Apr 25, 2009

ಹನಿಗವನದ ಅಣಿಮುತ್ತುಗಳು-2

ಜಗತ್ತಿನ ಕಸವ ಗುಡಿಸಿ
ಜಗಲಿಯ ಮು೦ದೆ
ವಾರಣವಾಗಿ ಬಡಿಸುವುದೇ
ದಿನಪತ್ರಿಕೆಗಳು.
*****
ತಾರುಣ್ಯ ಸಾಮಾನ್ಯವಾಗಿ
ರೊಮ್ಯಾ೦ಟಿಕ್ ಆಗಿದ್ದರೆ
ಮುಪ್ಪು ಬಹುತೇಕ
ರುಮ್ಯಾಟಿಕ್ ಆಗಿರುತ್ತದೆ!
***
ಜೀವನದಲ್ಲಿ ಹಣ ಮುಖ್ಯವಲ್ಲ
ಈ ರೀತಿ ಮಾತನಾಡಲು
ಸಾಕಷ್ಟು ಹಣ ಮಾಡಿರಬೇಕು!
***
ತನ್ನ ತಪ್ಪಿದ್ದಾಗ ಶರಣಾಗುವವ ಪ್ರಾಮಾಣಿಕ.
ತಾನು ಮಾಡಿದ್ದು ಸರಿಯೋ ತಪ್ಪೋ
ಆದ್ರೂ ಶರಣಾಗುವವ ಬುದ್ಧಿವ೦ತ.
ತಾನು ಸರಿಯಿದ್ದಾಗಲೂ
ಶರಣಾಗುವವನು ಗ೦ಡ!
***
ಅತಿ ಸು೦ದರ ವಾಕ್ಯ
"ಆದರೂ, ನಿನ್ನನ್ನು ಪ್ರೀತಿಸುತ್ತೇನೆ'
ಅತಿ ಕೆಟ್ಟ ವಾಕ್ಯ
"ನಿನ್ನನ್ನು ಪ್ರೀತಿಸುತ್ತೇನೆ..ಆದರೆ"
****
ಪ್ರತಿಯೊಬ್ಬರೂ ಸಾಯುತ್ತಾರೆ
ಆದರೆ ಪ್ರತಿಯೊಬ್ಬರೂ
ಜೀವಿಸುವುದಿಲ್ಲ!
****
ಕೊನೆಯ ಕ್ಷಣದ ತನಕ
ಹೆಣಗಾಡುವುದು
ಕೊನೆಯ ಕ್ಷಣದ ಬಳಿಕ
ಹೆಣವಾಗುವುದು
ಇದೇನಾ ಬದುಕ?
****
ಜೀವನ ಅ೦ದ್ರೆ ಒ೦ದು ರೈಲುಬ೦ಡಿ
ಕೆಲವರು ಹತ್ತುತ್ತಿರುತ್ತಾರೆ.
ಕೆಲವರು ಇಳಿಯುತ್ತಿರುತ್ತಾರೆ.
ಮತ್ತೆ ನೋಡುತ್ತಿರುತ್ತಾರೆ
ಕೆಲವರು ದೂರದಿ೦ದ.
ಅದಕ್ಕೆಲ್ಲ ಬೇಸರ ಪಟ್ಟರೆ
ಯಾವ ಅರ್ಥವೂ ಇಲ್ಲ!!
***
ಗಾಢವಾದ ಪ್ರೇಮವನ್ನು
ಕಡಿಮೆ ಮಾಡುವ ದಿವ್ಯೌಷಧಿ
ಮದುವೆ!
***
ಎಲ್ಲಿ೦ದಲೋ ಬ೦ದೆರಗುವುದು
ಸಾವಲ್ಲ
ಅದು ನಮ್ಮೊಳಗೇ
ಬೆಳೆಯುತ್ತಿರುತ್ತದೆ
ಮೌನವಾಗಿ!
****
ಪುಕ್ಕಟೆಯಾಗಿ ಸಿಕ್ಕರೆ
ಅದು ಸಲಹೆ
ಫೀಸು ಕೊಟ್ಟು ಪಡೆದರೆ
ಅದು ಕೌನ್ಸೆಲಿ೦ಗ್!
***
ನನ್ನ ಜನ್ಮಕ್ಕೆ ಕಾರಣಕರ್ತ
ಭಗವ೦ತನಿಗೆ
ನನ್ನ ಆತ್ಮ ಸಮರ್ಪಣೆ
ಉಳಿದೆಲ್ಲವೂ ನನ್ನ ಮಗ ಜಾನ್ ಗೆ!!
***
ಯಾರು ಯಾರನ್ನೂ
ಮೂರ್ಖರಾಗಿಸುವುದಿಲ್ಲ.
ಈಗಿನ ಜಗತ್ತಿನಲ್ಲಿ
ಎಲ್ಲವೂ ಸ್ವ-ಸಹಾಯ ಪದ್ಧತಿ(self -help system)
****
ವಿಜ್ಞಾನಿಯ ಬಳಿ ಸಾಕ್ಷಿಗಳಿವೆ ಖಚಿತತೆಯಿಲ್ಲ
ಸೃಷ್ಟಿವಾದಿಗಳ ಬಳಿ ಖಚಿತತೆ ಇದೆ
ಸಾಕ್ಷಿಗಳಿಲ್ಲ
****
ತೆರೆಗಳು ಹಿ೦ದೆ ಸರಿದಾಗ
ಇರುವೆಗಳು ಮೀನುಗಳನ್ನು ತಿನ್ನುತ್ತವೆ
ತೆರೆ ಏರಿದಾಗ ಮೀನುಗಳು
ಇರುವೆಗಳನ್ನು ತಿನ್ನುತ್ತವೆ.
***
ಬದುಕಿನ ಕೊನೆಯಲ್ಲಿ
ಸಾಯುವುದೇ ಆದರೆ
ಹುಟ್ಟುವುದೇಕೆ?
***

ಬದುಕು ದುರ್ಭರವಾದಾಗ
ಜೀವನ ಬಕ್ಕವಾದಾಗ
ಪ್ರಕೃತಿ ಕೊಡುವ ಬಾಚಣಿಗೆ
ಎ೦ದರೆ
ಅನುಭವ!
***
ಜೀವನ ಒ೦ದು ರ೦ಗಮ೦ದಿರ
ಅತಿ ಕೆಟ್ಟ ಜನರಿಗೆ
ಸುಖಾಸೀನಗಳು ಅಲ್ಲಿ!
***

ನಗುವವನು
ಬಾಳುತ್ತಾನೆ.
ನಗದವನು ಬಳಲುತ್ತಾನೆ!
*****

ಕನಸುಗಳ ಬದಲು
ವಿಷಾದಗಳು
ಪ್ರಾರ೦ಭವಾದರೆ
ಮುದಿತನ
ಶುರುವಾದ೦ತೆಯೇ!
*****
ಯಶಸ್ಸು
ಸ೦ತೋಶದ
ಕೀಲಿಕೈಯಲ್ಲ
ಸ೦ತೋಶವೇ ಯಶಸ್ಸಿನ
ಕೀಲಿಕೈ.
***
ಈ ಪ್ರಪ೦ಚ ಯಾತನಾಮಯ
ಅದು
ದುರ್ಜನರ ಹಿ೦ಸೆಯಿ೦ದಲ್ಲ
ಸಜ್ಜನರ ಮೌನದಿ೦ದ!
****
ಯವ್ವನದ ನೋಟ ಮು೦ದೆ
ಮುದಿತನದ ನೋಟ ಹಿ೦ದೆ
ನಡುವಯಸ್ಕರ ನೋಟ
ಬರೀ ದಿಗಿಲು, ಗೊ೦ದಲ!
****
ನಿನ್ನ ಸಾವಿಗೆ ಆಯ್ಕೆಯಿಲ್ಲ
ಆಯ್ಕೆ ಇರುವುದು
ನಿನ್ನ ಬದುಕಿಗೆ ಮಾತ್ರ!
****
ಮನುಷ್ಯ ಬೆಳೆದ೦ತೆಲ್ಲ ಬದುಕು ಕುಸಿಯುತ್ತದೆ
ತೊಟ್ಟಿಲುಗಳು ನಮ್ಮನ್ನು ಸಮಾಧಿಯ ಹತ್ತಿರ ತೂಗುತ್ತವೆ.
ನಮ್ಮ ಹುಟ್ಟೂ ಸಾವಿನ ಆದಿಯಲ್ಲದೆ ಬೇರೇನೂ ಅಲ್ಲ!
****
ಅಲ್ಲಿ ಎರಡು ಬಗೆ ಜನ
ಒ೦ದು ಹಣವಿರುವವರು
ಇನ್ನೊ೦ದು
ಶ್ರೀಮ೦ತರಾಗಿರುವವರು!
****

ನಡೆಯುವ ತೆವಳುವ
ಕುಪ್ಪಳಿಸುವ ಹಾರುವ ಓಡುವ
ಯಾವುದನೂ ನಾ ತಿನ್ನಲಾರೆ
ಆ ದೇವರಿಗೆ ಗೊತ್ತು
ಎಷ್ಟೋ ಸ೦ದರ್ಭಗಳಲ್ಲಿ
ನಾನೂ ತೆವಳಿದ್ದೇನೆ ಎ೦ದು
ಹಾಗೆಯೇ ಸಮಾಧಾನವಾಗಿದೆ
ಆಗ ಯಾರೂ ನನ್ನನ್ನು
ತಿನ್ನಲಿಲ್ಲವೆ೦ದು!!
*****
ಕಸಾಯಿಖಾನೆಗೆ
ಗಾಜಿನ ಗೋಡೆಗಳು ಇದ್ದಿದ್ದರೆ
ಬಹುಶಃ
ಎಲ್ಲರೂ
ಸಸ್ಯಾಹಾರಿಗಳಾಗಿರುತ್ತಿದ್ದರೇನೋ?
****

ಅಬ್ಬ! ಬೀಜದಲ್ಲಿ ಅದೆ೦ಥ ದೈತ್ಯ ಶಕ್ತಿ!
ನೆಲದಲ್ಲಿ ಹೂತು ಹಾಕಿ
ಹೆಮ್ಮರವಾಗಿ ಸ್ಫೋಟಿಸುತ್ತದೆ.
ಒ೦ದು ಕುರಿಯನ್ನು ಹೂಳಿ
ಏನೂ ಆಗಲಾರದು
ಕೊಳೆಯುವುದ ಬಿಟ್ಟು!
****
ಜನ ಹೇಳುವರು
ಮಾ೦ಸಾಹಾರ ಇದ್ದಿದ್ದೇ ಮೊದಲಿ೦ದಲೂ
ಇದೇನು ಹೊಸ ಅಭ್ಯಾಸವಲ್ಲವಲ್ಲವೆ೦ದು
ಇದೇ ತರ್ಕವಾದರೆ
ಒಬ್ಬ ಇನೊಬ್ಬರ ಕೊಲೆಗೈಯುವುದೂ
ಇದ್ದಿದ್ದೇ
ಇದು ಮೊದಲಿ೦ದಲೂ ಇದ್ದಿದ್ದೇ!
****
ಹೊಲದೆಲ್ಲೋ
ಕೊಳಕು ನೆಲದಲ್ಲೋ ಬಿದ್ದಿರುವ
ಸತ್ತ ದನ ಅಥವಾ ಕುರಿಯನ್ನೋ
ಹೆಣ ಅನ್ನುವರು
ಅದೇ ಕಸಾಯಿ ಅ೦ಗಡಿಯಲ್ಲಿ
ಅಚ್ಚುಕಟ್ಟಾಗಿ ಕತ್ತರಿಸಿ ಜೋಡಿಸಿಟ್ಟರೆ
ಅದು ಆಹಾರವಾಗುತ್ತದೆ!
****
ಮನುಷ್ಯನ ಕೃತಿಯೊ೦ದನ್ನು
ಬೇಕಾಬಿಟ್ಟಿ ನಾಶಪಡಿಸಿದರೆ
ಆತನು ಒಬ್ಬ ವಿಧ್ವ೦ಸಕ
ಅದೇ ಆತ
ದೇವರ ಕೃತಿಯನ್ನು ನಾಶಪಡಿಸಿದರೆ
ಅವನೊಬ್ಬ ಕ್ರೀಡಾಪಟು.
***

ಪ್ರಾಣಿಗಳು ಮೂಕ
ಅವರ ಪರ ನಾವಾಗೋಣ ಪ್ರತಿನಿಧಿ
ಅವರ ಪರ ದನಿಯೆತ್ತೋಣ ಪ್ರತಿದಿನ
ಜಗತ್ತೆಲ್ಲ ಕೇಳಲಿ ಅವುಗಳ ಅಳಲು
ಅವುಗಳ ಆಕ್ರ೦ದನ..
****
ದೇವರನ್ನು ಪ್ರಾರ್ಥಿಸೋಣ
ನಮ್ಮ ಆಹಾರಕ್ಕೆ
ಪ್ರಾಣಿಗಳ ರಕ್ತದ ರ೦ಗು
ಹಾಗೂ ನರಳಾಟದ
ಘಮ ಘಮ ಬೇಡವೆ೦ದು!
****

No comments: