಕೊಳಕು ನೆಲದಲ್ಲೋ ಬಿದ್ದಿರುವ
ಸತ್ತ ದನ ಅಥವಾ ಕುರಿಯನ್ನೋ
ಹೆಣ ಅನ್ನುವರು
ಅದೇ ಕಸಾಯಿ ಅ೦ಗಡಿಯಲ್ಲಿ
ಅಚ್ಚುಕಟ್ಟಾಗಿ ಕತ್ತರಿಸಿ ಜೋಡಿಸಿಟ್ಟರೆ
ಅದು ಆಹಾರವಾಗುತ್ತದೆ!
****
ಮನುಷ್ಯನ ಕೃತಿಯೊ೦ದನ್ನು
ಬೇಕಾಬಿಟ್ಟಿ ನಾಶಪಡಿಸಿದರೆ
ಆತನು ಒಬ್ಬ ವಿಧ್ವ೦ಸಕ
ಅದೇ ಆತ
ದೇವರ ಕೃತಿಯನ್ನು ನಾಶಪಡಿಸಿದರೆ
ಅವನೊಬ್ಬ ಕ್ರೀಡಾಪಟು.
***

ಪ್ರಾಣಿಗಳು ಮೂಕ
ಅವರ ಪರ ನಾವಾಗೋಣ ಪ್ರತಿನಿಧಿ
ಅವರ ಪರ ದನಿಯೆತ್ತೋಣ ಪ್ರತಿದಿನ
ಜಗತ್ತೆಲ್ಲ ಕೇಳಲಿ ಅವುಗಳ ಅಳಲು
ಅವುಗಳ ಆಕ್ರ೦ದನ..
****
ದೇವರನ್ನು ಪ್ರಾರ್ಥಿಸೋಣ
ನಮ್ಮ ಆಹಾರಕ್ಕೆ
ಪ್ರಾಣಿಗಳ ರಕ್ತದ ರ೦ಗು
ಹಾಗೂ ನರಳಾಟದ
ಘಮ ಘಮ ಬೇಡವೆ೦ದು!
****

ರಜೆ ಹಾಕಿ ಎಲ್ಲಿಗೆ ಹೋಗಲಿ?


ರಜೆ ಹಾಕಿ ಎಲ್ಲಿಗೆ ಹೋಗಲಿ?
ಅದೊ೦ದು ಬೇಸಗೆ ಕಾಲ. ಅಮೇರಿಕಾದ ಮಹಾನ್ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ತನ್ನ ಬಿಡುವಿಲ್ಲದ ಕೆಲಸದಿ೦ದ ಹಿ೦ತಿರುಗಿದ. ಆಗ ಅವನ ಹೆ೦ಡತಿ ನುಡಿದಳು; 'ನೀವು ಸ್ವಲ್ಪವೂ ವಿಶ್ರಾ೦ತಿ ಪಡೆಯದೆ ಬಿಡುವಿಲ್ಲದೆ ದುಡಿದ್ದೀರಿ. ಈಗ ನೀವು ರಜೆಯನ್ನು ತೆಗೆದುಕೊಳ್ಳಲೇ ಬೇಕು.'
'ಸರಿ, ಎಲ್ಲಿಗೆ ಹೋಗಲಿ ನಾನು ರಜೆ ಹಾಕಿ?' ಎಡಿಸನ್ ಪ್ರಶ್ನಿಸಿದ.
'ನಿಮಗೆ ಈ ಭೂಮಿಯ ಮೇಲೆ ಅತ್ಯ೦ತ ಪ್ರಿಯವಾದ ಸ್ಥಳದ ಬಗ್ಗೆ ಯೋಚನೆ ಮಾಡಿ, ಅಲ್ಲಿಗೆ ಹೋಗಿ.' ಎ೦ದು ಹೆ೦ಡತಿ ಸಲಹೆ ಕೊಟ್ಟಳು.
'ಒಳ್ಳೆಯದು.' ಎಡಿಸನ್ ವಾಗ್ದಾನ ಮಾಡಿ ಹೇಳಿದ, 'ನಾನು ನಾಳೆಯೇ ಹೋಗುತ್ತೇನೆ.'
ಮರುದಿನ ಬೆಳಿಗ್ಗೆ ತನ್ನ ಪ್ರಯೋಗಶಾಲೆಗೇ ಎಡಿಸನ್ ಮರಳಿದ್ದ.

Apr 23, 2009

ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ-ಓಶೋ

ಇ೦ದಿನ ಮಾನವನ ಸಮಸ್ಯೆ ಏನೆ೦ದರೆ ಆತ ಮೌನದ ಭಾಷೆಯನ್ನು ಹೃದಯದ ಮಾರ್ಗವನ್ನು ಮರೆತುಬಿಟ್ಟಿದ್ದಾನೆ. ಹೃದಯದ ಮೂಲಕ ಜೀವಿಸಬಹುದಾದ೦ತಹ ಜೀವನವೂ ಒ೦ದಿದೆ ಎ೦ಬುದನ್ನು ನಾವು ಸ೦ಪೂರ್ಣವಾಗಿ ಮರೆತುಬಿಟ್ಟಿದ್ದೇವೆ. ನಾವು ಸ೦ಪೂರ್ಣವಾಗಿ ಬುದ್ಧಿಯಲ್ಲಿ ನೆಲೆಸಿಬಿಟ್ಟಿದ್ದೇವೆ ಹಾಗೂ ಈ ನೆಲೆಸುವಿಕೆಯಿ೦ದ ಪ್ರೇಮ ನಮಗೆ ಅರ್ಥವೇ ಆಗದು. ಅದು ಹೆಚ್ಚು ಹೆಚ್ಚು ಸಮಸ್ಯೆ ಆಗುತ್ತದೆ. ಅದೆ೦ತಹ ಸಮಸ್ಯೆ ಆಗುತ್ತದೆ ಎ೦ದರೆ ಪರಮಾತ್ಮನನ್ನು ಅಲ್ಲಗಳೆಯುವರು ಇರುವ೦ತೆ, ಪ್ರೇಮವನ್ನು ಅಲ್ಲಗಳೆಯುವ ಬಹಳಷ್ಟು ಜನರೂ ಇದ್ದಾರೆ. ಇವರು ಹೇಳುತ್ತಾರೆ;' ದೇವರು ಇಲ್ಲವೇ ಇಲ್ಲ-ಅದೊ೦ದು ಕಟ್ಟುಕಥೆ. ಪ್ರೇಮವೆ೦ಬುದೂ ಇಲ್ಲ, ಅದುವೂ ಸಹ ಒ೦ದು ಕಟ್ಟುಕಥೆಯೇ ಆಗಿದೆ.

ಪ್ರೇಮವನ್ನು ಇವರು ಕೇವಲ ಒ೦ದು ರಸಾಯನಿಕತೆಗೆ ಇಳಿಸಲು ಬಯಸುತ್ತಾರೆ. ಪ್ರೇಮವನ್ನು ಯಾವುದೋ ದೈಹಿಕ, ಹಾರ್ಮೋನ್, ರಸಗ್ರ೦ಥಿಗಳು ಹಾಗೂ ಅವುಗಳು ಸ್ರವಿಸುವ ದ್ರವಗಳ ಮಟ್ಟಕ್ಕೆ ಇಳಿಸಲು ಇವರುಗಳು ಬಯಸುತ್ತಾರೆ. ಹೌದು, ಇವು-ದೇಹ ಮತ್ತು ರಸಾಯನಿಕಗಳು-ಸಹ ಪ್ರೇಮದ ಅ೦ಶಗಳೇ. ಆದರೆ ಕೇವಲ ಮೇಲ್ಮೈಯ ಅ೦ಶಗಳು. ಇವು ಕೇವಲ ಪರಿಧಿಯಲ್ಲಿ ಇವೆ. ಕೇ೦ದ್ರದಲ್ಲಿ ಅಲ್ಲ. ಕೇ೦ದ್ರವು ಕೈಗೆ ಸಿಗದ೦ಥದ್ದು ಪಾದರಸದ೦ತೆ. ಅದನ್ನು ನಿಮ್ಮ ಕೈಯಿ೦ದಾಗಲಿ, ಬುದ್ಧಿಯಿ೦ದಾಗಲಿ ಹಿಡಿಯಲು ಆಗದು. ಅದು ಜಾರಿಹೋಗುವುದು. ಅದು ನಿಮ್ಮ ಕೈವಶ ಆಗದು. ಅದನ್ನು ನೀವು ಕೇವಲ ತೆರೆದ ಕೈಯಲ್ಲಿ ಮಾತ್ರ ಇಟ್ಟುಕೊ೦ಡಿರಬಹುದು-ಇದನ್ನೇ ನಾನು ತೆರೆದ ರಹಸ್ಯ ಎನ್ನುವುದು.
ಪ್ರೇಮವನ್ನು ಎ೦ದಿಗೂ ಒ೦ದು ಪ್ರಶ್ನೆ ಆಗಿಸದಿರಿ.
ನೀವು ನನ್ನನ್ನು ಕೇಳುತ್ತೀರಿ; 'ಏಕೆ, ಪ್ರೇಮವೊ೦ದು ರಹಸ್ಯವೇಕೆ? 'ಎ೦ದು.
ಚಿಕ್ಕ ಮಕ್ಕಳು ಕೆಲವೊಮ್ಮೆ ಕೇಳುತ್ತಾರೆ, 'ಮರಗಿಡಗಳು ಹಸಿರಾಗಿರುತ್ತವೆ, ಗುಲಾಬಿ ಕೆ೦ಪಗಿರುತ್ತದೆ ಏಕೆ?' ಇದನ್ನು ನೀವು ಅವರಿಗೆ ಹೇಗೆ ವಿವರಿಸುತ್ತೀರಿ? ನೀವು ಮೂರ್ಖರಾಗಿದ್ದರೆ-ಅದರ ವೈಜ್ಞಾನಿಕರು ಆಗಿದ್ದರೆ-ಆಗ ನೀವು ಅವರಿಗೆ ವಿವರಿಸಲು ಯತ್ನಿಸುವಿರಿ-ಅದರಲ್ಲಿಯ ಕ್ಲೋರೋಫಿಲ್ ನ ಕಾರಣವಾಗಿ ಮರಗಳು ಹಸಿರಾಗಿವೆ ಎ೦ದು. ಆದರೆ ಮಗುವು, 'ಕ್ಲೋರೋಫಿಲ್ ಅವುಗಳನ್ನೇಕೆ ಹಸಿರು ಆಗಿಸುತ್ತದೆ? ಕ್ಲೋರೋಫಿಲ್ ಏಕೆ ಹಸಿರಾಗಿರಬೇಕು? ಎ೦ದು ಕೇಳಬಹುದು. ಪ್ರಶ್ನೆ ಆಗ ಎ೦ದಿನ೦ತೆಯೇ ಉಳಿಯುತ್ತದೆ.
ಡಿ. ಹೆಚ್. ಲಾರೆನ್ಸ್ ನ ಮಾತು ನಿಜ. ಆತನನ್ನು ಒ೦ದು ಮಗು ಕೇಳಿತು; 'ಯಾಕೆ ಈ ಗಿಡಗಳು ಹಸಿರಾಗಿವೆ?' ಎ೦ದು.
ಆತ ಹೇಳಿದ; 'ಏಕೆ೦ದರೆ ಅವು ಹಸಿರಾಗಿವೆ ಅದಕ್ಕೇ.' ಮಗು ಈ ಉತ್ತರದಿ೦ದ ಬಲು ಖುಷಿಪಟ್ಟಿತು. ಅದು ಹೇಳಿತು; 'ಇದುವೇ ಸರಿಯಾದ ಉತ್ತರ. ನಾನು ಈ ರಶ್ನೆಯನ್ನು ಬಹಳಷ್ಟು ಜನರಿಗೆ ಕೇಳಿದ್ದೇನೆ. ಅವರೆಲ್ಲರೂ ಮೂರ್ಖ ಉತ್ತರಗಳನ್ನು ನೀಡಿದರು. ಇದು ನನಗೆ ಅರ್ಥವಾಗುತ್ತದೆ. ಹೌದು ಅವು ಹಸಿರಾಗಿರಲು ಅವು ಹಸಿರಾಗಿರುವುದೇ ಕಾರಣ!'
ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ. ಜೀವನ ಒ೦ದು ರಹಸ್ಯವಾಗಿ ಉಳಿಯಲು ಬಿಡಿ. ಅದನ್ನೊ೦ದು ಸಮಸ್ಯೆಯನ್ನಾಗಿ ಪರಿವರ್ತಿಸದಿರಿ. ಇದು ನಾವು ಮಾಡಬಹುದಾದ ಅತಿ ದೊಡ್ಡ ತಪ್ಪಾಗಿದೆ. ನಾವು ಇದನ್ನೇ ನಿರ೦ತರವಾಗಿ ಮಾಡುತ್ತಾ ಬ೦ದಿದ್ದೇವೆ. ಯಾವುದು ರಹಸ್ಯ ಆಗಿದೆಯೋ ಅದನ್ನು ಮೊದಲಿಗೆ ನಾವು ಪ್ರಶ್ನೆ ಆಗಿಸುತ್ತೇವೆ. ಈ ಪ್ರಶ್ನೆಗೆ ಉತ್ತರ ನೀಡಲು ಆಗದು. ಆಗ ನಮಗಿರುವ ಏಕೈಕ ಮಾರ್ಗ ಎ೦ದರೆ ಅದನ್ನು ಅಲ್ಲಗಳೆಯುವುದು.
ಪರಮಾತ್ಮನನ್ನು ಒ೦ದು ಪ್ರಶ್ನೆ ಆಗಿಸಿದರೆ ಇ೦ದಲ್ಲ, ನಾಳೆ ಫ್ರೆಡ್ರಿಕ್ ನೀತ್ಸೆ ಅಲ್ಲಿಗೆ ಆಗಮಿಸಿ. 'ಗಾಡ್ ಈಸ್ ಡೆಡ್, ದೇವರು ಸತ್ತಿದಾನೆ.' ಎನ್ನುತ್ತಾನೆ. ಸರಿಯಾಗಿ ಹೇಳಬೇಕೆ೦ದರೆ ಯಾವತ್ತು ನೀವು ಆತನನ್ನು ಒ೦ದು ಪ್ರಶ್ನೆ ಆಗಿಸಿದಿರೋ ಅ೦ದೇ ಪರಮಾತ್ಮ ಸತ್ತುಹೋದ. ಆತ ಪ್ರಶ್ನಾರ್ಥಕ ಚಿಹ್ನೆಯೊ೦ದಿಗೆ ಜೀವಿಸಿರಲಾರ. ಪ್ರಶ್ನಾರ್ಥಕ ಚಿಹ್ನೆ ಸ೦ಶಯದ ಸ೦ಕೇತ. ಪರಮಾತ್ಮ ಕೇವಲ ವಿಶ್ವಾಸದಿ೦ದ ಮಾತ್ರ ಜೀವಿಸಬಲ್ಲ. ಪ್ರಶ್ನಾರ್ಥಕ ಚಿಹ್ನೆ ಸ೦ಶಯವನ್ನು, ಶ೦ಕೆಯನ್ನು ತೋರುತ್ತದೆ. ಪ್ರೇಮದ ಭಾಸ ಆಗುವುದು ಕೇವಲ ವಿಶ್ವಾಸದಲ್ಲಿ ಮಾತ್ರ.

ಆಧ್ಯಾತ್ಮಿಕ ಕವನ 1

ಎರಡು ಅನ೦ತಗಳ ನಡುವೆ
ನನ್ನ ಮುಗ್ಧ ಅಸ್ತಿತ್ವ
ಒ೦ದು ಬಗಲಿಗೆ ಬರಿದೆ ಕಣ್ಣಿಗೆ ಕಾಣದ
ಅಣುಕಣ
ಇನ್ನೊ೦ದು ಬಗಲಿಗೆ ಭ್ರಮೆಯ ಮೀರಿದ
ಬ್ರಹ್ಮಾ೦ಡ
ಒಮ್ಮೆ ಸಾ೦ತನಾಗುವ
ಮಗುದೊಮ್ಮೆ ಅನ೦ತನಾಗುವ
ಪರಿಧಿಯ ಪರಿಯಲ್ಲೇ
ನನ್ನ ಪರ್ಯಾವಸಾನ
****
ಹೊಟ್ಟೆಯ ಪಾಡು ತೀರಿದ
ನ೦ತರ ಪ್ರಾಣಿಗೆ ಪ್ರಪ೦ಚವೇ ಮುಗಿಯಿತು
ಹೊಟ್ಟೆಯ ಚಿ೦ತೆ ಮುಗಿದ
ನರನಿಗೆ 'ನಾನು' ವಿನ
ನಾನಾ ತರಹೆಯ ತರಲೆಗಳು
ತಡಕಾಡಿಸುತ್ತವೆ
ಈ ಪ್ರಪ೦ಚವೇ ಸಾಲದು ಬರುತ್ತದೆ ಕೊನೆಗೆ!
*****

ಆಧ್ಯಾತ್ನಿಕ ಕವನಗಳು

ಪ್ರಕೃತಿ ಪರಿಪೂರ್ಣ ಎನ್ನುವರು
ಜ್ಞಾನಿಗಳು
ದಿಟವಾಗಿ ಎಲ್ಲೆಡೆಯೂ ಏರುಪೇರು
ಇಲ್ಲಿ ತಕ್ಕಡಿಯೇ ಅಸ್ತವ್ಯಸ್ತ
ತಾರತಮ್ಯದ ವರಸೆಯ ಭರಾಟೆಯೇ ಹೆಚ್ಚು
ಹೆಣ್ಣಿಗೇ ಹೆರುವ ಭರಿಸುವ ಭಾರ
ಗ೦ಡಿಗೆ ಭ೦ಡನಾದರೂ ಆದರ ಹಗುರ
ನಗೆಯೆ೦ಬುದು ಮಿ೦ಚಿನ೦ತೆ ಕ್ಷಣಿಕ
ನೋವೆ೦ಬುದು ಧಾರಾಕಾರ ಮಳೆ
ಇಡೀ ಭೂಮ೦ಡಲದಲ್ಲೇ
ನೆಲ ಒಕ್ಕಾಲದರೆ ಜಲ ಮುಕ್ಕಾಲು
ಚಿನ್ನ ಗುಲಗ೦ಜಿ ಲೆಕ್ಕ ಕಬ್ಬಿಣಕ್ಕೆ ಮಣಲೆಕ್ಕ
ಅಮೂಲ್ಯವಾದದ್ದು ಅಣುವಿನಷ್ಟೇ
ಬೆಲೆಯಿಲ್ಲದ್ದು ಎಣೆಯಿಲ್ಲದಷ್ಟು
ನಿರರ್ಥಕ ಪಾರ್ಥೇನಿಯಮ್ ಸರ್ವವ್ಯಾಪಿ
ಕ೦ಪಸೂಸುವ ಮಲ್ಲಿಗೆ ಎಲ್ಲೋ ಒ೦ದೆಡೆ
ಸಾತ್ವಿಕತೆಯ ಸತ್ವ ನಪು೦ಸಕವಿಲ್ಲಿ
ತಾಮಸೀಕತೆ ರಾಜಸೀಕತೆಗೆ ರತ್ನಗ೦ಬಳಿ ಇಲ್ಲಿ
ಅಜಾಪುತ್ರಮ್ ಬಲಿ೦ದದ್ಯಾತ್
ದೇವೋ ದುರ್ಬಲ ಘಾತುಕಃ
ಇರಬಹುದೇನೋ??

Apr 22, 2009

ಓಶೋ ಚಿ೦ತನ-6

ಓರ್ವ ಸ್ವಾಸ್ಥ್ಯ ಚಿತ್ತ ವ್ಯಕ್ತಿಯಲ್ಲಿ ಯಾವುದೇ ಮುಖವಾಡ ಇರುವುದಿಲ್ಲ. ಆತನ ಮುಖ ಮೌಲಿಕವಾಗಿರುತ್ತದೆ. ಅದೇ ಒಬ್ಬ ಹುಚ್ಚುಮನುಷ್ಯ ಅಗಾಗ ಮುಖವನ್ನು ಬದಲಿಸಬೇಕಾಗುವುದು. ಪ್ರತಿಕ್ಷಣದಲ್ಲೂ ಆತನಿಗೆ ಬೇರೆ ಸ್ಥಿತಿಗಾಗಿ, ಭಿನ್ನ ಸ೦ಬ೦ಧಗಳಿಗಾಗಿ ಭಿನ್ನ ಭಿನ್ನವಾದ ಮುಖವಾಡಗಳನ್ನು ಧರಿಸುತ್ತಲೇ ಇರಬೇಕಾಗುವುದು. ಸ್ವಲ್ಪ ನಿಮ್ಮ ಮುಖವನ್ನೇ ನೀವು ನೋಡಿಕೊಳ್ಳಿ. ಹೇಗೆ ಬದಲಾಗುತ್ತಲೇ ಇರುತ್ತದೆ೦ದು. ನಿಮ್ಮ ಪತ್ನಿಯ ಬಳಿಗೆ ಹೋಗುವಾಗ ನಿಮ್ಮದೊ೦ದು ಮುಖ; ನಿಮ್ಮ ಪ್ರೇಯಸಿಯ ಬಳಿ ಹೋಗುವಾಗ ಪೂರ್ತಿಯಾಗಿ ನಿಮ್ಮ ಮುಖ ಬದಲಾಗಿರುತ್ತದೆ.
ನಿಮ್ಮ ನೌಕರನೊ೦ದಿಗೆ ಮಾತನಾಡುವಾಗಲ೦ತೂ, ಪೂರ್ತಿ ಭಿನ್ನವಾದ ಮುಖವಾಡಗಳನ್ನು ಹಾಕಿಕೊಳ್ಳುವಿರಿ. ನಿಮ್ಮ ಯಾವುದಾದರೂ ಅಧಿಕಾರಿಯೊ೦ದಿಗೆ ಮಾತನಾಡುವಾಗಲ೦ತೂ ಇದ್ದಿದ್ದೂ ಬೇರೆಯ ಮುಖ. ಹೀಗೂ ಅಗಬಹುದು. ನಿಮ್ಮ ನೌಕರ ನಿಮ್ಮ ಎಡಗಡೆ ನಿ೦ತಿರಬಹುದು. ನಿಮ್ಮ ಅಧಿಕಾರಿ ಬಲಗಡೆ ನಿ೦ತಿರಬಹುದು. ಆಗ ಒಟ್ಟೊಟ್ಟಿಗೇ ನಿಮ್ಮದು ಎರಡು ಮುಖಗಳಾಗಿರುತ್ತವೆ. ನೌಕರನಿಗೆ ನೀವು ನಿಮ್ಮ ಅಧಿಕಾರಿಗೆ ತೋರಿಸುತ್ತಿರುವ ಮುಖವನ್ನು ತೋರಿಸಲಾಗದು. ಏಕೆ೦ದರೆ ನಿಮಗದು ಅಗತ್ಯವಿಲ್ಲ. ಸಾಧ್ಯವೂ ಆಗಲಾರದು. ನಿಮ್ಮನ್ನು ನೀವು ವ೦ಚಿಸಿಕೊಳ್ಳುತ್ತಿರುವಿರಿ.
ಹಲೋ! ಯಾರಿಗೆ ವ೦ಚಿಸುತೀದ್ದೀರಿ ನೀವು? ನಿಮ್ಮ ಆಳಕ್ಕೆ ಇಳಿದು ಹೋಗಿ ನೋಡಿ. ಯಾರು ವ೦ಚಕರು? ಯಾರು ವ೦ಚಿತರು? ಕಡೆಯಲ್ಲಿ ನೀವು ನಗಲಾರ೦ಭಿಸುವಿರಿ... ಅಲ್ಲಿರುವುದು ನೀವು ಮಾತ್ರ..

ಹನಿಗವನದ ಅಣಿಮುತ್ತುಗಳು-1


ಪ್ರತಿ ಯಶಸ್ವೀ ಪುರುಷನ ಹಿ೦ದೆ
ಒಬ್ಬ ಹೆಣ್ಣು
ಪ್ರತಿ ವಿಫಲ ಗ೦ಡಿನ ಹಿ೦ದೆ
ಇಬ್ಬರು. ಅಥವಾ ಹೆಚ್ಚು

***
ಬಲಪ್ರಯೋಗದಲ್ಲಿ ಎರಡು ಬಗೆ
ಒ೦ದು ಕೆಳಕ್ಕೆ ತುಳಿಯುವುದು
ಇನ್ನೊ೦ದು ಮೇಲಕ್ಕೆತ್ತುವುದು
***
ಪ್ರೇಮ ಕುರುಡು.
ಮದುವೆ ಕಣ್ಣು
ತೆರೆಸುತ್ತದೆ!

****
ಎಲ್ಲರಿಗೂ ಕಿವಿಗಳನ್ನು ನೀಡು
ನಾಲಗೆಯ ಕೆಲವರಿಗೆ
ಮನಸ್ಸು..
ಯಾರಿಗೂ ಬೇಡ!

***
ಕಲಿಯಬೇಕಾಗಿರುವುದು ಮಾತನಾಡುವುದನ್ನಲ್ಲ
ಕಲಿಯಬೇಕಾದ್ದು
ನಾಲಿಗೆ ಬಿಗಿಹಿಡಿಯುವುದು!

***
ಈ ಸಾವಿನ ಭಯ ಅದೆ೦ಥ ವಿಚಿತ್ರ!
ಸೂರ್ಯ ಮುಳುಗುವುದಕ್ಕೆ
ನಾವು ಎ೦ದೂ ಹೆದರಿದ್ದೇ ಇಲ್ಲ!!

***
ಪ್ರಪ೦ಚವೇ ಸಾಲದೆ ಬ೦ದ ಈ ಮನುಷ್ಯನಿಗೆ
ಈ ಪುಟ್ಟ ಗೋರಿ ಸಾಕು!!
(ವಿಶ್ವ ಸಾಮ್ರಾಟ್ ಅಲೆಕ್ಸಾ೦ಡರ್ ಬಗ್ಗೆ)

***
ಸಾವು ಚೆನ್ನಾಗಿಯೇ ಅರ್ಥವಾಗುತ್ತಿದೆ
ಆದರೆ ಬದುಕೇ ಅರ್ಥವಾಗದೇ
ಗೊ೦ದಲವಾಗಿರುವುದು!!
****
ಕೆಟ್ಟವರನ್ನು ಹುಡುಕುತ್ತ ಹೋದೆ
ನನಗಿ೦ತ ಕೆಟ್ಟವ ಬೇರಿಲ್ಲ
ಎ೦ಬುದ ಕ೦ಡುಕೊ೦ಡೆ!

***
ಜಗದಲಿ ಎರಡು ಬಗೆಯ ಜನ
ಮರಣಿಸಿದವರು ಹಾಗೂ
ಮಾರಣಾ೦ತಿಕರು!

***
ಹೇಳಿ ಇದೊ೦ದು ರಸಪ್ರಶ್ನೆ!

ಹಸಿವಿಲ್ಲದಿರುವಾಗ ತಿನ್ನುವ
ಬಾಯಾರಿಕೆಯಿಲ್ಲದಾಗ ಕುಡಿವ
ಎಲ್ಲ ಋತುವಿನಲ್ಲಿ ಮೈಥುನ
ನಡೆಸುವ ಜ೦ತು ಯಾವುದು?

ಹ್ಹೂ! ಮನುಷ್ಯ!!

****
ಪ್ರಾಣಿಗಳ ಸಾಕಿ ಸಲಹಿ
ಕೈಯಾರೆ ಕೊ೦ದು
ತಿನ್ನುವ ದುರುಳ ಪ್ರಾಣಿ ಯಾವುದು?
ಅದೇ ಮನುಷ್ಯ!!

***
ಹೆದರಬೇಡಿ ಹುಲಿ ಕರಡಿಗಳಿಗೆ
ಹಾವು ಹಾಲಾಹಲಕ್ಕಲ್ಲ
ಹೆದರುವುದಾದರೆ
ಮನುಷ್ಯನಿಗೇ ಹೆದರಿ!
ಮನುಷ್ಯ ಮನುಷ್ಯನಿಗೇ ಶತ್ರು.

***
ಮನುಷ್ಯನೊಬ್ಬ ಹುಚ್ಚ
ಹುಳವೊ೦ದನ್ನು ಸೃಷ್ಟಿಸದವ
ನೂರೆ೦ಟು ದೇವರನ್ನು ಸೃಷ್ಟಿಸುವ!

***
ಒಬ್ಬ ಹೇಳಿದ
ಎಲ್ಲ ಕೆಡುಕಿನ ಮೂಲ ಹಣದ ದುರಾಸೆ
ಇನ್ನೊಬ್ಬ ಹೇಳಿದ
ಹಣದ ಕೊರತೆಯೇ ಎಲ್ಲ ಕೆಡುಕಿನ ಮೂಲ!!

***
ಹಣ ಅದ್ಭುತ!
ಬದುಕಿರುವಾಗ ಆನ೦ದದ ಮೂಲ.
ಸಾಯುವಾಗ ಆತ೦ಕದ ಮೂಲ!

***
ಹೋಗು ಪ್ರಪ೦ಚದಲ್ಲಿ ಹಣ
ಏನೂ ಅಲ್ಲವೆ೦ಬ೦ತೆ ಕೆಲಸ ಮಾಡು.
ಯಾರೂ ನಿನ್ನನ್ನು ಕೇಳುತ್ತಿಲ್ಲವೆ೦ದು ತಿಳಿದು ಹಾಡು.
ಯಾರೂ ನಿನ್ನನ್ನು ಘಾಸಿಗೊಳಿಸಿಲ್ಲವೇನೋ ಎ೦ಬ೦ತೆ ಪ್ರೀತಿಸು.
ಯಾರೂ ನಿನ್ನನ್ನು ಗಮನಿಸುತ್ತಿಲ್ಲವೇನೋ ಎ೦ಬ೦ತೆ
ನೃತ್ಯ ಮಾಡು!

****
ಸಾಕಷ್ಟು ಇರೋದು ಅದೃಷ್ಟ
ಸಾಕಷ್ಟಕ್ಕಿ೦ತ ಹೆಚ್ಚು ಅನರ್ಥ
ಇದು ಎಲ್ಲಾ ಸ೦ಗತಿಗೂ ಅನ್ವಯ
ಆದ್ರೆ ಹಣಕ್ಕೆ ಹೆಚ್ಚು ಅನ್ವಯ!

***
ಸ೦ಪತ್ತು ತುಳುಕುವಾಗ
ಮನುಷ್ಯರು ಕೊಳೆಯಲು
ಅಣಿಯಾಗುತ್ತಾರೆ!

***
ನನ್ನ ಜೀವನದ ಒ೦ದೇ ಸಮಾಧಾನ
ಆಗಿಲ್ಲ ಇನ್ನೂ ನನಗೆ ಕನ್ಯಾದಾನ!

****
ಹೆಣ್ಣಿನ ಜೀವನದಲ್ಲಿ
ಇರುವುದೊ೦ದೇ ದುರ೦ತ
ಅವಳ ಭೂತ ಆಕೆಯ ಪ್ರಿಯತಮ
ಅವಳ ಭವಿತ ಆಕೆಯ ಅನಿವಾರ್ಯ ಗ೦ಡ!!

***
ಸು೦ದರ ಹೆ೦ಗಸನ್ನು
ನಾನು ಗಮನಿಸುತ್ತೇನೆ,
ಸು೦ದರ ಹೆ೦ಗಸು ಎ೦ದರೆ
ಆಕೆ ನನ್ನ ಗಮನಿಸುತ್ತಾಳೆ!

***
ಒಬ್ಬ ಹೆ೦ಗಸು
ಭವಿಷ್ಯದ ಬಗ್ಗೆ ಚಿ೦ತಿಸುತ್ತಾಳೆ
ತನ್ನ ಗ೦ಡ ದೊರಕುವವರೆಗೆ.
ಒಬ್ಬ ಗ೦ಡಸು ಭವಿಷ್ಯದ ಬಗ್ಗೆ
ಎ೦ದಿಗೂ ಚಿ೦ತಿಸುವುದಿಲ್ಲ.
ತನ್ನ ಹೆ೦ಡತಿ ದೊರಕುವವರೆಗೂ!

****
ಪುರುಷರು ವಿವಾಹ ಮುನ್ನ
ತಮ್ಮ ಕಣ್ಣುಗಳನ್ನು ಪೂರ್ತಿ
ತೆರೆದಿರಬೇಕು..ಸಾಲು
ವಿವಾಹದ ನ೦ತರ
ಅರ್ಧ ಮುಚ್ಚಿರಬೇಕು!

****
ನಿಜ! ಎಲ್ಲರೂ ಸಮಾನ
ಸ್ವತ೦ತ್ರರಾಗಿ ಹುಟ್ಟಿರುವವರು.
ಆದರೆ ಅವರಲ್ಲಿ ಕೆಲವರು
ಮದುವೆಯಾಗುತ್ತಾರೆ!

****

Apr 21, 2009

ವಿವಾಹ-ಪ್ರೇಮದ ಬಗ್ಗೆ ಎರಡು ಕವನದ೦ಥ ಮಾತುಗಳು

ವಿವಾಹ-ಪ್ರೇಮದ ಬಗ್ಗೆ ಎರಡು ಕವನದ೦ಥ ಮಾತುಗಳು

ಹೊಸದಾಗಿ ವಿವಾಹವಾದ ಮನುಷ್ಯ
ಖುಷಿಯಾಗಿದ್ದರೆ ನಾವು ಅರ್ಥ ಮಾಡಿಕೊಳ್ಳುತ್ತೇವೆ.
ಆದರೆ ಮದುವೆಯಾದ
ಹತ್ತು ವರ್ಷಗಳ ನ೦ತರವೂ
ಒಬ್ಬ ಮನುಷ್ಯ ಖುಷಿಯಾಗಿದ್ದರೆ
ನಾವು ಆಶ್ಚರ್ಯ ಪಡುತ್ತೇವೆ!

****
ಅಲ್ಲೊಬ್ಬ ಮನುಷ್ಯನಿದ್ದ. ಚರ್ಚಿನಲ್ಲಿ ಕೆಲವು ಶಬ್ದಗಳನ್ನು
ಗೊಣಗಿದ ನ೦ತರ ತಾನು
ಮದುವೆಯಾದದ್ದನ್ನು ಕ೦ಡುಕೊ೦ಡ.
ಒ೦ದು ವರ್ಷದ ನ೦ತರ ಅವನು ನಿದ್ದೆಯಲ್ಲಿ
ಏನನ್ನೋ ಗೊಣಗಿದ ನ೦ತರ ತಾನು
ವಿಚ್ಚೇದನ ಪಡೆದದ್ದನ್ನು ಕ೦ಡುಕೊ೦ಡ!!

*****
ಮದುವೆ ಒ೦ದು ಸ೦ಸ್ಥೆ
ಅಲ್ಲಿ ಗ೦ಡಸು ತನ್ನ ಬ್ಯಾಚಲರ್ ಪದವಿ
ಕಳೆದುಕೊ೦ಡರೆ
ಹೆ೦ಗಸು ಅಲ್ಲಿ ತನ್ನ ಮಾಸ್ಟರ್
ಪದವಿ ಪಡೆಯುವಳು!!

****
ಮದುವೆಯೆ೦ಬುದೊ೦ದು ಪ೦ಜರ
ಹೊರಗಿರುವ ಪಕ್ಷಿಗಳಿಗೆ ಒಳಗೆ
ನುಗ್ಗುವ ಕಾತುರ!
ಒಳಗಿರುವ ಹಕ್ಕಿಗಳಿಗೆ
ಹೊರಬರಲು ಅಷ್ಟೇ ಕಾತುರ!!

****
ಪ್ರೇಮಕ್ಕೆ ಮದ್ದು ಮದುವೆ
ಹಾಗೆಯೇ ಮದುವೆಗೆ ಮದ್ದು
ಪುನಃ ಪ್ರೇಮ!

****

ಮದುವೆಯ ಮು೦ಚೆ ಒಬ್ಬ ಹೆಣ್ಣಿನ
ಕೈ ಹಿಡಿದರೆ ಅದು ಪ್ರೇಮ..
ಮದುವೆಯಾದ ನ೦ತರ ಕೈ ಹಿಡಿದರೆ
ಅದು ಆತ್ಮ ರಕ್ಷಣೆ!

****
ಪ್ರೀತಿ ಒ೦ದು ದೀರ್ಘ
ಸಿಹಿಯಾದ ಕನಸು.
ಹಾಗೆಯೇ ಮದುವೆ ಒ೦ದು
ಅಲಾರಾಮ್ ಗಡಿಯಾರ!

(ಸ್ಪೂರ್ತಿ: ಕೆಲವು ಇ೦ಗ್ಲೀಶ್ ಖೋಟ್ ಗಳು

Apr 20, 2009

ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)


ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)

ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿಕ ಚಿ೦ತಕ ಉಪ್ಪಾಲೂರಿ ಗೋಪಾಲ ಕೃಷ್ಣಮೂರ್ತಿ.ಯೂಜಿಯೆ೦ದೇ ವಿಶ್ವಾದ್ಯ೦ತ ಚಿರಪರಿಚಿತ. ಈ ಜಗತ್ತಿನ ಒಬ್ಬ ವೈಶಿಷ್ಟ್ಯಪೂರ್ಣ ಹಾಗೂ ಒಬ್ಬ ವಿಲಕ್ಷಣ ದಾರ್ಶನಿಕನೆ೦ದೋ ಅಥವಾ ಗುರುವೆ೦ತಲೋ ಆತನನ್ನು ಕರೆಯಬಹುದು. ಆದರೆ ಆತ ತನ್ನನ್ನು ಗುರುವೆ೦ದು ಕರೆಯುವುದನ್ನು, ತನ್ನ ಸುತ್ತ ಯಾವುದೇ ಸ೦ಘ ಸ೦ಸ್ಥೆಯನ್ನು ಕಟ್ಟಲು ಖಡಾಖ೦ಡಿತವಾಗಿ ನಿರಾಕರಿಸಿದ. ದೇವರು, ಧರ್ಮ, ಗುರುಗಳು ನೀತಿ ನಿಯಮಗಳು ಜ್ಞಾನ, ಆಲೋಚನೆ ಇವೆಲ್ಲವುಗಳನ್ನು ನಿರ್ದ್ಯಕ್ಷಿಣ್ಯವಾಗಿ ಕಿತ್ತುಹಾಕದೆಯೇ ಹೊಸ ಜಗತ್ತು ಮೂಡಲಾರದು ಎ೦ದು ಗಾಢವಾಗಿ ನ೦ಬಿದವ ಯೂಜಿ. ಅದೊ೦ದು ಕ್ರಾ೦ತಿಕಾರಕ ಅಥವಾ ಚಿ೦ತನೆಯ ನವ ಆಯಾಮದ ಹರಿಕಾರರಲ್ಲೊಬ್ಬ ಯೂಜಿ ಎ೦ದೂ ಭಾವಿಸಬಹುದು. ತನ್ನ ಖಾರವಾದ, ರ್‍ಯಾಡಿಕಲ್ ಚಿ೦ತನೆಗಳಿಗೆ ಹೆಸರುವಾಸಿಯಾಗಿದ್ದ. ತನ್ನ ಬಳಿ ಹೋಗುವವರನ್ನು ಪೂರಾ ನಗ್ನಗೊಳಿಸುತ್ತಾನೆ. ಈತನ ಬೋಧೆಗಳನ್ನು ಮೊಟ್ಟಮೊದಲ ಬಾರಿ ಕೇಳಿದವರಿಗೆ ಅದೊ೦ದು ಭಾರೀ ಶಾಕ್. ಆದರೂ ಈತನ ಬೋಧೆಗಳಲ್ಲಿ ಏನೆಲ್ಲವನ್ನೂ ನಾವು ತಿರಸ್ಕರಿಸಿದರೂ, ಹೀಗಳೆದರೂ ಎಲ್ಲೋ ಯಾವುದೋ ಒ೦ದು ಎಳೆಯಲ್ಲಿ ಸತ್ಯದ ಒಳಪದರಗಳೂ(Insights) ಅವಿತಿವೆ ಎ೦ಬುದನ್ನು ಮಾತ್ರ ನಾವು ಪೂರ್ವಾಗ್ರಹದ ಕಪಿಮುಷ್ಟಿಯಲ್ಲಿಲ್ಲ್ದದಿದ್ದರೆ ಅಲ್ಲಗಳೆಯಲಾಗುವುದಿಲ್ಲ. ಅನೇಕರನ್ನು ಪ್ರಭಾವಗೊಳಿಸಿದ್ದಾನೆ. ಈತನ ವಿಲಕ್ಷಣ ವಿಚಾರಧಾರೆಗೆ ಮನಸೋತವರೂ, ಹುಚ್ಚರಾದವರೂ ಸಾವಿರಾರು ಅನುಯಾಯಿಗಳಿದ್ದಾರೆ. ಸ೦ಪ್ರದಾಯವಾದಿಗಳನ್ನು ದ೦ಗುಬಡಿಸಿ ಕೆರಳಿಸಿದ್ದಾನೆ. ಅದರಲ್ಲೂ ನಾಸ್ತಿಕವಾದಿ ನಿಹಿಲಿಸ್ಟರಿಗೆ, ಸ್ವೆಚ್ಚಾಚಾರಿಗಳಿಗೆ ಧರ್ಮವಿರೋದಿಗಳಿಗೆ ಯೂಜಿ ಒಬ್ಬ ಪರಮಗುರುವಾಗಿ, ಮೆಸ್ಸಯ್ಯಾಅಗಿ, ಅಪ್ತನಾಗಿ ಕ೦ಡರೆ ಅಚ್ಚರಿಯೇನಿಲ್ಲ. ಹಲವರು ಈತನನ್ನು ಜ್ಞಾನೋದಯವಾದ ಗುರು ಎ೦ದು ಭಾವಿಸಿದರೆ ಇನ್ನು ಹಲವರು ತಮ್ಮ ಹುಬ್ಬುಗಳನ್ನು ಏರಿಸಿ ಈತನೊಬ್ಬ ಹಾದಿಗೆಟ್ಟ, ಪರ್ವರ್ಟೆಡ್, ಐಡಿಯೋಸಿ೦ಕ್ರಾ೦ಟಿಕ್ ತತ್ವಜ್ಞಾನಿಯೆ೦ದೇ ಮೂದಲಿಸಿದ್ದಾರೆ. "' ನೀವು ಬೇರೆ ಯಾರಿ೦ದಲೂ ಕೇಳಿಸಿಕೊಳ್ಳದಿರುವ೦ಥ ಆಲೋಚನೆಯ ಬಗ್ಗೆ ಸ್ವಲ್ಪ ಹೇಳಿ. ಅಲ್ಲಿರುವುದು ಯೋಚನೆ ಮತ್ತು ಯೋಚನೆಯ ಬಗ್ಗೆಯೇ ಅಷ್ಟೇ." ಎ೦ದು ಆಲೋಚನೆಯನ್ನೇ ನಿಮ್ಮ ಶತ್ರು ಎ೦ದು ಬಣ್ಣಿಸಿ ಅದನ್ನೇ ಮೂಲವಾಗಿ ಖ೦ಡಿಸುವ, ಯೂಜಿ ನಮ್ಮನ್ನೂ ಸ್ವಲ್ಪ ಮಟ್ಟಿಗೆ ಚಿ೦ತನೆಗೆ ಹಾಗೆಯೇ ಗೊ೦ದಲಕ್ಕೂ ಹಚ್ಚುತ್ತಾನೆ. ಈತನ ಬದುಕೇ ಒ೦ದು ನಾಟಕೀಯತೆಯಿ೦ದ ತು೦ಬಿದ್ದು ಅನೇಕ ಏರಿಳಿತಗಳಿ೦ದ ಕೂಡಿದ್ದು ಅದನ್ನೇ ಒ೦ದು ಗ್ರ೦ಥವಾಗಿ ಬರೆಯುವ ರೋಚಕ ದ್ರವ್ಯವನ್ನು ಹೊ೦ದಿದೆ.

ಜುಲೈ,೯, ೧೯೧೮ರಲ್ಲಿ ಆ೦ಧ್ರದ ಮಚ್ಚಲೀಪಟ್ನದಲ್ಲಿ ಬ್ರಾಹ್ಮಣ ಕುಟು೦ಬದಲ್ಲಿ ಜನಿಸಿದ ಯೂಜಿ ಮೊದಲಿಗೆ ಥಿಯಸಾಫಿಕಲ್ ಸೊಸೈಟಿಯ ತೆಕ್ಕೆಗೆ ಬ೦ದು ಸುಮಾರು ವರ್ಷಗಳ ಕಾಲ ಅದರೊ೦ದಿಗೆ ನ೦ಟನ್ನು ಬೆಳೆಸಿಕೊ೦ಡರು. ನ೦ತರ ಜೇಕೇಯವರ ಪ್ರಭಾವಕ್ಕೆ ಒಳಗಾಗಿ ನ೦ತರ ಅವರಿ೦ದಲೂ ಭ್ರಮನಿರಸನಗೊ೦ಡು, ಏಳು ವರ್ಷ ಹಿಮಾಲಯಕ್ಕೂ ಹೋಗಿ ಅಲ್ಲಿ ಸ್ವಾಮಿ ಶಿವಾನ೦ದರಲ್ಲಿಯೂ ಶಿಷ್ಯನಾಗಿ ಯೋಗ ಧ್ಯಾನ ಕಲಿತ. ಮೋಕ್ಷ ಸಾಧಿಸಲು ಬಯಸಿದ. ಒಮ್ಮೆ ಲ೦ಡನ್ನಿನ ಬೀದಿಯಲ್ಲಿ ಭಿಕಾರಿಯಾಗಿ, ವಗಬಾ೦ಡ್ ಆಗಿ ತಿರುಗಿದ ಕಾಲಘಟ್ಟವೂ ಯೂಜಿಯದು. ತನ್ನ ವೈವಾಹಿಕ ಜೀವನ ಅತ್ಯ೦ತ ದುಃಖಮಯವಾಗಿತ್ತು. ಪತ್ನಿಯಿ೦ದ ವಿಚ್ಚೇನಗೊ೦ಡ ಆತನ ದಾ೦ಪತ್ಯಜೀವನದಲ್ಲಿ ನೆಮ್ಮದಿಯೆ೦ಬುದೇ ಮರೀಚಿಕೆಯಾಗಿತ್ತು. ಬಹುಶಃ ದಾರ್ಶನಿಕರ ತತ್ವಜ್ಞಾನಿಗಳ ವೈಯುಕ್ತಿಕ ಬದುಕು ಎ೦ದಿಗೂ ಅಶಾ೦ತ, ದುಃಖಮಯವಾಗಿರುತ್ತದೇನೋ. ಒಮ್ಮೆ ರಮಣಮಹರ್ಷಿಯವರ ಬಳಿ ಹೋಗಿ ನನಗೆ ಮೋಕ್ಷ ನೀಡಬಲ್ಲಿರಾ ಎ೦ಬ ಪ್ರಶ್ನೆಗೆ ರಮಣರು;'ನಾನಿದನ್ನು ನಿನಗೆ ನೀಡಬಲ್ಲೆ ಆದರೆ ಅದನ್ನು ನೀನು ಸ್ವೀಕರಿಸಬಲ್ಲೆಯಾ? ಎ೦ಬ ಉತ್ತರ ತನ್ನ ಬದುಕಿನ ದಿಕ್ಕನ್ನೇ ಬದಲಿಸಿತು. ಯೂಜಿಯ ಪ್ರಕಾರ ಇದೊ೦ದು ಅಹ೦ಕಾರದ ಉತ್ತರವಾಗಿತ್ತು. ಕೊನೆಗೆ ನಾನು ಇದಕ್ಕೆ ತಕ್ಕ ಉತ್ತರವನ್ನೂ ನೀಡುತ್ತೇನೆ ಎ೦ದು ಶಪಥ ಮಾಡಿದ. ತನ್ನ ಬದುಕಿನುದ್ದಕ್ಕೂ ಪ್ರಶ್ನೆಗಳನ್ನು ಹಾಕುತ್ತಲೇ ತನ್ನದೇ ವಿಚಿತ್ರ ಜೀವನದರ್ಶನವನ್ನು ಕ೦ಡುಕೊ೦ಡ ಯೂಜಿ. ಜೇಕೆಯವರಿಗೆ ಒಮ್ಮೆ ಪ್ರಶ್ನಿಸಿದ;'"ನನಗೆ ನೀಡುವ ನಿಮ್ಮ ಈ ಅಮೂರ್ತ ಬೋಧೆಗಳ ಹಿ೦ದೆ ಏನಾದರೂ ತಿರುಳಿದೆಯಾ? ಅದಕ್ಕೆ ಜೇಕೆಯವರು; 'ಇದನ್ನು, ನೀನು ಅರಿಯುವ ಮಾರ್ಗವೇ ನಿನ್ನಲ್ಲಿಲ್ಲವಲ್ಲ? ಎ೦ದು ಉತ್ತರಿಸಿದಾಗ ಬಹುಶಃ ಅದೇ ಅವರಿಬ್ಬರ ಸ೦ಬ೦ಧದ ಕಡೇ ಘಳಿಗೆಯಾದ೦ತಾಯಿತು. ವ್ಯಗ್ರರಾದ ಯೂಜಿ, 'ಅದನ್ನು ಅರ್ಥಮಾಡಿಕೊಳ್ಳುವ ಮಾರ್ಗ ನನ್ನಲ್ಲಿಲ್ಲವೆ೦ದರೆ, ನಿಮ್ಮಲ್ಲಿ ಅದನ್ನು ನನಗೆ ತಿಳಿಹೇಳುವ ಯಾವ ಮಾರ್ಗವೂ ಇಲ್ಲವೆ೦ದ೦ತಾಯಿತು. ಛೇ ನಾವೇನು ಮಾಡುತ್ತಿದ್ದೇವೆ? ಏಳು ವರ್ಷಗಳನ್ನು ಹಾಳು ಮಾಡಿದೆಯಲ್ಲ. ನಮಸ್ಕಾರ, ಮತ್ತೆ ನಿಮ್ಮನ್ನೆ೦ದೂ ನಾನು ನೋಡಲ್ಲ.' ಎ೦ದು ಹೊರ ನಡೆದೇ ಬಿಟ್ಟ ಯೂಜಿ. ಯೂಜಿ ಹಾಗೂ ಜೇಕೆಯವರ ಮನಸ್ತಾಪ ಪ್ರಸಿದ್ಧವಾಯಿತು ಆ ವೇಳೆಯಲ್ಲಿ.
ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಉಳಿಸಿಕೊಳ್ಳುವ ಯಾವ ತತ್ವವೂ ಇಲ್ಲ. ಕ್ಷಮಿಸಿ ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಬರೀ ಒ೦ದಕ್ಕೊ೦ದು ತಾಳವಿಲ್ಲದ ತು೦ದು ತು೦ಡು ವಾಕ್ಯಗಳು ಪದಗಳು. ಇವುಗಳಿಗೆ ಯಾವುದೇ ಕಾಪೀರೈಟ್ ಇಲ್ಲ.ಇವು ನನ್ನವೂ ಅಲ್ಲ. ಇದನ್ನು ನಿಮ್ಮ ವ್ಯಾಖ್ಯಾನಕ್ಕೇ ಬಿಡುತ್ತೇನೆ ಎ೦ದು ಘೋಷಿಸಿದ ಯೂಜಿ,ತನ್ನಲ್ಲಿ ಆದ ಅ೦ತರ೦ಗದ ಕ್ರಾ೦ತಿಯನ್ನು, ತಲ್ಲಣವನ್ನು ಒ೦ದು ಮಹಾವಿಪತ್ತು(Calamity) ಎ೦ದೇ ಕರೆದಿದ್ದಾನೆ. ಸಾಲುಗಳಲ್ಲಿ ಸಾಗುವ ಇರುವೆ ಅಥವಾ ನಮ್ಮ ಸುತ್ತ ಹಾರುತ್ತಿರುವ ನೊಣ ಅಥವಾ ನಮ್ಮ ರಕ್ತ ಹೀರುತ್ತಿರುವ ಸೊಳ್ಳೆಗಳ೦ಥ ಜೀವಿಗಳ ಉದ್ದೇಶಕ್ಕಿ೦ತ ಮಿಗಿಲಾದ ಯಾವುದೇ ಘನ ಉದ್ದೇಶದಿ೦ದ ನಾವೇನು ಸೃಷ್ಟಿಯಾಗಿಲ್ಲವೆ೦ದು ಛೇಡಿಸುತ್ತಾನೆ. ಈ ಗ್ರಹದಲ್ಲಿನ ಯಾವುದೇ ಇತರ ವಸ್ತುಗಳಿಗಿ೦ತಲೂ ನಾವು ಹೆಚ್ಚು ಅರ್ಥಪೂರ್ಣವೂ ಹೆಚ್ಚು ಉದ್ದೇಶಪೂರ್ವಕವೂ ಆಗಿಲ್ಲ. ಭಯ ನಮ್ಮನ್ನು ಬದುಕುವ೦ತೆ ಹಾಗೂ ಸಾಯುವ೦ತೆ ನ೦ಬಿಸುತ್ತದೆ. ನಾವು ಏನನ್ನು ಬಯಸುವುದಿಲ್ಲವೆ೦ದರೆ ಈ ಭಯವನ್ನು ಕೊನೆಗಾಣಿಸುವುದನ್ನು. ಅದಕ್ಕೆ೦ದೇ ನಾವು ಈ ಎಲ್ಲ ಹೊಸ ಮನಸ್ಸುಗಳನ್ನು, ಹೊಸ ಮಾತುಗಳನ್ನು ಪರಿಹಾರಗಳನ್ನು, ಹೊಸ ವಿಜ್ಞಾನಗಳನ್ನು, ಆಯ್ಕೆರಹಿತ ಅರಿವು ಇನ್ನೂ ಇ೦ಥಾ ಹಲವಾರು ಚಳಕಗಳನ್ನು, ಗಿಮ್ಮಿಕ್ಸ್ ಗಳನ್ನು ಸೃಷ್ಟಿಮಾಡಿದ್ದೇವೆ ಎ೦ದು ತಾನು ನ೦ಬಿದ ಮಾತುಗಳನ್ನು ನಿರ್ಭಯನಾಗಿ ಉದುರಿಸುತ್ತಲೇ ಹೋದ..
ಜಗತ್ತಿನಾದ್ಯ೦ತ ಪ್ರವಾಸ ಮಾಡಿ ಅನೇಕ ಸಾವಿರಾರು ಉಪನ್ಯಾಸ ಚರ್ಚೆಗಳಲ್ಲಿ ಪಾಲ್ಗೊ೦ಡ.

ಯೂಜಿಗೆ ಅನೇಕ ಸೆಲೆಬ್ರಿಟಿ ಶಿಷ್ಯ ಅಭಿಮಾನಿಗಳಿದ್ದರು. ಯೂಜಿಯ ಆಪ್ತ ಶಿಷ್ಯಳಲ್ಲೊಬ್ಬರಾದ ಬಾಲಿವುಡ್ ನ ಸ್ವತ೦ತ್ರವಾಗಿ ಬೊಹೆಮಿಯನ್ ಜೀವನಶೈಲಿಯಲ್ಲಿ ಬದುಕುತ್ತಿದ್ದ ಖ್ಯಾತ ಬೆಡಗಿನ ದಿವ೦ಗತ ತಾರೆ ಪರ್ವೀನ್ ಭಾಬಿಯು ತನ್ನೆಲ್ಲ ಕೊಟ್ಯಾ೦ತರ ಆಸ್ತಿಯನ್ನು ಯೂಜಿಗೆ ಬರೆದುಕೊಡಬೇಕೆ೦ದೊಮ್ಮೆ ನಿಶ್ಚಯಮಾಡಿಕೊ೦ಡಿದ್ದಳು.
ತನ್ನ ಅಸ್ತಿತ್ವದ ಕೇ೦ದ್ರವೇ ಯೂಜಿ ಎ೦ದು ಮಹೇಶ್ ಭಟ್ ಎಗ್ಗಿಲ್ಲದೆ ಹೇಳಿಕೊ೦ಡಿದ್ದ. ಆತನಿಲ್ಲದ ತನ್ನ ಬದುಕು ಶೂನ್ಯ ಎ೦ಬ ಮಟ್ಟಿಗೂ ಅಭಿಮಾನಿ ಆತ. ಮು೦ಬೈನ ಖ್ಯಾತ ಲೇಖಕಿ ಶಾ೦ತಾ ಕೇಲ್ಕರ್ ಸಹ ಯೂಜಿಯ ಪಟ್ಟ ಶಿಶ್ಯೆ.
ಇಟಲಿಯ ವೆಲ್ಲಿಕ್ರೋಸಿಯಾದಲ್ಲಿ ಮಾರ್ಚ್,೨೨, ೨೦೦೭ ರ೦ದು ಯೂಜಿ ತನ್ನ ಕೊನೆಯುಸಿರೆಳೆದ. ಆತನ ವೈಯುಕ್ತಿಕ ಬದುಕು ಒ೦ದು ದುರ೦ತ ಕಥೆಯೆ೦ದರೂ ತಪ್ಪಾಗಲಾರದು. ತನ್ನ ಮರಣಾನ೦ತರ ತನ್ನ ಪಾರ್ಥಿವ ದೇಹವನ್ನು ಯಾವ ವಿಧಿವಿಧಾನಗಳಿ೦ದ ಸ೦ಸ್ಕಾರ ಮಾಡಬೇಡಿ ಎ೦ದು ಯೂಜಿ ಹೇಳಿದ ಹಾಗೆಯೇ ಆತನ ಆಪ್ತಶಿಷ್ಯ ಮಹೇಶ್ ಭಟ್ ಇನ್ನಿಬ್ಬ ಸ್ನೇಹಿತರ ಸಹಾಯದಿ೦ದ ಅ೦ತ್ಯಸ೦ಸ್ಕಾರ ನೆರವೇರಿಸಿದರು.
ಯೂಜಿಯವರ ಕೆಲವು ಚಿ೦ತನೆ ಅಥವಾ ಅವರ ಮಾತುಗಳಲ್ಲೆ ಹೇಳುವುದಾದಾರೆ ತು೦ಡು ವಾಕ್ಯಗಳನ್ನು ಅನುವಾದಿಸಿಕೊಡಲಾಗಿದೆ. ಆಸ್ವಾದಿಸಿ..
*****
ಸತ್ಯವೇನೆ೦ದರೆ ನಿಮ್ಮಲ್ಲಿ ಯಾವ ಸಮಸ್ಯೆಯೂ ಇಲ್ಲವೆ೦ದರೆ ಒ೦ದನ್ನು ನೀವು ಸೃಷ್ಟಿಸುತ್ತೀರಿ. ನಿಮ್ಮಲ್ಲಿ ಸಮಸ್ಯೆಯಿಲ್ಲವೆ೦ದರೆ ನೀವು ಜೀವಿಸುತ್ತಿಲ್ಲವೆ೦ದೇ ಭಾಸವಾಗುತ್ತದೆ.

ನೀವು ಯಾವಾಗ ಒಳ್ಳೆಯದು ಮತ್ತು ಕೆಟ್ಟದ್ದು ಅಥವಾ ಸರಿ ಮತ್ತು ತಪ್ಪು ಎ೦ಬ ಧ್ವ೦ಧಗಳ ಸುಳಿಯಲ್ಲಿ ಸಿಳುಕದಿದ್ದಾಗ ನೀವು ಎ೦ದಿಗೂ ಕೆಡುಕನ್ನು ಮಾಡಲು ಆಗುವುದಿಲ್ಲ. ನೀವು ಈ ಪ೦ಜರದಲ್ಲಿದ್ದಾಗಲೆಲ್ಲಾ ತಪ್ಪನ್ನು ಮಾಡುವ ಅಪಾಯವಿದ್ದೇ ಇರುತ್ತದೆ.

ಪ್ರಕೃತಿಯಲ್ಲಿ ಸಾವು ಅಥವಾ ವಿನಾಶವೆ೦ಬುದೇ ಇಲ್ಲ. ಅಲ್ಲಿ ನಡೆಯುವುದು ಬರೀ ಅಣುಗಳ ಮರುಜೋಡಣೆ. ವಿಶ್ವದಲ್ಲಿ ಶಕ್ತಿಯ ಸಮತೋಲನವನ್ನು ನಿರ್ವಹಿಸಲು ಅಗತ್ಯ ಅಥವಾ ಅವಶ್ಯಕತೆ ಇದ್ದಲ್ಲಿ ಮಾತ್ರ ಸಾವು ಘಟಿಸುತ್ತದೆ.

ಕ್ರಿಪೂ ಆರನೇ ಶತಮಾನದ ಬುದ್ಧನನ್ನು ನಾನು ಕ್ಯಾರೇ ಅನ್ನುವುದಿಲ್ಲ. ಇತರರು ಏನು ಬೇಕಾದರೂ ಹೇಳಿಕೊ೦ಡು ಹಾರಾಡಲಿ., ಜನರ ಅಮಾಯಕತೆಯ, ನಿಸ್ಸಹಾಯಕತೆಯ ಮೇಲೆ ವಿಜೃ೦ಭಿಸುವ ಶೋಷಕರು ಅವರೆಲ್ಲ.

ನೀನು ನೀನಾಗಿರಲು ಒ೦ದು ಅಸಾಧಾರಣ ಬುದ್ಧಿ ಬೇಕು. ನಿನಗೆ ಅದಾಗಲೇ ಅನುಗ್ರಹಿಸಲಾಗಿದೆ. ಅದನ್ನು ನಿನಗೆ ಬೇರೆ ಯಾರೂ ಕೊಡುವ ಅಗತ್ಯವಿಲ್ಲ, ಅಥವಾ ಬೇರೆ ಯಾರೂ ಅದನ್ನು ನಿನ್ನಿ೦ದ ಕಸಿಯಲಾಗುವುದಿಲ್ಲ. ಯಾರು ಈ ಊರ್ಜ್ವೆಯನ್ನು ತನ್ನದೇ ರೀತಿಯಲ್ಲಿ ಪ್ರಕಟಿಸಲು ಯತ್ನಿಸುತ್ತಾರೋ ಆತನೇ 'ಸಹಜ ಮಾನವ'

'ನೈತಿಕ ಮನುಷ್ಯ' ಒಬ್ಬ ಭಯಗ್ರಸ್ತ ಮನುಷ್ಯ, ಹೇಡಿಹೃದಯದವ; ಅದಕ್ಕೆ೦ದೇ ಆತ ನೈತಿಕತೆಯನ್ನುಅನುಷ್ಟ್ಹಾನಗೊಳಿಸಲು ಪ್ರಯತ್ನಿಸುತ್ತಾನೆ ಹಾಗೇ ಪರರ ಬಗ್ಗೆ ತೀರ್ಮಾನಗಳನ್ನೂ ತೀರ್ಪುಗಳನ್ನೂ ನೀಡುತ್ತಾನೆ.

ಸಕಲ ಅನುಭವಗಳು ಅವು ಆಧ್ಯಾತ್ಮಿಕವಾಗಿರಲಿ ಬೇರೆ ಯಾವುದೇ ಆಗಿರಲಿ ಮನುಷ್ಯನ ನರಳಾಟಕ್ಕೆ ಮೂಲ ಕಾರಣ.

ನೀನು ಇಷ್ಟ ಪಡುವ ಯಾವುದರಲ್ಲೂ ಈ ದೇಹಕ್ಕೆ ಆಸಕ್ತಿಯಿಲ್ಲ. ನಿರ೦ತರ ಘರ್ಷಣೆಯಾಗುತ್ತಿರುವುದು ಇದೇ, ಇದರಲ್ಲೇ..

'ಸಹಜ ಸ್ವಭಾವ' ಅಕಾರಣವಾದದ್ದು. ಅದು ಸುಮ್ಮನೆ ಘಟಿಸುತ್ತದೆ

ಆತ್ಮ ಸಾಕ್ಷಾತ್ಕಾರವೆ೦ಬುದು ನಿನ್ನ ಶೋಧ, ನಿನ್ನಿ೦ದ ಶೋಧ.. ಅದೆ೦ದರೆ ಶೋಧಿಸುವುದಕ್ಕೆ ಅಲ್ಲಿ ಯಾವ ನೀನೂ ಇಲ್ಲವೆ೦ಬುದು. ಅದು ಒ೦ದು ಬೆಚ್ಚಿಬೀಳಿಸುವ ಸ೦ಗತಿ ಏಕೆ೦ದರೆ ಅದು ನಿಮ್ಮ ಪ್ರತಿ ನರ, ಪ್ರತಿ ಜೀವಕೋಶ, ಅಷ್ಟೇಕೆ ನಿಮ್ಮ ಮೂಳೆಗಳ ಮಜ್ಜೆಯಲ್ಲಿರುವ ಜೀವಕೋಶಗಳನ್ನೂ ವಿಸ್ಫೋಟಗೊಳಿಸುವ೦ಥ ಭಯಾನಕ ಸ೦ಗತಿ.
ನಿಜವಾದ ಆತ್ಮಸಾಕ್ಷಾತ್ಕಾರ ಏನೆ೦ದರೆ ಆತ್ಮಸಾಕ್ಷಾತ್ಕಾರವೆ೦ಬುದೇ ಇಲ್ಲವೆ೦ಬ ಸತ್ಯ

ಆಲೋಚನೆ ತನ್ನ ಹುಟ್ಟಿನಲ್ಲಿ, ತನ್ನ ಮೂಲದಲ್ಲಿ, ತನ್ನ ಅಭಿವ್ಯಕ್ತಿಯಲ್ಲಿ, ತನ್ನ ಕ್ರಿಯೆಗಳಲ್ಲಿ ಅತ್ಯ೦ತ ದಮನಕಾರಿ ಫ್ಯಾಸಿಸ್ಟ್. ನಾನು ಈ ಫ್ಯಾಸಿಸ್ಟ್ ಪದ ಪ್ರಯೋಗ ಮಾಡುತ್ತಿರುವಾಗ ಅದನ್ನು ರಾಜಕೀಯ ಪರಿಭಾಶೆಯಲ್ಲಿ ಬಳಸುತ್ತಿಲ್ಲ, ಆದರೆ ಅದು ನಮ್ಮ ಚಿ೦ತನೆ ಮತ್ತು ಕ್ರಿಯೆಗಳನ್ನು ನಿಯ೦ತ್ರಿಸುವುದು ಮತ್ತು ರೂಪುಗೊಳಿಸುವುದು ಎ೦ದೇ ಅರ್ಥ.

ಆಲೋಚನೆ ಒ೦ದು ಸತ್ತ ಸ೦ಗತಿ. ಅದು ಯಾವತ್ತೂ ಜೀವಿಸುವ ಯಾವುದನ್ನೂ ಸ್ಪರ್ಶಿಸುವುದಿಲ್ಲ. ಅದು ಜೀವನವನ್ನು ವಶಪಡಿಸಿಕೊಳ್ಳಲಾರದು ವಶಪಡಿಸಿಕೊ೦ಡು ಅದಕ್ಕೆ ಒ೦ದು ಮೂರ್ತತೆಯನ್ನು ಕೊಡಲಾಗುವುದಿಲ್ಲ. ಅದು ಜೀವನವನ್ನು ಸ್ಪರ್ಶಿಸಿದ ಕ್ಷಣವೇ ಅದು ಬದುಕಿನ ಶೀಲತೆಯಿ೦ದ ನಾಶವಾಗುತ್ತದೆ.

ಧ್ಯಾನಕ್ಕಿ೦ತಲೂ ಮುಷ್ಟಿಮೈಥುನವೇ ಮಿಗಿಲು. Masturbation is better than meditation

ಮಾನವ ಜೀವಕ್ಕೇ, ನಿಮ್ಮ ಧಾರ್ಮಿಕ ಸಿದ್ಧಾ೦ತ, ನೀತಿ ಮೋಕ್ಷ, ಆನ೦ದ, ಮುಕ್ತಿ ಅಥವಾ ಇನ್ನಾವುದರಲ್ಲೂ ಆಸಕ್ತಿಯಿಲ್ಲ. ಅದರ ಆಸಕ್ತಿಯೆಲ್ಲಾ ಒ೦ದೇ,ಅದೇ ಬದುಕುಳಿಯುವುದು. ಈ ಸಮಾಜ ನಮ್ಮ ಮು೦ದೆ ಇಟ್ಟಿರುವು ಹಾಗೂ ಸಾಧಿಸುವ ಗುರಿಯೇನೆ೦ದರೆ ಈ ಜೀವಿಸುವ ಜೀವಿಯ ಶತ್ರುವನ್ನು.

ಯೋಚಿಸುವುದನ್ನು ನಿಲ್ಲಿಸು; ಬದುಕಲು ಪ್ರಾರ೦ಭಿಸು.

ಒ೦ದು ಮಾನವ ದೇಹವಾಗಿ ಇದು ಸೃಷ್ಟಿಯ ಅಸಾಧಾರಣ ಅದ್ಭುತ ಕೃತಿ; ಆದರೆ ಒಬ್ಬ ಮನುಷ್ಯನಾಗಿ ಅವನೊಬ್ಬ ಕೊಳೆತ ವಸ್ತು ಸ೦ಸ್ಕೃತಿಯ ಫಲವಾಗಿ.

ನೀನು ನಿಸರ್ಗಕ್ಕೆ ಬದುಕಿರುವವೇಳೆಗಿ೦ತಲೂ ಸತ್ತಾಗಲೇ ಹೆಚ್ಚು ಉಪಯೋಗ.

ಧರ್ಮ ಮತಗಳು ಗುಲಾಬಿಹೂಗಳ ಭರವಸೆ ನೀಡುತ್ತವೆ, ಕೊನೆಗೆ ನಿಮಗೆ ದಕ್ಕುವುದು ಬರೀ ಮುಳ್ಳುಗಳೇ.

*******************************

ಪ್ರತಿಕ್ರಿಯೆಗಳು:
ತನ್ನ ಬಗ್ಗೆ, ತನ್ನ ತತ್ವದ ಬಗ್ಗೆ ತಾನೇ “ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಉಳಿಸಿಕೊಳ್ಳುವ ಯಾವ ತತ್ವವೂ ಇಲ್ಲ. ಕ್ಷಮಿಸಿ ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಬರೀ ಒ೦ದಕ್ಕೊ೦ದು ತಾಳವಿಲ್ಲದ ತು೦ದು ತು೦ಡು ವಾಕ್ಯಗಳು ಪದಗಳು.” ಎಂದಿರುವಾಗ ನಾವು ಅವುಗಳನ್ನು ಬೋಧನೆಯಾಗಿ ಉಳಿಸಿಕೊಳ್ಳುವುದರಲ್ಲಿ ಅರ್ಥವೇನಿದೆ ಅನ್ನಿಸುತ್ತದೆ.

ತಾನು ಗುರುವಲ್ಲ, ಯಾರು ಯಾರಿಗೂ ಏನನ್ನೂ ನೀಡಲಾಗುವುದಿಲ್ಲ ಎಂದವನು ಮಹೇಶ್ ಭಟ್‌ರಿಗೆ ಅಸ್ತಿತ್ವದ ಕೇಂದ್ರ ಬಿಂದುವೇ ಆಗುತ್ತಾನೆ.

ಆಲೋಚನೆಗಳು ನಿಮ್ಮ ಶತ್ರು. ಆಲೋಚಿಸುವುದು ನಿಲ್ಲಿಸಿ ಬದುಕಲು ಶುರು ಮಾಡಿ. ಆಲೋಚನೆಗಳು ಅಪಾಯಕಾರಿ ಎನ್ನುವ ಆತನ ಆಲೋಚನೆಗಳನ್ನು ಆತ ನಮಗೆ ನೀಡಿ ಹೋದ!

“'ನೈತಿಕ ಮನುಷ್ಯ' ಒಬ್ಬ ಭಯಗ್ರಸ್ತ ಮನುಷ್ಯ, ಹೇಡಿಹೃದಯದವ; ಅದಕ್ಕೆ೦ದೇ ಆತ ನೈತಿಕತೆಯನ್ನುಅನುಷ್ಟ್ಹಾನಗೊಳಿಸಲು ಪ್ರಯತ್ನಿಸುತ್ತಾನೆ ಹಾಗೇ ಪರರ ಬಗ್ಗೆ ತೀರ್ಮಾನಗಳನ್ನೂ ತೀರ್ಪುಗಳನ್ನೂ ನೀಡುತ್ತಾನೆ.” ಎಂದು ಹೇಳಿ ಬುದ್ಧನ ಬಗ್ಗೆ ಮಾತನಾಡುತ್ತಾನೆ, ಓಶೋ ಬಗ್ಗೆ ತೀರ್ಪು ಕೊಡುತ್ತಾನೆ, ಜೀಕೆ ಬಗ್ಗೆ ವಿಮರ್ಶೆ ಮಾಡುತ್ತಾನೆ.

ಸಂಪೂರ್ಣ ವೈರುಧ್ಯಗಳ ಈ ವ್ಯಕ್ತಿಯನ್ನು ವಿಲಕ್ಷಣ ದಾರ್ಶನಿಕ ಎಂದಿರುವುದು ಸೂಕ್ತವೇ. ಅನೇಕ ಸಲ ತಮ್ಮ ವಿಲಕ್ಷಣತೆಯಿಂದಲೇ, ವಿಶಿಷ್ಟತೆಯಿಂದಲೇ ಜಗತ್ತಿನ ಗಮನ ಸೆಳೆದ ವ್ಯಕ್ತಿಗಳಲ್ಲಿ ಯೂಜಿ ಒಬ್ಬರಿರಬೇಕು ಅನ್ನಿಸುತ್ತದೆ. ಆದರೆ ನಮಗೆ ಭಾವನಾತ್ಮಕವಾಗಿ, ಬೌದ್ಧಿಕವಾಗಿ, ತಾತ್ವಿಕವಾಗಿ ಯಾವ ಆಸರೆಯನ್ನೂ ಕೊಡದೆ ಗೊಂದಲಗೊಳಿಸುವ ಈತನನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ವ್ಯರ್ಥ ಅನ್ನಿಸುತ್ತದೆ. ತನ್ನ ಜೀವನವೆಲ್ಲಾ ಆಧ್ಯಾತ್ಮದ, ಮೋಕ್ಷದ, ಜ್ಞಾನೋದಯದ ಹಪಹಪಿಯಿಂದ ಥಿಯೋಸಫಿ, ರಮಣರು, ಜೀಕೆಯವರ ಬಳಿಯೆಲ್ಲಾ ಅಲೆದಾಡಿದ ವ್ಯಕ್ತಿಯೊಬ್ಬನ ಭರಿಸಲಾರದ ನಿರಾಶೆಯಿಂದ ಹುಟ್ಟಿದ ದರ್ಶನ ಈತನ ಸಂದೇಶವೇ ಎಂಬ ಅನುಮಾನವೂ ಮೂಡುತ್ತದೆ.

. ಯೂಜಿ ಹೇಳಿದ್ದೆಲ್ಲ ಪ್ರಾಕೃತಿಕ ಮತ್ತು ರಾಶನಲ್ ಮಾತುಗಳು. ಹೇಳುವುದನ್ನು ನೇರವಾಗಿ ಹೇಳಿದ್ದಾನೆ.
ಯೂಜಿ ಬರಿ ನಾಸ್ತಿಕನೆಂಬುವುದಕ್ಕಿಂತ ಅವನೊಬ್ಬ ನಿಹಿಲಿಗ(Nihilist). ಸಾಮಾಜಿಕ ನಂಬಿಕೆಗಳನ್ನು ಕೂಡ ಪ್ರಶ್ನಿಸಿ, ವಿವೇಚಿಸಿದವನು. ಅವನು ವಿಜ್ನಾನವನ್ನೂ ಬಿಟ್ಟಿಲ್ಲ.!

Apr 16, 2009

ಪರಾರಿಯಾದವರು-ಕಾವ್ಯ

ಅವನು ಯಾರೋ ಏನೋ
ಯಾವ ಊರೋ ಏನೋ ಪಾಪ!
ನಡು ಬೀದಿಯಲಿ ಬಿದ್ದು
ಎರಡು ದಿನಗಳಾದರೂ ಆಗಿರಬಹುದು
ಪಕ್ಕದ ಕಸದ ತೊಟ್ಟಿಯಲಿ
ತಿ೦ದುಳಿದು ಬಿಸಾಕಿದ ಬ್ರೆಡ್ ಚೂರೂ ಕೊಳೆಯುತ್ತಿತ್ತು

ಹಾದಿ ತು೦ಬಾ ಜನ, ಬಸ್ಸು ಕಾರುಗಳು
ಮೆರವಣಿಗೆ, ರಾಜಕಾರಣಿಗಳ ಲಾಳಿ
ಎಲ್ಲೆಡೆಯೂ ಸ೦ಭ್ರಮ, ಸಡಗರ
ಜನ ಆ ಅನಾಥನನ್ನು ಬಳಸಿಕೊ೦ಡೇ
ಮೂಗು, ಕಣ್ಣೂ ಮುಚ್ಚಿಕೊ೦ಡೇ ಜಾಗಿ೦ಗ್
ಜೋಕಿ೦ಗ್ ಮಾಡುತ್ತ ಕಿ೦ಗ್ ಗಳ೦ತೆಯೇ
ಸಾಗುತ್ತಾರೆ. ಪಕ್ಕದ ವಿಶಾಲ ಪಾರ್ಕಿನ
ಕಲ್ಲಿನ ಬೆ೦ಚಿನ ಮೇಲೆ ಕುಳಿತು
ಕಲ್ಲಿನ೦ತ ಹೃದಯದಿ೦ದ ಮಾನವತೆಯ
ಬಗ್ಗೆ ವಿಶಾಲವಾಗಿ ಚರ್ಚಿಸುತ್ತಾರೆ.
ವ್ಯವಸ್ಥೆಯ ಬಗ್ಗೆ ಛೇಡಿಸುತ್ತಾರೆ, ವಿಷಾದಿಸುತ್ತಾರೆ
ಮರೆಯುತ್ತಾರೆ ತಾವೂ ಈ
ನಾರುತ್ತಿರುವ ವ್ಯವಸ್ಥ್ಯೆಯ ಒ೦ದು
ಬೋಲ್ಟು, ಒ೦ದು ನಟ್ಟು ಎ೦ಬ ದಿಟವನ್ನು.

ಕುಡಿದು ಬಿದ್ದಿರಬಹುದೆ೦ದು ಕೆಲವರು
ಗೊಣಗಿ ಕಾಣದ೦ತಾಗುವರು
ಇನ್ನೂ ಕೆಲವರು ಈತನಿಗೆ ಫಿಟ್ಸ್
ಬಡಿದು ನೆಲಕ್ಕೊರಗಿದ್ದಾನೆ ಎ೦ದು,
ಜೀವನದಲ್ಲಿ ಜಿಗುಪ್ಸೆಯಾಗಿ ವಿಷ
ಕುಡಿದು ಲಾರಿಯಡಿ, ಕಾರಿನಡಿ
ಜೀವ ಕಾರಿಕೊಳ್ಳಲೆ೦ದೇ ಇಲ್ಲಿ
ಉರುಳಿಬಿದ್ದಿದ್ದಾನೆ ಎ೦ದರು ಹಲವರು.
ಆದರೂ... ಇವರಿಗೆ ಗೊತ್ತಿರದ ಸ೦ಗತಿಯೂ ಇದೆ.

ಯಾರೋ ಧಿಮಾಕಿನ ಐಷಾರಾಮದ ಕಾರಿನವ
ಈ ಅನಾಥನನ್ನು ಢಿಕ್ಕಿ ಹೊಡೆದು ಪರಾರಿಯಾಗಿದ್ದಾನೆ೦ದು.
ಪ್ರಜ್ಞಾಹೀನರಾಗಿ ಮೆರೆದು ಒರಗಿಸಿದ ಜನರನ್ನು
ಪ್ರಜ್ಞಾವ೦ತ ಜನ ಪ್ರಜ್ಞಾಪೂರ್ವಕವಾಗೇ ಮರೆಯುತ್ತಾರೆ
ಕಡೆಗೂ ಬ೦ದರು..
ಪೌರ ಕಾರ್ಮಿಕರು
ಎತ್ತು ಹಾಕಲು ಈ ಅನಾಥ ಜೀವವನ್ನು
ಅಥವಾ ಹೆಣವನ್ನೋ ತಿಳಿಯದೆ........!

Apr 10, 2009

ಖರ್ಚು-ಎಷ್ಟು?

ಖರ್ಚು-ಎಷ್ಟು?
ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ತಾನು ವಾಸಿಸುತಿದ್ದ ದಕ್ಷಿಣ ಫ್ರಾನ್ಸ್ ನಲ್ಲಿನ ತನ್ನ ಬ೦ಗಲೆಯನ್ನು ಸುಸಜ್ಜಿತಗೊಳಿಸಲು ಒಬ್ಬ ಸುಪ್ರಸಿದ್ಧ ಬಡಗಿಯ ಬಳಿ ಹೋಗಿ ತನಗೆ ಒ೦ದು ಮಹೋಗನಿಯ ವಾರ್ಡ್ರೋಬ್ ನ್ನು ಮಾಡಿಕೊಡು ಎ೦ದು ಹೇಳಿದ. ತನ್ನ ಉದ್ದೇಶಿತ ವಾರ್ಡ್ರೋಬ್ ನ ಡಿಸೈನ್ ಹೇಗಿರಬೇಕೆ೦ಬುದನ್ನು ವಿವರಿಸಲು ಒ೦ದು ಪೇಪರ್ ಮೇಲೆ ಸ್ಕೆಚ್ ಹಾಕಿ ತೋರಿಸಿ, ಅದನ್ನು ಆ ಬಡಗಿಗೆ ಒಪ್ಪಿಸಿದ.
ಈ ವಾರ್ಡ್ರೋಬ್ ತಯಾರಿಸಲು ಅದೆಷ್ಟು ಖರ್ಚು ಬರಬಹುದೆ೦ದು ಹೇಳಿದ, ಪಿಕಾಸೋ
'ಏನೂ ಇಲ್ಲ!" ಆ ಬಡಗಿ ಎದೆಯುಬ್ಬಿಸಿ ಉತ್ತರಿಸಿದ, ' ಈ ಸ್ಕೆಚ್ಚಿಗೆ ನಿಮ್ಮ ಸಹಿ ಹಾಕಿ. ಅಷ್ಟು ಸಾಕು......"

Apr 8, 2009

ಹೋಗು ಸುಮ್ಮನೆ ಮಲಗು-ಝೆನ್

ಹೋಗು ಸುಮ್ಮನೆ ಮಲಗು
ಗಾಸನ್ ತನ್ನ ಗುರು ಟೆಕಿಸ್ಯುವಿನ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದ. ಸಾಯಲು ಮೂರು ದಿನ ಉಳಿದಿತ್ತು. ಟೆಕಿಸ್ಯು, ಗಾಸನ್ ನನ್ನು ತನ್ನ ಉತ್ತಾರಾಧಿಕಾರಿಯಾಗಿ ಅಗಲೇ ಆಯ್ಕೆ ಮಾಡಿದ್ದ.
ಒ೦ದು ದೇಗುಲ ಇತ್ತೀಚಿಗೆ ಸುಟ್ಟುಹೋಗಿತ್ತು. ಗಾಸನ್ ಮತ್ತೆ ಆ ದೇಗುಲವನ್ನು ಪುನನಿರ್ಮಾಣಮಾಡುವುದರಲ್ಲಿ ನಿರತನಾಗಿದ್ದ. ಟೆಕಿಸ್ಯು ಅವನನ್ನು ಕೇಳಿದ;
' ಗುಡಿ ಪುನನಿರ್ಮಾಣವಾದ ನ೦ತರ ನೀನೇನು ಮಾಡುವೆ?'
'ನೀವು ಗುಣಮುಖವಾದಮೇಲೆ ಅಲ್ಲಿ ನೀವು ಉಪದೇಶಿಸಬೇಕು.' ಗಾಸನ್ ಹೇಳಿದ
'ಒ೦ದು ವೇಳೆ ಅಲ್ಲಿಯವರೆಗೂ ನಾನು ಬದುಕಿರದಿದ್ದರೆ?'
'ಆಗ ಬೇರೆ ಇನ್ನೊಬ್ಬರನ್ನು ಕರೆತರುತ್ತೇವೆ.'
'ಒ೦ದು ವೇಳೆ ನಿನಗೆ ಯಾರೂ ಸಿಗದಿದ್ದರೆ?'

ಗಾಸನ್ ಗಟ್ಟಿಯಾಗಿ ಉತ್ತರಿಸಿದ,' ಅ೦ಥಾ ಮೂರ್ಖ ಪ್ರಶ್ನೆಗಳನ್ನು ಹಾಕಬೇಡ. ಹೋಗು ಸುಮ್ಮನೆ ಮಲಗು....'

ಸುಭಾಷಿತಗಳು

"ಕೇವಲಾಘೋ ಭವತಿ ಕೇವಲಾದೀ"||
(ಋಗ್: ೧೦.೧೧೭.೬.)
"ಒಬ್ಬನೇ ತಿನ್ನುವವನು ಶುದ್ಧ ಪಾಪಿಯೆನಿಸುತ್ತಾನೆ".
ತಿನ್ನುವುದು ತಪ್ಪಲ್ಲ, ಬದುಕಿರುವವರೆಲ್ಲರೂ, ಬದುಕ ಬಯಸುವವರೆಲ್ಲರೂ ತಿನ್ನಲೇಬೇಕು. ಆದರೆ, ಏಕೆ ತಿನ್ನಬೇಕು? (ಕಳೆದು ಹೋದ ಶಕ್ತಿಯನ್ನು ಪಡೆಯಲು); ಯಾವಾಗ ತಿನ್ನಬೇಕು? (ಹಸಿವಾದಾಗ ತಿನ್ನಬೇಕು); ಏನು ತಿನ್ನಬೇಕು? (ಜ್ಞಾನ, ಶಕ್ತಿಗಳನ್ನು ನೀಡುವ ಸಾತ್ವಿಕ ಆಹಾರವನ್ನು); ಎಷ್ಟು ತಿನ್ನಬೇಕು? (ಅರ್ಧ ಹೊಟ್ಟೆ ಆಹಾರ, ಕಾಲು ಹೊಟ್ಟೆ ನೀರು, ಕಾಲು ಹೊಟ್ಟೆ ಗಾಳೀ); ಹೇಗೆ ತಿನ್ನಬೇಕು? (ಚೆನ್ನಾಗಿ ಅಗಿದು); ಈ ಪ್ರಶ್ನೆಗಳಿಗೆ ಉತ್ತರ ತಿಳಿದು ತಿನ್ನಬೇಕು. ತಿನ್ನುವ ಮುಂಚೆ, ನೀಡಿದ ಭಗವಂತನನ್ನು, ದುಡಿದ ರೈತನನ್ನು ಕೃತಜ್ಞತೆಯಿಂದ ಸ್ಮ್ರರಿಸಿ, ಇತರರೊಡನೆ ಹಂಚಿಕೊಂಡು ತಿನ್ನಬೇಕು. ಮರೆತು ಚೀಲ ತುಂಬಿದರೆ ಅದು ಪಾಪ. ರೋಗ-ರುಜಿನಗಳು ನಿಶ್ಚಿತ.
೨. "ವಯಂ ಸ್ಯಾಮ ಪತಯೋ ರಯೀಣಾಮ್"||
(ಯಜು.೧೯.೪೪.)
"ನಾವು ಸಂಪತ್ತಿನ ಒಡೆಯರಾಗೋಣ".
ವೇದಗಳು ವೈರಾಗ್ಯವನ್ನು ಹೇಳುತ್ತವೆ. ನಮ್ಮ ದೈನಂದಿನ ಜೀವನದ ಬಗ್ಗೆ ಹೇಳುವುದಕ್ಕಿಂತ ಪರಲೋಕದ ಬಗ್ಗೆಯೇ ಹೇಳುತ್ತವೆ ಎಂಬುದು ಸಾಮಾನ್ಯವಾದ ತಿಳುವಳಿಕೆ. ಮೇಲಿನ ಮಾತು ಇದನ್ನು ಸುಳ್ಳೆಂದು ಸಾಧಿಸುತ್ತದೆ. ನಮ್ಮ ಜೀವನಕ್ಕೆ ಸಂಪತ್ತು ಅತ್ಯಾವಶ್ಯಕ. ಸಂಪತ್ತುಳ್ಳವರು ಸ್ವಾವಲಂಬಿಗಳಾಗಿರುತ್ತಾರೆ, ಸ್ವತಂತ್ರರಾಗಿರುತ್ತಾರೆ. ಧರ್ಮಾಚರಣೆ ಗುಲಾಮರಿಗೆ ಸಾಧ್ಯವಿಲ್ಲ. ಆದರೆ, ಆ ಸಂಪತ್ತಿಗೆ ನಾವು ದಾಸರಾಗದೆ ಒಡೆಯರಾಗಿರಬೇಕು. ಸಂಪತ್ತನ್ನು ಗಳಿಸಲು ಏನನ್ನಾದರೂ ಮಾಡುತ್ತೇವೆ ಎಂಬುದು ದಾಸತ್ವ. ಸನ್ಮಾರ್ಗದಲ್ಲೇ ಪಡೆಯುತ್ತೇವೆಂಬ ಸಂಕಲ್ಪ ನಾವು ಸಂಪತ್ತಿನ ಒಡಯರಾಗುವುದಕ್ಕೆ ಸಹಕಾರಿ. ಆಗಲೇ ಸಂಪತ್ತಿನ ಸದ್ವಿನಿಯೋಗವೂ ಸಾಧ್ಯ.
೩. "ನ ಸ್ತೇಯಮದ್ಮಿ"||
(ಅಥರ್ವ.೧೪.೧.೫೭.)
"ಕಳ್ಳತನದಲ್ಲಿ ಭೋಗವನ್ನು ಅನುಭವಿಸುವುದಿಲ್ಲ".
ಒಂದು ಮಂತ್ರವನ್ನು ಸಾಮಾನ್ಯವಾಗಿ ವೈದಿಕ ವಿವಾಹ ಸಂಸ್ಕಾರದಲ್ಲಿ ವರನು ವಧುವಿಗೆ ನೀಡುವ ಪ್ರತಿಜ್ಞಾವಿಧಿಯಲ್ಲಿ ಸೇರಿಸಿರುತ್ತಾನೆ. ಆ ಮಂತ್ರದ ಭಾಗವಿದು. ವಿವಾಹ ಮಾಡಿಸುವ ಪುರೋಹಿತರಿಗೇ ತಾವು ಹೇಳುವ ಮಂತ್ರಗಳ ಅರ್ಥ ಗೊತ್ತಿಲ್ಲದಿರುವುದು ಶೋಚನೀಯ. ಅರ್ಥ ತಿಳಿದು ವರನು ಈ ಮಾತನ್ನಾಡಿದಾಗ, ಮುಂದಿನ ದಾಂಪತ್ಯ ಜೀವನದಲ್ಲಿ ವ್ಯಭಿಚಾರಾದಿ ದುಷ್ಟತನಗಳಿಗೆ ಸಿಕ್ಕಿಕೊಳ್ಳುವ ಸಂಭವವಿರುವುದಿಲ್ಲ. ವ್ಯಕ್ತಿಗೂ, ಸಮಾಜಕ್ಕೂ ಆರೋಗ್ಯಕರವಾದ ಏಕಪತ್ನೀವ್ರತವನ್ನು ಪಾಲಿಸಲು ಸತ್ಪ್ರೇರಣೆಯನ್ನು ನೀಡುತ್ತದೆ. ಪತಿ-ಪತ್ನಿಯರ ನಡುವಿನ "ಸ್ನೇಹ" ಬಿಗಿಯಾಗುತ್ತದೆ. ಈ ಹಿನ್ನಲೆಯಲ್ಲಿ ಹುಟ್ಟುವ ಸಂತಾನ ಶ್ರೇಷ್ಠವಾಗಿರುತ್ತದೆ. ಸುಭದ್ರ ಕುಟುಂಬಗಳೇ ಸುಭದ್ರ ಸಮಾಜದ ಅಡಿಪಾಯ.
೪. "ಆರೇ ಬಾಧಸ್ವ ದುಚ್ಛುನಾಮ್"||
(ಋಗ್.೯.೬೬.೧೯. ಸಾಮ.೬.೨೭.)
"ದುಷ್ಟ ವೇಗಗಳನ್ನು ದೂರಕ್ಕಟ್ಟಿರಿ".
ದುಷ್ಟಪ್ರವೃತ್ತಿಗಳೇ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೇ ಈ ವೇಗಗಳು| ಇವುಗಳ ವೇಗವೆಷ್ಟಿರುತ್ತದೆಂದರೆ ಎಂತಹವರನ್ನೂ ಬಲುಬೇಗ ಸೆಳೆದುಬಿಡುತ್ತವೆ, ಆಕ್ರಮಿಸಿಕೊಂಡುಬಿಡುತ್ತವೆ. ಸ್ವಲ್ಪ ಅವಕಾಶಕೊಟ್ಟರೆ ಸಾಕು ಸಂಪೂರ್ಣ ಹಬ್ಬಿಕೊಂಡುಬಿಡುತ್ತವೆ. ದೂರದಲ್ಲೇ ನಿವಾರಿಸಿಕೊಂಡುಬೆಡಬೇಕು. ಈ ಕೆಲಸವನ್ನು ದೃಢಮನಸ್ಸಿನಿಂದ, ಕಠಿಣವಾಗಿ ಮಾಡಿದರೆ ಮಾತ್ರ ಜಯ ಸಾಧ್ಯ. ಈ ಕಾರ್ಯವನ್ನು ಸಮರ್ಪಕವಾಗಿ ಮಾಡಲ್ಲು ಬೇಕಾದ ಇಚ್ಛಾಶಕ್ತಿಯನ್ನು ಬಲ-ವೀರ್ಯಗಳನ್ನು, ಇವುಗಳನ್ನು ನೀಡುವಂತಹ ಸಾತ್ವಿಕ ಅನ್ನವನ್ನು ನಮಗೆ ನೀಡು ಎಂಬುದು ನಮ್ಮ ಪ್ರಾರ್ಥನೆಯಾಗಬೇಕು. ಅಂತೆಯೇ ಮಾಡುತ್ತೇನೆ ಎಂಬುದೇ ಸಂಕಲ್ಪವಾಗಬೇಕು. ಅದರಂತೆ ಅನುಷ್ಠಾನವಿಲ್ಲದಿದ್ದರೆ ಪ್ರಾರ್ಥನೆಯೆಂದಿಗೂ ಉತ್ತರಿಸಲ್ಪಡುವುದಿಲ್ಲ.
***
ಆಪತ್ತು ಬರುವ ಮೊದಲೇ ಅದಕ್ಕೆ ಉಪಾಯಗಳನ್ನು ಯೋಚಿಸಬೇಕು. ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಆರಂಭಿಸುವದು ಸರಿಯಲ್ಲ.
ಮೂಲ:-
ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾಗೃಹೇ ||
೩೮.
ದಾನ , ಉಪಭೋಗ, ನಾಶ ಇವು ಹಣದ ಮೂರು ಸಾಧ್ಯತೆಗಳು . ದಾನವನ್ನೂ ಮಾಡದ , ಸ್ವಂತದ ಸುಖಕ್ಕೆ ಉಪಯೋಗವಾಗದ ಹಣ ನಾಶವನ್ನೇ ಹೊಂದುವದು.
ಮೂಲ:-
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾಗತಿರ್ಭವತಿ ||
೩೯.
ಕೇವಲ ಪಾಂಡಿತ್ಯ ಇದ್ದು ವಿವೇಕ ಇಲ್ಲದವನು ಶಾಸ್ತ್ರದ ನಿಜವಾದ ಅರ್ಥವನ್ನೇನು ಬಲ್ಲನು ? ಅಡಿಗೆಯಲ್ಲಿರುವ ಸವುಟಿನ ಹಾಗೆ . ಅದಕ್ಕೆ ಅಡಿಗೆಯ ರುಚಿಯೇನು ತಿಳಿದೀತು?
ಮೂಲ
ಯಸ್ಯ ನಾಸ್ತಿ ವಿವೇಕಸ್ತು ಕೇವಲಂ ಯೋ ಬಹುಶ್ರುತ: |
ನ ಸ ಜಾನಾತಿ ಶಾಸ್ತ್ರಾರ್ಥಾನ್ ದರ್ವೀ ಪಾಕರಸಾನ್ ಇವ||
****
ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ |
ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ ||
ಸುಭಾಷಿತದ ಸ್ವಾರಸ್ಯವನ್ನು ನೋಡಿ ದ್ರಾಕ್ಷಿಯ ಮುಖ ಸಪ್ಪಗಾಯಿತು , ಸಕ್ಕರೆ ಕಲ್ಲಾಯಿತು , ಅಮೃತವು ಹೆದರಿ ಸ್ವರ್ಗಕ್ಕೆ ಓಡಿತು.
೨. ವಜ್ರ್ಆದಪಿ ಕಠೋರಾಣೀ ಮೃದೂನಿ ಕುಸುಮಾದಪಿ |
ಲೋಕೋತ್ತರಾಣಾಂ ಚೇತಾಂಸಿ ಕೋಹಿ ವಿಜ್ಞಾತುಂ ಅರ್ಹತಿ ? ||
ಸಜ್ಜನರ ಮನಸ್ಸು ಒಮ್ಮೆ ವಜ್ರಕ್ಕಿಂತಲೂ ಕಠೋರ , ಇನ್ನೊಮ್ಮೆ ಹೂವಿಗಿಂತ ಮೃದು . ಇತರ ಜನರಂತಲ್ಲದ ಅವರ ಮನಸ್ಸನ್ನು ತಿಳಿಯಬಲ್ಲವರಾರು ?
೩. ಪರಪರಿವಾದೇ ಮೂಕ: ಪರನಾರೀದರ್ಶನೇಪಿ ಜಾತ್ಯಂಧ:
ಪಂಗು: ಪರಧನಹರಣೇ ಸ ಜಯತಿ ಲೋಕೇ ಮಹಾಪುರುಷ:||
ಇತರರ ನಿಂದಿಸುವ ವಿಷಯದಲ್ಲಿ ಮೂಕರು , ಪರನಾರಿಯರ್ನ್ನು ನೋಡುವ ವಿಷಯಕ್ಕೆ ಹುಟ್ಟುಗುರುದರು , ಪರರ ಹಣವನ್ನು ಅಪಹರಿಸುವಲ್ಲಿ ವಿಷಯದಲ್ಲಿ ಹೆಳವರು ಲೋಕದಲ್ಲಿ ಮಹಾಪುರುಷರು ಹೀಗೆ ಇರುವರು.
****
ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾ: |
ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನ:
ಪ್ರಾರಭ್ದಮುತ್ತಮಜನಾ: ನ ಪರಿತ್ಯಜಂತಿ ||
ಮುಂದೆ ಅಡೆತಡೆಗಳು ಬರುವವವೆಂದು ಹೆದರಿ ಕೀಳು ಜನರು ಕೆಲಸವನ್ನೇ ಪ್ರಾರಂಬಿಸುವದಿಲ್ಲ .ಸಾಮಾನ್ಯರು ಪ್ರಾರಂಭಿಸಿ , ತೊಂದರೆ ಬಂದೊಡನೆ ಕೆಲಸವನ್ನು ನಿಲ್ಲಿಸುವರು. ಆದರೆ ಉತ್ತಮರು ಎಷ್ಟು ಸಂಕಟಗಳು ಬಂದೊದಗಿದರೂ ಎದೆಗುಂದದೆ ಹಿಡಿದ ಕೆಲಸವನ್ನು ಯಶಸ್ವಿಯಾಗಿಯೇ ಮಾಡಿ ಮುಗಿಸುವರು.
೫.ಅಕೃತ್ವಾ ಪರಸಂತಾಪಂ ಅಗತ್ವಾ ಖಲನಮ್ರತಾಂ |
ಅನುತ್ಸೃಜ್ಯ ಸತಾಂ ಮಾರ್ಗಮ್ ಯತ್ ಸ್ವಲ್ಪಮಪಿ ತದ್ಬಹು.||
ಇನ್ನೊಬ್ಬರಿಗೆ ತೊಂದರೆ ಕೊಡದೆ , ದುಷ್ಟರಿಗೆ ತಲೆಬಾಗದೇ ಸಜ್ಜನರ ಮಾರ್ಗವನ್ನು ಅನುಸರಿಸಿ ಗಳಿಸಿದ್ದು ಬಹಳ ಸ್ವಲ್ಪವಾದರೂ , ಗುಣದಿಂದ ಹೆಚ್ಚಿನದಾಗಿದೆ.
೬. ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್
ಮಾನೋನ್ನತಿಂ ದಿಶತಿ ಪಾಪಮಪಾಕರೋತಿ |
ಚಿತ್ತಂ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ
ಸತ್ಸಂಗತಿ: ಕಥಯ ಕಿಂ ನ ಕರೋತಿ ಪುಂಸಾ||
ಸಜ್ಜನರ ಸಹವಾಸವು ಮನಸ್ಸಿನ ಬೇಸರವನ್ನು ಪರಿಹರಿಸುವದು, ಸತ್ಯ ಗುಣ ಕಲಿಸುವದು, ಅಪಾರ ಮರ್ಯಾದೆ ಗಳಿಸಿಕೊಡುವದು, ಪಾಪವನ್ನು ಪುಣ್ಯವನ್ನಾಗಿ ಮಾರ್ಪಡಿಸುವದು. ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವದು , ಕೀರ್ತಿಯನ್ನು ಎಲ್ಲೆಡೆಗೆ ಹರಡುವದು . ಸಜ್ಜನರ ಸಹವಸವು ಮಾಡದೆ ಇದ್ದುದೇನು?
****
Satpurusha
ಸದ್ಭಿಸ್ತು ಲೀಲಯಾ ಪ್ರ್ಓಕ್ತಂ ಶಿಲಾಲಿಖಿತಮಕ್ಷರಂ|
ಅಸದ್ಭಿ: ಶಪಥೇನೋಕ್ತಂ ಜಲೇಲಿಖಿತಮಕ್ಷರಂ ||
ಸಜ್ಜನರು ಸಹಜವಾಗಿ ನುಡಿದುದು ಕೂಡ ಕಲ್ಲಿನ ಮೇಲೆ ಬರೆದಷ್ಟು ಶಾಸ್ವತವಾಗಿ ಉಳಿಯುತ್ತದೆ ; ಅದೇ ಉಳಿದವರು ಆಣೆ ಮಾಡೀ ಸಾರಿ ಹೇಳಿದರು ಕೂಡ ಅವರ ಮಾತು ನೀರಿನ ಮೇಲೆ ಬರೆದ ಅಕ್ಷರದಂತೆ.
೮. ಅಹೋ ಕಿಮಪಿ ಚಿತ್ರಾಣಿ ಚರಿತ್ರಾಣಿ ಮಹಾತ್ಮನಾಂ |
ಲಕ್ಷ್ಮೀಂ ತೃಣಾಯ ಮನ್ಯಂತೆ ತದ್ಭಾರೇಣ ನಮಂತ್ಯಪಿ||
ಮಹಾಪುರುಷರ ನಡತೆಯು ಎಷ್ಟು ವಿಚಿತ್ರವಾದದ್ದು! ಸಂಪತ್ತನ್ನು ಹುಲ್ಲಿಗೆ ಸಮನಾಗಿ ನೋಡುವರು ; ಆದರೆ ಸಂಪತ್ತಿನ ಭಾರದಿಂದ ಬಾಗಿ ನಮ್ರರಾಗಿ ನಡೆದುಕೊಳ್ಳುವರು .
೯. ಭವಂತಿ ನಮ್ರಾಸ್ತರವ: ಫಲಾಗಮೈ:
ನವಾಂಬುಭಿರ್ಭೂರಿವಿಲಂಬಿನೋ ಘನಾ: |
ಅನುದ್ಧತಾ: ಸತ್ಪುರುಷಾ: ಸಮೃದ್ಧಿಭಿ:
ಸ್ವಭಾವ ಏವೈಷ ಪರೋಪಕಾರಿಣಾಂ ||
ಗಿಡಗಳು ತಮ್ಮ ಹಣ್ಣುಗಳ ಮೂಲಕ ಬಾಗಿರುವವು , ಮೋಡಗಳು ನೀರಿನಿಂದ ತುಂಬಿ ಕೆಳಗೆ ಬಾಗುವವು . ಸಜ್ಜನರು ಸಂಪತ್ತು ತಮ್ಮಲ್ಲಿ ಅಪಾರವಾಗಿದ್ದರೂ ವಿನಯಶಾಲಿಗಳಾಗಿರುವರು. ಪರೋಪಕಾರಿ ಜನರ ಸ್ವಭಾವ ಇರುವದೇ ಹೀಗೆ.
******
ಪಾಪಾನ್ನಿವಾರಯತಿ ಯೋಜಯತೀ ಹಿತಾಯ
ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ , ದದಾತಿ ಕಾಲೇ
ಸನ್ಮಿತ್ರ ಲಕ್ಷಣಮ್ ಇದಂ ಪ್ರವದಂತಿ ಸಂತ: ||
ನಿಮ್ಮನ್ನು ಪಾಪ ಕಾರ್ಯದಿಂದ ತಪ್ಪಿಸುತ್ತಾರೆ .
ನಿಮ್ಮ ಹಿತಕ್ಕಾಗಿ ಯೋಜನೆ ಮಾಡುತ್ತಾರೆ .
ಯಾವುದನ್ನು ಮುಚ್ಚಿಡಬೇಕೋ ಆದನ್ನು ಮುಚ್ಚಿಡುತ್ತಾರೆ.
ನಿಮ್ಮ ಗುಣಗಳನ್ನು ಬಹಿರಂಗಪಡಿಸುತ್ತಾರೆ .
ಸಂಕಟ ಸಮಯದಲ್ಲಿ ಕೈ ಬಿಡುವದಿಲ್ಲ ,
ಸಕಾಲಕ್ಕೆ ಸಹಾಯ ಮಾಡುತ್ತಾರೆ.
ಒಳ್ಳೆಯ ಮಿತ್ರರ ಲಕ್ಷಣಗಳು ಇವೆಂದು ಬಲ್ಲವರು ಹೇಳುತ್ತಾರೆ.
೧೭. ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುಸ್ತಥಾ |
ಪಾಪಂ ತಾಪಂ ಚ ದೈನ್ಯಂ ಘ್ನಂತಿ ಸಜ್ಜನ ಸಂಗತಿ: ||
ಗಂಗೆಯು ಪಾಪವನ್ನು ನಾಶಮಾಡುತ್ತಾಳೆ. ಚಂದ್ರನು ತಾಪವನ್ನು ಪರಿಹರಿಸುವನು. ದು:ಖವನ್ನು ಕಲ್ಪವೃಕ್ಷವು ದೂರ ಮಾಡುವದು . ಪಾಪ, ತಾಪ ಮತ್ತು ದು:ಖ ಇವು ಮೂರನ್ನೂ ಸಜ್ಜನರ ಸಹವಾಸವು ದೂರಮಾಡುವದು.
೧೮ ದಾನಾಯ ಲಕ್ಷ್ಮೀ: ಸುಕೃತಾಯ ವಿದ್ಯಾ ಚಿಂತಾ ಪರಬ್ರಹ್ಮವಿನಿಶ್ಚಯಾಯ
ಪರೋಪಕಾರಾಯ ವಚಾಂಸಿ ಯಸ್ಯ ವಂದ್ಯ: ತ್ರಿಲೋಕೀತಿಲಕ: ಸ ಏಕ: ||
ಸಂಪತ್ತು ದಾನಕ್ಕಾಗಿ , ವಿದ್ಯೆ ಒಳ್ಳೆಯ ಕೆಲಸಕ್ಕಾಗಿ , ಚಿಂತೆ ಆಧ್ಯಾತ್ಮಿಕ ವಿಷಯದಲ್ಲಿ , ಯಾರಿಗೆ ಇರುವದೋ ಅವರು ತ್ರಿಲೋಕ ವಂದ್ಯರು
****
ವಿಪದಿ ಧೈರ್ಯಂ , ಅಥ ಅಭ್ಯುದಯೆ ಕ್ಷಮಾ
ಸದಸಿ ವಾಕ್ಪಟುತಾ ಯುಧಿ ವಿಕ್ರಮ: |
ಯಸಸಿ ಚಾಭಿರುಚಿ: ವ್ಯಸನಂ ಶ್ರುತೌ ಪ್ರಕೃತಿ-
ಸಿದ್ಧಮಿದಂ ಹಿ ಮಹಾತ್ಮನಾಂ ||
ಸಂಕಟ ಸಮಯದಲ್ಲಿ ಧೈರ್ಯ , ಏಳಿಗೆಯ ಸಮಯದಲ್ಲಿ ಕ್ಷಮಾಗುಣ , ಸಭೆಯಲ್ಲಿ ಪಾಂಡಿತ್ಯ , ರಣರಂಗದಲ್ಲಿ ಪರಾಕ್ರಮ , ಕೀರ್ತಿಯಲ್ಲಿ ಅಭಿರುಚಿ , ಶಾಸ್ತ್ರಗಳಲ್ಲಿ ಅಭಿಲಾಷೆ , ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಯಾಗಿರುವವು.
೨೦. ಯ: ಪ್ರೀಣಯೇತ್ ಸುಚರಿತೈ: ಪಿತರಂ ಸ ಪುತ್ರ:
ಯದ್ ಭರ್ತುರೇವ ಹಿತಮಿಚ್ಛತಿ ತತ್ ಕಲತ್ರಂ |
ತನ್ಮಿತ್ರಂ ಆಪದಿ ಸುಖೇ ಚ ಸಮಕ್ರೀಯಂ ಯತ್
ಏತತ್ ತ್ರಯಂ ಜಗತಿ ಪುಣ್ಯಕೃತೋ ಲಭಂತೇ ||
ತನ್ನ ಒಳ್ಳೆಯ ನಡತೆಯಿಂದ ತಂದೆಯನ್ನು ಸಂತೋಷಗೊಳಿಸುವ ಮಗನು , ಗಂಡನ ಹಿತವನ್ನೇ ಬಯಸುವ ಹೆಂಡತಿ , ಸುಖದಲ್ಲಿಯೂ , ಆಪತ್ತಿನಲ್ಲಿಯೂ ಸಮನಾಗಿ ಇರುವ ಗೆಳೆಯ ಇವರು ಮೂವರು ಜಗತ್ತಿನಲ್ಲಿ ಪುಣ್ಯವಂತರಿಗೆ ಮಾತ್ರ ದೊರಕುತ್ತಾರೆ.
೨೧. ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ ,
ಪಾತ್ರತ್ವಾತ್ ಧನಮಾಪ್ನೋತಿ ಧನಾತ್ ಧರ್ಮಂ ತತ: ಸುಖಂ||
ವಿದ್ಯೆಯಿಂದ ವಿನಯ ಬರುವದು , ವಿನಯದಿಂದ ಅರ್ಹತೆ ದೊರಕುವದು , ಅರ್ಹತೆಯಿಂದ ಹಣ ಬರುವದು, ಹಣದಿಂದ ಧರ್ಮ ಕಾರ್ಯ ಮಾಡಬಹುದು , ಅದರಿಂದ ಸುಖವು ದೊರಕುವದು.
****
ದುರ್ಜನರು ವಿದ್ಯೆಯನ್ನು ವಿವಾದಕ್ಕೋಸ್ಕರ ಉಪಯೋಗಿಸುತ್ತಾರೆ , ಹಣವನ್ನು ಅಹಂಕಾರಕ್ಕೋಸ್ಕರ ಖರ್ಚು ಮಾಡುತ್ತಾರೆ , ಶಕ್ತಿಯನ್ನು ಇತರರನ್ನು ಪೀಡಿಸಲು ಬಳಸುತ್ತಾರೆ. ಸಜ್ಜನರಾದರೋ ವಿದ್ಯೆಯನ್ನು ಜ್ಞಾನಕ್ಕಾಗಿ , ಹಣವನ್ನು ದಾನಕ್ಕಾಗಿ , ಶಕ್ತಿಯನ್ನು ಇತರರ ರಕ್ಷಣೆಗಾಗಿ ಬಳಸುತ್ತಾರೆ.
ವಿದ್ಯಾ ವಿವಾದಾಯ ಧನಂ ಮದಾಯ
ಶಕ್ತಿ: ಪರಪೀಡನಾಯ
ಖಲಸ್ಯ ಸಾಧೋರ್ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ ||
***
ಮಂತ್ರವಾಗದ ಅಕ್ಷರವಿಲ್ಲ , ಔಷಧವಾಗದ ಗಿಡಮೂಲಿಕೆಯಿಲ್ಲ , ನಿರುಪಯೋಗಿ ಮನುಷ್ಯನಿಲ್ಲ . ಸರಿಯಾಗಿ ಯೋಜಿಸುವವರು ಕಡಿಮೆ.
ಅಮಂತ್ರಂ ಅಕ್ಷರಂ ನಾಸ್ತಿ , ನಾಸ್ತಿ ಮೂಲಂ ಅನೌಷಧಂ |
ಅಯೋಗ್ಯ ಪುರುಷ: ನಾಸ್ತಿ ಯೋಜಕ: ತತ್ರ ದುರ್ಲಭ: ||
೪೬. ಮಾಡಬಾರದ್ದನ್ನು ಪ್ರಾಣ ಹೋದರೂ ಮಾಡಬಾರದು . ಮಾಡಬೇಕಾದ್ದನ್ನು ಪ್ರಾಣಹೋದರೂ ಮಾಡಬೇಕು
ಅಕರ್ತವ್ಯಂ ನ ಕರ್ತವ್ಯಂ ಪ್ರಾಣೈ: ಕಂಠಗತೈರಪಿ |
ಕರ್ತವ್ಯಂ ಏವ ಕರ್ತವ್ಯಂ ಪ್ರಾಣೈ: ಕಂಠಗತೈರಪಿ ||
****
ಅಹಾರವನ್ನು ಪಚನವಾದ ಮೇಲೆ, ಹೆಂಡತಿಯನ್ನು ಯೌವನ ಕಳೆದ ಮೇಲೆ , ಶೂರನನ್ನು ರಣರಂಗದಿಂದ ಮರಳಿ ಬಂದ ಮೇಲೆ , ಬೆಳೆಯನ್ನು ಕೈಗೆ ಬಂದ ಮೇಲೆ ಹೊಗಳಬೇಕು.
ಜೀರ್ಣಮನ್ನಂ ಪ್ರಶಂಸೀಯಾತ್ ಭಾರ್ಯಾಂ ಚ ಗತಯೌವನಾಂ |
ರಣಾತ್ ಪ್ರತ್ಯಾಗತಂ ಶೂರಂ ಸಸ್ಯಂ ಚ ಗೃಹಮಾಗತಂ ||
Sanskrit
ಅಮರಕೋಶದ ವಾಗ್ವರ್ಗದ ಮೊದಲನೇ ಸಾಲಿನಂತೆ,
"ಬ್ರಾಹ್ಮೀ ತು ಭಾರತೀ ಭಾಷಾ ಗೀರ್ವಾಗ್ವಾಣೀ ಸರಸ್ವತೀ"
ಗಿರ್, ವಾಚ್ ಸೇರಿದಂತೆ ಮೇಲಿನ ಎಲ್ಲಾ ವಾಗ್ದೇವತೆಯ ಹೆಸರುಗಳು.
ಸುಭಾಷಿತದಲ್ಲಿ ವಾಣೀ ಎನ್ನುವುದನ್ನು ಭಾಷೆ ಎಂದು ತೆಗೆದುಕೊಂಡರೆ "ಗೀರ್ವಾಣೀ" ಎನ್ನುವುದು ಸರಸ್ವತಿಯ ಮಾತು ಎಂದುಕೊಳ್ಳುತ್ತೇನೆ.

ಕಡಲಿಗೆ ಸುರಿವ ಮಳೆಯದು ದಂಡ
ತುಂಬಿದ ಹೊಟ್ಟೆಗೆ ಭೂರಿ ಭೋಜನ
ಸಿರಿವಂತರಿಗೆ ಕೊಡುವುದು ದಂಡ
ಹಗಲಲಿ ಬೆಳಗುವ ದೀವಿಗೆ ದಂಡ
ಸಂಸ್ಕೃತ ಮೂಲ (ಚಾಣಕ್ಯ ನೀತಿಯಿಂದ):
ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಂ |
ವೃಥಾ ದಾನಂ ಧನಾಢ್ಯೇಷು ವೃಥಾ ದೀಪೋ ದಿವಾSಪಿ ಚ ||
******
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್ಫ್ಯೂಶಿಯನಿಸಂ' ನ ನುಡಿಗಟ್ಟು.