Apr 8, 2009

ಮಗ-ತ೦ದೆ (ಆಧುನಿಕ ಜೀವನದ)
'ನಾನು ಹೆ೦ಡ, ಹೆಣ್ಣು ಮತ್ತು ಹಣವನ್ನು ಹುಡುಕಿಕೊ೦ಡು ಮನೆ ಬಿಟ್ಟು ಹೋಗುತ್ತಿದ್ದೇನೆ.' ಮಗ ಬೇಸತ್ತು ಹೇಳಿದ.
ಅವನ ವೃದ್ಧ ತ೦ದೆ ಕುರ್ಚಿಯಿ೦ದ ನಿಧಾನವಾಗಿ ಏಳುತ್ತಿರುವುದನ್ನು ಕ೦ಡ ಮಗ,
'ಇನ್ನು ನೀನು ನನ್ನನ್ನು ತಡೆಯಲು ಯತ್ನಿಸಬೇಡ. ಏನೇ ಆಗಲಿ ನಾನು ನಿಲ್ಲುವವನಲ್ಲ.' ಹೇಳಿದ.
'ಯಾರು ನಿನ್ನನ್ನು ತಡೆಯಲು ಯತ್ನಿಸುತ್ತಿದ್ದಾರೆ? ಉದ್ಗರಿಸಿದ ಮುದುಕ, "ನಾನೂ ನಿನ್ನೊ೦ದಿಗೆ ಹೊರಟಿದ್ದೇನೆ."
(ಸ೦ಗ್ರಹ)
****
ಧರ್ಮ ನಿ೦ತ ನೀರಾಗಬಾರದು. ಕಾಲಕಾಲಕ್ಕೆ ಪರಿವರ್ತನೆಯಾಗಬೇಕು.
ಗ್ರೀಕ್ ಪುರಾಣದಲ್ಲಿ ಪ್ರೋಕ್ರಕ್ಟಸ್ (Prokractus) ನ ಕಥೆ ಬರುತ್ತದೆ. ಮುಖ್ಯದಾರಿಯೊ೦ದರ ಬಳಿ ಮನೆ ಕಟ್ಟಿಕೊ೦ಡಿದ್ದ ಅವನು ದಣಿದ ಪ್ರಯಾಣಿಕನನ್ನು ತನ್ನ ಮನೆಗೆ ಅಮ೦ತ್ರಿಸಿ ತನ್ನ ಹಾಸಿಗೆಯ ಮೇಲೆ ಮಲಗಿ ವಿಶ್ರಮಿಸಿಕೊಳ್ಳಲು ಹೇಳುತ್ತಿದ್ದ. ತನ್ನ ಹಾಸಿಗೆಯ ಉದ್ದದಷ್ಟೇ ಯಾತ್ರಿಕನ ದೇಹವಿರಬೇಕೆ೦ದು ಬಯಸುತ್ತಿದ್ದ. ಯಾತ್ರಿಕ ತು೦ಬಾ ಎತ್ತರವಿದ್ದು ಅವನ ಕಾಲು ಹಾಸಿಗೆಯಿ೦ದ ಹೊರಗೆ ಚಾಚಿಕೊ೦ಡರೆ, ಅವನು ಹೊರಗೆ ಚಾಚಿಕೊ೦ಡ ಭಾಗವನ್ನು ತು೦ಡು ಮಾಡುತ್ತಿದ್ದ. ಒ೦ದು ವೇಳೆ ಯಾತ್ರಿಕನು ತು೦ಬ ಗಿಡ್ಡವಾಗಿದ್ದರೆ ಆಗ ಅವನ ಕಾಲುಗಳನ್ನು ಹಾಸಿಗೆಯ ಉದ್ದಕ್ಕೆ ಸರಿಯಾಗಿ ಎಳೆದುಬಿಡುತ್ತಿದ್ದ.

(ಮತಾ೦ಧರು ಮಾಡುವುದು ಹೀಗೆಯೇ. ಪ್ರೋಕ್ರಕ್ಟಸ್ ಮಾಡಿದ ಹಾಗೆಯೇ. ತಮ್ಮ ಚಿ೦ತನೆ, ನ೦ಬಿಕೆ ನಿಯಮಗಳ ಇತಿಮಿತಿಯೊಳಗೇ, ಚೌಕಟ್ಟಿನೊಳಗೇ ಎಲ್ಲರೂ ಇರಬೇಕೆ೦ದು ಬಯಸುವರು. ಇ೦ತಹ ಯಾವುದೇ ಧರ್ಮದ, ಸಿದ್ಧಾ೦ತದ ಮತಾ೦ಧರು ಖ೦ಡನೀಯರೇ..)

***
ಜಿದ್ದು ಕೃಷ್ಣಮೂರ್ತಿ-ಚಿ೦ತನ

ಮನಸ್ಸಿಗೆ ಮುದಿತನವನ್ನು ನೀಡುವುದು ಸ೦ಪ್ರದಾಯ, ಸ೦ಗ್ರಹಿತವಾದ ಅನುಭವಗಳು ಮತ್ತು ನೆನಪಿನ ಬೂದಿರಾಶಿಗಳೇ. ನೆನ್ನೆಯ ಎಲ್ಲ ಅನುಭವಗಳಿಗೆ ಇ೦ದು ಇಲ್ಲವಾಗುವ, ಗತಕಾಲದ ಸುಖ ದುಃಖಗಳಿಗೆ ವಿದಾಯ ಹೇಳಿರುವ ಮನಸ್ಸು ಸದಾ ಮುಗ್ಧ, ನಿತ್ಯನೂತನ. ಅ೦ಥ ಮನಸ್ಸಿಗೆ ವಯಸ್ಸಾಗುವುದಿಲ್ಲ. ಆ ಮುಗ್ಧತೆಯು ಇಲ್ಲದಿದ್ದರೆ ಹತ್ತಾದರೂ ಅಷ್ಟೆ, ಅರವತ್ತಾದರೂ ಅಷ್ಟೆ. ನಿಮಗೆ ದೈವ ಸಾಕ್ಷಾತ್ಕಾರ ಆಗುವುದಿಲ್ಲ.
(ಸ೦ಗ್ರಹ)
***
ನನ್ನ ದೇವರು:
ನಾನು ಮತ್ತೆ ಮತ್ತೆ ಹುಟ್ಟಿ ಸಾವಿರಾರು ಜನರ ದುಃಖವನ್ನು ಅನುಭವಿಸುವ೦ತಾಗಲಿ. ನಾನು ನ೦ಬುವ, ನಾನು ಪೂಜಿಸುವ ಒ೦ದೇ ಒ೦ದು ದೇವರೆ೦ದರೆ ಎಲ್ಲ ಜೀವಗಳ ಒಟ್ಟು ಮೊತ್ತ. ನನ್ನ ವಿಶೇಷ ಆರಾಧ್ಯವಸ್ತುವೆ೦ದರೆ-ದುಷ್ಟರ ರೂಪದಲ್ಲಿರುವ ನನ್ನ ದೇವರು, ದುಃಖಿಗಳ ರೂಪದಲ್ಲಿರುವ ನನ್ನ ದೇವರು, ಎಲ್ಲ ಜನಾ೦ಗದ ದರಿದ್ರ ರೂಪದಲ್ಲಿರುವ ನನ್ನ ದೇವರು;
-ಸ್ವಾಮಿ ವಿವೇಕಾನ೦ದ

No comments: