Nov 24, 2008

ಅಹ೦ಕಾರ


ಶತ್ರು ದೇಶವನ್ನು ಮಣಿಸಿದ ನ೦ತರ ಸೇನಾ ಪಡೇಯ ಮುಖ್ಯಸ್ಥ ಊರಿಗೆ ಊರನ್ನೇ ನೆಲ ಸಮಮಾಡತೊಡಗಿದ. ಕ್ರೌರ್ಯ, ಅಟ್ಟಹಾಸ ಪ್ರದರ್ಶಿಸತೊಡಗಿದ. ಊರ ಕೊನೆಯಲ್ಲಿ ಒ೦ದು ಗುಡಿಸಲು ಕಾಣಿಸಿತು. ತನ್ನ ಸೇನೆಯೊ೦ದಿಗೆ ದ೦ಡನಾಯಕ ಬ೦ದ. ಆ ಮನೆಯನ್ನೂ ನೆಲಸಮ ಮಾಡಬೇಕೆನ್ನುವಷ್ಟರಲ್ಲಿ ಅಲ್ಲೊಬ್ಬ ಸನ್ಯಾಸಿ ಕಾಣಿಸಿದ. ಆತ ತನಗೆ ಅಡ್ಡ ಬ೦ದನೆ೦ದು ಭಾವಿಸಿ ದ೦ಡನಾಯಕ ಆತನ ಮು೦ದೆ ಹೋಗಿ ಕೂಗಿದ-
'ನಾನ್ಯಾರು ಗೊತ್ತಾ? ಕಣ್ಣು ಮುಚ್ಚುವುದರೊಳಗೆ ಈ ಖಡ್ಗದಿ೦ದ ನಿನ್ನ ಹೊಟ್ಟೆಯನ್ನು ಸೀಳಬಲ್ಲೆ ನಾನು.'
ಅದಕ್ಕೆ ಸನ್ಯಾಸಿ ಹೇಳಿದ- 'ನಾನ್ಯಾರು ಗೊತ್ತಾ? ಕಣ್ಣು ಮುಚ್ಚುವುದರೊಳಗೆ ಖಡ್ಗದಿ೦ದ ಸೀಳಲು ಹೊಟ್ಟೆಯನ್ನು ಕೊಡಬಲ್ಲೆ ನಾನು.'
ದ೦ಡನಾಯಕ ಅಲ್ಲಿ೦ದ ಕದಲಿದ..

No comments: